AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಸ್ನ್ಯಾಪ್​ಚಾಟ್ ಮೈ ಎಐ ಎಂಬ ಆಯ್ಕೆಯ ಮೂಲಕ ಚಾಟ್​ಗಳಿಗೆ ಪ್ರತಿಕ್ರಿಯಿಸುವುದು, ವಿವಿಧ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪ್ಲ್ಯಾನ್ ಮಾಡುವ ಫೀಚರ್ ಅನ್ನು ಒದಗಿಸುತ್ತಿದೆ.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ
ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ
ಕಿರಣ್​ ಐಜಿ
|

Updated on:Feb 28, 2023 | 1:17 PM

Share

ಟೆಕ್​ಲೋಕದಲ್ಲಿ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಚಾಟ್​ಜಿಪಿಟಿ (ChatGPT). ನಾವು ಊಹಿಸದೇ ಇರುವ ರೀತಿಯಲ್ಲಿ, ಚಾಟ್​ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ಬಳಸುವ ಬಾಟ್​ಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಆವರಿಸಿಕೊಂಡುಬಿಟ್ಟಿವೆ. ಸ್ನ್ಯಾಪ್ ಕಳುಹಿಸಿ ಚಾಟ್ ಮಾಡುವ ವಿಶಿಷ್ಟ ಅಪ್ಲಿಕೇಶನ್ ಸ್ನ್ಯಾಪ್​ಚಾಟ್ ಕೂಡ, ಮೈ ಎಐ ಎನ್ನುವ ಆವೃತ್ತಿಯನ್ನು ಬಳಸುತ್ತಿದೆ. ಆರಂಭದಲ್ಲಿ ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಪರೀಕ್ಷಾರ್ಥವಾಗಿ ಮೈ ಎಐ ಲಭ್ಯವಾಗುತ್ತಿದೆ. ಈ ವಾರವೇ ಹೊಸ ಅಪ್​ಡೇಟ್ ಸ್ನ್ಯಾಪ್​ಚಾಟ್+ ಬಳಕೆದಾರರಿಗೆ ದೊರೆಯಲಿದೆ.

ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಮೈ ಎಐ

ಮೈಎಐ ಅನ್ನು ಸ್ನ್ಯಾಪ್​ಚಾಟ್​ಗೆಂದೇ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗಿದೆ. ಅಂದರೆ, ಚಾಟ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಬದಲಿಗೆ, ಮೈ ಎಐ ಉತ್ತರ ನೀಡಲಿದೆ. ಅದಕ್ಕಾಗಿ, ಪರೀಕ್ಷಾರ್ಥ ಬಳಕೆಯ ನಂತರ, ಇತರರಿಗೆ ಹೊಸ ಫೀಚರ್ ಒದಗಿಸುವುದು ಸ್ನ್ಯಾಪ್​ಚಾಟ್(SnapChat) ಉದ್ದೇಶವಾಗಿದೆ.

ಸ್ನ್ಯಾಪ್​ಚಾಟ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಆಪ್ತರು, ಗೆಳೆಯರಿಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದು, ಉಡುಗೊರೆಯನ್ನು ಸೂಚಿಸುವುದು ಹಾಗೂ ಡಿನ್ನರ್ ಮಾಡುವುದಕ್ಕೆ ಸೂಕ್ತ ಸ್ಥಳದ ಸಲಹೆ, ಹೊಸ ರೆಸಿಪಿ ಬಗ್ಗೆ ಮಾಹಿತಿ.. ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಸ್ನ್ಯಾಪ್​​ಚಾಟ್ ಮೈ ಎಐ ಬಾಟ್ ಒದಗಿಸಲಿದೆ.

ಇದು ಆರಂಭಿಕ ಹಂತವಾಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿರುವುದರಿಂದ ಎಐ ಬಾಟ್ ಮೂಲಕ ದಾಖಲಾಗುವ ಮೈ ಎಐಯ ಸಂಭಾಷಣೆಯನ್ನು ಶೇಖರಿಸಲಾಗುತ್ತದೆ. ಜತೆಗೆ, ಎಐ ಚಾಟ್​ನ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಅವುಗಳನ್ನು ವಿಮರ್ಶೆಗೊಳಪಡಿಸಬಹುದು. ಹೀಗಾಗಿ, ಮೈ ಎಐ ಚಾಟ್ ಬಾಟ್ ಜತೆಗೆ ಯಾವುದೇ ರೀತಿಯ ವೈಯಕ್ತಿಕ, ಖಾಸಗಿ ಮತ್ತು ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸ್ನ್ಯಾಪ್​ಚಾಟ್ ಎಚ್ಚರಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Tue, 28 February 23

ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಇಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ
ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಇಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ