AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: ಮೊದಲ ದಿನದಾಟ ರದ್ದಾದರೆ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದ ಐಸಿಸಿ

ಡಬ್ಲ್ಯೂಟಿಸಿ ಪೈನಲ್ ಪಂದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಫಾಲೋ-ಅನ್ ನಿಯಮ ಕುರಿತು ಸ್ಪಷ್ಟನೆ ನೀಡಿದೆ. ಸದರಿ ಪಂದ್ಯಯ ಮೊದಲ ದಿನದಾಟ ಮಳೆಗಾಹುತಿಯಾದರೆ, ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದು ಐಸಿಸಿ ಹೇಳಿದೆ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್: ಮೊದಲ ದಿನದಾಟ ರದ್ದಾದರೆ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದ ಐಸಿಸಿ
ರಿವ್ಯೂ ತೆಗೆದುಕೊಳ್ಳುತ್ತಿರುವ ವಿರಾಟ್​ ಕೊಹ್ಲಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 13, 2021 | 12:41 AM

Share

ಭಾರತ ಮತ್ತು ನ್ಯೂಜಿಲೆಂಡ್​ ನಡೆಯವ ಮೊಟ್ಟ ಮೊದಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ (ಡಬ್ಲ್ಯೂಟಿಸಿ) ಫೈನಲ್ ಪಂದ್ಯಕ್ಕೆ ಒಂದು ವಾರಕ್ಕಿಂತ ಕಡಿಮೆ ಅವಧಿ ಉಳಿದಿದೆ. ನ್ಯೂಜಿಲೆಂಡ್​ ತನ್ನ ನಿಯಮಿತ ನಾಯಕ ಕೇನ್ ವಿಲಿಯಮ್ಸನ್ ಅನುಪಸ್ಥಿಯಲ್ಲೂ ಬರ್ಮಿಂಗ್​ಹ್ಯಾಮ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಮತ್ತು ಕೊನೆಯ ಟೆಸ್ಸ್​ನಲ್ಲಿ ಅತಿಥೇಯರನ್ನು ಸೋಲಿಸುವ ಅತ್ಯಂತ ಸನಿಹಕ್ಕೆ ಬಂದಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡಿರುವ ಇಂಗ್ಲಿಷರು ಕೇವಲ 37 ರನ್​ಗಳಿಂದ ಮುಂದಿದ್ದಾರೆ. ಪಂದ್ಯದ ನಾಲ್ಕನೇ ದಿನವಾಗಿರುವ ರವಿವಾರ ಮೊದಲ ಗಂಟೆಯಲ್ಲೇ ಪ್ರವಾಸಿ ತಂಡ ದೊಡ್ಡ ಗೆಲುವು ಸಾಧಿಸಿದರೆ ಆಶ್ಚರ್ಯಪಡಬೇಕಿಲ್ಲ.

ಓಕೆ, ಡಬ್ಲ್ಯೂಟಿಸಿ ಪೈನಲ್ ಪಂದ್ಯಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಫಾಲೋ-ಅನ್ ನಿಯಮ ಕುರಿತು ಸ್ಪಷ್ಟನೆ ನೀಡಿದೆ. ಸದರಿ ಪಂದ್ಯಯ ಮೊದಲ ದಿನದಾಟ ಮಳೆಗಾಹುತಿಯಾದರೆ, ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಫಾಲೋ-ಆನ್ ನಿಯಮದಲ್ಲಿ ಬದಲಾವಣೆ ಇಲ್ಲವೆಂದು ಐಸಿಸಿ ಹೇಳಿದೆ. ಬೇರೆ ಯಾವುದೇ ಪಂದ್ಯದ ಮೊದಲ ದಿನ ಮಳೆಯ ಕಾರಣ ನಡೆಯದೇ ಹೋದರೆ ನಿಯಮ ಬದಲಾಗುತಿತ್ತು. ಡಬ್ಲ್ಯೂಟಿಸಿ ಫೈನಲ್ ಪಂದ್ಯ ಸೌತಾಂಪ್ಟನ್​ನ ಏಜಿಸ್ ಬೋಲ್​ನಲ್ಲಿ 18ರಿಂದ 23 ರವರೆಗೆ (ರಿಸರ್ವ್ ದಿನ ಸೇರಿ) ನಡೆಯಲಿದೆ.

ಫಾಲೋ-ಆನ್​ಗೆ ಸಂಬಂಧಿಸಿದ ಸಾಮಾನ್ಯ ನಿಯಮ ಕ್ಲಾಸ್ 14 ಹೀಗೆ ಹೇಳುತ್ತದೆ: ಐದು ದಿನಗಳ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ತಂಡ ಕನಿಷ್ಟ 200 ರನ್​ಗಳ ಲೀಡ್​ ಹೊಂದಿದ್ದರೆ ನಿಯಮ 14.1.1 ಅನ್ವಯ ಎದುರಾಳಿ ತಂಡದ ಮೇಲೆ ಫಾಲೋ-ಆನ್ ಹೇರಬಹುದಾಗಿದೆ. ಐದಕ್ಕಿಂತ ಕಡಿಮೆ ದಿನಗಳ ಪಂದ್ಯದಲ್ಲಿ 14.1.2 ನಿಯಮ ಸೂಚಿಸುವ ಹಾಗೆ; 3 ಅಥವಾ 4 ದಿನಗಳ ಪಂದ್ಯದಲ್ಲಿ 150ಕ್ಕಿಂತ ಹೆಚ್ಚು ರನ್​ಗಳ ಲೀಡ್​, 2ದಿನಗಳ ಪಂದ್ಯದಲ್ಲಿ 100 ರನ್ ಮತ್ತು ಒಂದು ದಿನದ ಪಂದ್ಯದಲ್ಲಿ ಕನಿಷ್ಟ 75ರನ್​ಗಳ ಲೀಡ್​ ಹೊಂದಿರಬೇಕಾಗುತ್ತದೆ.

ಕ್ಲಾಸ್ 14.3 ವ್ಯಾಖ್ಯಾನ ಹೀಗಿದೆ: 5ದಿನಗಳ ಪಂದ್ಯದ ಮೊದಲೆರಡು ದಿನಗಳಲ್ಲಿ ಆಟ ನಡೆಯದೇ ಹೋದರೆ, ಆಟ ಅರಂಭವಾಗುವ ಸಮಯದಿಂದ ಹಿಡಿದು ರಿಸರ್ವ್ ದಿನ ಸೇರಿದಂತೆ ಉಳಿದ ದಿನಗಳ ಆಟಕ್ಕೆ ಕ್ಲಾಸ್ 14.1 ಅನ್ವಯಿಸುತ್ತದೆ. ಈ ಕಾರಣಕ್ಕಾಗಿ ಪಂದ್ಯ ಆರಂಭವಾಗುವ ದಿನವನ್ನು, ಆಟ ಯಾವುದೇ ಸಮಯಕ್ಕೆ ಆರಂಭವಾದರೂ ಅದನ್ನು ಮೊದಲ ದಿನವೆಂದು ಪರಿಗಣಿಸಲಾಗುವುದು.

ಆದರೆ, ಡಬ್ಲ್ಯೂಟಿಸಿ ಫೈನಲ್​ನಲ್ಲಿ ಸೆಣಸಲಿರುವ ಎರಡು ತಂಡಗಳಿಗೆ ಇತ್ತೀಚಿಗೆ ನೀಡಿರುವ ಸೂಚನೆಯಲ್ಲಿ ಐಸಿಸಿ ಹೇಳಿರುವುದೇನೆಂದರೆ, ಪಂದ್ಯದ ನಿಗದಿತ ಮೊದಲ ಮತ್ತು ಎರಡನೇ ದಿನದಾಟ ನಡೆಯದೇ ಹೋದರೆ ಮೊದಲ ಇನ್ನಿಂಗ್ಸ ಲೀಡ್​ ನಿಯಮ 200 ರನ್​ಗಳಿಂದ 150 ರನ್​ಗಳಿಗೆ ತಗ್ಗುವುದರಿಂದ 14.3ನಿಯಮವನ್ನು ತಿದ್ದುಪಡಿ ಮಾಡಲಾಗಿದೆ. ಸಾಮಾನ್ಯವಾಗಿ, ಕೇವಲ ಮೊದಲ ದಿನದ ಆಟ ನಡೆಯದೆ ಹೋದಾಗ ಮಾತ್ರ ಹೀಗೆ ಮಾಡಲಾಗುತ್ತದೆ. ಆದರೆ ಡಬ್ಲ್ಯೂಟಿಸಿ ಫೈನಲ್​ಗೆ ಒಂದು ರಿಸರ್ವ್​ ದಿನವನ್ನು ನಿಗದಿಪಡಿಸಿರುವುದರಿಂದ ಮೊದಲ ದಿನದಾಟ ರದ್ದಾದರೂ ಅದು 5 ದಿನಗಳ ಪಂದ್ಯವಾಗಿರಲಿದೆ.

ಮೇ 27ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಐಸಿಸಿ ಪ್ಲೇಯರ್ ರಿವ್ಯೂ ಬಗ್ಗೆ ಇನ್ನಷ್ಟು ವಿವರಗಳನ್ನು ನೀಡಿದೆ. ‘ಪ್ಲೇಯರ್ ರಿವ್ಯೂಗೆ ಇದು ಹೊಸ ಸ್ಟ್ಯಾಂಡರ್ಡ್​ ಕಂಡೀಷನ್ ಆಗಿದೆ. ಈ ಹಿಂದೆ, ಆಟಗಾರನೊಬ್ಬ ರಿವ್ಯೂ ತೆಗೆದುಕೊಳ್ಳುವ ಮೊದಲು ಅಂಪೈರ್​ಗೆ ಯಾವುದೇ ಪ್ರಶ್ನೆ ಕೇಳುವಂತಿರಲಿಲ್ಲ. ಒಬ್ಬ ಬ್ಯಾಟ್ಸ್​ಮನ್ ಶಾಟ್​ ಆಡಿರುವನೋ ಇಲ್ಲವೋ ಎನ್ನುವ ಬಗ್ಗೆ ಅವನಲ್ಲಿ ಮತ್ತು ಅಂಪೈರ್​ನಲ್ಲಿ ಬೇರೆ ಬೇರೆ ಅಭಿಪ್ರಾಯ ಇರುತ್ತಿದ್ದರಿಂದ ವಿನಾಕಾರಣ ರಿವ್ಯೂ ವ್ಯರ್ಥವಾಗುತಿತ್ತು.

ಈಗ ಇದನ್ನು ಬದಲಿಸಲಾಗಿದೆ. ರಿವ್ಯೂ ಕೇಳುವ ಮುನ್ನ ಫೀಲ್ಡಿಂಗ್ ತಂಡದ ನಾಯಕ ಅಥವಾ ಔಟಾಗಿರುವ ಬ್ಯಾಟ್ಸ್​ಮನ್; ಬಾಲನ್ನು ಆಡಲು ನೈಜ್ಯ ಪ್ರಯತ್ನ ಮಾಡಲಾಯಿತೇ ಎಂದು ಅಂಪೈರ್​ನನ್ನು ಪ್ರಶ್ನಿಸಿಬಹುದಾಗಿದೆ, ಎಂದು ಐಸಿಸಿ ಹೇಳಿತ್ತು.

ಇದನ್ನೂ ಓದಿ: WTC Final: ಆರಂಭದಲ್ಲಿ ತಾಳ್ಮೆಯಿರಲಿ; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌​ಗೂ ಮುನ್ನ ರೋಹಿತ್​ಗೆ ವೀರೂ ಪಾಠ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್