AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದು ನಾದಿನಿ ಮದುವೆಗಿಂತ ಬಾಂಗ್ಲಾ ಪ್ರೀಮಿಯರ್ ಹೆಚ್ಚಾಯಿತೇ?

ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ. ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ […]

ಮುದ್ದು ನಾದಿನಿ ಮದುವೆಗಿಂತ ಬಾಂಗ್ಲಾ ಪ್ರೀಮಿಯರ್ ಹೆಚ್ಚಾಯಿತೇ?
ಸಾಧು ಶ್ರೀನಾಥ್​
|

Updated on:Dec 14, 2019 | 3:02 PM

Share

ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ.

ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ.. ಮದ್ವೆ ಮನೆಯಲ್ಲಿ ಅತನ ಸುಳಿವೇ ಇರಲಿಲ್ಲ.

ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಶೋಯೆಬ್ ಬ್ಯಾಟಿಂಗ್: ನಾದಿನಿಯ ಮದುವೆ ನಡೆಯುವಾಗ ಮನೆಯ ದೊಡ್ಡ ಅಳಿಯನಿಗೆ ವಿಶೇಷ ಪ್ರಾಶಸ್ತ್ಯ ಇರುತ್ತದೆ. ಆದರೆ ಇಲ್ಲಿ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಶೋಯೆಬ್ ಮಲಿಕ್ ಪತ್ತೇನೆ ಇರಲಿಲ್ಲ. ಒಂದೇ ಒಂದು ಫೋಟೋದಲ್ಲೂ ಶೋಯೆಬ್ ಕಾಣಿಸಿಕೊಂಡಿಲ್ಲ. ಸರಿ, ಇಷ್ಟಕ್ಕೇ ಸಾನಿಯಾ ಫ್ಯಾನ್ಸ್ ಚಿಂತಾಕ್ರಾಂತರಾಗಿದ್ದಾರೆ. ಏನಾಯಿತೋ ಎಂದು ಗಾಬರಿಯಾಗಿದ್ದಾರೆ! ಸಾನಿಯಾ, ಶೋಯೆಬ್ ರಿಶ್ತಾ ಭಾರತ-ಪಾಕ್ ಸಂಬಂಧದಂತೆ ಹದಗೆಟ್ಟಿತಾ ಎಂದು ಗುಮಾನಿ ಪಟ್ಟಿದ್ದಾರೆ.

ಆದರೆ ಅತ್ತ ಶೋಯೆಬ್ ಮಲಿಕ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಬಾಂಗ್ಲಾ ದೇಶದಲ್ಲಿ ಆರಾಮವಾಗಿ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಮುದ್ದಿನ ನಾದಿನಿ ಅನಂ ನಿಖಾಗೆ ಆಬ್ಸೆಂಟ್ ಆಗಿದ್ದಾರೆ. ಆದರೆ ಸಾನಿಯಾ-ಶೋಯೆಬ್ ಪುತ್ರ ಪುಟಪುಟಾ ಅಂತಾ ಇಡೀ ಮದುವೆಯಲ್ಲಿ ಒಡಾಡಿಕೊಂಡು ಆಕರ್ಷಣೆಯ ಕೇಂದ್ರವಾಗಿ, ಅಪ್ಪನ ಅನುಪಸ್ಥಿತಿಯನ್ನು ದೂರ ಮಾಡಿದ್ದಾನೆ.

ಇನ್ನು ಅನಂಗೆ ಇದು ಎರಡನೆಯ ಮದುವೆ ತನ್ನ ಗೆಳೆಯ ಅಕ್ಬರ್ ರಶೀದ್ ಜೊತೆ ಈ ಹಿಂದೆ ಅವರ ವಿವಾಹ ನಡೆದಿತ್ತು. ಆದ್ರೆ ಕೆಲವೇ ತಿಂಗಳುಗಳಲ್ಲಿ ಅನಂ, ರಶೀದ್​ಗೆ ತಲಾಖ್ ತಲಾಖ್ ತಲಾಖ್ ಅಂದಿದ್ದರು. ಹಾಗಾಗಿ ಆ ಸಂಬಂಧ ಬರಕತ್ತಾಗಿರಲಿಲ್ಲ.

Published On - 12:32 pm, Sat, 14 December 19

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ