AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದು ನಾದಿನಿ ಮದುವೆಗಿಂತ ಬಾಂಗ್ಲಾ ಪ್ರೀಮಿಯರ್ ಹೆಚ್ಚಾಯಿತೇ?

ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ. ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ […]

ಮುದ್ದು ನಾದಿನಿ ಮದುವೆಗಿಂತ ಬಾಂಗ್ಲಾ ಪ್ರೀಮಿಯರ್ ಹೆಚ್ಚಾಯಿತೇ?
Follow us
ಸಾಧು ಶ್ರೀನಾಥ್​
|

Updated on:Dec 14, 2019 | 3:02 PM

ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ.

ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ.. ಮದ್ವೆ ಮನೆಯಲ್ಲಿ ಅತನ ಸುಳಿವೇ ಇರಲಿಲ್ಲ.

ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಶೋಯೆಬ್ ಬ್ಯಾಟಿಂಗ್: ನಾದಿನಿಯ ಮದುವೆ ನಡೆಯುವಾಗ ಮನೆಯ ದೊಡ್ಡ ಅಳಿಯನಿಗೆ ವಿಶೇಷ ಪ್ರಾಶಸ್ತ್ಯ ಇರುತ್ತದೆ. ಆದರೆ ಇಲ್ಲಿ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಶೋಯೆಬ್ ಮಲಿಕ್ ಪತ್ತೇನೆ ಇರಲಿಲ್ಲ. ಒಂದೇ ಒಂದು ಫೋಟೋದಲ್ಲೂ ಶೋಯೆಬ್ ಕಾಣಿಸಿಕೊಂಡಿಲ್ಲ. ಸರಿ, ಇಷ್ಟಕ್ಕೇ ಸಾನಿಯಾ ಫ್ಯಾನ್ಸ್ ಚಿಂತಾಕ್ರಾಂತರಾಗಿದ್ದಾರೆ. ಏನಾಯಿತೋ ಎಂದು ಗಾಬರಿಯಾಗಿದ್ದಾರೆ! ಸಾನಿಯಾ, ಶೋಯೆಬ್ ರಿಶ್ತಾ ಭಾರತ-ಪಾಕ್ ಸಂಬಂಧದಂತೆ ಹದಗೆಟ್ಟಿತಾ ಎಂದು ಗುಮಾನಿ ಪಟ್ಟಿದ್ದಾರೆ.

ಆದರೆ ಅತ್ತ ಶೋಯೆಬ್ ಮಲಿಕ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಬಾಂಗ್ಲಾ ದೇಶದಲ್ಲಿ ಆರಾಮವಾಗಿ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಮುದ್ದಿನ ನಾದಿನಿ ಅನಂ ನಿಖಾಗೆ ಆಬ್ಸೆಂಟ್ ಆಗಿದ್ದಾರೆ. ಆದರೆ ಸಾನಿಯಾ-ಶೋಯೆಬ್ ಪುತ್ರ ಪುಟಪುಟಾ ಅಂತಾ ಇಡೀ ಮದುವೆಯಲ್ಲಿ ಒಡಾಡಿಕೊಂಡು ಆಕರ್ಷಣೆಯ ಕೇಂದ್ರವಾಗಿ, ಅಪ್ಪನ ಅನುಪಸ್ಥಿತಿಯನ್ನು ದೂರ ಮಾಡಿದ್ದಾನೆ.

ಇನ್ನು ಅನಂಗೆ ಇದು ಎರಡನೆಯ ಮದುವೆ ತನ್ನ ಗೆಳೆಯ ಅಕ್ಬರ್ ರಶೀದ್ ಜೊತೆ ಈ ಹಿಂದೆ ಅವರ ವಿವಾಹ ನಡೆದಿತ್ತು. ಆದ್ರೆ ಕೆಲವೇ ತಿಂಗಳುಗಳಲ್ಲಿ ಅನಂ, ರಶೀದ್​ಗೆ ತಲಾಖ್ ತಲಾಖ್ ತಲಾಖ್ ಅಂದಿದ್ದರು. ಹಾಗಾಗಿ ಆ ಸಂಬಂಧ ಬರಕತ್ತಾಗಿರಲಿಲ್ಲ.

Published On - 12:32 pm, Sat, 14 December 19

ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ