AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹರಾಜಿನಲ್ಲಿ 1.4 ಲಕ್ಷ ರೂ.ಗೆ ಮಾರಾಟವಾದ ಲಿಂಬೆಹಣ್ಣು; ಏನಿದರ ವಿಶೇಷತೆ?

ಇಂಗ್ಲೆಂಡಿನಲ್ಲಿ ಒಂದು ಲಿಂಬೆ ಹಣ್ಣು 1.4 ಲಕ್ಷ ರೂ ಗೆ ಹರಾಜಿನ ಮೂಲಕ ಮಾರಾಟವಾಗಿದೆ. ಈ ನಿಂಬೆ 19 ನೇ ಶತಮಾನದಷ್ಟು ಹಳೆಯದಾಗಿದ್ದು, ಇಂಗ್ಲೆಂಡಿನ ಕುಟುಂಬವೊಂದು ಇದನ್ನು ಪತ್ತೆಹಚ್ಚಿದೆ.ಈ ಲಿಂಬೆಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ? ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​​

Viral: ಹರಾಜಿನಲ್ಲಿ 1.4 ಲಕ್ಷ ರೂ.ಗೆ ಮಾರಾಟವಾದ ಲಿಂಬೆಹಣ್ಣು; ಏನಿದರ ವಿಶೇಷತೆ?
285-year old lemonImage Credit source: instagram
ಅಕ್ಷತಾ ವರ್ಕಾಡಿ
|

Updated on:Feb 04, 2024 | 6:29 PM

Share

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಖರೀದಿಸುವಾಗ 5ರೂ. ಒಂದು ಲಿಂಬೆ ಅಥವಾ ಕೆಲವೊಮ್ಮೆ 10 ರೂಪಾಯಿಗೆ  3 ಲಿಂಬೆಯನ್ನು ಅಂಗಡಿಯವರು ಕೊಡುವುದುಂಟು. ಆದರೆ 1.4 ಲಕ್ಷ ರೂಪಾಯಿ ಬೆಲೆ ಬಾಳುವ ಲಿಂಬೆ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದೀಗಾ ಇಂಗ್ಲೆಂಡಿನಲ್ಲಿ ಒಂದು ಲಿಂಬೆ ಹಣ್ಣು 1.4 ಲಕ್ಷ ರೂ. ಗೆ ಹರಾಜಿನ ಮೂಲಕ ಮಾರಾಟವಾಗಿದೆ. ಆದರೆ ಒಂದು ಲಿಂಬೆ ಹಣ್ಣು ಅಷ್ಟೊಂದಯ ದುಬಾರಿ ಏಕೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಕಾಣಬಹುದು. ಆದ್ದರಿಂದ ಈ ಲಿಂಬೆಗೆ ಯಾಕಿಷ್ಟು ಬೆಲೆ? ಏನಿದರ ವಿಶೇಷತೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಇಲ್ಲಿದೆ  ನೋಡಿ ದುಬಾರಿ ನಿಂಬೆಹಣ್ಣು:

ಈ ನಿಂಬೆ 19 ನೇ ಶತಮಾನದಷ್ಟು ಹಳೆಯದು. ಇಂಗ್ಲೆಂಡಿನ ಕುಟುಂಬವೊಂದು ಈ ನಿಂಬೆ ಹಣ್ಣನ್ನು ಪತ್ತೆಹಚ್ಚಿದೆ. ವರದಿಗಳ ಪ್ರಕಾರ ಇದು 1739ನೇ ಕಾಲದ್ದು, ಜೊತೆಗೆ ನಿಂಬೆಹಣ್ಣಿನ ಮೇಲೆ ಸಂದೇಶಗಳನ್ನು ಬರೆದಿದ್ದು,ಮಿಸ್ ಇ. ಬ್ಯಾಕ್ಸ್ಟರ್‌ಗೆ , ಪಿ. ಲ್ಯೂ ಫ್ರಾಂಚಿನಿ ಅವರು ನವೆಂಬರ್ 3, 1739 ರಂದು ಉಡುಗೊರೆಯಾಗಿ ನೀಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್​​ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ

ಬ್ರೆಟೆಲ್ ಹರಾಜು ಹೌಸ್ ಮಾಲೀಕ ಡೇವಿಡ್ ಬ್ರೆಟೆಲ್ ಈ ನಿಂಬೆ ಹಣ್ಣನ್ನು ಹರಾಜಿಗೆ ಇಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಅದನ್ನು ಯಾರು ಖರೀದಿಸುತ್ತಾರೆ? ಎಂಬ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಜನವರಿ 31 ರಂದು ಶತಮಾನದಷ್ಟು ಹಳೆಯದಾದ ಈ ನಿಂಬೆಹಣ್ಣು $1,780 ಅಂದರೆ ಭಾರತದ ಕರೆನ್ಸಿಯ ಪ್ರಕಾರ ಸುಮಾರು 1.4 ಲಕ್ಷ ರೂ. ಗೆ ಮಾರಾಟವಾಯಿತು. ಬ್ರೆಟಲ್ಸ್ ಹರಾಜು ಹೌಸ್ ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:25 pm, Sun, 4 February 24

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್