AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ರಾಜಸ್ಥಾನ್ ವಿರುದ್ಧ 4 ಕ್ಯಾಚ್ ಪಡೆದ ರವೀಂದ್ರ ಜಡೇಜಾ; ಧೋನಿ 2013ರಲ್ಲಿ ಮಾಡಿದ್ದ ಟ್ವೀಟ್ ಮತ್ತೆ ವೈರಲ್!

ನಾಲ್ಕು ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಬಗ್ಗೆ ಟ್ವಿಟರ್​ನಲ್ಲಿ 2013ರ ಟ್ವೀಟ್ ಒಂದು ಹರಿದಾಡುತ್ತಿದೆ. ಅದರಲ್ಲಿ ಧೋನಿ ಜಡೇಜಾ ಫೀಲ್ಡಿಂಗ್ ಬಗ್ಗೆ ಬರೆದುಕೊಂಡಿದ್ದಾರೆ.

IPL 2021: ರಾಜಸ್ಥಾನ್ ವಿರುದ್ಧ 4 ಕ್ಯಾಚ್ ಪಡೆದ ರವೀಂದ್ರ ಜಡೇಜಾ; ಧೋನಿ 2013ರಲ್ಲಿ ಮಾಡಿದ್ದ ಟ್ವೀಟ್ ಮತ್ತೆ ವೈರಲ್!
ರವೀಂದ್ರ ಜಡೇಜಾ ನಾನೊಬ್ಬ ಅತ್ಯುತ್ತಮ ಗೇಮ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಈ ಆಲ್ ರೌಂಡರ್ ಮತ್ತೊಮ್ಮೆ ತನ್ನ ಕೊನೆಯ ಓವರ್ ಬ್ಯಾಟಿಂಗ್​ನಿಂದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಜಡೇಜಾ 19 ನೇ ಓವರ್​ನಲ್ಲಿ 21 ರನ್ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಸಿಎಸ್‌ಕೆ ತಂಡಕ್ಕೆ ರವೀಂದ್ರ ಜಡೇಜಾ ಫಿನಿಶರ್ ಪಾತ್ರವನ್ನು ನಿರ್ವಹಿಸುತ್ತಿರುವುದು ಇದು ಸತತ ಎರಡನೇ ಸೀಸನ್ ಆಗಿದೆ. ಐಪಿಎಲ್ 2020 ರಲ್ಲೂ ಅವರು ಈ ಕೆಲಸವನ್ನು ಸಂಪೂರ್ಣ ಜವಾಬ್ದಾರಿಯಿಂದ ಮಾಡಿದರು. ಆದರೂ ಕಳೆದ ಋತುವಿನಲ್ಲಿ ಚೆನ್ನೈ ಪ್ರದರ್ಶನ ಕಳಪೆಯಾಗಿತ್ತು. ಈ ಕಾರಣದಿಂದಾಗಿ, ಜನರು ಜಡೇಜಾ ಆಟದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಐಪಿಎಲ್ 2021 ರಲ್ಲಿ, ಜಡೇಜಾ ಮತ್ತು ಚೆನ್ನೈ ಇಬ್ಬರೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರು ಈಗ ಆಡುವ ರೀತಿ ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ.
TV9 Web
| Edited By: |

Updated on:Nov 30, 2021 | 12:17 PM

Share

ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ (ಏಪ್ರಿಲ್ 19) ನಡೆದ ಐಪಿಎಲ್ 2021 ಟೂರ್ನಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 45 ರನ್​ಗಳ ಸುಲಭ ಜಯ ದಾಖಲಿಸಿತು. ಪಂದ್ಯದಲ್ಲಿ ರವೀದ್ರ ಜಡೇಜಾ ಬೌಲಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಮಿಂಚಿದರು. 4 ಓವರ್​ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಬಳಿಸಿದ್ದಲ್ಲದೆ, 4 ಕ್ಯಾಚ್​ಗಳನ್ನು ಕೂಡ ಪಡೆದರು. ರಾಜಸ್ಥಾನ್ ರಾಯಲ್ಸ್ ತಂಡವನ್ನು 143/9ಕ್ಕೆ ನಿಯಂತ್ರಿಸಲು ಜಡೇಜಾ ಬಿರುಸಿನ ಫೀಲ್ಡಿಂಗ್ ಕೂಡ ಸಹಕಾರಿಯಾಗಿತ್ತು.

ನಾಲ್ಕು ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಬಗ್ಗೆ ಟ್ವಿಟರ್​ನಲ್ಲಿ 2013ರ ಟ್ವೀಟ್ ಒಂದು ಹರಿದಾಡುತ್ತಿದೆ. ಅದರಲ್ಲಿ ಧೋನಿ ಜಡೇಜಾ ಫೀಲ್ಡಿಂಗ್ ಬಗ್ಗೆ ಬರೆದುಕೊಂಡಿದ್ದಾರೆ. ‘ಸರ್ ಜಡೇಜಾ ಕ್ಯಾಚ್ ಪಡೆದುಕೊಳ್ಳಲು ಓಡುವುದಿಲ್ಲ. ಬದಲಾಗಿ, ಬಾಲ್​ ತಾನಾಗೇ ಜಡೇಜಾರನ್ನು ಹುಡುಕಿ ಬಂದು ಕೈಯಲ್ಲಿ ಲ್ಯಾಂಡ್ ಆಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಈಗ ಮತ್ತೆ ವೈರಲ್ ಆಗಿದೆ.

ನಾಲ್ಕನೇ ಕ್ಯಾಚ್ ಪಡೆದ ಬಳಿಕ ಜಡೇಜಾ ಕೈ ಎತ್ತಿ ‘ನಾಲ್ಕು’ ಕ್ಯಾಚ್ ಎಂದು ಸೂಚಿಸುತ್ತಾ ಸಂಭ್ರಮಿಸಿದ್ದರು.

ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯ 12ನೇ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್​ಗಳ ಗೆಲುವು ದಾಖಲಿಸಿತ್ತು. ಚೆನ್ನೈ ಪರ ಮೊಯೀನ್ ಅಲಿ 3 ಓವರ್​ಗೆ 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಜಡೇಜಾ 4 ಓವರ್​ಗೆ 28 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಸ್ಯಾಮ್ ಕುರ್ರನ್ 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಬಟ್ಲರ್ 49 (35) ಗಳಿಸಿದ್ದರು. ವೋಹ್ರಾ 14, ದುಬೆ 17, ತೆವಾಟಿಯಾ 20, ಉನಾದ್ಕತ್ 24 ಹೊರತುಪಡಿಸಿ ಘಟಾನುಘಟಿ ದಾಂಡಿಗರು 5 ರನ್ ಕೂಡ ದಾಟದೆ ವಿಕೆಟ್ ನೀಡಿ ಸೋಲೊಪ್ಪಿಕೊಂಡಿದ್ದರು.

ಇದನ್ನೂ ಓದಿ: IPL 2021, MS Dhoni: ನನಗೆ ವಯಸ್ಸಾಗಿದೆ ಅನಿಸುತ್ತಿದೆ: 200ನೇ ಪಂದ್ಯ ಗೆದ್ದ ಬಳಿಕ ಧೋನಿ ಮಾತು

ಇದನ್ನೂ ಓದಿ: IPL 2021: ರಾಜಸ್ಥಾನ್​ ವಿರುದ್ಧ ಅಪರೂಪದ ದಾಖಲೆ ಮಾಡಿದ ಧೋನಿ! ಕ್ಯಾಪ್ಟನ್ ಕೂಲ್ ನಂತರದ ಸ್ಥಾನದಲ್ಲಿ ಕೊಹ್ಲಿ, ರೋಹಿತ್​

(IPL 2021 MS Dhoni 2013 tweet on Ravindra Jadeja goes viral after he took 4 catches against RR)

Published On - 3:32 pm, Tue, 20 April 21

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು