AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಆಫರ್ ನೀಡಿದ BSNL: 4 ತಿಂಗಳ ವಾಲಿಡಿಟಿ, 240 ಜಿಬಿ ಉಚಿತ ಡೇಟಾ..!

BSNL 666 Rs Plan: ಬಿಎಸ್​ಎನ್​ಎಲ್ 120 ದಿನಗಳ ವಾಲಿಡಿಟಿ ರಿಚಾರ್ಜ್​ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಆಫರ್​ಗಳನ್ನು ನೀಡಲು ಮುಂದಾಗಿದೆ. ಹಾಗಿದ್ರೆ ಈ ರಿಚಾರ್ಜ್​ ಪ್ಲ್ಯಾನ್ ವಿಶೇಷತೆಗಳೇನು ನೋಡೋಣ.

ಭರ್ಜರಿ ಆಫರ್ ನೀಡಿದ BSNL: 4 ತಿಂಗಳ ವಾಲಿಡಿಟಿ, 240 ಜಿಬಿ ಉಚಿತ ಡೇಟಾ..!
BSNL
TV9 Web
| Updated By: ಝಾಹಿರ್ ಯೂಸುಫ್|

Updated on: Aug 05, 2021 | 7:52 PM

Share

ಭಾರತೀಯ ಟೆಲಿಕಾಂ ಕಂಪೆನಿಗಳ ದರ ಸಮರ ಮುಂದುವರೆದಿದೆ. ಏರ್​ಟೆಲ್ (Airtel) ಹಾಗೂ ಜಿಯೋ (Jio) ತಮ್ಮ ಪ್ಲ್ಯಾನ್​ಗಳಲ್ಲಿ ಕೆಲ ಬದಲಾವಣೆ ಮಾಡಿದರೆ, ಇತ್ತ ಸರ್ಕಾರಿ ಸೌಮ್ಯದ ಬಿಎಸ್​ಎನ್​ಎಲ್ (BSNL) ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೀಗ ಕಂಪೆನಿಯು ನಾಲ್ಕು ತಿಂಗಳ ವಾಲಿಡಿಟಿಯ ರಿಚಾರ್ಜ್​ ಪ್ಲ್ಯಾನ್​ವೊಂದನ್ನು ಪರಿಚಯಿಸಿದೆ. ಅಂದರೆ ಇದೇ ಮೊದಲ ಬಾರಿ ಕಂಪೆನಿಯೊಂದು 4 ತಿಂಗಳ ವಾಲಿಡಿಟಿಯ ರಿಚಾರ್ಜ್​ ಯೋಜನೆಯನ್ನು ಗ್ರಾಹಕರ ಮುಂದಿಟ್ಟಿದೆ. ಏರ್‌ಟೆಲ್ ಮತ್ತು ವಿಐ ಕಂಪನಿಗಳು 28, 56, 84, 180 ರ ನಂತರ ನೇರವಾಗಿ 365 ದಿನಗಳ ವಾಲಿಡಿಟಿಯ ಯೋಜನೆಗಳನ್ನು ನೀಡುತ್ತಿವೆ. ಆದರೆ ಬಿಎಸ್​ಎನ್​ಎಲ್ 120 ದಿನಗಳ ವಾಲಿಡಿಟಿ ರಿಚಾರ್ಜ್​ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಆಫರ್​ಗಳನ್ನು ನೀಡಲು ಮುಂದಾಗಿದೆ. ಹಾಗಿದ್ರೆ ಈ ರಿಚಾರ್ಜ್​ ಪ್ಲ್ಯಾನ್ ವಿಶೇಷತೆಗಳೇನು ನೋಡೋಣ.

BSNL ಪರಿಚಯಿಸಿರುವ ಈ ಪ್ಲ್ಯಾನ್​ನ ರಿಚಾರ್ಜ್​ ಮೊತ್ತ 666 ರೂ. ಈ ಮೊತ್ತ ರಿಚಾರ್ಜ್ ಮಾಡಿದ್ರೆ ಗ್ರಾಹಕರಿಗೆ 120 ದಿನಗಳ ವಾಲಿಡಿಟಿ ಜೊತೆಗೆ ಹಲವು ಸೇವೆಗಳು ದೊರಕಲಿದೆ. ಅಂದರೆ ಈ ಪ್ಲ್ಯಾನ್ ಮೂಲಕ ಗ್ರಾಹಕರು ಅನಿಯಮಿತವಾಗಿ ಕರೆ ಮಾಡಬಹುದು. ಹಾಗೆಯೇ ಪ್ರತಿದಿನ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ಕಳುಹಿಸಬಹುದು. ಇದರ ಜೊತೆಗೆ 240 ಜಿಬಿ ಉಚಿತ ಡೇಟಾ ಕೂಡ ಸಿಗಲಿದೆ. ಅಂದರೆ ಪ್ರತಿದಿನ ಗ್ರಾಹಕರಿಗೆ 2 ಜಿಬಿ ಡೇಟಾ ಬಳಸಿಕೊಳ್ಳಬಹುದು. ಅದರಂತೆ ಒಟ್ಟು 240 ಜಿಬಿ ಡೇಟಾವನ್ನು 120 ದಿನಗಳವರೆಗೆ ನೀಡಲಿದೆ.

ಇನ್ನೂ ಬಿಎಸ್​ಎನ್​ನಲ್ಲಿ 447 ರೂ. ಗಳ ಪ್ರಿಪೇಯ್ಡ್ ಪ್ಲ್ಯಾನ್​ ಅನ್ನು ಕೂಡ ಮುಂದುವರೆಸಿದ್ದು, ಇದು ಗ್ರಾಹಕರಿಗೆ 100GB ಡೇಟಾ ಆಫರ್ ನೀಡುತ್ತಿದೆ. ಅದರ ಜತೆಗೆ ದಿನಕ್ಕೆ 100 ಎಸ್ಎಮ್ಎಸ್  ಹಾಗೂ ಅನಿಯಮಿತ ಕರೆ ಸೌಲಭ್ಯವು ಇದರಲ್ಲಿದೆ. ಈ ಪ್ಲ್ಯಾನ್​ನ ವಾಲಿಟಿಡಿ 60 ದಿನಗಳು.

ಇದನ್ನೂ ಓದಿ:-

Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

(BSNL 666 rupees plan, you can get 240GB Data)

ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ