Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಸ್ನ್ಯಾಪ್​ಚಾಟ್ ಮೈ ಎಐ ಎಂಬ ಆಯ್ಕೆಯ ಮೂಲಕ ಚಾಟ್​ಗಳಿಗೆ ಪ್ರತಿಕ್ರಿಯಿಸುವುದು, ವಿವಿಧ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪ್ಲ್ಯಾನ್ ಮಾಡುವ ಫೀಚರ್ ಅನ್ನು ಒದಗಿಸುತ್ತಿದೆ.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ
ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ
Follow us
|

Updated on:Feb 28, 2023 | 1:17 PM

ಟೆಕ್​ಲೋಕದಲ್ಲಿ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಚಾಟ್​ಜಿಪಿಟಿ (ChatGPT). ನಾವು ಊಹಿಸದೇ ಇರುವ ರೀತಿಯಲ್ಲಿ, ಚಾಟ್​ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ಬಳಸುವ ಬಾಟ್​ಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಆವರಿಸಿಕೊಂಡುಬಿಟ್ಟಿವೆ. ಸ್ನ್ಯಾಪ್ ಕಳುಹಿಸಿ ಚಾಟ್ ಮಾಡುವ ವಿಶಿಷ್ಟ ಅಪ್ಲಿಕೇಶನ್ ಸ್ನ್ಯಾಪ್​ಚಾಟ್ ಕೂಡ, ಮೈ ಎಐ ಎನ್ನುವ ಆವೃತ್ತಿಯನ್ನು ಬಳಸುತ್ತಿದೆ. ಆರಂಭದಲ್ಲಿ ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಪರೀಕ್ಷಾರ್ಥವಾಗಿ ಮೈ ಎಐ ಲಭ್ಯವಾಗುತ್ತಿದೆ. ಈ ವಾರವೇ ಹೊಸ ಅಪ್​ಡೇಟ್ ಸ್ನ್ಯಾಪ್​ಚಾಟ್+ ಬಳಕೆದಾರರಿಗೆ ದೊರೆಯಲಿದೆ.

ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಮೈ ಎಐ

ಮೈಎಐ ಅನ್ನು ಸ್ನ್ಯಾಪ್​ಚಾಟ್​ಗೆಂದೇ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗಿದೆ. ಅಂದರೆ, ಚಾಟ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಬದಲಿಗೆ, ಮೈ ಎಐ ಉತ್ತರ ನೀಡಲಿದೆ. ಅದಕ್ಕಾಗಿ, ಪರೀಕ್ಷಾರ್ಥ ಬಳಕೆಯ ನಂತರ, ಇತರರಿಗೆ ಹೊಸ ಫೀಚರ್ ಒದಗಿಸುವುದು ಸ್ನ್ಯಾಪ್​ಚಾಟ್(SnapChat) ಉದ್ದೇಶವಾಗಿದೆ.

ಸ್ನ್ಯಾಪ್​ಚಾಟ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಆಪ್ತರು, ಗೆಳೆಯರಿಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದು, ಉಡುಗೊರೆಯನ್ನು ಸೂಚಿಸುವುದು ಹಾಗೂ ಡಿನ್ನರ್ ಮಾಡುವುದಕ್ಕೆ ಸೂಕ್ತ ಸ್ಥಳದ ಸಲಹೆ, ಹೊಸ ರೆಸಿಪಿ ಬಗ್ಗೆ ಮಾಹಿತಿ.. ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಸ್ನ್ಯಾಪ್​​ಚಾಟ್ ಮೈ ಎಐ ಬಾಟ್ ಒದಗಿಸಲಿದೆ.

ಇದು ಆರಂಭಿಕ ಹಂತವಾಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿರುವುದರಿಂದ ಎಐ ಬಾಟ್ ಮೂಲಕ ದಾಖಲಾಗುವ ಮೈ ಎಐಯ ಸಂಭಾಷಣೆಯನ್ನು ಶೇಖರಿಸಲಾಗುತ್ತದೆ. ಜತೆಗೆ, ಎಐ ಚಾಟ್​ನ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಅವುಗಳನ್ನು ವಿಮರ್ಶೆಗೊಳಪಡಿಸಬಹುದು. ಹೀಗಾಗಿ, ಮೈ ಎಐ ಚಾಟ್ ಬಾಟ್ ಜತೆಗೆ ಯಾವುದೇ ರೀತಿಯ ವೈಯಕ್ತಿಕ, ಖಾಸಗಿ ಮತ್ತು ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸ್ನ್ಯಾಪ್​ಚಾಟ್ ಎಚ್ಚರಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Tue, 28 February 23

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ