AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕ್ಯಾನ್ಸರ್​​ ಗೆದ್ದು ಬಂದ ಪೊಲೀಸ್​​​ ಇಲಾಖೆಯ ಶ್ವಾನ ಸಿಮ್ಮಿ

ಪಂಜಾಬ್​​ನ ಪೊಲೀಸ್​​​​​ ಶ್ವಾನ ಪಡೆಯ ಲ್ಯಾಬ್ರಡಾರ್ ತಳಿಯ ಸಿಮ್ಮಿ ಹೆಸರಿನ ಶ್ವಾನ ಸಾಕಷ್ಟು ದಿನಗಳಿಂದ ಕ್ಯಾನ್ಸರ್​​​​​ನಿಂದ ಬಳಲುತ್ತಿತ್ತು. ಅದೃಷ್ಟವಶಾತ್‌ ಸಿಮ್ಮಿ ಕ್ಯಾನ್ಸರ್ ಮಹಾಮಾರಿಯಿಂದ​​ ಗೆದ್ದು ಬಂದಿದ್ದು, ಮತ್ತೇ ತನ್ನ ಕರ್ತವ್ಯಕ್ಕೆ ಮರಳಿದೆ.

Viral News: ಕ್ಯಾನ್ಸರ್​​ ಗೆದ್ದು ಬಂದ ಪೊಲೀಸ್​​​ ಇಲಾಖೆಯ ಶ್ವಾನ ಸಿಮ್ಮಿ
labrador named Simmy beat cancerImage Credit source: Twitter
ಅಕ್ಷತಾ ವರ್ಕಾಡಿ
|

Updated on:May 19, 2023 | 6:57 PM

Share

ಕ್ಯಾನ್ಸರ್​​​ ಕಾಯಿಲೆಯಲ್ಲಿ ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಇಲ್ಲೊಂದು ಶ್ವಾನ ಕ್ಯಾನ್ಸರ್​​​ನಿಂದ ಗೆದ್ದು, ಗುಣಮುಖವಾಗಿ ಮತ್ತೇ ತನ್ನ ಕರ್ತವ್ಯಕ್ಕೆ ಹಾಜರಾಗಿದೆ. ಪಂಜಾಬ್​​ನ ಪೊಲೀಸ್​​​​​ ಶ್ವಾನ ಪಡೆಯ ಲ್ಯಾಬ್ರಡಾರ್ ತಳಿಯ ಸಿಮ್ಮಿ ಹೆಸರಿನ ಶ್ವಾನ ಸಾಕಷ್ಟು ದಿನಗಳಿಂದ ಕ್ಯಾನ್ಸರ್​​​​​ನಿಂದ ಬಳಲುತ್ತಿತ್ತು. ಕ್ಯಾನ್ಸರ್​​​ ಎಂದಾಕ್ಷಣ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ. ಯಾಕೆಂದರೆ ಈ ಕಾಯಿಲೆಯಿಂದ ಬಳಲುತ್ತಿದ್ದರೆ, ಬದುಕುಳಿಯುವ ಸಂಖ್ಯೆ ತೀರಾ ಕಡಿಮೆ. ಆದರೆ ಸಿಮ್ಮಿಗೆ ಪಂಜಾಬ್​​ನ ಪೊಲೀಸ್ ತಂಡದಿಂದ ಸರಿಯಾದ ಸಮಯಕ್ಕೆ ವೈದ್ಯರನ್ನು ನೇಮಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಅದೃಷ್ಟವಶಾತ್‌ ಸಿಮ್ಮಿ ಕ್ಯಾನ್ಸರ್ ಮಹಾಮಾರಿಯಿಂದ​​ ಗೆದ್ದು ಬಂದಿದ್ದು, ಮತ್ತೇ ತನ್ನ ಕರ್ತವ್ಯಕ್ಕೆ ಮರಳಿದೆ.

ಕ್ಯಾನ್ಸರ್​​ನಿಂದ ಗುಣಮುಖವಾದ ಬಳಿಕ ಪೊಲೀಸ್ ಅಧಿಕಾರಿಯೊಂದಿಗೆ ಸಿಮ್ಮಿ ಶ್ವಾನ ಓಡಾಡುತ್ತಿರುವ ವಿಡಿಯೋವನ್ನು ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟರ್​​​ ಖಾತೆಯಲ್ಲಿ ಶೇರ್​​ ಮಾಡಲಾಗಿದೆ. ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ‘ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸ್ತಿತ್ವಕ್ಕಾಗಿ ಮುಗ್ಧಜೀವಗಳನ್ನು ಬಳಸಿಕೊಂಡಿದ್ದೀರಿ!’

ಎಎನ್‌ಐ ಟ್ವೀಟ್​​ಗೆ ರೀಟ್ವೀಟ್​​ ಮಾಡಿದ ಫರೀದ್‌ ಕೋಟ್‌ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಜಿತ್‌ ಸಿಂಗ್‌, “ಸಿಮ್ಮಿ ದೀರ್ಘಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿತ್ತು. ಈಗ ಇದರ ಆರೋಗ್ಯ ಸುಧಾರಿಸಿದೆ. ಮುಂದೆ ಪಂಜಾಬ್​​ನ ಪೊಲೀಸ್ ಇಲಾಖೆಯ ವಿರೋಧಿ ವಿಧ್ವಂಸಕ ತಪಾಸಣೆ ಸಹಾಯ ಮಾಡಲಿದ್ದು, ಮತ್ತೆ ತನ್ನ ಕರ್ತವ್ಯವದಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ಹೇಳಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ವಿಡಿಯೋ ಸಾಕಷ್ಟು ಲೈಕ್​​,ಕಾಮೆಂಟ್​​ ಹಾಗೂ ಶೇರ್​​ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಶ್ವಾನವನ್ನು ಆರೋಗ್ಯವಾಗಿ ನೋಡಿಕೊಳ್ಳಿ ಎಂದು ಸಾಕಷ್ಟು ನೆಟ್ಟಿಗರು​​​ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 6:57 pm, Fri, 19 May 23

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ