Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?

ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ Facebook ಫೇಸ್​ಬುಕ್​ನಲ್ಲಿ ಹೆಚ್ಚು ಹೊತ್ತು ಕಳೆಯಬಾರದು ಎಂದು ತೀರ್ಮಾನಿಸಿದರೆ ಅದಕ್ಕೆ ನಿಮಗೆ ಅದೇ ಆ್ಯಪ್ ಸಹಾಯ ಮಾಡುತ್ತದೆ. ಹೇಗೆ ಎಂಬ ವಿವರ ಈ ಬರಹದಲ್ಲಿದೆ.

ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?
ಫೇಸ್​ಬುಕ್
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Feb 09, 2021 | 9:11 AM

ಫೇಸ್​ಬುಕ್ Facebook ಆ್ಯಪ್ ತೆರೆದು ಸ್ಕ್ರಾಲ್ ಮಾಡುತ್ತಾ ಹೋದರೆ ಸಮಯ ಹೇಗೆ ಕಳೆದು ಹೋಗುತ್ತದೆ ಎಂಬುದೇ ಗೊತ್ತಾಗಲ್ಲ. ವಿಡಿಯೊ, ಫೋಟೊ, ಬರಹಗಳನ್ನು ನೋಡುತ್ತಾ, ಇಷ್ಟವಾದರೆ ಲೈಕ್ ಒತ್ತಿ ಸಮಯ ಇದ್ದರೆ ಕಾಮೆಂಟ್ ಮಾಡಿ, ಚರ್ಚಿಸಿ ಮುಂದೆ ಹೋಗುತ್ತೇವೆ. ಹೀಗೆ ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ಫೇಸ್​ಬುಕ್​ನಲ್ಲಿ ಹೆಚ್ಚು ಹೊತ್ತು ಕಳೆಯಬಾರದು ಎಂದು ತೀರ್ಮಾನಿಸಿದರೆ ಅದಕ್ಕೆ ಫೇಸ್​ಬುಕ್ ಕೂಡಾ ನಿಮಗೆ ಸಹಾಯ ಮಾಡುತ್ತದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ಈ ಬಾರಿಯ Tv9 Digital How To ಅಂಕಣದಲ್ಲಿ ಲಭ್ಯ.

ಸಮಯದ ಮೇಲೆ ಇರಲಿ ನಿಯಂತ್ರಣ

* ಫೇಸ್​ಬುಕ್​ನಲ್ಲಿ ದಿನಾ ಒಂದು ಗಂಟೆ ಮಾತ್ರ ವ್ಯಯಿಸುತ್ತೇನೆ ಎಂದು ನೀವು ನಿರ್ಧರಿಸಿದ್ದರೆ ಅದಕ್ಕೆ ಬದ್ಧವಾಗಿರಿ. * ನಿಮ್ಮ ಫೇಸ್​ಬುಕ್ ಖಾತೆಗೆ ಲಾಗಿನ್ ಆಗಿ ಸೆಟ್ಟಿಂಗ್ಸ್ ಆ್ಯಂಡ್ ಪ್ರೈವಸಿ ಕ್ಲಿಕ್ ಮಾಡಿ * ಯುವರ್ ಟೈಮ್ ಆನ್ ಫೇಸ್​ಬುಕ್ ಆಪ್ಶನ್ ಕ್ಲಿಕ್ ಮಾಡಿ * ಅಲ್ಲಿ See Your Time ಕ್ಲಿಕ್ ಮಾಡಿದರೆ ನೀವು ಫೇಸ್​ಬುಕ್​ನಲ್ಲಿ ಎಷ್ಟು ಹೊತ್ತು ಕಳೆಯುತ್ತಿದ್ದೀರಿ ಎಂಬುದರ ಲೆಕ್ಕ ಸಿಗುತ್ತದೆ. * Manage your Time ಎಂಬ ಆಯ್ಕೆ ಕ್ಲಿಕ್ ಮಾಡಿದರೆ ಅಲ್ಲಿ Daily Time Reminder ಎಂಬ ಆಪ್ಶನ್ ಇದೆ. ಅಲ್ಲಿ ಕ್ಲಿಕ್ ಮಾಡಿ * ನೀವು ಎಷ್ಟು ಸಮಯ ಫೇಸ್​ಬುಕ್​ನಲ್ಲಿ ವ್ಯಯಿಸಲು ಇಚ್ಛಿಸುತ್ತೀರಿ ಎಂಬುದನ್ನು ನಮೂದಿಸಿ. ಒಂದು ವೇಳೆ ನೀವು ದಿನದಲ್ಲಿ * ಕೇವಲ 1 ಗಂಟೆ ಮಾತ್ರ ಫೇಸ್ ಬುಕ್ ನಲ್ಲಿ ವ್ಯಯಿಸಲು ಇಚ್ಛಿಸುವುದಾದರೆ ಒಂದು ಗಂಟೆ ಎಂದು ಸೆಟ್ ಮಾಡಿಡಿ. * ನೀವು ಒಂದು ಗಂಟೆ ಕಾಲ ಫೇಸ್ ಬುಕ್ ನಲ್ಲಿ ವ್ಯಯಿಸಿದರೆ ಫೇಸ್ ಬುಕ್ ನಿಮಗೆ ರಿಮೈಂಡರ್ ತೋರಿಸುತ್ತದೆ.

Get More From Your Time

ಈ ಆಯ್ಕೆಯಲ್ಲಿ ನಿಮ್ಮ ನ್ಯೂಸ್ ಫೀಡ್ ಆದ್ಯತೆಗಳನ್ನು ನಿರ್ವಹಿಸಬಹುದು. ನೀವು ಫೇವರಿಟ್ ಮಾಡಿದ ವ್ಯಕ್ತಿಗಳ ಎಲ್ಲ ಅಪ್ ಡೇಟ್​ಗಳು ಆದ್ಯತೆ ಮೇರೆಗೆ ನಿಮ್ಮ ವಾಲ್​ನಲ್ಲಿ ಕಾಣಿಸುತ್ತಿರುತ್ತವೆ. ಯಾರ ಫೇಸ್​ಬುಕ್ ಬರಹ ನಿಮ್ಮ ವಾಲ್ ಮೇಲೆ ಕಾಣುತ್ತಿರಬೇಕು, ಯಾರದ್ದು ಬೇಡ ಎಂಬುದನ್ನು ಈ ಆಪ್ಶನ್​ನಲ್ಲಿ ನೀವು ನಿಭಾಯಿಸಬಹುದು.

Control Your Notification

ಫೇಸ್​ಬುಕ್ ಗೆಳೆಯರ ಹುಟ್ಟುಹಬ್ಬ , ಟ್ಯಾಗ್ ಮಾಡಿದ ಪೋಸ್ಟ್ ಅಥವಾ ಫ್ರೆಂಡ್ ರಿಕ್ವೆಸ್ಟ್ ಯಾವ ನೋಟಿಫಿಕೇಷನ್ ಇರಲಿ ಯಾವುದು ನಿಮಗೆ ಬರಬೇಕು, ಯಾವುದು ಬೇಡ ಎಂಬುದನ್ನು ಇಲ್ಲಿ ನಿಯಂತ್ರಿಸಬಹುದು.

Published On - 9:48 pm, Fri, 5 February 21

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ