AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್​ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?

OnePlus 12R First Sale: ಒನ್​ಪ್ಲಸ್ 12R ಪ್ರೀಮಿಯಂ ಸ್ಮಾರ್ಟ್​ಫೋನ್ ಆಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಭಾರತದಲ್ಲಿ ಫೋನ್‌ನ ಮಾರಾಟವು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ. ICICI ಕ್ರೆಡಿಟ್ ಕಾರ್ಡ್ ಮತ್ತು OneCard ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದು.

ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್​ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?
OnePlus 12R
Vinay Bhat
|

Updated on: Feb 06, 2024 | 1:52 PM

Share

ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒನ್​ಪ್ಲಸ್ ಇತ್ತೀಚೆಗೆ ಭಾರತದಲ್ಲಿ ತನ್ನ ಎರಡು ಹೊಸ ಸ್ಮಾರ್ಟ್​ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಇದು ಒನ್​ಪ್ಲಸ್ 12 ಮತ್ತು ಒನ್​ಪ್ಲಸ್ 12R (OnePlus 12R) ಫೋನ್ ಆಗಿದೆ. ಈಗಾಗಲೇ ಒನ್​ಪ್ಲಸ್ 12 ದೇಶಾದ್ಯಂತ ಖರೀದಿಗೆ ಲಭ್ಯವಿದ್ದರೆ, ಒನ್​ಪ್ಲಸ್ 12R ಫೆಬ್ರವರಿ 6 ಅಂದರೆ ಇಂದು ಮೊದಲ ಸೇಲ್ ಕಾಣುತ್ತಿದೆ. ಇದೊಂದು ಪ್ರೀಮಿಯಂ ಸ್ಮಾರ್ಟ್​ಫೋನ್ ಆಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಒನ್​ಪ್ಲಸ್ 12R ಮಾರಾಟದ ವಿವರಗಳು, ಕೊಡುಗೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಒನ್​ಪ್ಲಸ್ 12R ಮೊದಲ ಸೇಲ್:

ಒನ್​ಪ್ಲಸ್ 12R ಮೂಲ ಮಾದರಿ ರೂ. 39,999 ರಿಂದ ಪ್ರಾರಂಭವಾಗುತ್ತದೆ. ಇದು 8GB RAM ಮತ್ತು 128GB ಆಂತರಿಕ ಸಂಗ್ರಹಣೆಯದ್ದಾಗಿದೆ. 16GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 45,999 ರೂ. ಆಗಿದೆ. ಭಾರತದಲ್ಲಿ ಫೋನ್‌ನ ಮಾರಾಟವು ಫೆಬ್ರವರಿ 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ. ICICI ಕ್ರೆಡಿಟ್ ಕಾರ್ಡ್ ಮತ್ತು OneCard ಹೊಂದಿರುವವರಿಗೆ ರೂ. 1,000 ಬ್ಯಾಂಕ್ ರಿಯಾಯಿತಿ ಪಡೆಯಬಹುದು.

ಒನ್​ಪ್ಲಸ್ 12R ಖರೀದಿದಾರರು ಆರು ತಿಂಗಳ ಗೂಗಲ್ ಒನ್ ಚಂದಾದಾರಿಕೆಯನ್ನು ಮತ್ತು ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಮಾರಾಟದ ಭಾಗವಾಗಿ, ಆ್ಯಕ್ಸಿಂಡೆಟ್ ಪ್ರೊಟೆಕ್ಷನ್ ಒನ್​ಪ್ಲಸ್ 12R ಗ್ರಾಹಕರಿಗೆ ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಅಧಿಕೃತ ವೆಬ್‌ಸೈಟ್‌ಗೆ ಬಂದ ಮೊದಲ 24 ಗಂಟೆಗಳ ಒಳಗೆ ಆರ್ಡರ್ ಮಾಡಿದ ಬಳಕೆದಾರರು 4,999 ರೂ. ಮೌಲ್ಯದ ಉಚಿತ ಒನ್​ಪ್ಲಸ್ ಬಡ್ಸ್ Z2 ಅನ್ನು ಪಡೆಯಬಹುದು.

ಇದನ್ನೂ ಓದಿ
Image
ಆ್ಯಪಲ್​ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಹುವೈ ನಂಬರ್ 1
Image
ನಿಮ್ಮ ಆಂಡ್ರಾಯ್ಡ್ ಫೋನ್ ಸಂಪೂರ್ಣ ಐಫೋನ್ ಆಗುತ್ತದೆ: ಇಲ್ಲಿದೆ ನೋಡಿ ಟ್ರಿಕ್
Image
ಹಳೆಯ ಫೋನ್ ಮಾರಾಟ ಮಾಡಲು ಹಲವು ಆಯ್ಕೆ
Image
ಬರುತ್ತಿದೆ ವ್ಯಾಲೆಂಟೈನ್ಸ್ ಡೇ: ನಿಮ್ಮ ಸಂಗಾತಿಗೆ ಈ ಫೋನ್ ಗಿಫ್ಟ್ ನೀಡಿ

ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!

ಒನ್​ಪ್ಲಸ್ 12R ಫೀಚರ್ಸ್:

ಡಿಸ್‌ಪ್ಲೇ: ಒನ್​ಪ್ಲಸ್ 12R ಸ್ಮಾರ್ಟ್​ಫೋನ್ 6.78-ಇಂಚಿನ LTPO 4.0 ಪ್ಯಾನೆಲ್ AMOLED 120Hz ಡಿಸ್‌ಪ್ಲೇ ಜೊತೆಗೆ 4500 nits ಗರಿಷ್ಠ ಬ್ರೈಟ್​ನೆಸ್ ಮತ್ತು ಗೋರಿಲ್ಲ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಪ್ರೊಸೆಸರ್: ಹೊಸ ಒನ್​ಪ್ಲಸ್ 12R ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 ಚಿಪ್ಸೆಟ್​ನಿಂದ ಚಾಲಿತವಾಗಿದೆ.

ಹಿಂದಿನ ಕ್ಯಾಮೆರಾಗಳು: ಈ ಫೋನ್ ಸೋನಿ IMX890 50MP ಪ್ರಾಥಮಿಕ ಸಂವೇದಕ, 112-ಡಿಗ್ರಿ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ.

ಸೆಲ್ಫಿ ಕ್ಯಾಮೆರಾ: ಒನ್​ಪ್ಲಸ್ 12R 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಸಂಗ್ರಹಣೆ: ಒನ್​ಪ್ಲಸ್ 12R 16GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.

ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 14-ಆಧಾರಿತ ColorOS 14.0 ಔಟ್-ಆಫ್-ದಿ-ಬಾಕ್ಸ್ ಮೂಲಕ ರನ್ ಆಗುತ್ತದೆ.

ಬ್ಯಾಟರಿ: ಒನ್​ಪ್ಲಸ್ 12R 100W SUPERVOOC ಚಾರ್ಜಿಂಗ್‌ನೊಂದಿಗೆ 5,500mAh ಬ್ಯಾಟರಿಯನ್ನು ಹೊಂದಿದೆ, 26 ನಿಮಿಷಗಳಲ್ಲಿ 1-100 ಪ್ರತಿಶತ ಚಾರ್ಜ್ ಆಗುತ್ತದೆ. ಇದು SUPERVOOC S ಚಾರ್ಜಿಂಗ್ ಮ್ಯಾನೇಜ್ಮೆಂಟ್ ಚಿಪ್ ಮತ್ತು ಬ್ಯಾಟರಿ ಹೆಲ್ತ್ ಇಂಜಿನ್ ತಂತ್ರಜ್ಞಾನವನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್ ನೀರು ಮತ್ತು ಧೂಳಿನ ನಿರೋಧಕತೆಗಾಗಿ IP64 ರೇಟಿಂಗ್ ಅನ್ನು ಹೊಂದಿದೆ, Dolby Atmos ಜೊತೆಗೆ ಸ್ಟೀರಿಯೋ ಸ್ಪೀಕರ್‌ಗಳು, Wi-Fi 7, ಬ್ಲೂಟೂತ್ 5.3, NFC ಮತ್ತು USB ಟೈಪ್-ಸಿ ಪೋರ್ಟ್ ಇವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ರೌಡ್ ನಿಭಾಯಿಸಲಾಗದೆ ಮಾಲೀಕನಿಂದ ಅಂಗಡಿ ಕ್ಲೋಸ್!
ಕ್ರೌಡ್ ನಿಭಾಯಿಸಲಾಗದೆ ಮಾಲೀಕನಿಂದ ಅಂಗಡಿ ಕ್ಲೋಸ್!
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್