AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಸ್ನ್ಯಾಪ್​ಚಾಟ್ ಮೈ ಎಐ ಎಂಬ ಆಯ್ಕೆಯ ಮೂಲಕ ಚಾಟ್​ಗಳಿಗೆ ಪ್ರತಿಕ್ರಿಯಿಸುವುದು, ವಿವಿಧ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪ್ಲ್ಯಾನ್ ಮಾಡುವ ಫೀಚರ್ ಅನ್ನು ಒದಗಿಸುತ್ತಿದೆ.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ
ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ
ಕಿರಣ್​ ಐಜಿ
|

Updated on:Feb 28, 2023 | 1:17 PM

Share

ಟೆಕ್​ಲೋಕದಲ್ಲಿ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಚಾಟ್​ಜಿಪಿಟಿ (ChatGPT). ನಾವು ಊಹಿಸದೇ ಇರುವ ರೀತಿಯಲ್ಲಿ, ಚಾಟ್​ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ಬಳಸುವ ಬಾಟ್​ಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಆವರಿಸಿಕೊಂಡುಬಿಟ್ಟಿವೆ. ಸ್ನ್ಯಾಪ್ ಕಳುಹಿಸಿ ಚಾಟ್ ಮಾಡುವ ವಿಶಿಷ್ಟ ಅಪ್ಲಿಕೇಶನ್ ಸ್ನ್ಯಾಪ್​ಚಾಟ್ ಕೂಡ, ಮೈ ಎಐ ಎನ್ನುವ ಆವೃತ್ತಿಯನ್ನು ಬಳಸುತ್ತಿದೆ. ಆರಂಭದಲ್ಲಿ ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಪರೀಕ್ಷಾರ್ಥವಾಗಿ ಮೈ ಎಐ ಲಭ್ಯವಾಗುತ್ತಿದೆ. ಈ ವಾರವೇ ಹೊಸ ಅಪ್​ಡೇಟ್ ಸ್ನ್ಯಾಪ್​ಚಾಟ್+ ಬಳಕೆದಾರರಿಗೆ ದೊರೆಯಲಿದೆ.

ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಮೈ ಎಐ

ಮೈಎಐ ಅನ್ನು ಸ್ನ್ಯಾಪ್​ಚಾಟ್​ಗೆಂದೇ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗಿದೆ. ಅಂದರೆ, ಚಾಟ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಬದಲಿಗೆ, ಮೈ ಎಐ ಉತ್ತರ ನೀಡಲಿದೆ. ಅದಕ್ಕಾಗಿ, ಪರೀಕ್ಷಾರ್ಥ ಬಳಕೆಯ ನಂತರ, ಇತರರಿಗೆ ಹೊಸ ಫೀಚರ್ ಒದಗಿಸುವುದು ಸ್ನ್ಯಾಪ್​ಚಾಟ್(SnapChat) ಉದ್ದೇಶವಾಗಿದೆ.

ಸ್ನ್ಯಾಪ್​ಚಾಟ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಆಪ್ತರು, ಗೆಳೆಯರಿಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದು, ಉಡುಗೊರೆಯನ್ನು ಸೂಚಿಸುವುದು ಹಾಗೂ ಡಿನ್ನರ್ ಮಾಡುವುದಕ್ಕೆ ಸೂಕ್ತ ಸ್ಥಳದ ಸಲಹೆ, ಹೊಸ ರೆಸಿಪಿ ಬಗ್ಗೆ ಮಾಹಿತಿ.. ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಸ್ನ್ಯಾಪ್​​ಚಾಟ್ ಮೈ ಎಐ ಬಾಟ್ ಒದಗಿಸಲಿದೆ.

ಇದು ಆರಂಭಿಕ ಹಂತವಾಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿರುವುದರಿಂದ ಎಐ ಬಾಟ್ ಮೂಲಕ ದಾಖಲಾಗುವ ಮೈ ಎಐಯ ಸಂಭಾಷಣೆಯನ್ನು ಶೇಖರಿಸಲಾಗುತ್ತದೆ. ಜತೆಗೆ, ಎಐ ಚಾಟ್​ನ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಅವುಗಳನ್ನು ವಿಮರ್ಶೆಗೊಳಪಡಿಸಬಹುದು. ಹೀಗಾಗಿ, ಮೈ ಎಐ ಚಾಟ್ ಬಾಟ್ ಜತೆಗೆ ಯಾವುದೇ ರೀತಿಯ ವೈಯಕ್ತಿಕ, ಖಾಸಗಿ ಮತ್ತು ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸ್ನ್ಯಾಪ್​ಚಾಟ್ ಎಚ್ಚರಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Tue, 28 February 23

ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ