AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?

Facebook Australia : ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಶರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.

ಭಾರತಕ್ಕೂ ಕಾಲಿಡಲಿದೆಯಾ ಆಸ್ಟ್ರೇಲಿಯಾದಲ್ಲಿ ಶುರುವಾದ ಸರ್ಕಾರ-ಫೇಸ್​ಬುಕ್​ ಆದಾಯ ಹಂಚಿಕೆ ವಿವಾದ?
ಪ್ರಾತಿನಿಧಿಕ ಚಿತ್ರ
ರಾಜೇಶ್ ದುಗ್ಗುಮನೆ
|

Updated on:Feb 18, 2021 | 6:37 PM

Share

ನವದೆಹಲಿ: ಆಸ್ಟ್ರೇಲಿಯಾ ಸರ್ಕಾರ ಹಾಗೂ ಫೇಸ್​ಬುಕ್​ ನಡುವಣ ತಿಕ್ಕಾಟ ಮಿತಿಮೀರಿದೆ. ಆಸ್ಟ್ರೇಲಿಯಾ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆ ವಿರೋಧಿಸಿ ಗುರುವಾರ ಏಕಾಏಕಿ ಮಾಧ್ಯಮ ಕಂಟೆಂಟ್​ಗಳನ್ನು ಫೇಸ್​ಬುಕ್​ ನಿಷೇಧಿಸಿದೆ. ಇದರಿಂದ ಕೊವಿಡ್​-19, ಕಾಡ್ಗಿಚ್ಚು, ಚಂಡಮಾರುತದ ಬಗ್ಗೆ ಮಾಹಿತಿ ನೀಡುವ ಪೇಜ್​ಗಳು ಬ್ಲ್ಯಾಂಕ್​ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

ಅಗ್ನಿಶಾಮಕ, ಆರೋಗ್ಯ, ಹವಾಮಾನ ಸೇವೆಗಳನ್ನು ನೀಡುವ ಫೇಸ್‌ಬುಕ್ ಪುಟಗಳು ಗುರುವಾರ ತೀವ್ರ ಸಮಸ್ಯೆ ಎದುರಿಸಿವೆ. ಈ ಪುಟಗಳಲ್ಲಿದ್ದ ಸುದ್ದಿಗಳು ಮಾಯವಾಗಿವೆ. ಇನ್ನು, ಸುದ್ದಿ ಪಬ್ಲಿಷರ್​ಗಳು ಹೊಸ ಪೋಸ್ಟ್​ಗಳನ್ನು ಹಾಕಲಾಗುತ್ತಿಲ್ಲ.ಜತೆಗೆ ಹಳೆಯ ಸುದ್ದಿಗಳು ಕಾಣದಂತಾಗಿವೆ.

ಆಸ್ಟ್ರೇಲಿಯಾದಲ್ಲಿ ಸರ್ಕಾರ ಹಾಗೂ ಫೇಸ್​ಬುಕ್​ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಫೇಸ್​ಬುಕ್​ ಹಾಗೂ ಗೂಗಲ್​ ಹಣ ಪಾವತಿಸಬೇಕು ಎನ್ನುವ ಶಾಸನವನ್ನು ಸರ್ಕಾರ ಜಾರಿಗೆ ತಂದಿದೆ. ಇದನ್ನು ಫೇಸ್​ಬುಕ್​-ಗೂಗಲ್​ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರ ಆಗ್ರಹಿಸಿದೆ. ಆದರೆ, ಇದನ್ನು ಫೇಸ್​ಬುಕ್​ ವಿರೋಧಿಸುತ್ತಿದೆ. ಇದೇ ಕಾರಣಕ್ಕೆ, ಇಂದು​ ನಾಟಕೀಯ ಬೆಳವಣಿಗೆಯಲ್ಲಿ ಫೇಸ್​ಬುಕ್ ಸುದ್ದಿಗಳನ್ನೇ ಬ್ಯಾನ್​ ಮಾಡಿದೆ.

ಸುದ್ದಿ ಸಂಸ್ಥೆಗಳು, ರಾಜಕಾರಣಿಗಳು ಮತ್ತು ಮಾನವ ಹಕ್ಕುಗಳ ವಕೀಲರು ಫೇಸ್​ಬುಕ್​ ಕ್ರಮವನ್ನು ಟೀಕಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಫೇಸ್​ಬುಕ್​ ತನ್ನ ಘನತೆಯನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂದು ಇವರು ಹೇಳಿದ್ದಾರೆ.

ಪಬ್ಲಿಶರ್​ಗಳಿಗೆ ಹಣ ಪಾವತಿಸಿ.. ಡಿಜಿಟಿಲ್​ ಪ್ಲಾಟ್​ಫಾರ್ಮ್​ಗಳು ತಮ್ಮ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳುತ್ತವೆ. ಈ ಮೂಲಕ ತಮ್ಮ ವೆಬ್​ಸೈಟ್​ಗೆ ಟ್ರಾಫಿಕ್​ ಪಡೆಯುತ್ತವೆ. ಇದಕ್ಕಾಗಿ ಸುದ್ದಿಸಂಸ್ಥೆಗಳಿಗೆ ಫೇಸ್​ಬುಕ್​ ಹಣ ಪಾವತಿ ಮಾಡುತ್ತಿಲ್ಲ. ಏಕೆಂದರೆ, ನಮ್ಮಿಂದಾಗಿ ವೆಬ್​ಸೈಟ್​ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ ಎನ್ನುವ ಅವರ ವಾದ. ಆದರೆ, ಆಸ್ಟ್ರೇಲಿಯಾ ಸರ್ಕಾರ ಇದನ್ನು ಒಪ್ಪುತ್ತಿಲ್ಲ. ಫೇಸ್​ಬುಕ್​ ಪಬ್ಲಿಷರ್​ಗಳಿಗೆ ಹಣ ನೀಡಲೇಬೇಕು ಎಂದು ಹೇಳುತ್ತಿದೆ.

ಫೇಸ್​ಬುಕ್ ಹೇಳೋದೇನು? ಫೇಸ್‌ಬುಕ್​ನಲ್ಲಿ 100 ಜನರಲ್ಲಿ ಕೇವಲ 4 ಮಂದಿ ಮಾತ್ರ ಸುದ್ದಿ ಫೀಡ್‌ ನೋಡುತ್ತಾರಂತೆ. ಹೀಗಾಗಿ, ಫೇಸ್​ಬುಕ್​ ವಿಡಿಯೋಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ, ನ್ಯೂಸ್​ಗಳನ್ನು ಬ್ಯಾನ್​ ಮಾಡುವುದರಿಂದ ಹೆಚ್ಚು ನಷ್ಟವಿಲ್ಲ ಎನ್ನುವುದು ಫೇಸ್​ಬುಕ್​ ನಂಬಿಕೆ. ಇಂಗ್ಲೆಂಡ್​ನಲ್ಲಿ ಇತ್ತೀಚೆಗೆ ಫೇಸ್​ಬುಕ್​, ಫೇಸ್​ಬುಕ್​ ನ್ಯೂಸ್​ಅನ್ನು ಪರಿಚಯಿಸಿತ್ತು. ಎರಡನೇ ಹಂತದಲ್ಲಿ ಆಸ್ಟ್ರೇಲಿಯಾದಲ್ಲೂ ಇದನ್ನು ಜಾರಿಗೆ ತರುವ ಆಲೋಚನೆ ಫೇಸ್​ಬುಕ್​ನದ್ದಾಗಿತ್ತು. ಆದರೆ, ಈಗ ನಡೆದ ಬೆಳವಣಿಗೆಯಿಂದ ಇದು ಇನ್ನೂ ವಿಳಂವಾಗಲಿದೆ ಎನ್ನಲಾಗುತ್ತಿದೆ.

ಭಾರತಕ್ಕೂ ಬರಲಿದೆ ಹೊಸ ನೀತಿ? ಆಸ್ಟ್ರೇಲಿಯಾದಲ್ಲಿ ಜಾರಿಗೆ ತರಲಾದ ಹೊಸ ಕಾಯ್ದೆ ಬಗ್ಗೆ ಫೇಸ್​ಬುಕ್​ ಹಾಗೂ ಗೂಗಲ್​ಗೆ ಒಂದು ಆತಂಕ ಶುರುವಾಗಿದೆ. ಏಕೆಂದರೆ, ಇದೇ ಮಾದರಿಯ ಕಾಯ್ದೆಯನ್ನು ಭಾರತ ಸೇರಿ ಎಲ್ಲಾ ರಾಷ್ಟ್ರಗಳು ಜಾರಿಗೆ ತಂದರೆ ಮುಂದೇನು ಎನ್ನುವ ಪ್ರಶ್ನೆ ಅವರದ್ದು. ಆಸ್ಟ್ರೇಲಿಯಾದಲ್ಲಿ ಜಾರಿಗೆ ತಂದಿರುವುದು ಆರಂಭ ಮಾತ್ರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರಗಳೂ ಈ ಕಾಯ್ದೆ ಜಾರಿಗೆ ತಂದರೆ ಫೇಸ್​ಬುಕ್ ಪಬ್ಲಿಷರ್​ಗಳಿಗೆ ಹಣ ಪಾವತಿ ಮಾಡುವುದು ಅನಿವಾರ್ಯ ಆಗಲಿದೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?

Published On - 2:29 pm, Thu, 18 February 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ