AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?

ವಾಟ್ಸಾಪ್ ಖಾಸಗಿತನದ ನೀತಿಯನ್ನು ಸಮ್ಮತಿ ಸೂಚಿಸದ ಬಳಕೆದಾರರಿಗೆ ಮೇ 15ರ ಗಡುವಿನ ನಂತರ ಏನಾಗುತ್ತದೆ ಎಂಬುದರ ವಿವರ ಇಲ್ಲಿದೆ.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
Follow us
Srinivas Mata
|

Updated on: May 08, 2021 | 7:02 PM

ಈ ಹಿಂದೆ ಘೋಷಣೆ ಮಾಡಿದಂತೆ ಮೇ 15ನೇ ತಾರೀಕಿನ ಗಡುವಿನಂದೇ ಇನ್​ಸ್ಟಂಟ್ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಸಂಪೂರ್ಣವಾಗಿ ಬಳಕೆದಾರರಿಗೆ ದೊರೆಯದಿರುವಂತೆ ಆಗುವುದಿಲ್ಲ ಎಂದು ವಾಟ್ಸಾಪ್​ (WhatsApp) ಶುಕ್ರವಾರದಂದು ಸ್ಪಷ್ಟಪಡಿಸಿದೆ. ಖಾಸಗಿತನದ ನೀತಿ ಅಪ್​ಡೇಟ್ ಆಗಿಲ್ಲ ಎಂಬ ಕಾರಣಕ್ಕೆ ಯಾವ ಗ್ರಾಹಕರಿಗೂ ವಾಟ್ಸಾಪ್ ಕಾರ್ಯ ನಿರ್ವಹಣೆ ನಿಲ್ಲುವುದಿಲ್ಲ. ಆದರೆ ಅಪ್ಲಿಕೇಷನ್​ನಲ್ಲಿ ದೊರೆಯುವ ಸೇವೆಗಳು ಮಿತಿಗೊಳ್ಳಬಹುದು. ಫೇಸ್​ಬುಕ್ ಮಾಲೀಕತ್ವದ ಅಪ್ಲಿಕೇಷನ್ ಆದ ವಾಟ್ಸಾಪ್, ಬಳಕೆದಾರರಿಗೆ ಹೊಸ ಖಾಸಗಿತನದ ನೀತಿಗೆ ಸಮ್ಮತಿ ಸೂಚಿಸುವಂತೆ ನೆನಪಿಸುವುದನ್ನು ಮುಂದುವರಿಸುತ್ತದೆ. ವಾಟ್ಸಾಪ್ ಹೇಳುವ ಪ್ರಕಾರ, ಹಲವು ವಾರಗಳ ನಂತರವೂ ನೆನಪು ಮಾಡಿಕೊಡುವುದು ನಿರಂತರವಾಗಿ ಮುಂದುವರಿಯಲಿದೆ.

ಒಂದು ಸಲ ಬಳಕೆದಾರರಿಗೆ ಪದೇಪದೇ ನೆನಪು ಮಾಡಿಸಲು ಆರಂಭವಾದರೆ, ಆ ಗ್ರಾಹಕರು ಅಪ್​ಡೇಟ್​ಗೆ ಸಮ್ಮತಿ ಸೂಚಿಸುವ ತನಕ ವಾಟ್ಸಾಪ್​ನಲ್ಲಿ ಸೀಮಿತ ಕಾರ್ಯನಿರ್ವಹಣೆ ಮಾತ್ರ ಸಾಧ್ಯವಾಗುತ್ತದೆ. ಇದು ಎಲ್ಲ ಬಳಕೆದಾರರಿಗೂ ಒಂದೇ ಸಲಕ್ಕೆ ಆಗುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟ್​ ಲಿಸ್ಟ್​ ಬಳಕೆ ಸಾಧ್ಯವಾಗದಿರಬಹುದು. ಆದರೆ ಒಳಬರುವ ಕರೆಗಳು ಮತ್ತು ವಿಡಿಯೋ ಕಾಲ್​ಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಬಳಕೆದಾರರು ನೋಟಿಫಿಕೇಷನ್ ಎನೇಬಲ್ ಮಾಡಿದ್ದಲ್ಲಿ ಅದರ ಮೂಲಕ ಸಂದೇಶ ಓದಲು ಅಥವಾ ಪ್ರತಿಕ್ರಿಯಿಸಲು ಸಾಧ್ಯ. ಅಥವಾ ಮಿಸ್ಡ್ ಫೋನ್ ಅಥವಾ ವಿಡಿಯೋ ಕಾಲ್ ಪುನಃ ಕಾಲ್ ಮಾಡಲು ಸಾಧ್ಯ.

ಇನ್ನೂ ಕೆಲ ವಾರಗಳು ಕಳೆದ ಮೇಲೆ ಬಳಕೆದಾರರಿಗೆ ಒಳಬರುವ ಕರೆಗಳು ಅಥವಾ ನೋಟಿಫಿಕೇಷನ್​ಗಳು ಸ್ವೀಕರಿಸಲು ಆಗಲ್ಲ. ವಾಟ್ಸಾಪ್​ನಿಂದ ಅವರ ಫೋನ್​ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದು ನಿಲ್ಲಿಸುತ್ತದೆ. ಖಾತೆ ಡಿಲೀಟ್ ಆಗಿಮ ಮೆಸೇಜ್ ಹಿಸ್ಟರಿ ಅಳಸಿಹೋಗುತ್ತದೆ. ಎಲ್ಲ ಇತರ ವಾಟ್ಸಾಪ್ ಗ್ರೂಪ್​ನಿಂದ ತೆಗೆಯಲಾಗುತ್ತದೆ. ಜತೆಗೆ ಅವರ ವಾಟ್ಸಾಪ್ ಬ್ಯಾಕ್​ಅಪ್ ಕೂಡ ಅಳಿಸಲಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

(If WhatsApp privacy policy not accepted by users by May 15 deadline, what will happen? Here are the details)

ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ಈಶ್ವರಪ್ಪರ ಪ್ರಕಾರ ಅಲ್ಪಸಂಖ್ಯಾತರು ಅನ್ನೋದು ಕೂಡ ಒಂದು ಧರ್ಮ!
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು
ತಾಯಿಗೆ ಹೊಡೆಯುವಾಗ ತಂದೆಗೆ ಕೈಮುಗಿದು ಬೇಡಿದ ಮಗಳು