AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mi 11 Ultra: ಶವೋಮಿಯಿಂದ ಶಾಕಿಂಗ್ ನ್ಯೂಸ್: ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಸೇಲ್ ಬಂದ್ ಮಾಡಿದ ಕಂಪನಿ

ಶವೋಮಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಲಿಸ್ಟ್‌ನಿಂದ ಸಹ ತೆಗೆದುಹಾಕಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಮತ್ತೆ ಮಾರಾಟವಾಗುವುದಿಲ್ಲ ಎಂದು ಇಂಡಿಯಾ ಟುಡೇ ವರದಿಯಿಂದ ತಿಳಿದು ಬಂದಿದೆ.

Mi 11 Ultra: ಶವೋಮಿಯಿಂದ ಶಾಕಿಂಗ್ ನ್ಯೂಸ್: ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಸೇಲ್ ಬಂದ್ ಮಾಡಿದ ಕಂಪನಿ
Mi 11 Ultra
Follow us
TV9 Web
| Updated By: Vinay Bhat

Updated on: Oct 31, 2021 | 3:06 PM

ಭಾರತದಲ್ಲಿ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳು (Smartphone) ಮಾರಾಟ ಆಗುತ್ತಿರುವುದು ಚೀನಾ ಮೂಲದ ಶವೋಮಿ (Xiaomi) ಕಂಪನಿಯದ್ದು. ಕಳೆದ ಎರಡೂವರೆ ವರ್ಷಗಳಿಂದ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ಶವೋಮಿ ನಂಬರ್ ಒನ್ ಸ್ಥಾನದಲ್ಲಿದೆ. ತನ್ನ ರೆಡ್ಮಿ ನೋಟ್ ಸರಣಿ (Redmi Note), ಎಂಐ ಫೋನುಗಳಿಗೆ (Mi Smartphone) ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಿರುವಾಗ ಶವೋಮಿ ಕಂಪನಿಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಇದೇ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಸ್ಮಾರ್ಟ್​ಫೋನ್​ ಇನ್ನುಂದೆ ನಾವು ಮಾರಾಟ ಮಾಡುವುದಿಲ್ಲ ಎಂದು ಹೇಳಿದೆ. ಹೌದು, ಶವೋಮಿ ಸಂಸ್ಥೆಯು ತನ್ನ ಜನಪ್ರಿಯ ‘ಎಂಐ 11 ಅಲ್ಟ್ರಾ’ (Mi 11 Ultra) ಫೋನ್‌ ಮಾರಾಟವನ್ನು ಭಾರತದಲ್ಲಿ ಬಂದ್ ಮಾಡಿದೆ.

ಶವೋಮಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಲಿಸ್ಟ್‌ನಿಂದ ಸಹ ತೆಗೆದುಹಾಕಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್ ದೇಶದಲ್ಲಿ ಮತ್ತೆ ಮಾರಾಟವಾಗುವುದಿಲ್ಲ ಎಂದು ಇಂಡಿಯಾ ಟುಡೇ ವರದಿಯಿಂದ ತಿಳಿದು ಬಂದಿದೆ. ಯಾಕಂದ್ರೆ, ಭಾರತದಲ್ಲಿ ಸೇಲ್ ಮಾಡಲೆಂದು ಕಳಿಹಿಸದ ಈ ಫೋನ್ ಈಗಾಗಲೇ ಖಾಲಿಯಾಗಿದೆಂತೆ. ಹೊಸ ಫೋನನ್ನು ಕೂಡ ಕಳುಹಿಸುವುದಿಲ್ಲ ಎಂದು ಹೇಳಿದೆ. ಇದರ ಬದಲಾಗಿ ಮುಂದಿನ ವರ್ಷ 2022ಕ್ಕೆ ಇದೇ ಎಂಐ 11 ಅಲ್ಟ್ರಾ ಹೊಸ ಅವತಾರದಲ್ಲಿ ಮತ್ತೆ ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ ಎಂದು ತಿಳಿದುಬಂದಿದೆ.

ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ 1,440×3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.81-ಇಂಚಿನ WQHD + E4 ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಇದರ ಹಿಂಭಾಗದಲ್ಲಿ ಕೂಡ 1.1-ಇಂಚಿನ ಡಿಸ್‌ಪ್ಲೇ ಇದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ MIUI 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಎಫ್ / 2.2 ಲೆನ್ಸ್, ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದ್ದು, ಇದು 120x ಡಿಜಿಟಲ್ ಜೂಮ್ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಜೊತೆಗೆ ಇದು 67 Wವೈರ್ಡ್ ಮತ್ತು ವಾಯರ್‌ಲೆಸ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದ 10 Wರಿವರ್ಸ್ ವೈರ್ಲೆಸ್ ಚಾರ್ಜಿಂಗ್ ಅನ್ನು ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ 6, ಬ್ಲೂಟೂತ್ ವಿ 5.2, GPS, AGPS, ನ್ಯಾವಿಕ್ ಸಪೋರ್ಟ್, NFC ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ. ಎಂಐ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಏಕೈಕ 12GB RAM ಮತ್ತು 256GB ರೂಪಾಂತರಕ್ಕೆ 69,990 ರೂ. ಬೆಲೆಯನ್ನು ನಿಗದಿ ಮಾಡಲಾಗಿತ್ತು.

Nokia XR20: ಮಿಲಿಟರಿ ಗ್ರೇಡ್ ಡಿಸೈನ್​ನ ನೋಕಿಯಾ XR20 ಸ್ಮಾರ್ಟ್​ಫೋನ್ ಭಾರದಲ್ಲಿ ಖರೀದಿಗೆ ಲಭ್ಯ: ಬೆಲೆ ಎಷ್ಟು?

Karbonn Smart TV: ಗಮನಿಸಿ: ಭಾರತದಲ್ಲಿ ಕೇವಲ 7,990 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ ಟಿವಿ: ಯಾವುದು ಗೊತ್ತೇ?

(Xiaomi will not sell more units of Mi 11 Ultra in India anymore Here is the reason why)

ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ಪಕ್ಷದ ಸಾರಥ್ಯ ನನ್ನ ಕೈಗೆ ಕೊಟ್ಟರೆ 150 ಸೀಟು ಗೆಲ್ಲುತ್ತೇನೆ: ಯತ್ನಾಳ್
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ರೈಲಿನಲ್ಲಿ ಅಂಗಿ, ಪ್ಯಾಂಟ್ ಬಿಚ್ಚಿ ನಿಂತ ಪ್ರಯಾಣಿಕ: ಮುಂದೇನಾಯ್ತು?
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ದೆಹಲಿ: ಸಿದ್ದರಾಮಯ್ಯ ವರ್ತನೆ ಒತ್ತಡದಲ್ಲಿರುವುದನ್ನು ಸ್ಪಷ್ಟಪಡಿಸುತ್ತದೆ
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ