AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ Lifeಗೆ ತಿರುವು ಕೊಟ್ಟಿದ್ದೇ ಸಚಿನ್ ನೀಡಿದ ಆ Tips?!

2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಹೇಗಿತ್ತು ಅಂದ್ರೆ, ಕೊಹ್ಲಿಗೆ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಗುತ್ತೆ ಅನ್ನೋ ಆತಂಕ ಶುರುವಾಗಿತ್ತು. ಯಾಕಂದ್ರೆ ಕ್ರಿಕೆಟ್ ಪಂಡಿತರು ಕೊಹ್ಲಿಗೆ ವಿದೇಶಿ ನೆಲದಲ್ಲಾಡೋ ಸಾಮರ್ಥ್ಯವಿಲ್ಲ ಅಂತಾ ಅಣುಕಿಸೋದಕ್ಕೆ ಶುರುಮಾಡಿದ್ರು. ವಿರಾಟ್ ಕೊಹ್ಲಿ ಅಂದು ಇಂಗ್ಲೆಂಡ್ ಬೌಲರ್​ಗಳ ಮುಂದೆ ಮಕಾಡೆ ಮಲಗಿದ್ರು. ಕೊಹ್ಲಿ outside of stump​ನತ್ತ ಎಸೆಯೋ ಬಾಲ್​ಗಳನ್ನ ಕೆಣಕಿ ಔಟಾಗ್ತಾರೆ ಅನ್ನೋದು ಬೌಲರ್​ಗಳಿಗೆ ಗೊತ್ತಾಗಿ ಹೋಗಿತ್ತು. ಇದನ್ನೇ encash ಮಾಡಿಕೊಂಡ ಬೌಲರ್​ ಜೇಮ್ಸ್ ಌಂಡರ್ಸನ್ ಕೊಹ್ಲಿಯನ್ನ ಪ್ರತಿ […]

ಕೊಹ್ಲಿ Lifeಗೆ ತಿರುವು ಕೊಟ್ಟಿದ್ದೇ ಸಚಿನ್ ನೀಡಿದ ಆ Tips?!
KUSHAL V
| Edited By: |

Updated on:Jul 27, 2020 | 2:54 PM

Share

2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಹೇಗಿತ್ತು ಅಂದ್ರೆ, ಕೊಹ್ಲಿಗೆ ಕ್ರಿಕೆಟ್ ಬದುಕೇ ಅಂತ್ಯವಾಗಿ ಹೋಗುತ್ತೆ ಅನ್ನೋ ಆತಂಕ ಶುರುವಾಗಿತ್ತು. ಯಾಕಂದ್ರೆ ಕ್ರಿಕೆಟ್ ಪಂಡಿತರು ಕೊಹ್ಲಿಗೆ ವಿದೇಶಿ ನೆಲದಲ್ಲಾಡೋ ಸಾಮರ್ಥ್ಯವಿಲ್ಲ ಅಂತಾ ಅಣುಕಿಸೋದಕ್ಕೆ ಶುರುಮಾಡಿದ್ರು.

ವಿರಾಟ್ ಕೊಹ್ಲಿ ಅಂದು ಇಂಗ್ಲೆಂಡ್ ಬೌಲರ್​ಗಳ ಮುಂದೆ ಮಕಾಡೆ ಮಲಗಿದ್ರು. ಕೊಹ್ಲಿ outside of stump​ನತ್ತ ಎಸೆಯೋ ಬಾಲ್​ಗಳನ್ನ ಕೆಣಕಿ ಔಟಾಗ್ತಾರೆ ಅನ್ನೋದು ಬೌಲರ್​ಗಳಿಗೆ ಗೊತ್ತಾಗಿ ಹೋಗಿತ್ತು. ಇದನ್ನೇ encash ಮಾಡಿಕೊಂಡ ಬೌಲರ್​ ಜೇಮ್ಸ್ ಌಂಡರ್ಸನ್ ಕೊಹ್ಲಿಯನ್ನ ಪ್ರತಿ ಟೆಸ್ಟ್ ಪಂದ್ಯದಲ್ಲೂ ಔಟ್ ಮಾಡಿ ರಣಕೇಕೆ ಹಾಕಿದ್ದ.

ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 134 ರನ್ ಮಾತ್ರ. ಅಲ್ಲಿಗೆ ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕು ಅಂತ್ಯವಾಗಿ ಹೋಯ್ತು ಅಂತಾನೇ ಎಲ್ರೂ ಲೆಕ್ಕಾಚಾರ ಹಾಕಿದ್ರು. ಅದ್ರಲ್ಲೂ ಕ್ರಿಕೆಟ್ ವಿಶ್ಲೇಷಕರು ಕೊಹ್ಲಿಗೆ ವನವಾಸ ಶುರುವಾಯ್ತು ಅಂತಾ ಅಭಿಪ್ರಾಯಪಟ್ಟಿದ್ರು.

ಆದ್ರೆ, ಈ ಕರಾಳ ಪ್ರವಾಸದ ಬಳಿಕ, ವಿರಾಟ್ ಕೊಹ್ಲಿಯ ಟೆಸ್ಟ್ ಕ್ರಿಕೆಟ್ ಬದುಕಿಗೆ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು, ಆಸ್ಟ್ರೇಲಿಯಾದಲ್ಲಿ. ಅವತ್ತು ಕಾಂಗರೂಗಳ ನೆಲದಲ್ಲಿ ರನ್ ಮಳೆ ಹರಿಸಿದ್ದ ವಿರಾಟ್ ಕೊಹ್ಲಿ ತಮ್ಮ ಮೇಲಿದ್ದ ಅಪವಾದವನ್ನು ತೊಳೆದುಕೊಂಡು ಟೀಕೆ ಮಾಡಿದವರ ಬಾಯಿ ಮುಚ್ಚಿಸಿದ್ರು.

ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಏನು ಗೊತ್ತಾ? ಹೀಗೆ ಕಳಪೆ ಪ್ರದರ್ಶನದಿಂದ ಕಳೆದು ಹೋಗ್ಬೇಕಾಗಿದ್ದ ವಿರಾಟ್​ನ ಅದ್ಭುತ ಪ್ರದರ್ಶನಕ್ಕೆ ಕಾರಣ ಯಾರು ಗೊತ್ತಾ? ಅವರೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಇಂಗ್ಲೆಂಡ್ ಪ್ರವಾಸದ ಬಳಿಕ ಮಂಕಾಗಿದ್ದ ಕೊಹ್ಲಿಗೆ, ಕಮ್​ಬ್ಯಾಕ್ ಮಾಡೋದಕ್ಕೆ ನೆರವಾಗಿದ್ದೇ ಸಚಿನ್ ಸಲಹೆ. ಹಾಗಾದ್ರೆ ಅವತ್ತು ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ನೀಡಿದ ಸಲಹೆ ಏನು ಗೊತ್ತಾ?

ನಾನು ಇಂಗ್ಲೆಂಡ್‌ನಿಂದ ಹಿಂತಿರುಗಿದ ಬಳಿಕ ಸಚಿನ್ ಪಾಜಿಯೊಂದಿಗೆ ಮಾತನಾಡಿದೆ. ಹಾಗೆ ಅವರ ಜೊತೆ ಮುಂಬೈನಲ್ಲಿ ಕೆಲವು ಸೆಷನ್‌ಗಳನ್ನು ನಡೆಸಿದೆ. ಸಚಿನ್ ನನಗೆ ವೇಗದ ಬೌಲರ್​ಗಳನ್ನ ಹೇಗೆ ಎದುರಿಸಬೇಕು. ಆತ್ಮಸ್ಥೈರ್ಯ ಕುಗ್ಗಿದ ಸಮಯದಲ್ಲಿ ಬಾಡಿ ಲ್ಯಾಂಗ್ವೇಜ್ ಹೇಗಿರಬೇಕು ಅನ್ನೋದನ್ನ ತಿಳಿಸಿಕೊಟ್ರು. ಅಂದು ಸಚಿನ್ ನೀಡಿದ ಟಿಪ್ಸ್ ನನಗೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ನೆರವಿಗೆ ಬಂತು ಎಂದು ಕೊಹ್ಲಿ ಹೇಳಿದ್ದಾರೆ

ಹೀಗೆ ವಿರಾಟ್ ತಾವು ಮಂಕಾಗಿದ್ದ ಸಮಯದಲ್ಲಿ ಸಚಿನ್ ನೀಡಿದ್ದ ಟಿಪ್ಸ್ ಹೇಗೆ ಕ್ರಿಕೆಟ್ ಬದುಕಿಗೆ ತಿರುವು ನೀಡಿತು ಅನ್ನೋದನ್ನ ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆ ಹಂಚಿಕೊಂಡಿದ್ದಾರೆ.

Published On - 3:25 pm, Sun, 26 July 20

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್