AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 20 ರೋಚಕ ಚುಟುಕು ಸುದ್ದಿಗಳು: ಕೊಹ್ಲಿಯೇ ಬೆಸ್ಟ್ ಬ್ಯಾಟ್ಸ್​ಮನ್, ಹೀಗಂದಿದ್ದು ಯಾರು?

ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನ ಬೆಸ್ಟ್ ಬ್ಯಾಟ್ಸ್​ಮನ್ ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುಣಗಾನ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದು, ಸ್ಮಿತ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದಾರೆ. ಕ್ವಾರಂಟೈನ್ ಮುಗಿಸಿದ ಕೇನ್ ಸನ್​ರೈಸರ್ಸ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ 6 ದಿನಗಳ ಹೋಟೆಲ್ ಕ್ವಾರಂಟೈನ್ ಮುಗಿಸಿದ್ದಾರೆ. ಅಲ್ಲದೇ, ನಿನ್ನೆ ಪ್ರಾಕ್ಟೀಸ್ ಸೆಷನ್​ಗೆ ಹಾಜರಾದ ಕೇನ್ ವಿಲಿಯಮ್ಸನ್, ಮುತ್ತಯ್ಯ ಮುರಳೀಧನ್​ರಿಂದ ಕೋಚಿಂಗ್ ಪಡೆದ್ರು. A […]

IPL 20 ರೋಚಕ ಚುಟುಕು ಸುದ್ದಿಗಳು: ಕೊಹ್ಲಿಯೇ ಬೆಸ್ಟ್ ಬ್ಯಾಟ್ಸ್​ಮನ್, ಹೀಗಂದಿದ್ದು ಯಾರು?
Follow us
ಸಾಧು ಶ್ರೀನಾಥ್​
|

Updated on: Sep 12, 2020 | 11:19 AM

ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿಯ ಗುಣಗಾನ ಮಾಡಿದ್ದಾರೆ.. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನ ಬೆಸ್ಟ್ ಬ್ಯಾಟ್ಸ್​ಮನ್ ಎಂದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಗುಣಗಾನ ಮಾಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದು, ಸ್ಮಿತ್ ಕೊಹ್ಲಿ ಹೆಸರು ಉಲ್ಲೇಖಿಸಿದ್ದಾರೆ.

ಕ್ವಾರಂಟೈನ್ ಮುಗಿಸಿದ ಕೇನ್ ಸನ್​ರೈಸರ್ಸ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ 6 ದಿನಗಳ ಹೋಟೆಲ್ ಕ್ವಾರಂಟೈನ್ ಮುಗಿಸಿದ್ದಾರೆ. ಅಲ್ಲದೇ, ನಿನ್ನೆ ಪ್ರಾಕ್ಟೀಸ್ ಸೆಷನ್​ಗೆ ಹಾಜರಾದ ಕೇನ್ ವಿಲಿಯಮ್ಸನ್, ಮುತ್ತಯ್ಯ ಮುರಳೀಧನ್​ರಿಂದ ಕೋಚಿಂಗ್ ಪಡೆದ್ರು.

ಹಿಂದಿಯಲ್ಲಿ ಮಾತನಾಡಿದ ಜಿಮ್ಮಿ ನ್ಯೂಜಿಲೆಂಡ್ ತಂಡದ ಆಲ್​ರೌಂಡರ್ ಜಿಮ್ಮಿ ನಿಶಾಮ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಸೇರಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಮಾತನಾಡಿರೋ ಜಿಮ್ಮಿ ನಿಶಾಮ್, ನಾನು ಹಾಜರಾಗಿದ್ದೇನೆ ಎಂದು ಘೋಷಿಸಿದ್ದಾರೆ..

ಪಾಂಡೆ ಪಡೆಗೆ ಗೆಲುವು ಇತ್ತೀಚೆಗೆ ನಡೆದ ಸನ್​ರೈಸರ್ಸ್ ತಂಡದ ಅಭ್ಯಾಸ ಪಂದ್ಯದಲ್ಲಿ ಮನೀಷ್ ಪಾಂಡೆ ಪಡೆ 16 ರನ್​ಗಳ ಗೆಲುವು ಸಾಧಿಸಿದೆ. ಮನೀಷ್ ಇಲೆವೆನ್ 6 ವಿಕೆಟ್​ಗೆ 146 ರನ್ ಗಳಿಸಿದ್ರೆ, ಭುವನೇಶ್ವರ ಪಡೆ 8ವಿಕೆಟ್​ಗೆ 131 ರನ್ ಗಳಿಸ್ತು.

ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸ ಪಂದ್ಯ ಐಪಿಎಲ್ ಸೀಸನ್ 13ಕ್ಕೆ ಸಖತ್ ತಯಾರಿ ನಡೆಸ್ತಿರೋ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಅಭ್ಯಾಸ ಪಂದ್ಯವಾಡಿದ್ರು. ಶಿಖರ್ ಧವನ್ ಇಲೆವೆನ್ ಹಾಗೂ ಶ್ರೇಯಸ್ ಐಯ್ಯರ್ ಇಲೆವೆನ್ ತಂಡಗಳ ನಡುವೆ ಪಂದ್ಯ ನಡೀತು

ಚೆನ್ನೈ ಪರ ಆಡೋದು ನನ್ನ ಕನಸು ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದೇ ಅದೃಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡದಲ್ಲಿ ಆಡೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ.

ರಾಯಲ್ಸ್ ಹಿಟ್ಟರ್ಸ್! ಈ ಬಾರಿಯ ಐಪಿಎಲ್​ನಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ರಾಜಸ್ಥಾನ ರಾಯಲ್ಸ್ ಕೂಡ ಒಂದಾಗಿದ್ದು, ಭಾರಿ ತಯಾರಿಯನ್ನ ನಡೆಸ್ತಿದೆ. ತಂಡದ ಎಲ್ಲಾ ಆಟಗಾರರು ಪವರ್ ಹಿಟ್ಟರ್ ಅನ್ನೋ ವಿಡಿಯೋವನ್ನ ರಾಯಲ್ಸ್  ಶೇರ್ ಮಾಡಿದೆ.

ಡಿಕಾಕ್ ಸಮರಾಭ್ಯಾಸ ಮುಂಬೈ ಇಂಡಿಯನ್ಸ್ ತಂಡ ಡ್ಯಾಶಿಂಗ್ ಓಪನರ್ ಕ್ವಿಂಟೆನ್ ಡಿಕಾಕ್, ಭರ್ಜರಿ ತಯಾರಿಯನ್ನ ನಡೆಸ್ತಿದ್ದಾರೆ. ಅಬುಧಾಬಿ ಕ್ರೀಡಾಂಗಣದಲ್ಲಿ ಡಿಕಾಕ್, ರಾತ್ರಿ ಸೆಷನ್ ವೇಳೆ ಎರಡು ಗಂಟೆಗಳ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದ್ರು.

ಆಫ್ರಿಕಾ ಕ್ರಿಕೆಟ್ ಮಂಡಳಿ ಅಮಾನತು ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ ಮಂಡಳಿ ಆಡಳಿತಕ್ಕೆ ಸಂಬಂಧಿಸಿದಂತಹ ಬಿಕ್ಕಟ್ಟುಗಳನ್ನು ಎದುರಿಸುತ್ತಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ಸರ್ಕಾರ ತನ್ನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಅಮಾನತು ಮಾಡಿ, ಕ್ರಿಕೆಟ್ ಮಂಡಳಿದ ಮೇಲೆ ಹಿಡಿತ ಸಾಧಿಸಿದೆ.

ಅಬುದಾಬಿಯಲ್ಲಿ ಸ್ಯಾನಿಟೈಸ್ ಯುಎಇನಲ್ಲಿ ಕೊರೊನಾ ಸುರಕ್ಷತೆಗಾಗಿ ಬಿಸಿಸಿಐ ಹಲವು ಮುನ್ನೆಚರಿಕೆ ಕ್ರಮಗಳನ್ನ ವಹಿಸ್ತಿದೆ. ಅಬುಧಾಬಿ ಕ್ರೀಡಾಂಗಣ.. ಡ್ರೆಸ್ಸಿಂಗ್ ರೂಮ್ ಮತ್ತು ನೆಟ್ಸ್ ಸೇರಿದಂತೆ ಪಿಚ್​ನಲ್ಲಿ ಆಗಾಗ ಸೈನಿಟೈಸ್ ಮಾಡಲಾಗ್ತಿದೆ..

ಕೆಕೆಆರ್​ಗೆ ಸಮಸ್ಯೆಯಿಲ್ಲ! ಇಂಗ್ಲೆಂಡ್ ಹಾಗೂ ಆಸಿಸ್ ಆಟಗಾರರು ಕೆಕೆಆರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೆಕೆಆರ್ ತಂಡದ ಸಿಇಒ ಹೇಳಿದ್ದಾರೆ. ಸೆ.23ಕ್ಕೆ ಮೊದಲ ಪಂದ್ಯವಿದ್ದು, ಆಟಗಾರರು 6ದಿನ ಕ್ವಾರಂಟೈನ್ ಅವಧಿ ಮುಗಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸೀಸನ್ ಅದ್ಭುತವಾಗಿರಲಿದೆ. ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತವಾಗಿರಲಿದೆ ಎಂಬ ಭರವಸೆಯನ್ನು ಹೊಂದಿದ್ದೇನೆ ಎಂದು, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರೋ ಕನ್ನಡಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಇದರ ಜೊತೆಗೆ ಟೀಮ್ ಇಂಡಿಯಾದಲ್ಲಿ ಮತ್ತೆ ಅವಕಾಶ ಪಡೆಯೋ ವಿಶ್ವಾಸವನ್ನ ಉತ್ತಪ್ಪ ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕಲರ್​ಫುಲ್ ಫೋಟೋಶೂಟ್! ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಲರ್​ಫುಲ್ ಫೋಟೋ ಸೆಷನ್ ನಡೆಸಿದೆ. ನಾಯಕ ಶ್ರೇಯಸ್ ಐಯ್ಯರ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡ, ಪೃಥ್ವಿ ಶಾ ಸೇರಿದಂತೆ ಕ್ಯಾಪಿಟಲ್ಸ್ ಆಟಗಾರರು ಕ್ಯಾಮರಾ ಲೆನ್ಸ್ ಮುಂದೆ ಡಿಫರೆಂಟ್ ಡಿಫರೆಂಟ್ ಪೋಸ್​ಗಳನ್ನ ನೀಡಿದ್ರು.

ಮನೀಶ್​ಗೆ ಬರ್ತ್​ಡೇ ಸಂಭ್ರಮ ಸನ್​ರೈಸರ್ಸ್ ಹೈದ್ರಾಬಾದ್ ತಂಡದಲ್ಲಿರೋ ಸ್ಟಾರ್ ಬ್ಯಾಟ್ಸ್​ಮನ್ ಕನ್ನಡಿಗ ಮನೀಷ್ ಪಾಂಡೆ, 31ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಆಟಗಾರರು, ಕೇಕ್ ಕಟ್ ಮಾಡಿ ಮನೀಷ್ ಪಾಂಡೆ ಹುಟ್ಟುಹಬ್ಬನ್ನ ಆಚರಿಸಿ ಎಂಜಾಯ್ ಮಾಡಿದ್ರು.

ಆಟಗಾರರಿಗೆ ಕಾಡೋದಿಲ್ಲ ಕೊರೊನಾ! ಯುಎಇನಲ್ಲಿ ನಡೆಯಲಿರೊ ಐಪಿಎಲ್​ನಲ್ಲಿ ಪಾಲ್ಗೊಂಡಿರುವ ಆಟಗಾರರ ಕಾರ್ಯಕ್ಷಮತೆ ಮೇಲೆ ಕೊರೊನಾ ಸೋಂಕು ಯಾವುದೇ ರೀತಿಯ ಪರಿಣಾಮ ಬೀರೊದಿಲ್ಲ ಎಂದು, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ. ಹಾಗೇ ಆಟಗಾರರ ಕೊವಿಡ್ 19 ಸುರಕ್ಷತಾ ಕ್ರಮಗಳನ್ನ ಪಾಲಿಸುವಂತೆ ತಿಳಿಸಿದ್ದಾರೆ.

ಜೀವಾ ಕೈಯಲ್ಲಿ ಧೋನಿ ಸ್ಕೆಚ್ ತನ್ನ ತಂದೆಯ ಸ್ಕೆಚ್‌ ಹಿಡಿದುಕೊಂಡಿರುವ ಜೀವಾಗೆ, ಚಿತ್ರದಲ್ಲಿ ಇರುವುದು ಯಾರೆಂದು ಸಾಕ್ಷಿ ಕೇಳಿದಾಗ, ಇದು ಪಪ್ಪಾ ಎಂದಿದ್ದಾಳೆ. ಅದು ನಿನ್ನ ಅಪ್ಪ ಅನ್ನೋದು ಗ್ಯಾರಂಟಿಯಾ ಎಂದು ಸಾಕ್ಷಿ ಕೇಳಿದಾಗ ಪ್ರತಿಕ್ರಿಯಿಸಿದ ಜೀವಾ, ಮಹೇಂದ್ರ ಸಿಂಗ್ ಧೋನಿ ಎಂದಿದ್ದಾಳೆ.

ಬೂಮ್ರಾ ಯಾರ್ಕರ್ ಎಸೆಯಬೇಡ! ಮಹೇಂದ್ರ ಸಿಂಗ್ ಧೋನಿಗೆ ನಾನು ಯಾರ್ಕರ್ ಎಸೆಯುತ್ತೀನಿ ಅನ್ನೋ ನಂಬಿಕೆಯಿರಲಿಲ್ಲ. ಹೀಗಾಗಿ ನನಗೆ ಯಾರ್ಕರ್ ಎಸೆಯಬೇಡಿ ಎಂದಿದ್ರು ಅಂತಾ, ಜಸ್ಪ್ರೀತ್ ಬೂಮ್ರಾ ಹೇಳಿದ್ದಾರೆ. ಅಷ್ಟೇ ಅಲ್ಲ.. ಯಾರ್ಕರ್ ಎಸೆದ ಬಳಿಕ ಸ್ವತಃ ಧೋನಿಯೇ ಬೂಮ್ರಾರನ್ನ ಹಾಡಿ ಹೊಗಳಿದ್ರಂತೆ.

ಶಾರುಖ್ ಫುಲ್ ಖುಷ್! ಸಿಪಿಎಲ್​ನಲ್ಲಿ ತನ್ನ ಮಾಲೀಕತ್ವ ಟಿಕೆಆರ್ ತಂಡ ಚಾಂಪಿಯನ್ ಆಗಿರೋದು ಶಾರುಖ್ ಖಾನ್ ಫುಲ್ ಖುಷ್ ಆಗಿದ್ದಾರೆ. ಹಾಗೆಯೇ ಸಿಪಿಎಲ್​ನಂತೆ ಐಪಿಎಲ್​ನಲ್ಲೂ ನಮ್ಮ ತಂಡ ಚಾಂಪಿಯನ್ ಆಗಲಿ ಅಂತ ಶಾರುಖ್ ಹೇಳಿದ್ದಾರೆ.

ಸ್ವೀಡನ್​ಗೆ ಜಾಂಟಿ ಕೋಚ್ ಕಿಂಗ್ಸ್ ಇಲೆವೆನ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರೋ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಸ್ವೀಡನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಸಂಬಂಧ ಸ್ವೀಡನ್ ಕ್ರಿಕೆಟ್ ಒಕ್ಕೂಟದೊಂದಿಗೆ ಜಾಂಟಿ ಸಹಿ ಹಾಕಿದ್ದಾರೆ.

ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ