AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳ್ಳಿತೆರೆ ಮೇಲೆ ಕಪಿಲ್ ದೇವ್ ಜೀವನಾಧಾರಿತ ಕತೆ: ಸಿನಿಮಾಗೆ ವಿರೋಧ ವ್ಯಕ್ತಪಡಿಸಿದವರಿಂದಲೇ ಕಾತುರ

ಕ್ರಿಕೆಟ್ ದಂತಕತೆ ಕಪೀಲ್ ದೇವ್ ಜೀವನಾಧಾರಿತ ಕತೆ ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ. ಲಾಕ್​ಡೌನ್‌ಗೂ ಮುಂಚೆಯೇ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದ ಸಿನಿಮಾ ತಂಡ ಈಗ ಮತ್ತೆ ಸಿನಿಮಾ ಕುರಿತ ಒಂದೊಂದೇ ಇಂಟರೆಸ್ಟಿಂಗ್ ಸಂಗತಿಗಳನ್ನ ಹೊರ ಹಾಕ್ತಿದೆ. ಸದ್ಯ ಕಪೀಲ್ ದೇವ್‌ಗೆ ಸಿನಿಮಾದ ಬಗ್ಗೆ ಇದ್ದ ಕುತೂಹಲ ಹೇಗಿತ್ತು. ತಮ್ಮ ಕಥೆ ಸಿನಿಮಾ ಆಗ್ತಿದೆ ಅಂದಾಗ ಆದ ಭಯ ಎಂಥಾದ್ದು ಅನ್ನೋದರ ಡಿಟೇಲ್ಸ್ ಇಲ್ಲಿದೆ. ಕ್ರಿಕೆಟ್ ದಂತಕತೆ ಕಪಿಲ್ ದೇವ್ 1983 ವಿಶ್ವಕಪ್ […]

ಬೆಳ್ಳಿತೆರೆ ಮೇಲೆ ಕಪಿಲ್ ದೇವ್ ಜೀವನಾಧಾರಿತ ಕತೆ: ಸಿನಿಮಾಗೆ ವಿರೋಧ ವ್ಯಕ್ತಪಡಿಸಿದವರಿಂದಲೇ ಕಾತುರ
ಆಯೇಷಾ ಬಾನು
|

Updated on: Nov 22, 2020 | 6:39 AM

Share

ಕ್ರಿಕೆಟ್ ದಂತಕತೆ ಕಪೀಲ್ ದೇವ್ ಜೀವನಾಧಾರಿತ ಕತೆ ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ. ಲಾಕ್​ಡೌನ್‌ಗೂ ಮುಂಚೆಯೇ ರಿಲೀಸ್ ಮಾಡೋ ಪ್ಲ್ಯಾನ್ ಮಾಡಿದ್ದ ಸಿನಿಮಾ ತಂಡ ಈಗ ಮತ್ತೆ ಸಿನಿಮಾ ಕುರಿತ ಒಂದೊಂದೇ ಇಂಟರೆಸ್ಟಿಂಗ್ ಸಂಗತಿಗಳನ್ನ ಹೊರ ಹಾಕ್ತಿದೆ. ಸದ್ಯ ಕಪೀಲ್ ದೇವ್‌ಗೆ ಸಿನಿಮಾದ ಬಗ್ಗೆ ಇದ್ದ ಕುತೂಹಲ ಹೇಗಿತ್ತು. ತಮ್ಮ ಕಥೆ ಸಿನಿಮಾ ಆಗ್ತಿದೆ ಅಂದಾಗ ಆದ ಭಯ ಎಂಥಾದ್ದು ಅನ್ನೋದರ ಡಿಟೇಲ್ಸ್ ಇಲ್ಲಿದೆ.

ಕ್ರಿಕೆಟ್ ದಂತಕತೆ ಕಪಿಲ್ ದೇವ್ 1983 ವಿಶ್ವಕಪ್ ಗೆದ್ದ ಭಾರತ ತಂಡ ನಾಯಕತ್ವ ವಹಿಸಿದ್ರು. ಅಂದಿನ ಕ್ರಿಕೆಟ್ ಆಟದ ರೋಚಕ ಕಥೆ ಜೊತೆ ಕಪಿಲ್ ದೇವ್ ಕ್ರಿಕೆಟ್ ಜಗತ್ತಿನಲ್ಲಿ ಸಾಗಿ ಬಂದ ಸಾಧನೆಯ ಹಾದಿ ಹೇಗಿತ್ತು ಅನ್ನೋದು ಸಿನಿಮಾ ರೂಪದಲ್ಲಿ ಬೆಳ್ಳಿ ಪರದೆ ಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ.

ಕಬೀರ್ ಖಾನ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟಿಸ್ತಿದ್ದಾರೆ. ಅಂದ ಹಾಗೆ ಈಗಾಗಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದ್ರೆ ಕಪಿಲ್ ದೇವ್‌ಗೆ ಈ ಸಿನಿಮಾ ಮಾಡೋ ಬಗ್ಗೆ ಚಿತ್ರತಂಡ ಮಾತುಕತೆ ನಡೆಸಿದಾಗ ಭಯ ಕಾಡಿತ್ತಂತೆ.

ಮೊದ ಮೊದಲು ತಮ್ಮ ಕಥೆ ಸಿನಿಮಾ ಮಾಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ರಂತೆ. ತಾವು ಬದುಕಿರುವಾಗಲೇ ತಮ್ಮನ್ನ ಹೀರೋ ತರ ತೋರಿಸೋ ಬಗ್ಗೆ ಕಪಿಲ್ ದೇವ್ ಅವರಿಗೆ ಇಷ್ಟ ಇರಲಿಲ್ವಂತೆ. ಇದೆಲ್ಲದರ ಜೊತೆಗೆ ಮುಜುಗರ ಕೂಡ ಆಗಿತ್ತಂತೆ. ಇನ್ನು ತಮ್ಮ ಕಥೆ, ಅಂದುಕೊಂಡ ಮಟ್ಟಕ್ಕೆ ಸಿನಿಮಾ ಆಗುತ್ತೋ ಇಲ್ವೋ ಅನ್ನೋ ಆತಂಕ ಕಪಿಲ್ ದೇವ್ ಅವರಿಗಿತ್ತು ಅನ್ನೋ ಮಾಹಿತಿ ಹೊರ ಬಿದ್ದಿದೆ.

ನಂತರ ಸಿನಿಮಾಗೆ ರಣವೀರ್ ಸಿಂಗ್ ಡೆಡಿಕೇಟ್ ಆಗಿದ್ದ ರೀತಿ ಕಪಿಲ್ ಅವ್ರ ಜೊತೆ ಮಾತುಕತೆ ನಡೆಸಿ ಬರೋಬ್ಬರಿ ಒಂದು ಪಾತ್ರಕ್ಕಾಗಿ 8 ಗಂಟೆ ಕ್ರಿಕೆಟ್ ಪ್ರ್ಯಾಕ್ಟೀಸ್‌ ಮಾಡಿ ರಣವೀರ್ ಸಿಂಗ್ ಬಣ್ಣ ಹಚ್ಚಿದ ರೀತಿ ನೋಡಿದ್ ಮೇಲೆ ಕಪಿಲ್ ದೇವ್ ಅವರಿಗೆ ನಂಬಿಕೆ ಬಂದಿದೆ. ನಂತರ ಈಗ ತಮ್ಮ ಪಾತ್ರ ಇನ್ನು ಹೇಗೆ ಮೂಡಿ ಬಂದಿರಬಹುದು ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ.

ಒಟ್ಟಿನಲ್ಲಿ ವಿರೋಧ ಹಾಗೂ ಮುಜುಗರದ ನಡುವೆಯೂ ತಮ್ಮ ಕಥೆಯನ್ನ ಸಿನಿಮಾ ಮಾಡೋಕೆ ಒಪ್ಪಿಗೆ ನೀಡಿದ ಕಪಿಲ್ ದೇವ್ ಪಾತ್ರ ಮುಂದೆ ಅಭಿಮಾನಿಗಳಿಗೆ ಅದ್ಹೇಗೆ ಮೋಡಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ