Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?

ಲಂಡನ್​ಗೆ ಭಾರತದಿಂದ ಕೇವಲ ಉದ್ಯಮಿಗಳು, ಬಾಲಿವುಡ್​ ಮಂದಿಯಷ್ಟೇ ಬಂದುಹೋಗಬೇಕು ಯಾಕೆ? ಭಾರತದ ಐಪಿಎಲ್​ ಸಹ ಇಲ್ಲಿ ಸ್ಥಾನ ಪಡೆಯಲಿದೆ. ಇದು ನಮ್ಮ ಮಹದಾಸೆಯಾಗಬೇಕು ಎಂದು ಆಶಿಸಿದ್ದಾರೆ ಮೇಯರ್​ ಸಾದಿಖ್. ದುಡ್ಡೇ ದೊಡ್ಡಪ್ಪ ಎನ್ನುವ ಜಗತ್ತಿನ ಅತಿ ದೊಡ್ಡ ಕುಬೇರರಾದ ಬಿಸಿಸಿಐ ಕ್ರೀಡಾಸಂಸ್ಥೆ ಮೇಯರ್​ ಸಾದಿಖ್ ಕೋರಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲ ಇದೀಗ ಗರಿಗೆದರಿದೆ.

IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?
​ಐಪಿಎಲ್​ ಸೆಳೆಯುವ ನಿಟ್ಟಿನಲ್ಲಿ ಬೌಲಿಂಗ್ ಮಾಡುತ್ತಿರುವ ಲಂಡನ್​ ಹಾಲಿ ಮೇಯರ್ ಸಾದಿಖ್ ಖಾನ್
Follow us
ಸಾಧು ಶ್ರೀನಾಥ್​
|

Updated on: Apr 10, 2021 | 3:35 PM

ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂಬ ಕ್ರಿಕೆಟ್​ ಮಾಯೆ ಅಪ್ಪಟ ಭಾರತೀಯದ್ದು. ಆದರೆ ಕ್ರಿಕೆಟ್ ತವರೂರಾದ ಇಂಗ್ಲೆಂಡ್​ನಲ್ಲಿಯೂ ಈ IPL matches ನಡೆಯಲಿ ಎಂದು ನಮ್ಮನ್ನು ಶತಮಾನ ಕಾಲ ಆಳಿದ ಬ್ರಿಟಿಷರು ಇದೀಗ ಬಯಸುತ್ತಿರುವುದು ಸೋಜಿಗವೇ ಸರಿ. ಕಳೆದ IPL ಟೂರ್ನಮೆಂಟ್ ದುಬೈನಲ್ಲಿ ನಡೆದ ಬಳಿಕ ಭಾರತದಿಂದ ಆಚೆಗೆ IPL ನಡೆದರೆ ತೊಂದರೆ ಏನೂ ಇಲ್ಲ ಎಂಬ ಭಾವನೆ ಮೂಡುತ್ತಿರುವಾಗ ಇಂಗ್ಲೆಂಡ್​ನಲ್ಲಿ IPL ಟೂರ್ನಮೆಂಟ್ ನಡೆಯಬಹುದಲ್ವಾ ಎಂಬ ಜಿಜ್ಞಾಸೆಯೂ ಮೂಡಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಒಮ್ಮೆ ಐಪಿಎಲ್ ನಡೆದಿತ್ತು ಎಂಬುದು ಗಮನಾರ್ಹ. ಇದೆಲ್ಲದರ ಮಧ್ಯೆ ಅಲ್ಲಿ ಲಂಡನ್​ನಲ್ಲಿ ಮೇಯರ್​ ಸ್ಥಾನಕ್ಕೆ ಚುನಾವಣೆಗಳು ನಡೆಯುತ್ತಿವೆ. ಹಾಗಾಗಿ ಅಲ್ಲಿನ ಹಾಲಿ ಮೇಯರ್ ಸಾದಿಖ್ ಖಾನ್​ ಮತ್ತೊಮ್ಮೆ ಮೇಯರ್ ಸ್ಥಾನ ಬಯಸಿದ್ದಾರೆ.

ಅದಕ್ಕಾಗಿ ಥೇಟ್ ನಮ್ಮ ರಾಜಕಾರಣಿಗಳಂತೆ ಮತದಾರರನ್ನು ಇಂದ್ರ ಚಂದ್ರ ಎಂದು ಹೊಗಳುತ್ತಾ, ಇಂದ್ರ ಚಂದ್ರರನ್ನೇ ತಂದುಕೊಡುವ ಮಾತನ್ನಾಡುತ್ತಿದ್ದಾರೆ. ಅದರಲ್ಲೂ ಈ ಸಾದಿಖ್ ಖಾನ್​ ಸಾಹೇಬರು ಹೇಳಿಕೇಳಿ ಈ ಲಂಡನ್​ ಮಂದಿಗೆ ಕ್ರಿಕೆಟ್​ ಅಂದ್ರೆ ಪಂಚಪ್ರಾಣ ಎಂಬುದನ್ನು ಅರಿತಿದ್ದಾರೆ. ಅದಕ್ಕಾಗಿ ಭರ್ಜರಿ ಪ್ಲಾನ್ ಮಾಡಿ.. IPL ಟೂರ್ನಮೆಂಟ್ ಅನ್ನೇ ಹೈಜಾಕ್ ಮಾಡಿ, ಲಂಡನ್ನಿನಲ್ಲಿಯೇ ಭಾರತದ IPL ಆಯೋಜಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.

ಕಿಂಗ್ಸ್​ಟನ್​ ಕ್ರಿಕೆಟ್​ ಕ್ಲಬ್​ ಮೈದಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಸ್ವತಃ ಬ್ಯಾಟ್​ ಬೀಸಿದ ಮೇಯರ್ ಸಾದಿಖ್ ಸಾಹೇಬರು (London Mayor Sadiq Khan) ಅಲ್ಲಿನ ಸರ್ರೆ ತಂಡದ ಮ್ಯಾನೇಜ್ಮೆಂಟ್​ ಜೊತೆ ಮಾತಿಗಿಳಿದು IPL ಟೂರ್ನಿಯನ್ನು ನಮ್ಮಲ್ಲೇ ಆಡಿಸಿದರೆ ಹೇಗೆ? ಈ ಬಗ್ಗೆ ಬಿಸಿಸಿಐ ಜೊತೆ ಮಾತನಾಡಿ, ಕಾರ್ಯಗತಗೊಳಿಸಿ. ಇದಕ್ಕೆ ಮತ್ತೆ ಮೇಯರ್​ ಆಗಿ ನಾನೇ ನೆರವಿಗೆ ನಿಲ್ಲುವೆ ಎಂದು ಸೀದಾ ಸಿಕ್ಸರ್​ ಬಾರಿಸಿದ್ದಾರೆ.

ಕ್ರಿಕೆಟ್​ ಅಂದ್ರೆ ಖುದ್ದು ಎದ್ದುಬಿದ್ದು ಓಡುವ ಮೇಯರ್ ಸಾದಿಖ್ ಸಾಹೇಬರು ಭಾರತದ ಕ್ರಿಕೆಟ್​ ಆಟಗಾರರ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದಾರೆ. ಎಂ ಎಸ್​ ಧೋನಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಅಂತಹಾ ಆಟಗಾರರು ಕ್ರಿಕೆಟ್​ ಮೈದಾನದಲ್ಲಿ ಮೆರೆಯುವುದನ್ನು ನಮ್ಮ ಲಂಡನ್​ ಪ್ರಜೆಗಳೂ ಕಣ್ತುಂಬಿಕೊಳ್ಳಲಿ ಎಂದು ಬಯಸಿದ್ದಾರೆ. 2008ರಲ್ಲಿ ಆರಂಭಗೊಂಡ ಐಪಿಎಲ್ ಇದೀಗ 14ನೇ ಬಾರಿಗೆ ಟೂರ್ನಮೆಂಟ್ ಆಯೋಜಿಸಿದೆ. ಇದು ಇದುವರೆಗೂ ಕ್ರೀಡಾರಂಗದಲ್ಲಿ ಅಪಾರ ಯಶಸ್ಸು ಕಂಡ ಕ್ರೀಡೆಯಾಗಿದೆ. ಹೆಚ್ಚು ಜನಪ್ರಿಯವೂ ಆಗಿದೆ. ಹಾಗಾಗಿಯೇ ಲಂಡನ್ ಮೇಯರ್​ ಸಾದಿಖ್​ ಅವರ ಕಣ್ಣೂ ಇದರ ಮೇಲೆ ಬಿದ್ದಿದೆ.

ಇಲ್ಲಿಗೆ ಭಾರತದಿಂದ ಕೇವಲ ಉದ್ಯಮಿಗಳು, ಬಾಲಿವುಡ್​ ಮಂದಿಯಷ್ಟೇ ಬಂದುಹೋಗಬೇಕು ಯಾಕೆ? ಭಾರತದ ಐಪಿಎಲ್​ ಸಹ ಇಲ್ಲಿ ಸ್ಥಾನ ಪಡೆಯಲಿದೆ. ಇದು ನಮ್ಮ ಮಹದಾಸೆಯಾಗಬೇಕು ಎಂದು ಆಶಿಸಿದ್ದಾರೆ ಮೇಯರ್​ ಸಾದಿಖ್. ದುಡ್ಡೇ ದೊಡ್ಡಪ್ಪ ಎನ್ನುವ ಜಗತ್ತಿನ ಅತಿ ದೊಡ್ಡ ಕುಬೇರರಾದ ಬಿಸಿಸಿಐ ಕ್ರೀಡಾಸಂಸ್ಥೆ ಮೇಯರ್​ ಸಾದಿಖ್ ಕೋರಿಕೆಗೆ ಹೇಗೆ ಸ್ಪಂದಿಸುತ್ತದೆ ಎಂಬ ಕುತೂಹಲ ಇದೀಗ ಗರಿಗೆದರಿದೆ.

ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ