AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋರಲು ಬೀಳಲು ಕೂಡ ಬಾರದ ಶಿಶುವಿನ ಬಾಯಲ್ಲಿ ಸಂಸ್ಕೃತ ಶ್ಲೋಕಗಳು!

ಈ ಮುದ್ದಾದ ಮಗುವಿನ ತಾಯಿ ಮಾಡಿದ್ದು ಅದೇ. ಅವರು ಒಂದೊಂದಾಗಿ ಶ್ಲೋಕ ಹೇಳುತ್ತಾ ಹೋಗುತ್ತಾರೆ ಮತ್ತು ಮಗು ಅದನ್ನು ಪೂರ್ತಿ ಮಾಡುತ್ತದೆ. ಅಮ್ಮನ ಗರ್ಭದಲ್ಲಿರುವಾಗಲೇ ಮಗು ಶ್ಲೋಕ ಪಠಿಸುವುದನ್ನು ಕಲಿತಿದೆ ಎಂದು ಹೇಳಲಾಗುತ್ತಿದೆ.

ಬೋರಲು ಬೀಳಲು ಕೂಡ ಬಾರದ ಶಿಶುವಿನ ಬಾಯಲ್ಲಿ ಸಂಸ್ಕೃತ ಶ್ಲೋಕಗಳು!
ಪವಾಡಸದೃಶ ಮಗು
TV9 Web
| Edited By: |

Updated on: Jul 23, 2022 | 4:39 PM

Share

ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ನಮಗೆ ಬಗೆಬಗೆಯ ವಿಡಿಯೋ ನೋಡಲು ಸಿಗುತ್ತವೆ ಮಾರಾಯ್ರೇ. ಆದರೆ ಇಂಥದೊಂದು ವಿಡಿಯೋವನ್ನು ನೀವ್ಯಾವತ್ತೂ ನೋಡಿರಲಿಕ್ಕಿಲ್ಲ. ಬೋರಲು ಬೀಳಲು ಕೂಡ ಬಾರದ ಮಗುವೊಂದು ತನ್ನಮ್ಮನ ಜೊತೆ ಸಂಸ್ಕೃತ (Sanskrit) ಶ್ಲೋಕಗಳನ್ನು ಹೇಳುತ್ತಿರುವುದನ್ನು ಚಿತ್ರಿಸಿರುವ ವಿಡಿಯೋ ಇದು. ಆಫ್ ಕೋರ್ಸ್ ನಮ್ಮಂತೆ ನೀವು ಕೂಡ ಈ ಪವಾಡವನ್ನು (miracles) ನಂಬಲಾರಿರಿ. ವಿಡಿಯೋ ನೋಡಿದವರೆಲ್ಲ ಈ ಬೊಚ್ಚುಬಾಯಿ ಮಗುವನ್ನು ‘ಕಲಿಯುಗದ ಅಭಿಮನ್ಯು’ ಎಂದು ಹೇಳುತ್ತಿದ್ದಾರೆ.

ವಿಡಿಯೋದಲ್ಲಿ ಮಗುವಿನ ಅಮ್ಮ ಶ್ಲೋಕ ಹೇಳುತ್ತಿದ್ದಾರೆ ಮತ್ತು ಪ್ರತಿಯೊಂದು ಶ್ಲೋಕದ ಕೊನೆ ಪದ ಉಚ್ಛರಿಸದೆ ನಿಲ್ಲಿಸಿಬಿಡುತ್ತಾರೆ. ಅದನ್ನು ಕೆಲವೇ ತಿಂಗಳು ಪ್ರಾಯದ ಮಗು ಹೇಳಿ ಬಿಡುತ್ತದೆ!

ಈ ಸುಂದರ ಮತ್ತು ಮನಸ್ಸು ಪುಳಕಿತಗೊಳಿಸುವ ವಿಡಿಯೋವನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗನ್ಕರ್ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ಲೋಕದ ಕೊನೆಯ ಶಬ್ದವನ್ನು ಮಗು ಸ್ಪಷ್ಟವಾಗಿ ಉಚ್ಛರಿಸುವುದು ವಿಸ್ಮಯಕಾರಿ ಸಂಗತಿ ಮಾರಾಯ್ರೇ. ಇದನ್ನು ಪುನ್ಸಾವನ್ ಸಂಸ್ಕಾರ ಅಂತ ಕರೆಯುತ್ತಾರೆಂದು ಜನ ಹೇಳುತ್ತಿದ್ದಾರೆ. ಅದರರ್ಥ ಮಹಿಳೆ ಗರ್ಭದಲ್ಲಿ ಮಗು ಬೆಳೆಯುತ್ತಿರುವಾಗ ಶ್ಲೋಕಗಳನ್ನು ಹೇಳುತ್ತಾಳೆ ಅಥವಾ ಅದಕ್ಕೆ ಬೋಧಿಸುತ್ತಾಳೆ.

ಈ ಮುದ್ದಾದ ಮಗುವಿನ ತಾಯಿ ಮಾಡಿದ್ದು ಅದೇ. ಅವರು ಒಂದೊಂದಾಗಿ ಶ್ಲೋಕ ಹೇಳುತ್ತಾ ಹೋಗುತ್ತಾರೆ ಮತ್ತು ಮಗು ಅದನ್ನು ಪೂರ್ತಿ ಮಾಡುತ್ತದೆ. ಅಮ್ಮನ ಗರ್ಭದಲ್ಲಿರುವಾಗಲೇ ಮಗು ಶ್ಲೋಕ ಪಠಿಸುವುದನ್ನು ಕಲಿತಿದೆ ಎಂದು ಹೇಳಲಾಗುತ್ತಿದೆ.

ಹಿಂದೂ ಸಂಪ್ರದಾಯಗಳಲ್ಲಿ ಮಕ್ಕಳು ಚಿಕ್ಕವರಾಗಿರುವಾಗಲೇ 16 ಶಾಸ್ತ್ರಗಳನ್ನು ಕಲಿತಿರಬೇಕೆಂಬ ನಂಬಿಕೆಯಿದ್ದು ಅವುಗಳಲ್ಲಿ ಒಂದು ಪುನ್ಸಾವನ್ ಸಂಸ್ಕಾರ ಆಗಿದೆ. ಮಗುವಿಗೆ ಮೂರು ತಿಂಗಳು ಆದ ಬಳಿಕ ತಂದೆತಾಯಿಗಳು ಅದಕ್ಕೆ ಕಲಿಸಲು ಆರಂಭಿಸುತ್ತಾರೆ. ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿ ಮಹಿಳೆ ಪುನ್ಸಾವನ್ ಸಂಸ್ಕಾರ ಪಠಿಸುತ್ತಾಳೆ ಮತ್ತು ಗರ್ಭದಲ್ಲಿರುವ ಮಗು ಅದನ್ನು ಗ್ರಹಿಸುತ್ತಾ ಹೋಗುತ್ತದೆ.

ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನ ವೀಕ್ಷಿಸಿದ್ದಾರೆ. ನೋಡಿದವರೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ರೀಟ್ವೀಟ್ ಮಾಡುತ್ತಿದ್ದಾರೆ. ಸುಭದ್ರೆಯ ಗರ್ಭದಲ್ಲಿರುವಾಗಲೇ ಅಭಿಮನ್ಯು ಚಕ್ರವ್ಯೂಹ ಭೇದಿಸುವುದನ್ನು ಕಲಿತಿದ್ದ ಎಂದು ಮಹಾಭಾರತ ಹೇಳುತ್ತದೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?