Tech Tips: ಮಿಸ್ ಆಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಟೆನ್ಶನ್ ಬೇಡ, ಹೀಗೆ ಮಾಡಿ

ನೀವು ಹಣವನ್ನು ವರ್ಗಾಯಿಸಿರುವ ಬ್ಯಾಂಕ್ ಖಾತೆ ತಪ್ಪಾಗಿದ್ದರೆ ಅಥವಾ ಐಎಫ್​ಎಸ್​ಸಿ ಕೋಡ್ ತಪ್ಪಾಗಿದ್ದರೆ, ಹಣವು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಬರುತ್ತದೆ. ಇಲ್ಲದಿದ್ದರೆ ಈ ತಪ್ಪು ವ್ಯವಹಾರದ ಬಗ್ಗೆ ಬ್ರಾಂಚ್ ಮ್ಯಾನೇಜರ್​ಗೆ ಹೇಳಿ.

Tech Tips: ಮಿಸ್ ಆಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಯ್ತಾ?: ಟೆನ್ಶನ್ ಬೇಡ, ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us
|

Updated on: Apr 09, 2023 | 8:15 PM

ಎಷ್ಟೆ ಎಚ್ಚರಿಕೆ ವಹಿಸಿದರೂ ಬ್ಯಾಂಕ್ ಖಾತೆಯಿಂದ ಕೆಲವೊಮ್ಮೆ ತಪ್ಪು ಖಾತೆಗೆ ಅಥವಾ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗುತ್ತದೆ. ಇದು ಸಾಮಾನ್ಯ. ಬ್ಯಾಂಕಿಂಗ್ ವಂಚನೆಯಲ್ಲಿಯೂ ಇದೇ ರೀತಿ ಸಂಭವಿಸುತ್ತದೆ. ಅದರಲ್ಲೂ ಈಗ ಯುಪಿಐ (UPI), ನೆಟ್ ಬ್ಯಾಂಕಿಂಗ್ (Net Banking), ಮೊಬೈಲ್ ವ್ಯಾಲೆಟ್​ಗಳ (Mobile Wallet) ಮೂಲಕ ಬ್ಯಾಂಕಿಂಗ್ ವಹಿವಾಟು ನಡೆಯುತ್ತಿದ್ದರೂ ತಪ್ಪಾದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಆಗಿರುವ ಉದಾಹರಣೆ ಅನೇಕವಿದೆ. ಹೀಗೆ ಒಂದು ವೇಳೆ ಹಣ ವರ್ಗಾವಣೆ ತಪ್ಪಾಗಿ ಮಾಡಿದರೆ ಏನು ಮಾಡಬೇಕು? ಹಣವನ್ನು ವಾಪಸ್ ಪಡೆಯುವುದು ಹೇಗೆ?. ಇಲ್ಲಿದೆ ನೋಡಿ ಮಾಹಿತಿ.

ಆಕಸ್ಮಿಕವಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಕೂಡಲೇ ನಿಮ್ಮ ಬ್ಯಾಂಕಿಗೆ ವರದಿ ಮಾಡಿರಿ. ಅಥವಾ ಕಸ್ಟಮರ್ ಕೇರ್​ಗೆ ಕರೆ ಮಾಡಿ ಮತ್ತು ಅವರಿಗೆ ಸಂಪೂರ್ಣ ವಿಷಯವನ್ನು ತಿಳಿಸಿ. ಇ-ಮೇಲ್ ನಲ್ಲಿ ಬ್ಯಾಂಕ್ ಎಲ್ಲಾ ಮಾಹಿತಿಯನ್ನು ಕೇಳಿದರೆ, ಈ ತಪ್ಪಿನಿಂದ ಆಗಿರುವ ವ್ಯವಹಾರದ ಸಂಪೂರ್ಣ ವಿವರಗಳನ್ನು ನೀಡಿ. ವಹಿವಾಟಿನ ದಿನಾಂಕ ಮತ್ತು ಸಮಯ, ನಿಮ್ಮ ಖಾತೆ ಸಂಖ್ಯೆ ಮತ್ತು ತಪ್ಪಾಗಿ ಹಣವನ್ನು ವರ್ಗಾಯಿಸಲಾದ ಖಾತೆಯನ್ನು ಸಹ ಉಲ್ಲೇಖಿಸಿ.

ನೀವು ಹಣವನ್ನು ವರ್ಗಾಯಿಸಿರುವ ಬ್ಯಾಂಕ್ ಖಾತೆ ತಪ್ಪಾಗಿದ್ದರೆ ಅಥವಾ ಐಎಫ್​ಎಸ್​ಸಿ ಕೋಡ್ ತಪ್ಪಾಗಿದ್ದರೆ, ಹಣವು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಬರುತ್ತದೆ. ಇಲ್ಲದಿದ್ದರೆ ಈ ತಪ್ಪು ವ್ಯವಹಾರದ ಬಗ್ಗೆ ಬ್ರಾಂಚ್ ಮ್ಯಾನೇಜರ್​ಗೆ ಹೇಳಿ. ಹಣ ಯಾವ ಬ್ಯಾಂಕ್ ಖಾತೆಗೆ ಹೋಗಿದೆ ಎಂದು ತಿಳಿಯಲು ಪ್ರಯತ್ನಿಸಿ. ನಿಮ್ಮದೇ ಬ್ಯಾಂಕಿನ ಶಾಖೆಯಲ್ಲಿ ಈ ತಪ್ಪು ವ್ಯವಹಾರ ನಡೆದಿದ್ದರೆ ಅದು ಸುಲಭವಾಗಿ ನಿಮ್ಮ ಖಾತೆಗೆ ಬರುತ್ತದೆ.

ಇದನ್ನೂ ಓದಿ
Image
Vivo T2 5G: ಭಾರತದಲ್ಲಿ ರಿಲೀಸ್​ಗೆ ರೆಡಿಯಾದ ವಿವೋ ಕಂಪನಿಯ ಎರಡು 5G ಸ್ಮಾರ್ಟ್​ಫೋನ್ಸ್​: ಯಾವುದು?, ಬೆಲೆ ಎಷ್ಟು?
Image
Flipkart Mobile Bonanza Sale: ಫ್ಲಿಪ್​ಕಾರ್ಟ್​ನಲ್ಲಿ ಮೊಬೈಲ್ಸ್ ಬೊನಾನ್ಜಾ ಸೇಲ್: ಈ ಸ್ಮಾರ್ಟ್​ಫೋನ್ಸ್​ಗೆ ಬಂಪರ್ ಡಿಸ್ಕೌಂಟ್
Image
Moto G Power 5G: ಗ್ಯಾಜೆಟ್ ಮಾರುಕಟ್ಟೆಗೆ ಮೋಟೊರೊಲಾ ಪ್ರೀಮಿಯಂ ಸ್ಮಾರ್ಟ್​ಫೋನ್
Image
Tecno Spark 10C: ಕಡಿಮೆ ದರಕ್ಕೆ ವೈವಿಧ್ಯಮಯ ಫೀಚರ್ಸ್ ನೀಡುವ ಟೆಕ್ನೋ ಫೋನ್

WhatsApp New Feature: ಫೇಸ್​ಬುಕ್ ಪ್ರಿಯರು ಫುಲ್ ಖುಷ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್

ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಪಾವತಿ ಮಾಡುವಾಗ ಸರಿಯಾದ ಬೆನಿಫಿಷಿಯರ್ ಖಾತೆ ಮಾಹಿತಿಯನ್ನು ಒದಗಿಸುವ ಜವಾಬ್ದಾರಿ ರೆಮಿಟರ್ ಮೇಲಿದೆ. ಇದರರ್ಥ ಒಮ್ಮೆ ವರ್ಗಾವಣೆ ಮಾಡಿದ ನಂತರ, ಬೆನಿಫಿಷಿಯರನಿಂದ ಅನುಮೋದನೆಯಿಲ್ಲದೆ ಅದನ್ನು ಹಿಂತಿರುಗಿಸುವುದು ಅಸಾಧ್ಯ. ಇದಕ್ಕಾಗಿಯೇ ಬಳಕೆದಾರರು ವಹಿವಾಟು ನಡೆಸುವ ಮೊದಲು ಕನಿಷ್ಠ ಎರಡು ಬಾರಿ ಫಲಾನುಭವಿ ವಿವರಗಳನ್ನು ಪರಿಶೀಲಿಸಬೇಕು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ತಪ್ಪುಗಳು ಸಂಭವಿಸುತ್ತವೆ ಅಂದರೆ ಜನರು ಆಕಸ್ಮಿಕವಾಗಿ ಹಣವನ್ನು ಕಳೆದುಕೊಳ್ಳಬಹುದು.

ಬ್ಯಾಂಕ್ ಮತ್ತು ಇತರ ಬ್ಯಾಂಕುಗಳೊಂದಿಗೆ (ಅನ್ವಯಿಸಿದರೆ) ಮತ್ತು ವಹಿವಾಟಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಯೊಂದಿಗೆ ನಿಮ್ಮ ಎಲ್ಲಾ ಸಂವಹನದ ಸರಿಯಾದ ಲಾಗ್ ಅನ್ನು ನಿರ್ವಹಿಸುವುದು ಮುಖ್ಯವಾಗಿದೆ. ಸ್ವೀಕರಿಸುವವರು ಹಣವನ್ನು ಮರಳಿ ವರ್ಗಾಯಿಸಲು ನಿರಾಕರಿಸಿದರೆ, ನೀವು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುವ ಕಾನೂನು ಮಾರ್ಗವನ್ನು ಅನುಸರಿಸಬೇಕಾಗಬಹುದು.

ಇದಲ್ಲದೆ ನಿಮ್ಮ ಹಣವನ್ನು ಮರಳಿ ಪಡೆಯುವ ಇನ್ನೊಂದು ಮಾರ್ಗವೆಂದರೆ ಕಾನೂನು ಮಾರ್ಗ. ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ ವ್ಯಕ್ತಿ ಒಂದು ವೇಳೆ ನಿಮ್ಮ ಹಣವನ್ನು ಹಿಂದಿರುಗಿಸಲು ಒಪ್ಪದೇ ಇದ್ದರೆ, ನೀವು ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವನ್ನು ಸಹ ದಾಖಲಿಸಬಹುದು. ಆದರೆ, ಹಣವನ್ನು ಮರುಪಾವತಿಸದಿದ್ದಲ್ಲಿ, ಈ ಹಕ್ಕು ರಿಸರ್ವ್ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ