AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಣಕಾಲಿನ ಸಮಸ್ಯೆ ಮರುಕಳಿಸಿರುವುದರಿಂದ ರೋಜರ್ ಫೆಡರರ್ ಒಲಂಪಿಕ್ಸ್​ನಲ್ಲಿ ಭಾಗವಹಿಸುವುದಿಲ್ಲ

ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್​ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.

ಮೊಣಕಾಲಿನ ಸಮಸ್ಯೆ ಮರುಕಳಿಸಿರುವುದರಿಂದ ರೋಜರ್ ಫೆಡರರ್ ಒಲಂಪಿಕ್ಸ್​ನಲ್ಲಿ ಭಾಗವಹಿಸುವುದಿಲ್ಲ
ರೋಜರ್ ಫೆಡರರ್
TV9 Web
| Edited By: |

Updated on: Jul 14, 2021 | 8:20 AM

Share

ಮೊಣಕಾಲಿನ ಗಾಯದಿಂದ ನರಳುತ್ತಿರುವ ವಿಶ್ವ ಟೆನಿಸ್​ನ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್, ಟೊಕಿಯೊ ಒಲಂಪಿಕ್ಸ್ ಬಾಗವಹಿಸುತ್ತಿಲ್ಲ. 20 ಗ್ರ್ಯಾಂಡ್​ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ‘ಫೆಡೆಕ್ಸ್’ ಕಳೆದ ವಾರ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಹ್ಯುಬರ್ಟ್ ಹುಕ್ರಾಜ್​ಗೆ ನೇರ ಸೆಟ್​ಗಳಿಂದ ಸೋತಿದ್ದರು. 8ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಈ ಸ್ವಿಸ್ ಆಟಗಾರ ಒಮ್ಮೆಯೂ ಒಲಂಪಿಕ್ಸ್​ನಲ್ಲಿ ಸಿಂಗಲ್ಸ್ ಚಿನ್ನದ ಪದಕ ಗೆದ್ದಿಲ್ಲ. ಬಲ ಮೊಣಕಾಲಿನ ಸಮಸ್ಯೆಯಿಂದ ಪದೇಪದೆ ಬಳಳುತ್ತಿರುವ ಫೆಡರರ್ ಕಳೆದ ವರ್ಷ ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

‘ಗ್ರಾಸ್ ಕೋರ್ಟ್ ಮೇಲೆ ಆಡುವಾಗ ದುರದೃಷ್ಟವಶಾತ್ ಮೊಣಕಾಲಿನ ಸಮಸ್ಯೆ ಮರುಕಳಿಸಿತು. ಒಲಂಪಿಕ್ಸ್​ನನಿಂದ ಹಿಂತೆಗೆಯದೆ ಬೇರೆ ದಾರಿಯಲಿಲ್ಲ ಅಂತ ನನಗೆ ಮನವರಿಕೆಯಾಗಿದೆ,’ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಒಲಂಪಿಕ್ಸ್​ನಲ್ಲಿ ಟೆನಿಸ್ ಪಂದ್ಯಗಳು ಜುಲೈ 24ರಿಂದ ಆರಂಭವಾಗಲಿವೆ.

ಮುಂದಿನ ತಿಂಗಳು 40 ನೇ ವಯಸ್ಸಿಗೆ ಕಾಲಿಡುವ ಫೆಡರರ್ ವಿಂಬಲ್ಡನ್ ಟೂರ್ನಿ ಆಡಲು ಫಿಟ್​ ಆಗಿರುವುದಕ್ಕಾಗಿ ಫ್ರೆಂಚ್ ಓಪನ್​ನಲ್ಲಿ ನಾಲ್ಕನೇ ಸುತ್ತಿನ ನಂತರ ಟೂರ್ನಿಯಿಂದ ಹಿಂತೆಗೆದಿದ್ದರು. ವಿಂಬಲ್ಡನ್​ನಲ್ಲಿ ಅವರು, ಕ್ವಾರ್ಟರ್ ಪೈನಲ್​ವರೆಗೆ ಉತ್ತಮವಾಗೇ ಆಡಿದರಾದರೂ ಆ ಹಂತದಲ್ಲಿ ಪೋಲೆಂಡ್​ನ ಆಟಗಾರ ಹುಕ್ರಾಜ್​ಗೆ 6-3, 7-6 (7/4) ಮತ್ತು 6-0 ಸೆಟ್​ಗಳಿಂದ ಸೋತರು

ಪಂದ್ಯದ ನಂತರ ಮಾಧ್ಯಮದವರು, ಇದು ನಿಮ್ಮ ಕೊನೆಯ ವಿಂಬಲ್ಡನ್ ಟೂರ್ನಿಯೇ ಎಂದು ಕೇಳಿದ ಪ್ರಶ್ನೆಗೆ, ‘ಗೊತ್ತಿಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದರು. ಆದರೆ, ವಿಶ್ವದ ಮಾಜಿ ನಂಬರ್ ವನ್ ಆಟಗಾರ, ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಬೇಸಿಗೆ ನಂತರ ಎಟಿಪಿ ಟೂರ್​ಗೆ ವಾಪಸ್ಸಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು.

‘ಬೇಸಿಗೆ ನಂತರ ಟೂರ್​ ವಾಪಸ್ಸಾಗುವ ಉದ್ದೇಶವಿಟ್ಟುಕೊಂಡು ರಿಹ್ಯಾಬ್ ಶುರಮಾಡಿದ್ದೇನೆ, ನಾನಿರುವ ಸ್ಥಳದಿಂದಲೇ ಒಲಂಪಿಕ್ಸ್​ನಲ್ಲಿ ಭಾಗವಹಿಸಿರುವ ಸ್ವಿಸ್ ಆಟಗಾರರಿಗಾಗಿ ಚೀರ್ ಮಾಡುತ್ತೇನೆ,’ ಎಂದು ಫೆಡರರ್ ಹೇಳಿದ್ದಾರೆ.

ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್​ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ರವಿವಾರದಂದು ವಿಂಬಲ್ಡನ್ ಕಿರೀಟ ಧರಿಸಿದ ನೊವಾಕ್ ಜೊಕೊವಿಚ್ ತಾನು ಭಾಗವಹಿಸುವ ಸಾಧ್ಯತೆ 50/50 ರಷ್ಟಿದೆ ಅಂತ ಹೇಳಿದ್ದಾರೆ.

ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್ ಕೊವಿಡ್​ ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತು. ಆದರೆ, ಕ್ರೀಡಾಪಟಗಳು ಖಾಲಿ ಮೈದಾನಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅನಿವಾರ್ಯತೆ ಏರ್ಪಟ್ಟಿದೆ. ಜಪಾನಿನಲ್ಲಿ ಕೋವಿಡ್​ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರೇಕ್ಷಕರಿಗೆ ಅವಕಾಶ ನೀಡದಿರಲು ಜಪಾನ ಸರ್ಕಾರ ನಿರ್ಧರಿಸಿದೆ.

ತಮ್ಮ ಉಜ್ವಲ ಕರೀಯರ್​ನಲ್ಲಿ ಎಲ್ಲ ಟೆನಿಸ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್​ಗೆ ಸಿಂಗಲ್ಸ್​ನಲ್ಲಿ ಒಲಂಪಿಕ್ಸ್ ಚಿನ್ನದ ಪದಕ ಇನ್ನೂ ಸಿಕ್ಕಿಲ್ಲ. 2000 ರ ಸಿಡ್ನಿ ಒಲಂಪಿಕ್ಸ್​ನಲ್ಲಿ ಅವರು ಸೆಮಿಫೈನಲ್​ನಲ್ಲಿ ಸೋತರು. ನಂತರ 2012ರಲ್ಲಿ ಫೈನಲ್ ತಲುಪಿದರಾದರೂ ಇಂಗ್ಲೆಂಡ್​ನ ಆಂಡಿ ಮುರ್ರೇ ಅವರಿಗೆ ಪರಾಭವಗೊಂಡರು. ಆದರೆ, 2008 ಬೀಜಿಂಗ್ ಒಲಂಪಿಕ್ಸ್​ನಲ್ಲಿ ಅವರು ಸ್ಟ್ಯಾನ್ ವಾರ್ವಿಂಕಾ ಅವರ ಜೊತೆ ಡಬಲ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇದನ್ನೂ ಓದಿ: ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್​ನ ಹುರ್ಕಾಜ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ