AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಆಂಡ್ರಾಯ್ಡ್ ಫೋನ್ ಸಂಪೂರ್ಣ ಐಫೋನ್ ಆಗುತ್ತದೆ: ಇಲ್ಲಿದೆ ನೋಡಿ ಟ್ರಿಕ್

Tech Tips: ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ಐಫೋನ್‌ನಂತೆ ಮಾಡಲು ನೀವು ಬಯಸಿದರೆ, ಈ ಟ್ರಿಕ್ ನಿಮಗಾಗಿ ಆಗಿದೆ. ಈ ಟ್ರಿಕ್‌ನೊಂದಿಗೆ, ನೀವು ನಿಮ್ಮ ಆಂಡ್ರಾಯ್ಡ್ ಫೋನ್​ನಲ್ಲಿ ಐಫೋನ್ ಅನುಭವ ಪಡೆಯಬಹುದು. ನಿಮ್ಮ ಫೋನ್‌ನ ಹೋಮ್ ಸ್ಕ್ರೀನ್, ಅಪ್ಲಿಕೇಶನ್ ಐಕಾನ್‌ಗಳು, ವಿಜೆಟ್‌ಗಳು ಮತ್ತು ಐಫೋನ್‌ನಂತಹ ಲಾಕ್ ಸ್ಕ್ರೀನ್ ಅನ್ನು ಕೂಡ ನೀವು ಬದಲಾಯಿಸಬಹುದು.

ನಿಮ್ಮ ಆಂಡ್ರಾಯ್ಡ್ ಫೋನ್ ಸಂಪೂರ್ಣ ಐಫೋನ್ ಆಗುತ್ತದೆ: ಇಲ್ಲಿದೆ ನೋಡಿ ಟ್ರಿಕ್
Android Phone and iPhone
Vinay Bhat
|

Updated on: Feb 06, 2024 | 11:53 AM

Share

ಐಫೋನ್ (iPhone) ಖರೀದಿಸುವುದು ಪ್ರತಿಯೊಬ್ಬರ ಕನಸಾಗಿದ್ದರೂ ಅದು ಅಷ್ಟೊಂದು ಸುಲಭವಲ್ಲ. ಆದರೆ ಆಂಡ್ರಾಯ್ಡ್ ಫೋನ್​ನಲ್ಲಿ ಐಫೋನ್ ತರಹದ ಅನುಭವ ಪಡೆಯಬಹುದು. ಇದರಿಂದ ಸಾವಿರಾರು ರೂಪಾಯಿ ಉಳಿತಾಯ ಮಾಡಬಹುದು. ಇದಕ್ಕಾಗಿ ನೀವು ಹೊಸ ಐಫೋನ್ ಖರೀದಿಸಬೇಕಾಗಿಲ್ಲ, ನಿಮ್ಮ ಆಂಡ್ರಾಯ್ಡ್ ಫೋನ್ ಸ್ವತಃ ಐಫೋನ್ ಆಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್​ಫೋನ್ ಅನ್ನು ಐಫೋನ್​ಗೆ ಹೇಗೆ ಪರಿವರ್ತಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ. ಈ ಟ್ರಿಕ್ ಮೂಲಕ, ನಿಮ್ಮ ಫೋನ್‌ನ ಹೋಮ್ ಸ್ಕ್ರೀನ್, ಅಪ್ಲಿಕೇಶನ್ ಐಕಾನ್‌ಗಳು, ವಿಜೆಟ್‌ಗಳು ಮತ್ತು ಐಫೋನ್‌ನಂತಹ ಲಾಕ್ ಸ್ಕ್ರೀನ್ ಅನ್ನು ಕೂಡ ನೀವು ಬದಲಾಯಿಸಬಹುದು.

ಐಫೋನ್ 15 ಲಾಂಚರ್ ಅಪ್ಲಿಕೇಶನ್

  • ಇದಕ್ಕಾಗಿ, ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ ಮತ್ತು ಐಫೋನ್ 15 ಲಾಂಚರ್ ಅನ್ನು ಟೈಪ್ ಮಾಡಿ ಸರ್ಚ್ ಕೊಡಿ.
  • ನಂತರ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿ, ತೆರೆಯಿರಿ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು ಅನುಮತಿ ನೀಡಿ.
  • ಈಗ ನಿಮ್ಮ ಆಯ್ಕೆಯ ಪ್ರಕಾರ ಅಪ್ಲಿಕೇಶನ್ ಅನ್ನು ಹೊಂದಿಸಬಹುದು. ನಿಮ್ಮ ಫೋನ್‌ನ ಹೋಮ್ ಸ್ಕ್ರೀನ್ ಲೇಔಟ್, ಅಪ್ಲಿಕೇಶನ್ ಐಕಾನ್‌ಗಳು, ವಿಜೆಟ್‌ಗಳು ಮತ್ತು ಲಾಕ್ ಸ್ಕ್ರೀನ್ ಅನ್ನು ಬದಲಾಯಿಸಬಹುದು.

ಹೋಮ್ ಸ್ಕ್ರೀನ್ ಅನ್ನು ಈ ರೀತಿ ಬದಲಾಯಿಸಿ:

ನಿಮ್ಮ ಫೋನ್‌ನ ಹೋಮ್ ಸ್ಕ್ರೀನ್ ಅನ್ನು ಐಫೋನ್‌ನಂತೆ ಬದಲಾಯಿಸಲು, “ಹೋಮ್ ಸ್ಕ್ರೀನ್” ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ ನೀವು ವಿವಿಧ ರೀತಿಯ ಹೋಮ್ ಸ್ಕ್ರೀನ್ ಲೇಔಟ್‌ಗಳನ್ನು ಕಾಣಯತ್ತೀರಿ, ಇವುಗಳಲ್ಲಿ ಒಂದನ್ನು ಆಯ್ಕೆಮಾಡಿ. ಇದಲ್ಲದೆ, ನೀವು ಅಪ್ಲಿಕೇಶನ್ ಐಕಾನ್ ಮತ್ತು ವಿಜೆಟ್ ಅನ್ನು ಸಹ ಬದಲಾಯಿಸಬಹುದು.

ಸ್ನಾಪ್​ಡ್ರಾಗನ್ 7 Gen 3, 50MP ಫ್ರಂಟ್ ಕ್ಯಾಮೆರಾ: ವಿವೋದಿಂದ ಬಂತು ಜಬರ್ದಸ್ತ್ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಹಳೆಯ ಫೋನ್ ಮಾರಾಟ ಮಾಡಲು ಹಲವು ಆಯ್ಕೆ
Image
ಬರುತ್ತಿದೆ ವ್ಯಾಲೆಂಟೈನ್ಸ್ ಡೇ: ನಿಮ್ಮ ಸಂಗಾತಿಗೆ ಈ ಫೋನ್ ಗಿಫ್ಟ್ ನೀಡಿ
Image
ವಾಟ್ಸ್​ಆ್ಯಪ್ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!
Image
ವಿಡಿಯೋ ಕಾಲ್​ನಲ್ಲಿ ಡೀಪ್​ಫೇಕ್ ಆಟ; 200 ಕೋಟಿ ರೂ ನಷ್ಟ ಮಾಡಿಕೊಂಡ ಕಂಪನಿ

ಅಪ್ಲಿಕೇಶನ್ ಐಕಾನ್ ಅನ್ನು ಈ ರೀತಿ ಬದಲಾಯಿಸಿ:

ಅಪ್ಲಿಕೇಶನ್ ಐಕಾನ್ ಬದಲಾಯಿಸಲು, “ಅಪ್ಲಿಕೇಶನ್ ಐಕಾನ್‌ಗಳು” ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ ನೀವು ಅಪ್ಲಿಕೇಶನ್ ಐಕಾನ್ ಪ್ಯಾಕ್ ಅನ್ನು ಆಯ್ಕೆ ಮಾಡಬಹುದು, ನೀವು ಬಯಸಿದರೆ, ನಿಮ್ಮ ವೈಯಕ್ತಿಕ ಅಪ್ಲಿಕೇಶನ್‌ಗಳ ಐಕಾನ್‌ಗಳನ್ನು ಸಹ ನೀವು ಬದಲಾಯಿಸಬಹುದು.

ವಿಜೆಟ್‌ಗಳನ್ನು ಬದಲಾಯಿಸಿ ಮತ್ತು ಡಿಸ್​ಪ್ಲೇ ಲಾಕ್:

ವಿಜೆಟ್ ಅನ್ನು ಬದಲಾಯಿಸಲು, “ವಿಜೆಟ್‌ಗಳು” ಆಯ್ಕೆಯನ್ನು ಕ್ಲಿಕ್ ಮಾಡಿ, ನೀವು ವಿಜೆಟ್‌ನ ಗಾತ್ರ ಮತ್ತು ಜಾಗವನ್ನು ಸಹ ಬದಲಾಯಿಸಬಹುದು.

ಲಾಕ್ ಸ್ಕ್ರೀನ್ ಅನ್ನು ಬದಲಾಯಿಸಲು, “ಲಾಕ್ ಸ್ಕ್ರೀನ್” ಆಯ್ಕೆಯನ್ನು ಕ್ಲಿಕ್ ಮಾಡಿ, ಇಲ್ಲಿ ಕೆಲವು ಆಯ್ಕೆಗಳಿರುತ್ತದೆ. ಇಲ್ಲಿ ನೀವು ಲಾಕ್ ಸ್ಕ್ರೀನ್ ವಾಲ್ಪೇಪರ್ ಅನ್ನು ಸಹ ಬದಲಾಯಿಸಬಹುದು.

ಈ ಪ್ರಕ್ರಿಯೆಯ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್‌ನ ಇಂಟರ್ಫೇಸ್ ಮಾತ್ರ ಐಫೋನ್​ನಂತೆ ಬದಲಾಗುತ್ತದೆ ಎಂಬುದನ್ನು ಗಮನಿಸಿ. ನಿಮ್ಮ ಫೋನ್‌ನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಆಂಡ್ರಾಯ್ಡ್​ನಂತೆಯೇ ಇರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು