AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಸೆಮಿಫೈನಲ್ ಪ್ರವೇಶ!

ಮೊದಲ ಗೇಮನ್ನು​ 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್​ಗಳನ್ನು 21-16 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು.

ಗೆಲುವಿನ ಸ್ಪರ್ಶ ಕಂಡುಕೊಂಡ ಸಿಂಧು ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ ಸೆಮಿಫೈನಲ್ ಪ್ರವೇಶ!
ಪಿವಿ ಸಿಂಧು
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Mar 20, 2021 | 5:43 PM

Share

ಭಾರತದ ಏಸ್ ಮಹಿಳಾ ಶಟ್ಲರ್ ಪಿವಿ ಸಿಂಧು ಗೆಲುವಿನ ಸ್ಪರ್ಶವನ್ನು ಪುನಃ ಕಂಡುಕೊಂಡಿದ್ದಾರೆ. ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸಿಂಧು ಇಂದು ಜಪಾನಿನ ಅಗ್ರಮಾನ್ಯ ಆಟಗಾರ್ತಿ ಅಕನೆ ಯಮಗುಚಿ ಅವರನ್ನು ಸೋಲಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿದರು.

ಮೊದಲ ಗೇಮನ್ನು​ 16-21 ರಿಂದ ಸೋತ ನಂತರ ಪಂದ್ಯದಲ್ಲಿ ಅಮೋಘ ಕಮ್​ಬ್ಯಾಕ್ ಮಾಡಿದ ಸಿಂಧು ನಂತರದ ಎರಡು ಗೇಮ್​ಗಳನ್ನು 21-16, 21-19 ಅಂತರದಿಂದ ಗೆದ್ದರು. ಈ ಪಂದ್ಯ 1 ಗಂಟೆ ಮತ್ತು 16 ನಿಮಿಷಗಳ ಕಾಲ ನಡೆಯಿತು. ಆಲ್ ಇಂಗ್ಲೆಂಡ್​ ಚಾಂಪಿಯನ್​ಶಿಪ್​ನಲ್ಲಿ ಸಿಂಧು ಎರಡನೇ ಬಾರಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.

‘ಅವರ ವಿರುದ್ಧ ಬಹಳ ದಿನಗಳ ನಂತರ ಆಡಿದೆ. ಕೊನೆಯ ಬಾರಿ ನಾವಿಬ್ಬರು ಎದುರಾಳಿಗಳಾಗಿದ್ದು 2019 ನಲ್ಲಿರಬೇಕು. ಅವರೂ ಭಾರೀ ಪ್ರಮಾಣದ ತಯಾರಿ ಮಾಡಿಕೊಂಡಿದ್ದಿರಬಹುದು. ಇವತ್ತಿನ ಪಂದ್ಯ ಕಠಿಣ ಮತ್ತು ಸುದೀರ್ಘವಾಗಿತ್ತು,’ ಎಂದು ಪಂದ್ಯದ ನಂತರ ಸಿಂಧು ಹೇಳಿದರು.

‘ಮೊದಲ ಗೇಮ್​ನಲ್ಲಿ ನಾನು ಬಹಳ ತಪ್ಪುಗಳನ್ನು ಮಾಡಿದೆ ಮತ್ತು ನನ್ನ ಸ್ಮ್ಯಾಶ್​ಗಳು ಕೊರ್ಟ್​ ಹೊರಗಡೆ ಬೀಳುತ್ತಿದ್ದವು. ಎರಡನೇ ಗೇಮ್​ನಲ್ಲಿ ಡ್ರೀಫ್ಟ್​ ನನ್ನ ಪರವಾಗಿತ್ತು. ಬಹಳಷ್ಟು ಱಲಿಗಳನ್ನು ನಾವು ಆಡಿದೆವು, ಎರಡನೇ ಗೇಮನ್ನು ನಾನು ಗೆಲ್ಲಲೇಬೇಕಿತ್ತು.’

‘ಮೂರನೇ ಗೇಮ್ ನಿರ್ಣಾಯಕವಾಗಿತ್ತು ಮತ್ತು ನನ್ನ ಕೋಚ್ ನೀಡಿದ ಸಲಹೆಗಳು ಅಮೂಲ್ಯವಾಗಿದ್ದವು. ನಾನು ಶಟಲ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅವರು ಹೇಳಿದರು. ಪ್ರತಿಯೊಂದು ಪಾಯಿಂಟ್ ಬಹಳ ಮುಖ್ಯವಾಗಿತ್ತು. ಕೊನೆಯ ಗೇಮ್​ನಲ್ಲಿ ಇಬ್ಬರಿಗೂ ಗೆಲ್ಲುವ ಅವಕಾಶವಿತ್ತು. ನಾನು ಗೆದ್ದಿದ್ದು ಅತೀವ ಸಂತಸ ಮೂಡಿಸಿದೆ,’ ಎಂದು ಸಿಂಧು ಹೇಳಿದರು.

ಸೆಮಿಫೈನಲ್​ನಲ್ಲಿ ಅವರು 11ನೇ ಶ್ರೇಯಾಂಕದ ಥೈಲ್ಯಾಂಡ್​ನ ಪಾಂಪವೀ ಚೊಚುವಾಂಗ್ ಅವರನ್ನು ಎದುರಿಸಲಿದ್ದು ಅವರ ವಿರುದ್ದ 4-1 ಗೆಲುವಿನ ಲೀಡ್ ಹೊಂದಿದ್ದಾರೆ.

ಇದನ್ನೂ ಓದಿ: ನಾನು ಕೊವಿಡ್-19 ಭೀತಿಯಿಂದ ರಿಟೈರಾಗುತ್ತಿದ್ದೇನೆ, ಆಟದಿಂದಲ್ಲ: ಸಿಂಧೂ | Sindhu and her father deny her retirement rumours

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ