AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಸ್ತಿಪಟು ಸುಶೀಲ್ ಬಂಧನಕ್ಕೆ ಡೆಲ್ಲಿ ಪೊಲೀಸ್ ಮಾಸ್ಟರ್ ಪ್ಲಾನ್; ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ

ಕೊಲೆ ಪ್ರಕರಣದ ಘಟನೆಯ ನಂತರ ಪರಾರಿಯಾಗಿದ್ದ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.

ಕುಸ್ತಿಪಟು ಸುಶೀಲ್ ಬಂಧನಕ್ಕೆ ಡೆಲ್ಲಿ ಪೊಲೀಸ್ ಮಾಸ್ಟರ್ ಪ್ಲಾನ್; ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ
ಸುಶೀಲ್ ಕುಮಾರ್
ಪೃಥ್ವಿಶಂಕರ
| Updated By: Skanda|

Updated on: May 18, 2021 | 8:02 AM

Share

ದೆಹಲಿಯ ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕುಸ್ತಿಪಟು ಕೊಲೆ ಪ್ರಕರಣದ ಘಟನೆಯ ನಂತರ ಪರಾರಿಯಾಗಿದ್ದ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಸುಶೀಲ್ ಗೆಳೆಯ ಮತ್ತೊಬ್ಬ ಆರೋಪಿ ಅಜಯ್ ಅವರನ್ನು ಬಂಧಿಸಲು ಸಹಾಯ ಮಾಡಿದವರಿಗೆ ದೆಹಲಿ ಪೊಲೀಸರು 50 ಸಾವಿರ ರೂಪಾಯಿ ಬಹುಮಾನ ನೀಡಲಿದ್ದಾರೆ. ಪರಾರಿಯಲ್ಲಿರುವ ಇಬ್ಬರು ಆರೋಪಿಗಳ ಬಂಧನದ ಮೇಲೆ ಸೋಮವಾರ ತಡರಾತ್ರಿ ಈ ಬಹುಮಾನದ ಹಣವನ್ನು ಘೋಷಿಸಲಾಗಿದೆ. ಈ ಬಹುಮಾನದ ಹಣದ ಘೋಷಣೆಯನ್ನು ಸೋಮವಾರ ತಡರಾತ್ರಿ ವಾಯುವ್ಯ ಜಿಲ್ಲಾ ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ.

ಬಹುಮಾನದ ಮೊತ್ತವನ್ನು ಘೋಷಿಸಲಾಗಿದೆ ಸೋಮವಾರ ತಡರಾತ್ರಿ, ಜಿಲ್ಲಾ ಡಿಸಿಪಿ ಉಷಾ ರಂಗ್ನಾನಿ, ನಾವು ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್ ಅವರನ್ನು ಹುಡುಕಲು ಅನೇಕ ತಂಡಗಳನ್ನು ರಚಿಸಿದ್ದೇವೆ. ಇಬ್ಬರ ಮೇಲೆ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಇದೆಲ್ಲದರ ಹೊರತಾಗಿಯೂ, ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪರಾರಿಯಾಗಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ವಿಭಿನ್ನ ಬಹುಮಾನದ ಮೊತ್ತವನ್ನು ಘೋಷಿಸಲಾಗಿದೆ. ಸುಶೀಲ್ ಕುಮಾರ್ ಅವರನ್ನು ಹುಡುಕಿಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ದೆಹಲಿ ಪೊಲೀಸರು ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಿದ್ದಾರೆ.

ಈ ಕೊಲೆ ಪ್ರಕರಣದಲ್ಲಿ ಸುಶೀಲ್ ಕುಮಾರ್‌ ಮೇಲೆ ಅನುಮಾನ ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕೊಲೆ ಮತ್ತು ಕೊಲೆ ಯತ್ನದ ಘಟನೆಯಲ್ಲಿ ದೆಹಲಿ ಪೊಲೀಸರು ಕಂಡುಕೊಂಡ ಸಾಕ್ಷ್ಯಗಳಲ್ಲಿ ಮೊದಲಿನಿಂದಲೂ ಸುಶೀಲ್ ಕುಮಾರ್ ಮತ್ತು ಅಜಯ್ ಅವರ ಪಾತ್ರ ಮೊದಲಿನಿಂದಲೂ ಅನುಮಾನಾಸ್ಪದವಾಗಿತ್ತು. ಸುಶೀಲ್, ಅಜಯ್ ಮತ್ತು ಪರಾರಿಯಾಗಿದ್ದ ಇತರ ಸಹಚರರ ಹುಡುಕಾಟದಲ್ಲಿ ದೆಹಲಿ ಪೊಲೀಸರು ತೀವ್ರ ಹುಡುಕಾಟದಲ್ಲಿದ್ದಾರೆ. ಏತನ್ಮಧ್ಯೆ, ಸುಶೀಲ್ ಹೆಚ್ಚಾಗಿ ಹರಿಯಾಣ ಮತ್ತು ಉತ್ತರಾಖಂಡ್ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ವರದಿಗಳು ಕೇಳಿಬಂದಿವೆ. ದೆಹಲಿ ಪೊಲೀಸರ ತಂಡಗಳು ಈ ಪ್ರದೇಶಗಳಲ್ಲಿ ಸುಶೀಲ್ ಮೊಬೈಲ್ ಸಿಗ್ನಲ್​ ಪತ್ತೆ ಹಚ್ಚುತ್ತಿವೆ.

ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಅಂತಿಮವಾಗಿ, ಇಬ್ಬರು ಆರೋಪಿಗಳ ವಿರುದ್ಧ ದೆಹಲಿ ನ್ಯಾಯಾಲಯದಿಂದ ಮೂರು ದಿನಗಳ ಮುಂಚಿತವಾಗಿ ಪೊಲೀಸರು ಜಾಮೀನು ರಹಿತ ವಾರಂಟ್ ಪಡೆದಿದ್ದಾರೆ. ಇದರಿಂದಾಗಿ ಸುಶೀಲ್ ಮತ್ತು ಅಜಯ್ ಅವರ ಬಂಧನಕ್ಕಾಗಿ ಪೊಲೀಸರು ಕಾನೂನುಬದ್ಧವಾಗಿ ಪ್ರಯತ್ನ ಪಡುತ್ತಿದ್ದಾರೆ. ಅಲ್ಲದೆ, ಜಾಮೀನು ರಹಿತ ವಾರಂಟ್‌ಗಳನ್ನು ಪಡೆಯುವುದರ ಹಿಂದೆ ಪೊಲೀಸರ ಒಂದು ತಂತ್ರವೆಂದರೆ, ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ, ಸುಶೀಲ್ ಮತ್ತು ಅವನ ಸಹಚರರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ಜಾಮೀನು ರಹಿತ ವಾರಂಟ್‌ನ ನಂತರವೂ, ಮುಖ್ಯ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿದ್ದಾಗ, ಸೋಮವಾರ ರಾತ್ರಿ, ದೆಹಲಿ ಪೊಲೀಸರು ಸುಶೀಲ್ ಮತ್ತು ಅವರ ಪಾಲುದಾರ ಅಜಯ್ ಕುಮಾರ್ ಅವರ ಬಂಧನಕ್ಕೆ ಒಂದು ಲಕ್ಷ ಮತ್ತು 50 ಸಾವಿರ ಬಹುಮಾನವನ್ನು ಘೋಷಿಸಬೇಕಾಗಿಯಿತು.

ಇದನ್ನೂ ಓದಿ: ಕೊಲೆ ಆರೋಪದಡಿ ಒಲಿಂಪಿಕ್ ಸ್ಟಾರ್ ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್ 

ಕೊಲೆ ಪ್ರಕರಣ: ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮೇಲೆ FIR ದಾಖಲು.. ಪೊಲೀಸರಿಂದ ಹುಡುಕಾಟ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ