AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಯುಜ್ವೇಂದ್ರ ಜೊತೆಗಿನ ಸ್ನೇಹದ ಕುರಿತು ಮನಬಿಚ್ಚಿ ಮಾತಾಡಿರುವ ‘ಕೋಟಿವೀರ’ ಗ್ಲೆನ್ ಮ್ಯಾಕ್ಸ್​ವೆಲ್!

2021 ಸೀಸನ್ನಿನ ಉಳಿದ ಭಾಗದಲ್ಲೂ ಮ್ಯಾಕ್ಸ್​ವೆಲ್ ಇದೇ ಬಗೆಯ ಪ್ರದರ್ಶನಗಳನ್ನು ನೀಡಲಿ ಎಂಬ ಆಶಯವನ್ನು ಆರ್​ಸಿಬಿ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಮ್ಯಾಕ್ಸ್​ವೆಲ್ ಮತ್ತು ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ನಡುವೆ ಪರಸ್ಪರ ಆದರ, ಅಭಿಮಾನ ಮತ್ತು ಮೆಚ್ಚುಗೆಗಳಿವೆ.

IPL 2021: ಯುಜ್ವೇಂದ್ರ ಜೊತೆಗಿನ ಸ್ನೇಹದ ಕುರಿತು ಮನಬಿಚ್ಚಿ ಮಾತಾಡಿರುವ ‘ಕೋಟಿವೀರ’ ಗ್ಲೆನ್ ಮ್ಯಾಕ್ಸ್​ವೆಲ್!
ಯುಜ್ವೇಂದ್ರ ಚಹಲ್ ಮತ್ತು ಗ್ಲೆನ್ ಮ್ಯಾಕ್ಸವೆಲ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on: Apr 14, 2021 | 6:32 AM

Share

ಇಂಡಿಯನ್​ ಪ್ರಿಮೀಯರ್​ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಬಾರಿ ಭಾರೀ ಮೊತ್ತಕ್ಕೆ ಬಿಕರಿಯಾಗುವ ಅಸ್ಟ್ರೇಲಿಯಾದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಈ ಬಾರಿಯ ಸೀಸನ್ ಅನ್ನು ಪಾಸಿಟಿವ್ ನೋಟ್​ನೊಂದಿಗೆ ಆರಂಭಿಸಿದ್ದಾರೆ. ನಿಮಗೆ ನೆನಪಿರಬಹುದು, ಕಳೆದ ಸೀಸನ್​ನಲ್ಲಿ ಪಂಜಾಬ್​ ಕಿಂಗ್ಸ್ (ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್) ಪರ ಆಡಿದ್ದ ಮ್ಯಾಕ್ಸ್​ವೆಲ್​ಗೆ ಇಡೀ ಸೀಸನ್​ನಲ್ಲಿ ಒಂದೇ ಒಂದು ಸಿಕ್ಸ್ ಬಾರಿಸಲು ಸಾಧ್ಯವಾಗಿರಲಿಲ್ಲ. ಬೌಲಿಂಗ್​ನಲ್ಲೂ ಅವರು ಯಾವುದೇ ಕರಾಮತ್ತು ತೋರದ ಕಾರಣ ಫ್ರಾಂಚೈಸಿಯ ಮಾಲೀಕರಾಗಿರುವ ಪ್ರೀತಿ ಜಿಂಟಾ ಮತ್ತು ಇತರರು ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡರು. ಆದರೆ ಫೆಬ್ರವರಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾಲೀಕರು ಬೃಹತ್​ ಮೊತ್ತ ಎನ್ನಬಹುದಾದ 14.25 ಕೋಟಿ ರೂಪಾಯಿಗಳಿಗೆ ಅವರನ್ನು ಖರೀದಿಸಿದರು. ಈ ತಂಡದ ಪರ ಅವರ ಈ ಸೀಸನ್ ಉತ್ತಮವಾಗಿಯೇ ಅರಂಭಗೊಂಡಿದೆ. ಅವರು ಮುಂಬೈ ವಿರುದ್ಧ ಆಡಿದ ಪಂದ್ಯದಲ್ಲಿ 28 ಎಸೆತಗಳಲ್ಲಿ 39 ರನ್ (3 ಬೌಂಡರಿ 2 ಸಿಕ್ಸ್) ಬಾರಿಸಿದರು.

2021 ಸೀಸನ್ನಿನ ಉಳಿದ ಭಾಗದಲ್ಲೂ ಮ್ಯಾಕ್ಸ್​ವೆಲ್ ಇದೇ ಬಗೆಯ ಪ್ರದರ್ಶನಗಳನ್ನು ನೀಡಲಿ ಎಂಬ ಆಶಯವನ್ನು ಆರ್​ಸಿಬಿ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಮ್ಯಾಕ್ಸ್​ವೆಲ್ ಮತ್ತು ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ನಡುವೆ ಪರಸ್ಪರ ಆದರ, ಅಭಿಮಾನ ಮತ್ತು ಮೆಚ್ಚುಗೆಗಳಿವೆ. ಹಾಗೆಯೇ, ಟೀಮಿನ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಜೊತೆ ಅವರ ದೋಸ್ತಿ ಜೋರಾಗಿದೆ, ಚಹಲ್ ಜೊತೆಗಿನ ಸ್ನೇಹದ ಬಗ್ಗೆ ಮ್ಯಾಕ್ಸ್​ವೆಲ್ ಮನಬಿಚ್ಚಿ ಮಾತಾಡಿದ್ದಾರೆ.

‘ನನ್ನ ಈ ಪುಟ್ಟ ಸ್ನೇಹಿತನೊಂದಿಗೆ ಆಡುವುದನ್ನು ನಾನು ಎದುರು ನೋಡುತ್ತಿದ್ದೇನೆ. ಇಲ್ಲಿಗೆ ಬಂದ ಎರಡೇ ದಿನಗಳ ನಂತರ ಅವರು ನನ್ನನ್ನು ಕೀಟಲೆ ಮಾಡುವುದು, ಕಾಲೆಳೆಯುವುದನ್ನು ಆರಂಭಿಸಿದ್ದಾರೆ,’ ಎಂದು ಆರ್​ಸಿಬಿ ನೀಡಿದ ಸಂದರ್ಶನದಲ್ಲಿ ಮ್ಯಾಕ್ಸ್​ವೆಲ್ ಹೇಳಿದ್ದಾರೆ.

‘2013ರಲ್ಲಿ ನಾವಿಬ್ಬರೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದೆವು. ಹಾಗಾಗಿ ನಾವು ಬಹಳ ವರ್ಷಗಳಿಂದ ಸ್ನೇಹಿತರು. ಅಲ್ಲಿಂದೀಚೆಗೆ ಈ ಸ್ನೇಹ ಗಾಢವಾಗುತ್ತಾ ಸಾಗಿದೆ. ನಾವು ಭೇಟಿಯಾದಾಗೆಲ್ಲ ಮಾಡುವ ಮೊದಲ ಕೆಲಸವೆಂದರೆ ಬಿಗಿಯಾಗಿ ತಬ್ಬಿಕೊಳ್ಳುವುದು. ನಾವು ಮೈದಾನದಲ್ಲಿ ಜೊತೆಯಾಗಿ ಆಡುತ್ತೇವೆ, ಅವರು ಬೌಲಿಂಗ್ ಮಾಡಿದರೆ ನಾನು ಬ್ಯಾಟಿಂಗ್ ಮಾಡುತ್ತೇನೆ,’ ಎಂದು ಮ್ಯಾಕ್ಸ್​ವೆಲ್ ಹೇಳಿದ್ದಾರೆ.

‘ನಮ್ಮಿಬ್ಬರ ನಡುವೆ ತಮಾಷೆ ಕೀಟಲೆ ನಡೆಯುತ್ತಲೇ ಇರುತ್ತದೆ, ಮುಗುಳ್ನಗು ನಮ್ಮ ಮುಖದಲ್ಲಿ ಸದಾ ಮನೆ ಮಾಡಿರುತ್ತದೆ. ತೀವ್ರ ಪೈಪೋಟಿ ಹೊರತಾಗಿಯೂ, ತಮಾಷೆ ಮಾಡಿಕೊಳ್ಳುತ್ತಾ ಆಟವಾಡುತ್ತಿದ್ದರೆ, ಕ್ರಿಕೆಟ್ ನಿಜಕ್ಕೂ ಮೋಜೆನಿಸುತ್ತದೆ,’ ಎಂದು ಮಾಕ್ಸ್​ವೆಲ್ ಹೇಳಿದ್ದಾರೆ.

ಬುಧವಾರದಂದು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುವ ಪಂದ್ಯದಲ್ಲೂ ಮ್ಯಾಕ್ಸ್​ವೆಲ್ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: IPL 2021: ವೈಯಕ್ತಿಕ ದುಃಖ ಮೆಟ್ಟಿನಿಂತು ಪದಾರ್ಪಣೆಯ ಪಂದ್ಯದಲ್ಲೇ ಕ್ರಿಕೆಟ್​ ಪ್ರೇಮಿಗಳ ಮನ ಗೆದ್ದ ರಾಜಸ್ತಾನ್ ರಾಯಲ್ಸ್​ ತಂಡದ ಚೇತನ್

IPL 2021: 63 ವರ್ಷದ ಈ ಉದ್ಯಮಿಗೂ ಐಪಿಎಲ್​ನಲ್ಲಿ ಆಡುವ ಆಸೆಯಂತೆ! ಆದರೆ ಷರತ್ತುಗಳು ಅನ್ವಯ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ