AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 Auction RCB Players List: ಈ ಸಲವಾದರೂ ಕಪ್​ ನಮ್ದೇ? ಹೀಗಿದೆ ನೋಡಿ ಆರ್​​​ಸಿಬಿ ಹೊಸ ತಂಡ..

IPL RCB Full Squad 2021: 2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ.

IPL 2021 Auction RCB Players List: ಈ ಸಲವಾದರೂ ಕಪ್​ ನಮ್ದೇ? ಹೀಗಿದೆ ನೋಡಿ ಆರ್​​​ಸಿಬಿ ಹೊಸ ತಂಡ..
ಆರ್​ಸಿಬಿ ಟೀಂ
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 19, 2021 | 4:16 PM

Share

ಐಪಿಎಲ್​ ಹರಾಜಿನಲ್ಲಿ​ ಚಾಲೆಂಜರ್ಸ್​ ಬೆಂಗಳೂರು ತಂಡ ಒಟ್ಟು 8 ಆಟಗಾರರನ್ನು ಖರೀದಿಸಿದೆ. ಮೂರು ಆಟಗಾರರು ಅನುಭವಿಗಳಾದರೆ, ಮತ್ತೆ ಐದು ಆಟಗಾರರು ಹೊಸಬರು. ಹಾಗಾದರೆ, ಆರ್​ಸಿಬಿ ಬಳಿ ಈಗ ಯಾರೆಲ್ಲ ಆಟಗಾರರು ಇದ್ದಾರೆ? ಯಾರನ್ನೆಲ್ಲ ಆರ್​ಸಿಬಿ ಖರೀದಿಸಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 2020ರ ಐಪಿಎಲ್​ ನಂತರ ಆರ್​ಸಿಬಿ ಕ್ರಿಸ್ ಮೊರಿಸ್, ಶಿವಂ ದುಬೆ, ಆರನ್ ಫಿಂಚ್, ಉಮೇಶ್ ಯಾದವ್, ಡೇಲ್ ಸ್ಟೇನ್, ಮೊಯೀನ್ ಅಲಿ, ಪಾರ್ಥಿವ್ ಪಟೇಲ್, ಪವನ್ ನೇಗಿ, ಇಸುರು ಉಡಾನಾ, ಗುರ್ಕೀರತ್ ಮನ್​ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಹೀಗಾಗಿ ಆರ್​ಸಿಬಿ ಬಳಿ ಆಟಗಾರರನ್ನು ಖರೀದಿಸಲು ಒಟ್ಟು 35.9 ಕೋಟಿ ಇತ್ತು.

ಆರ್​ಸಿಬಿ ಕಳೆದ 13 ಸೀಸನ್​ಗಳಿಂದ ಕಪ್​ ಎತ್ತಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಆದರೆ, ಈ ವರೆಗೆ ಅದು ಸಾಧ್ಯವಾಗಿಲ್ಲ. 2020ರ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಕೊನೆಯಲ್ಲಿ ಎಡವಿತ್ತು. ಹೀಗಾಗಿ, ಈ ಬಾರಿ ಗೆಲ್ಲಲು ಯಾವೆಲ್ಲ ತಂತ್ರಗಳು ಬೇಕೋ ಅದಕ್ಕೆ ಪೂರಕವಾಗಿ ಎಲ್ಲವನ್ನೂ ಆರ್​ಸಿಬಿ ಮಾಡುತ್ತಿದೆ.

ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಕೈಲ್‌ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್​ಸಿಬಿ ಖರೀದಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಆರ್​​ಸಿಬಿ ಖರೀದಿಸಿದ ದೊಡ್ಡ ಮೊತ್ತದ ಆಟಗಾರ ಇವರಾಗಿದ್ದಾರೆ. ಇನ್ನು ಗ್ಲೆನ್​ ಮ್ಯಾಕ್ಸ್​ವೆಲ್ 14.25 ಕೋಟಿ ರೂಪಾಯಿ ಹಾಗೂ ಡ್ಯಾನಿಯಲ್​ ಕ್ರಿಶ್ಚಿಯನ್​ಗೆ 4.80 ಕೋಟಿ ರೂಪಾಯಿ ನೀಡಿ ಖರೀದಿಸಿದೆ.

ಯುವ ಆಟಗಾರರಾರದ ಮೊಹಮ್ಮದ್​ ಅಜರುದ್ದೀನ್​, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ, ರಜತ್​ ಪಾಟೀದಾರ್ ಅವರನ್ನು ಬೇಸ್​ ಪ್ರೈಸ್​ 20 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.

ಆರ್​ಸಿಬಿ ಹೊಸ ಪಟ್ಟಿಯಲ್ಲಿ ಇರುವವರ ಹೆಸರು..

ಎ.ಬಿ. ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಜೋಶ್​ ಫಿಲಿಪೆ, ಪವನ್ ದೇಶಪಾಂಡೆ, ಶಹಬಾಜ್ ಅಹ್ಮದ್, ಆಡಮ್ ಜಂಪಾ, ಕೇನ್ ರಿಚರ್ಡ್ಸನ್, ಗ್ಲೆನ್​ ಮ್ಯಾಕ್ಸ್​ವೆಲ್, ಕೈಲ್‌ ಜೇಮಿಸ್ಸನ್, ಡ್ಯಾನಿಯಲ್​ ಕ್ರಿಶ್ಚಿಯನ್, ಮೊಹಮ್ಮದ್​ ಅಜರುದ್ದೀನ್, ಸುಯಶ್​ ಪ್ರಭುದೇಸಾಯಿ, ಕೆ.ಎಸ್.​ಭರತ್​, ಸಚಿನ್​ ಬೇಬಿ,ರಜತ್​ ಪಾಟೀದಾರ್.

ಇದನ್ನೂ ಓದಿ:  RCB 2 ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ