AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?

ವಾಟ್ಸಾಪ್ ಖಾಸಗಿತನದ ನೀತಿಯನ್ನು ಸಮ್ಮತಿ ಸೂಚಿಸದ ಬಳಕೆದಾರರಿಗೆ ಮೇ 15ರ ಗಡುವಿನ ನಂತರ ಏನಾಗುತ್ತದೆ ಎಂಬುದರ ವಿವರ ಇಲ್ಲಿದೆ.

WhatsApp privacy policy: ವಾಟ್ಸಾಪ್ ಖಾಸಗಿತನ ನೀತಿಗೆ ಮೇ 15ರೊಳಗೆ ಸಮ್ಮತಿಸದಿದ್ದಲ್ಲಿ ಮುಂದೆ ಏನಾಗುತ್ತದೆ?
ವಾಟ್ಸಾಪ್ (ಪ್ರಾತಿನಿಧಿಕ ಚಿತ್ರ)
Srinivas Mata
|

Updated on: May 08, 2021 | 7:02 PM

Share

ಈ ಹಿಂದೆ ಘೋಷಣೆ ಮಾಡಿದಂತೆ ಮೇ 15ನೇ ತಾರೀಕಿನ ಗಡುವಿನಂದೇ ಇನ್​ಸ್ಟಂಟ್ ಮೆಸೇಜಿಂಗ್ ಪ್ಲಾಟ್​ಫಾರ್ಮ್ ಸಂಪೂರ್ಣವಾಗಿ ಬಳಕೆದಾರರಿಗೆ ದೊರೆಯದಿರುವಂತೆ ಆಗುವುದಿಲ್ಲ ಎಂದು ವಾಟ್ಸಾಪ್​ (WhatsApp) ಶುಕ್ರವಾರದಂದು ಸ್ಪಷ್ಟಪಡಿಸಿದೆ. ಖಾಸಗಿತನದ ನೀತಿ ಅಪ್​ಡೇಟ್ ಆಗಿಲ್ಲ ಎಂಬ ಕಾರಣಕ್ಕೆ ಯಾವ ಗ್ರಾಹಕರಿಗೂ ವಾಟ್ಸಾಪ್ ಕಾರ್ಯ ನಿರ್ವಹಣೆ ನಿಲ್ಲುವುದಿಲ್ಲ. ಆದರೆ ಅಪ್ಲಿಕೇಷನ್​ನಲ್ಲಿ ದೊರೆಯುವ ಸೇವೆಗಳು ಮಿತಿಗೊಳ್ಳಬಹುದು. ಫೇಸ್​ಬುಕ್ ಮಾಲೀಕತ್ವದ ಅಪ್ಲಿಕೇಷನ್ ಆದ ವಾಟ್ಸಾಪ್, ಬಳಕೆದಾರರಿಗೆ ಹೊಸ ಖಾಸಗಿತನದ ನೀತಿಗೆ ಸಮ್ಮತಿ ಸೂಚಿಸುವಂತೆ ನೆನಪಿಸುವುದನ್ನು ಮುಂದುವರಿಸುತ್ತದೆ. ವಾಟ್ಸಾಪ್ ಹೇಳುವ ಪ್ರಕಾರ, ಹಲವು ವಾರಗಳ ನಂತರವೂ ನೆನಪು ಮಾಡಿಕೊಡುವುದು ನಿರಂತರವಾಗಿ ಮುಂದುವರಿಯಲಿದೆ.

ಒಂದು ಸಲ ಬಳಕೆದಾರರಿಗೆ ಪದೇಪದೇ ನೆನಪು ಮಾಡಿಸಲು ಆರಂಭವಾದರೆ, ಆ ಗ್ರಾಹಕರು ಅಪ್​ಡೇಟ್​ಗೆ ಸಮ್ಮತಿ ಸೂಚಿಸುವ ತನಕ ವಾಟ್ಸಾಪ್​ನಲ್ಲಿ ಸೀಮಿತ ಕಾರ್ಯನಿರ್ವಹಣೆ ಮಾತ್ರ ಸಾಧ್ಯವಾಗುತ್ತದೆ. ಇದು ಎಲ್ಲ ಬಳಕೆದಾರರಿಗೂ ಒಂದೇ ಸಲಕ್ಕೆ ಆಗುವುದಿಲ್ಲ ಎಂದು ವಾಟ್ಸಾಪ್ ತಿಳಿಸಿದೆ. ವಾಟ್ಸಾಪ್ ಬಳಕೆದಾರರಿಗೆ ಚಾಟ್​ ಲಿಸ್ಟ್​ ಬಳಕೆ ಸಾಧ್ಯವಾಗದಿರಬಹುದು. ಆದರೆ ಒಳಬರುವ ಕರೆಗಳು ಮತ್ತು ವಿಡಿಯೋ ಕಾಲ್​ಗಳಿಗೆ ಉತ್ತರಿಸುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಬಳಕೆದಾರರು ನೋಟಿಫಿಕೇಷನ್ ಎನೇಬಲ್ ಮಾಡಿದ್ದಲ್ಲಿ ಅದರ ಮೂಲಕ ಸಂದೇಶ ಓದಲು ಅಥವಾ ಪ್ರತಿಕ್ರಿಯಿಸಲು ಸಾಧ್ಯ. ಅಥವಾ ಮಿಸ್ಡ್ ಫೋನ್ ಅಥವಾ ವಿಡಿಯೋ ಕಾಲ್ ಪುನಃ ಕಾಲ್ ಮಾಡಲು ಸಾಧ್ಯ.

ಇನ್ನೂ ಕೆಲ ವಾರಗಳು ಕಳೆದ ಮೇಲೆ ಬಳಕೆದಾರರಿಗೆ ಒಳಬರುವ ಕರೆಗಳು ಅಥವಾ ನೋಟಿಫಿಕೇಷನ್​ಗಳು ಸ್ವೀಕರಿಸಲು ಆಗಲ್ಲ. ವಾಟ್ಸಾಪ್​ನಿಂದ ಅವರ ಫೋನ್​ಗೆ ಸಂದೇಶಗಳು ಮತ್ತು ಕರೆಗಳನ್ನು ಕಳುಹಿಸುವುದು ನಿಲ್ಲಿಸುತ್ತದೆ. ಖಾತೆ ಡಿಲೀಟ್ ಆಗಿಮ ಮೆಸೇಜ್ ಹಿಸ್ಟರಿ ಅಳಸಿಹೋಗುತ್ತದೆ. ಎಲ್ಲ ಇತರ ವಾಟ್ಸಾಪ್ ಗ್ರೂಪ್​ನಿಂದ ತೆಗೆಯಲಾಗುತ್ತದೆ. ಜತೆಗೆ ಅವರ ವಾಟ್ಸಾಪ್ ಬ್ಯಾಕ್​ಅಪ್ ಕೂಡ ಅಳಿಸಲಾಗುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಖಾಸಗಿತನ ನಿಯಮಾವಳಿಗಳ ಅಪ್​ಡೇಟ್​ಗೆ ದೆಹಲಿ ಹೈಕೋರ್ಟ್​ನಲ್ಲಿ ತಡೆ ಕೋರಿದ ಸರ್ಕಾರ

(If WhatsApp privacy policy not accepted by users by May 15 deadline, what will happen? Here are the details)

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ