AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಾಹ ನೀಗಿಸಲು ಬಂದ ಚಿರತೆಯ ಮೇಲೆರಗಿದ ಮೊಸಳೆ; ಮುಂದೆನಾಯ್ತು ನೋಡಿ

ವನ್ಯ ಜೀವಿಗಳಿಗೆ ಸಂಬಂಧಿಸಿದ ವಿಡಿಯೋಗಳು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತವೆ. ಅವುಗಳಲ್ಲಿ ಪ್ರಾಣಿಗಳ ನಡುವಿನ ಘೋರ ಕಾಳಗದ ಕೆಲವೊಂದು ವಿಡಿಯೋಗಳು ತುಂಬಾ ಭಯಾನಕವಾಗಿರುತ್ತವೆ. ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಸರೋವರದ ಬಳಿ ದಾಹ ನೀಗಿಸಲು ಬಂದಂತಹ ಚಿರತೆಯನ್ನೇ ಮೊಸಳೆಯೊಂದು ನುಂಗಿ ನೀರು ಕುಡಿದಿದೆ.

Viral Video: ದಾಹ ನೀಗಿಸಲು ಬಂದ   ಚಿರತೆಯ ಮೇಲೆರಗಿದ  ಮೊಸಳೆ; ಮುಂದೆನಾಯ್ತು ನೋಡಿ
A crocodile attacked a leopard Image Credit source: Pinterest
ಮಾಲಾಶ್ರೀ ಅಂಚನ್​
| Edited By: |

Updated on: Feb 04, 2024 | 5:37 PM

Share

ವನ್ಯ ಲೋಕದಲ್ಲಿ ಬೇಟೆಗಾಗಿ ಪ್ರಾಣಿಗಳ ನಡುವೆ ಪರಸ್ಪರ ಕಾದಾಟಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಹೊಂಚು ಹಾಕಿ ಬೇಟೆಯಾಡುವುದೆಂದರೆ ಹುಲಿ, ಚಿರತೆ ಮುಂತಾದ ಬಲಿಷ್ಠ ಜೀವಿಗಳಿಗೆ ಬಲು ಸುಲಭ. ಅದರಲ್ಲೂ ಚಿರತೆಗಳು ಬೇಟೆಯಲ್ಲಿ ಪಳಗಿದ ಪ್ರಾಣಿಗಳು. ಅವುಗಳು ಗುರಿ ಇಟ್ಟು ಬೇಟೆಗಿಳಿದರೆ ಅದರಲ್ಲಿ ವಿಫಲವಾಗುವುದು ಬಹಳ ಕಡಿಮೆ. ಆದರೆ ಇಲ್ಲೊಂದು ಚಿರತೆ ಮಾತ್ರ ದುರಾದೃಷ್ಟವಶಾತ್ ಮೊಸಳೆಯ ದಾಳಿಗೆ ಬಲಿಯಾಗಿದೆ. ಹೌದು ಸರೋವರದ ಬಳಿ ದಾಹ ತಣಿಸಿಕೊಳ್ಳಲೆಂದು ಬಂದಂತಹ ಚಿರತೆಯನ್ನು ಮೊಸಳೆಯೊಂದು ಹೊಂಚು ಹಾಕಿ ಬೇಟೆಯಾಡಿದೆ. ಈ ಭಯಾನಕ ಶಿಕಾರಿಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಚಿರತೆ ಮಾತ್ರವಲ್ಲ ನೀರಿನಲ್ಲಿರುವ ಮೊಸಳೆಗಳು ಕೂಡಾ ಹೊಂಚು ಹಾಕಿ ಬೇಟೆಯಾಡುವುದರಲ್ಲಿ ಎತ್ತಿದ ಕೈ. ಈ ಮೊಸಳೆಗಳು ಸರೋವರ, ನದಿ, ಕೆರೆಯ ಬಳಿ ನೀರು ಕುಡಿಯಲು ಬರುವಂತಹ ದೈತ್ಯ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಈಗ ಅದೇ ರೀತಿ ದೈತ್ಯ ಮೊಸಳೆಯೊಂದು ಸರೋವರದ ಬಳಿ ದಾಹ ತಣಿಸಿಕೊಳ್ಳಲು ಬಂದಂತಹ ಚಿರತೆಯನ್ನೇ ನುಂಗಿ ನೀರು ಕುಡಿದಿದೆ. ಈ ವೈರಲ್ ವಿಡಿಯೋವನ್ನು @TheBrutalNature ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಬಾಯಾರಿದ ಚಿರತೆಯೊಂದು ದಾಹ ತಣಿಸಲು ಸರೋವರದ ಬಳಿ ಬರುವ ದೃಶ್ಯವನ್ನು ಕಾಣಬಹುದು. ಅತ್ತ ಸರೋವರದಲ್ಲಿದ್ದ ಮೊಸಳೆ ಇವತ್ತಿನ ಆಹಾರಕ್ಕೆ ಯಾವುದಾದರೂ ಪ್ರಾಣಿ ಸಿಗುತ್ತಾ ಅಂತ ಹೊಂಚು ಹಾಕುತ್ತಾ ಕಾದು ಕುಳಿತಿತ್ತು. ಅಷ್ಟರಲ್ಲಿ ಈ ಚಿರತೆ, ನೀರು ಕುಡಿಯಲು ಸರೋವರಕ್ಕೆ ಇಳಿದೇ ಬಿಡುತ್ತೆ. ಇದೇ ಬೇಟೆಗೆ ಒಳ್ಳೆ ಕ್ಷಣ ಎಂದು ಭಾವಿಸಿದ ಮೊಸಳೆ ಚಿರತೆಯ ಮೇಲೆರಗಿ, ಅದರ ಕುತ್ತಿಗೆಯನ್ನು ಕಚ್ಚಿಹಿಡಿದು ನೀರಿಗೆ ಎಳೆದೊಯ್ದು ಬಂದಿದೆ. ಜೀವ ಉಳಿಸುವ ಸಲುವಾಗಿ ಚಿರತೆ ಹೋರಾಡಿದರೂ, ಜಯಿಸದೆ ಮೊಸಳೆಯ ಬಾಯಿಗೆ ಆಹಾರವಾಗಿದೆ. ಈ ದೃಶ್ಯವನ್ನು ಕಣ್ಣಾರೆ ಕಂಡಂತಹ ಮೊಸಳೆಗೆ ಆಹಾರವಾದ ಚಿರತೆಯ ಸಂಗಾತಿ ದುಃಖತಪ್ತವಾಗಿ ಕುಳಿತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಫೆಬ್ರವರಿ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ದೃಶ್ಯ ಕಾಣಲು ತುಂಬಾ ಭಯಾನಕವಾಗಿದೆʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬೇಟೆಗಾರನನ್ನೇ ಬೇಟೆಯಾಡಿದ ಮೊಸಳೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಕ್ರೇಜಿಯಾಗಿದೆʼ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ