Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಪಂಜಾಬ್- ಮುಂಬೈ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಅಪಸ್ವರ ಎತ್ತಿದ ಕ್ರಿಕೆಟಿಗರು; ಕಾರಣವೇನು?

ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಟೂರ್ನಿಯ ಎರಡನೇ ಜಯ ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು.

IPL 2021: ಪಂಜಾಬ್- ಮುಂಬೈ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಅಪಸ್ವರ ಎತ್ತಿದ ಕ್ರಿಕೆಟಿಗರು; ಕಾರಣವೇನು?
ಕೆ.ಎಲ್. ರಾಹುಲ್
Follow us
TV9 Web
| Updated By: ganapathi bhat

Updated on:Nov 30, 2021 | 12:12 PM

ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 17ನೇ ಪಂದ್ಯದಲ್ಲಿ (ಏಪ್ರಿಲ್ 23) ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೈಲ್ ಉತ್ತಮ ಪ್ರದರ್ಶನ ತೋರಿದ್ದರು. ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಿಶೇಷ ಎಂಬಂತೆ, ಬಲಾಢ್ಯ ಬ್ಯಾಟ್ಸ್​ಮನ್ ಕ್ರಿಸ್ ಗೈಲ್ ಹಾಗೂ ಕೆ.ಎಲ್. ರಾಹುಲ್​ಗೆ 132 ರನ್​ಗಳ ಸಣ್ಣ ಟಾರ್ಗೆಟ್ ಬೆನ್ನತ್ತಲು 17.4 ಓವರ್​ಗಳು ಬೇಕಾಯಿತು. ಚೆನ್ನೈ ಮೈದಾನವು ಬ್ಯಾಟಿಂಗ್​ಗೆ ಅಷ್ಟಾಗಿ ಸಹಕರಿಸುತ್ತಿಲ್ಲ. ಚಿದಂಬರಂ ಮೈದಾನದಲ್ಲಿ ದಾಂಡಿಗರು ದೊಡ್ಡ ಮೊತ್ತ ಪೇರಸಿಲು ಆಗುತ್ತಿಲ್ಲ ಎಂದು ಕೂಡ ಕಳೆದ ಅಷ್ಟು ಪಂದ್ಯಗಳನ್ನು ಗಮನಿಸಿದರೆ ತಿಳಿಯುತ್ತದೆ. ಈ ನಡುವೆ, ನಿನ್ನೆಯ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಕೆಲವಾರು ವಿಭಿನ್ನ ಅಭಿಪ್ರಾಯಗಳು ಕೇಳಿ ಬಂದಿದೆ. ಬ್ರೆಟ್ ಲೀ, ಬೆನ್ ಸ್ಟೋಕ್ಸ್ ಹಾಗೂ ಪಾರ್ಥೀವ್ ಪಟೇಲ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಇದು ಬ್ಯಾಟಿಂಗ್ ಮಾಡಲು ಸುಲಭದ ಸಂದರ್ಭವಾಗಿರಲಿಲ್ಲ. ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೈಲ್​ಗೆ ಯಶಸ್ಸಿನ ಸಂಪೂರ್ಣ ಗೌರವ ನೀಡಬೇಕು. ಅವರು ಸಂದರ್ಭೋಚಿತವಾಗಿ ಆಟವಾಡಿದರು. ಹಾಗಾಗಿ, ಪಂಜಾಬ್ ಕಿಂಗ್ಸ್​ ನಿನ್ನೆಯ ಪಂದ್ಯಕ್ಕೆ ಪೂರ್ಣ ಅಂಕ ನೀಡಬೇಕು ಎಂದು ನಿನ್ನೆಯ ಪಂಜಾಬ್ ಕಿಂಗ್ಸ್- ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕ ಪಾರ್ಥೀವ್ ಪಟೇಲ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ್ದಾರೆ.

ಆಸಿಸ್ ವೇಗಿ ಬ್ರೆಟ್ ಲೀ ಒಂದು ಹೆಜ್ಜೆ ಮುಂದುವರಿದು ತಮ್ಮ ಅಭಿಪ್ರಾಯ ಹೇಳಿದರು. ಮೈದಾನದ ಪಿಚ್ ವರ್ತನೆ ಆಶ್ಚರ್ಯಕರವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಬ್ಯಾಟ್ಸ್​ಮನ್​ಗಳಿಗೆ ಅಂಥ ಪಿಚ್​ನಲ್ಲಿ ಲಯ ಕಾಯ್ದುಕೊಳ್ಳುವುದು ಕಷ್ಟಕರವಾದ ಕೆಲಸ ಎಂದು ತಿಳಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದಿಂದ ಕೈ ಬೆರಳು ಗಾಯದ ಕಾರಣದಿಂದ ಹೊರಗುಳಿದಿರುವ ಮತ್ತೊಬ್ಬ ಖ್ಯಾತ ಆಲ್​ರೌಂಡರ್ ಬೆನ್ ಸ್ಟೋಕ್ಸ್, ಚೆನ್ನೈನ ಪಿಚ್​ ಬಗ್ಗೆ ಟ್ವೀಟ್ ಮಾಡಿದ್ದಾರೆ. 130-140 ರನ್​ಗಳಿಗೆ ವಿಕೆಟ್​ಗಳು ರಾಶಿ ಬೀಳುತ್ತಿವೆ. ಐಪಿಎಲ್ ಟೂರ್ನಿ ಮುಂದುವರಿಯುತ್ತಿರುವಂತೆ ಹೀಗಾಗದು ಎಂದು ಅಂದುಕೊಳ್ಳುತ್ತೇನೆ ಎಂದು ಸ್ಟೋಕ್ಸ್ ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ಟೂರ್ನಿಯ ಎರಡನೇ ಜಯ ದಾಖಲಿಸಿತ್ತು. ಮುಂಬೈ ಇಂಡಿಯನ್ಸ್ ಮೂರನೇ ಸೋಲು ಕಂಡಿತು. ಪಂಜಾಬ್ ಕಿಂಗ್ಸ್ 4 ಅಂಕ ಗಳಿಸುವ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ 5ನೇ ಸ್ಥಾನಕ್ಕೆ ಏರಿದೆ. ಮುಂಬೈ ಇಂಡಿಯನ್ಸ್ ನಿನ್ನೆ ಸೋತ ಬಳಿಕವೂ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಸೋಮವಾರ ಪಂಜಾಬ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸಾಡಲಿದೆ.

ಇದನ್ನೂ ಓದಿ: IPL 2021, RCB: ಒಂದೇ ದಿನ ಆರ್​ಸಿಬಿ ಸೃಷ್ಟಿ ಮಾಡಿತು ಸಾಲು ಸಾಲು ದಾಖಲೆ! ಇಲ್ಲಿದೆ ವಿವರ

ಇದನ್ನೂ ಓದಿ: IPL 2021: 4 ಕೋಟಿ ಪಡೆದವ ಆಡಿದ 4 ಪಂದ್ಯಗಳಲಿ 3 ಬಾರಿ ಶೂನ್ಯಕ್ಕೆ ಔಟ್! ಪಂಜಾಬ್ ಹೀನಾಯ ಸೋಲಿಗೆ ಇದೇ ಕಾರಣವಾಯ್ತ?

(IPL 2021 Brett Lee Ben Stokes slam Chennai Pitch after PBKS vs MI match)

Published On - 3:34 pm, Sat, 24 April 21

ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ