AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi: ಶವೋಮಿ ಸ್ಮಾರ್ಟ್​​ಫೋನ್ ಬಳಸುತ್ತಿರುವವರು ತಪ್ಪದೇ ಈ ಸ್ಟೋರಿ ಓದಿ: ಬ್ಯಾಟರಿ ಬಗ್ಗೆ ಹೊಸ ಘೋಷಣೆ

Xiaomi Battery: ಇದೀಗ ಶವೋಮಿ ಕಂಪನಿ ಬ್ಯಾಟರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಕಂಪನಿ 'ಬ್ಯಾಟರಿ ರಿಪ್ಲೇಸ್​ಮೆಂಟ್ ಪ್ರೊಗ್ರಾಮ್' ಅಂದರೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಯನ್ನು ಭಾರತದಲ್ಲಿ ತರುವುದಾಗಿ ಹೇಳಿತ್ತು. ಇದೀಗ ಈ ಪ್ರಕ್ರಿಯೆ ಜಾರಿಯಾಗಿದೆ.

Xiaomi: ಶವೋಮಿ ಸ್ಮಾರ್ಟ್​​ಫೋನ್ ಬಳಸುತ್ತಿರುವವರು ತಪ್ಪದೇ ಈ ಸ್ಟೋರಿ ಓದಿ: ಬ್ಯಾಟರಿ ಬಗ್ಗೆ ಹೊಸ ಘೋಷಣೆ
Xiaomi Phone Battery
TV9 Web
| Updated By: Vinay Bhat|

Updated on:Jun 14, 2022 | 2:27 PM

Share

ಚೀನಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಶವೋಮಿಯ (Xiaomi) ಸ್ಮಾರ್ಟ್​​ಫೋನ್​ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕಾಗಿಯೇ ಕಳೆದ ಕೆಲವು ವರ್ಷಗಳಿಂದ ದೇಶದ ನಂಬರ್ ಒನ್ ಸ್ಮಾರ್ಟ್​​ಫೋನ್ ಕಂಪನಿ ಆಗಿ ಗುರುತಿಸಿಕೊಂಡಿದೆ. ಬಜೆಟ್ ಪ್ರಿಯರಿಗಾಗಿ ಆಕರ್ಷಕ ಕ್ಯಾಮೆರಾ, ಬ್ಯಾಟರಿ ಮೂಲಕ ರೆಡ್ಮಿ (Redmi) ಸಬ್​ಬ್ರ್ಯಾಂಡ್​ ಅಡಿಯಲ್ಲಿ ಸರಾಗವಾಗಿ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುತ್ತಲೇ ಇದೆ. ಎಂಐ (Mi) ಬ್ರ್ಯಾಂಡ್ ಸ್ಥಗಿತಗೊಳಿಸಿದ ಬಳಿಕ ಈಗ ಶವೋಮಿ ಎಂಬ ಹೆಸರಿನಲ್ಲೇ ಫೋನ್​ಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಶವೋಮಿ ಕಂಪನಿ ಬ್ಯಾಟರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಕಂಪನಿ ‘ಬ್ಯಾಟರಿ ರಿಪ್ಲೇಸ್​ಮೆಂಟ್ ಪ್ರೊಗ್ರಾಮ್’ ಅಂದರೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಯನ್ನು ಭಾರತದಲ್ಲಿ ತರುವುದಾಗಿ ಹೇಳಿತ್ತು. ಇದೀಗ ಈ ಪ್ರಕ್ರಿಯೆ ಜಾರಿಯಾಗಿದೆ.

ಶವೋಮಿ ಭಾರತದ ಸಿಒಒ ಮುರಳಿಕೃಷ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಶವೋಮಿ ಬಳಕೆದಾರರು ತಮ್ಮ ಸ್ಮಾರ್ಟ್​​ಫೋನ್ ಬ್ಯಾಟರಿಯನ್ನು ಬದಲಾವಣೆ ಮಾಡುವ ಅಗತ್ಯವಿದ್ದಲ್ಲಿ ಈಗ ಇದು ಜಾರಿಯಲ್ಲಿದೆ ಎಂದು ಹೇಳಿದ್ದಾರೆ. ಬ್ಯಾಟರಿಯ ಆರಂಭಿಕ ಬೆಲೆ 499 ರೂ. ಆಗಿದೆ. ಇದರ ಜೊತೆಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಬ್ಯಾಟರಿಯ ಬೆಲೆಯು ಅದು ಯಾವ ಶವೋಮಿ ಸ್ಮಾರ್ಟ್‌ಫೋನ್‌ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಕಂಪನಿಯ ಪ್ರಕಾರ ಬಳಕೆದಾರರ ಹ್ಯಾಂಡ್‌ಸೆಟ್‌ಗಳ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ.

Moto G82 5G: ಹೊಸ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್: ಇಂದು ಮಾರಾಟ ಶುರುವಾಗಿದೆ ಮೋಟೋ G82 5G

ಇದನ್ನೂ ಓದಿ
Image
Best Smartphone: 20,000 ರೂ. ಒಳಗೆ ಮಾರಾಟ ಆಗುತ್ತಿರುವ ಅತ್ಯುತ್ತಮ ಸ್ಮಾರ್ಟ್​​ಫೋನ್​ಗಳು ಇಲ್ಲಿವೆ ನೋಡಿ
Image
WhatsApp: ನಿಮ್ಮನ್ನ ವಾಟ್ಸ್​ಆ್ಯಪ್​ನಲ್ಲಿ ಯಾರೆಲ್ಲ ಬ್ಲಾಕ್ ಮಾಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟಿಪ್ಸ್
Image
Bharti Airtel: ಏರ್ಟೆಲ್ ಪರಿಚಯಿಸಿರುವ ಹೊಸ ಫೀಚರ್ ಕಂಡು ಬಳಕೆದಾರರು ಫುಲ್ ಖುಷ್
Image
ಸತ್ತ ನಂತರ ನಿಮ್ಮ ಸೋಷಿಯಲ್ ಮೀಡಿಯಾ ಏನಾಗುತ್ತದೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ

ಈ ಮೂಲಕ ಶವೋಮಿ ಬಳಕೆದಾರರು ತಮ್ಮ ಸ್ಮಾರ್ಟ್​​ಫೋನ್ ಬ್ಯಾಟರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಚಾರ್ಜ್ ನಿಲ್ಲುತ್ತಿಲ್ಲ, ಹೆಚ್ಚು ಬಿಸಿ ಆಗುತ್ತಿರುವ ಅನುಭವ ಆಗುತ್ತಿದ್ದರೆ ಹತ್ತಿರದ ಶವೋಮಿ ಸರ್ವೀಸ್ ಸಂಟರ್​ಗೆ ಬೇಟಿ ನೀಡಬಹುದು. ಶವೋಮಿ ಸರ್ವಿಸ್+ ಎಂಬ ಆ್ಯಪ್ ಮೂಲಕವೂ ಬ್ಯಾಟರಿ ಬಗ್ಗೆ ಮಾಹಿತಿ ಪಡೆಯಬಹುದು.

ಬ್ಯಾಟರಿ ಬ್ಯಾಕ್​ಅಪ್​ನ್ನು ಹೆಚ್ಚಿಸಲು ಹೀಗೆ ಮಾಡಿ:

ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿ ಚಾರ್ಜ್ ಹೆಚ್ಚು ಸಮಯ ಬರುತ್ತಿಲ್ಲ ಎಂದಾದರೆ ಅದು ಬ್ಯಾಟರಿ ತೊಂದರೆ ಮಾತ್ರ ಆಗಿರುವುದಿಲ್ಲ. ಫೋನ್​ ಉಪಯೋಗಿಸುವ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿದರೆ ದೀರ್ಘ ಸಮಯದ ವರೆಗೆ ಚಾರ್ಜ್ ಬರುವಂತೆ ಮಾಡಬಹುದು. ವೈ-ಫೈ, ಬ್ಲೂಟೂತ್ ಅಥವಾ ಎನ್‌ಎಫ್‌ಸಿ ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ನೀವು ಬ್ಯಾಟರಿಯನ್ನು ಸಂರಕ್ಷಿಸಬಹುದಾಗಿದೆ. ಕೆಲವೊಮ್ಮೆ, ಜನರು ಫೋನ್‌ ವೈಬ್ರೇಟ್ ಮೋಡ್​ಗೆ ಹಾಕಿ ಬಿಟ್ಟುಬಿಡುತ್ತಾರೆ. ಅದು ಹೆಚ್ಚುವರಿ ಬ್ಯಾಟರಿಯನ್ನು ಬಳಸುತ್ತದೆ.

ಅಂತೆಯೆ ನೀವು ಸಾಕಷ್ಟು ನೋಟಿಫಿಕೇಶನ್ ಸ್ವೀಕರಿಸಿದರೆ ಕೂಡ ಚಾರ್ಜ್ ಖಾಲಿ ಆಗುತ್ತದೆ. ಯಾವುದೇ ಅಪ್ಲಿಕೇಶನ್​ನ್ನು ಡೌನ್‌ಲೋಡ್ ಮಾಡುವ ಮೊದಲು, ಅವು ಎಷ್ಟು ಬ್ಯಾಟರಿಯನ್ನು ಬಳಸುತ್ತವೆ ಎಂಬುದನ್ನು ಪರಿಶೀಲಿಸುವುದು ಬುದ್ಧಿವಂತಿಕೆ. ನಾವು ಅಪ್ಲಿಕೇಶನ್‌ಗಳನ್ನು ಬಳಸಿದಾಗ ಮತ್ತು ಅವುಗಳನ್ನು ಸರಿಯಾಗಿ ಆಫ್ ಮಾಡದೇ ಇರುವಾಗ, ಅವು ಆನ್​ನಲ್ಲಿರುವತ್ತವೆ. ಮತ್ತು ಹಿನ್ನೆಲೆಯಲ್ಲಿ ಚಾಲನೆಯಾಗುತ್ತವೆ. ಇದರಿಂದ ಅಮೂಲ್ಯವಾದ ಚಾರ್ಜ್ ಖಾಲಿ ಆಗುತ್ತಾ ಇರುತ್ತದೆ. ಹೀಗಾಗಿ ಉಪಯೋಗಿಸಿದ ನಂತರ ಆ ಆ್ಯಪ್ ಅನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಿ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Tue, 14 June 22

ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ
ಜನರ ಸಮಸ್ಯೆ ಪರಿಹಾರಕ್ಕೆ ಆ್ಯಪ್​: ವಿನೂತನ ಪ್ರಯತ್ನಕ್ಕೆ ಕೈಹಾಕಿದ ಶಾಸಕ