AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡೆಯ ಆಡಿದ ಒಂದೇ ಒಂದು ಪದ ಕೇಳಿ ರೊಚ್ಚಿಗೆದ್ದ ಶ್ವಾನ; ಅಷ್ಟಕ್ಕೂ ಆತ ಹೇಳಿದ್ದೇನು? ಮಜವಾದ ವಿಡಿಯೋ ಇಲ್ಲಿದೆ

Viral Video: ಅಂತರ್ಜಾಲದಲ್ಲಿ ಸಾಕು ಪ್ರಾಣಿಯ ವಿಡಿಯೋಗಳು ಮನಗೆಲ್ಲುತ್ತವೆ. ಕೆಲವು ಮನುಷ್ಯರಂತೆ ಪ್ರಾಣಿಗಳಿಗೂ ವೈದ್ಯರೆಂದರೆ ದೂರ. ಪ್ರಸ್ತುತ ಶ್ವಾನವೊಂದು ಪಶುವೈದ್ಯರ ಹೆಸರು ಕೇಳಿದ ತಕ್ಷಣ ಪ್ರತಿಕ್ರಿಯೆ ನೀಡುವುದು ನೆಟ್ಟಿಗರ ಮನಗೆದ್ದಿದೆ.

ಒಡೆಯ ಆಡಿದ ಒಂದೇ ಒಂದು ಪದ ಕೇಳಿ ರೊಚ್ಚಿಗೆದ್ದ ಶ್ವಾನ; ಅಷ್ಟಕ್ಕೂ ಆತ ಹೇಳಿದ್ದೇನು? ಮಜವಾದ ವಿಡಿಯೋ ಇಲ್ಲಿದೆ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Updated By: shivaprasad.hs|

Updated on: Jan 08, 2022 | 2:46 PM

Share

ಅಂತರ್ಜಾಲದಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಸಾಕುಪ್ರಾಣಿಯ ವಿಡಿಯೋಗಳು ಜನರ ಮನಗೆಲ್ಲುತ್ತವೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಹಲವರಿಗೆ ಪ್ರಾಣಿಗಳೆಂದರೆ ಪ್ರಿಯ. ಅಲ್ಲದೇ ಅವುಗಳ ತುಂಟಾಟ ನೋಡಿ ಖುಷಿಪಡುತ್ತಾರೆ. ಅಂತಹ ಪ್ರಾಣಿಗಳ ತುಂಟಾಟದ ವಿಡಿಯೋಗಳನ್ನು ನೋಡುವಾಗ ತಾವು ಸಾಕಿದ ಪ್ರಾಣಿಗಳೂ ನೆನಪಾಗುವುದುಂಟು. ಒಟ್ಟಿನಲ್ಲಿ ನೋಡಿ ಮನಸ್ಸು ಹಗುರಾಗಲು ವಿವಿಧ ಕಾರಣಗಳು. ಆದ್ದರಿಂದಲೇ ಇಂತಹ ವಿಡಿಯೋಗಳಿಗೆ ಬಹುದೊಡ್ಡ ಪ್ರೇಕ್ಷಕ ವರ್ಗ ಇದೆ. ಇತ್ತೀಚೆಗೆ ಪ್ರಾಣಿ ಪ್ರಿಯರ ಮನಸೆಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಟಿಕ್​ಟಾಕ್​ನಲ್ಲಿ ವೈರಲ್ ಆಗಿದ್ದ ವಿಡಿಯೋ ಈಗ ಹಲವಾರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಶೇರ್ ಆಗುತ್ತಿದೆ. ಪ್ರಸ್ತುತ ರೆಡ್ಡಿಟ್​ನಲ್ಲಿ ಈ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದು, ಜನರ ಮೆಚ್ಚುಗೆ ಪಡೆಯುತ್ತಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂಬ ಕುತೂಹಲವೇ? ವಿಷಯ ಇಷ್ಟೇ. ಶ್ವಾನದ ಮಾಲಿಕ ಶೂ ತೆಗೆದುಕೊಂಡು ಅದನ್ನು ಮೊಬೈಲ್​ನಂತೆ ಕಿವಿಗಿಟ್ಟುಕೊಳ್ಳುತ್ತಾನೆ. ಆಗ ಶ್ವಾನ ಸುಮ್ಮನಿರುತ್ತದೆ. ಆದರೆ ನಂತರದಲ್ಲಿ ಆತ ಮಾತನಾಡುತ್ತಾ ‘ಪಶುವೈದ್ಯರ’ (ವೆಟ್) ಹೆಸರು ಹೇಳುತ್ತಾನೆ. ಅದನ್ನು ಕೇಳಿದ ನಾಯಿ ರೊಚ್ಚಿಗೆದ್ದು ಪ್ರತಿಕ್ರಿಯೆ ನೀಡಿದೆ. ಅದು ಹೇಗೆ ಪ್ರತಿಕ್ರಿಯೆ ನೀಡಿದೆ? ಮಜವಾದ ವಿಡಿಯೋ ನೋಡಿ.

ವಿಡಿಯೋ ಇಲ್ಲಿದೆ:

ಶ್ವಾನವು ಒಡೆಯನ ಮಾತಿಗೆ ಪ್ರತಿಯಾಗಿ ಕೂಗುತ್ತಾ ಪ್ರತಿಕ್ರಿಯೆ ನೀಡಿದ್ದು ಎಲ್ಲರ ಮನಗೆದ್ದಿದೆ. ಅಲ್ಲದೇ ರೆಡ್ಡಿಟ್​ನಲ್ಲಿ ‘ಶ್ವಾನಕ್ಕೆ ಪಶುವೈದ್ಯರನ್ನು ಕಂಡರೆ ಬಹಳ ಸಿಟ್ಟಿರಬೇಕು’ ಎಂದು ಕ್ಯಾಪ್ಶನ್ ನೀಡಲಾಗಿದೆ. ನೆಟ್ಟಿಗರೂ ಇದಕ್ಕೆ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರಂತೂ ‘ಶ್ವಾನವು ಒಡೆಯ ಮೊಬೈಲ್ ಬದಲು ಶೂ ಇಟ್ಟುಕೊಂಡಿದ್ದಾನೆ ಎಂದು ಅವನನ್ನು ಎಚ್ಚರಿಸುತ್ತಿರಬಹುದು’ ಎಂದು ಕಾಲೆಳೆದಿದ್ದಾರೆ. ಮತ್ತೆ ಹಲವರು ಶ್ವಾನದ ಬುದ್ಧಿಮತ್ತೆಗೆ ಶಹಬ್ಬಾಸ್ ಎಂದಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

ರಶ್ಮಿಕಾ ಮಂದಣ್ಣ ವಿಚಾರದಲ್ಲಿ ‘ಪುಷ್ಪ’ ಚಿತ್ರತಂಡದಿಂದ ದೊಡ್ಡ ಅಚಾತುರ್ಯ; ಹೆಸರನ್ನೇ ಬದಲಿಸಿದ ನಿರ್ದೇಶಕರು

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ