AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಚೀನ ಈಜಿಪ್ಟಿ ಪಿರಮಿಡ್ ತೆರೆದ ಪುರಾತತ್ತ್ವಜ್ಞ; ಮೈ ಜುಮ್ ಎನಿಸುವ ಅನುಭವವನ್ನು ಹಂಚಿಕೊಂಡ ರಾಮಿ ರೊಮಾನಿ!

600 ವರ್ಷಗಳಿಂದ ತೆರೆಯದ ಪುರಾತನ ಈಜಿಪ್ಟಿನ ಸಮಾಧಿಯಾದ ಪಿರಮಿಡ್ ಒಳಗೆ ನಡೆದ, ಪುರಾತತ್ತ್ವ ಶಾಸ್ತ್ರಜ್ಞ ರಾಮಿ ರೊಮಾನಿ ರಕ್ತವನ್ನು ಕೆಮ್ಮುತ್ತಾ, ಭ್ರಮೆಗೆ ಒಳಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರಾಚೀನ ಈಜಿಪ್ಟಿ ಪಿರಮಿಡ್ ತೆರೆದ ಪುರಾತತ್ತ್ವಜ್ಞ; ಮೈ ಜುಮ್ ಎನಿಸುವ ಅನುಭವವನ್ನು ಹಂಚಿಕೊಂಡ ರಾಮಿ ರೊಮಾನಿ!
ರಾಮಿ ರೊಮಾನಿ
TV9 Web
| Updated By: ನಯನಾ ಎಸ್​ಪಿ|

Updated on: May 19, 2023 | 5:17 PM

Share

1920 ರ ದಶಕದಲ್ಲಿ ಹೊವಾರ್ಡ್ ಕಾರ್ಟರ್ ಅವರ ಹಲವಾರು ಸಂಶೋಧನಾ ಸಿಬ್ಬಂದಿಗಳು ಟುಟಾಂಖಾಮನ್ (Tutankhamun) ಸಮಾಧಿಯನ್ನು ಕಂಡುಹಿಡಿದು ಪ್ರವೇಶಿಸಿದ ಕೂಡಲೇ ಅಲ್ಲೇ ನಶಿಸಿದರು ಎಂಬ ಪುರಾವೆಗಳಿವೆ.  ವಿಷಕಾರಿ ಅಂಶಗಳ ಬಿಡುಗಡೆಯು ಅವರ ಸಾವಿಗೆ ಕಾರಣವಾಯಿತು ಎಂದು ಕೆಲವರು ಹೇಳುತ್ತಾರೆ, ಆದರೆ ಇತರರು ಸಮಾಧಿ (Pyramid) ಶಾಪಗ್ರಸ್ತವಾಗಿದೆ (Curse) ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಏನಾಯಿತು? ಇಲ್ಲಿದೆ ಕೆಲವು ಕುತೂಹಲಕಾರಿ ಅಂಶಗಳು. ಇದೀಗ 600 ವರ್ಷಗಳಿಂದ ತೆರೆಯದ ಪುರಾತನ ಈಜಿಪ್ಟಿನ ಸಮಾಧಿಯಾದ ಪಿರಮಿಡ್ ಒಳಗೆ ನಡೆದ, ಪುರಾತತ್ತ್ವ ಶಾಸ್ತ್ರಜ್ಞ ರಾಮಿ ರೊಮಾನಿ ರಕ್ತವನ್ನು ಕೆಮ್ಮುತ್ತಾ, ಭ್ರಮೆಗೆ ಒಳಗಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಪುರಾತತ್ವ ಶಾಸ್ತ್ರಜ್ಞನು ರಕ್ತ ಕೆಮ್ಮುತ್ತ ಭ್ರಮೆಗೆ ಒಳಗಾದರು

ರಾಮಿ ರೊಮಾನಿ, ಈಜಿಪ್ಟಾಲಜಿಸ್ಟ್, ಪಿರಮಿಡ್ ಸಮಾಧಿಯೊಳಗಿರುವ ಮುಮ್ಮಿಯ ಶಾಪ ವಾಸ್ತವವಾಗಿ ಅಸ್ತಿತ್ವದಲ್ಲಿದೆ ಎಂದು ದೃಢವಾಗಿ ನಂಬುತ್ತಾರೆ. ರೋಮಾನಿ ಅವರು ಡಿಸ್ಕವರಿ ಚಾನೆಲ್‌ನ ‘ಮಮ್ಮಿ ಅನ್​ವ್ರಾಪ್ಡ್’​ ಶೋ ಚಿತ್ರೀಕರಣ ಮಾಡುವಾಗ ಬೈಬಲ್‌ನಿಂದ ಐತಿಹಾಸಿಕ ವ್ಯಕ್ತಿ ಎಂದು ಭಾವಿಸಿದ ಮಮ್ಮಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು, ಅಂದರೆ ಪ್ರಾಚೀನ ಈಜಿಪ್ಟ್ ರಾಜ ಅಖೆನಾಟೆನ್ ಸಮಾಧಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು.

“ಯಾರೂ ಅಲ್ಲಿಗೆ ಭೇಟಿ ನೀಡುವುದಿಲ್ಲ. ಅಖೆನಾಟೆನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಪ್ರಯತ್ನದಲ್ಲಿ ನಾನು ಅಲ್ಲಿಗೆ ಹೋಗಿದ್ದೆ” ಎಂದು ದಿ ಜೋರ್ಡಾನ್ ಹಾರ್ಬಿಂಗರ್ ಶೋನಲ್ಲಿ ಮಾತನಾಡುತ್ತಾ ರೋಮನಿ ಹೇಳಿದರು. “ನಾನು ಆ ಸಮಾಧಿಯೊಳಗೆ ಹೋಗುವವರೆಗೂ ಅಲ್ಲಿರುವ ಯಾವ ಕಾವಲುಗಾರರು ಅದನ್ನು ಇಲ್ಲಿಯವರೆಗೂ ತೆರೆದಿರಲಿಲ್ಲ. ಆ ಸಮಾಧಿಯು ಸುಮಾರು 600 ವರ್ಷಗಳಿಂದ ತೆರೆದಿರಲಿಲ್ಲ” ಎಂದು ರೋಮಣಿ ಹೇಳಿದರು.

ಒಳಗೆ ಹೋಗಿ ಸಮಾಧಿಯ ಕಲ್ಲಿನ ಮೇಲೆ ಬಡಿದಾಗ, ರಾಮೋನಿ ಮತ್ತು ಕಾವಲುಗಾರರು ಎಲ್ಲಾ ಹಾವುಗಳು ಶಬ್ದ ಮಾಡುತ್ತಾ ಹೊರಬರುವುದನ್ನು ಕೇಳಿಸಿಕೊಂಡರು ಎಂದು ರೋಮನಿ ಹೇಳಿದ್ದಾರೆ. “ನಾವು ಪ್ರವೇಶಿಸಿ ರೆಕಾರ್ಡಿಂಗ್ ಪ್ರಾರಂಭಿಸುತ್ತೇವೆ, ನಾನು ಆ ಸಮಾಧಿಯ ಕೆಳಗೆ ಹೋಗಿ ವಸ್ತುಗಳನ್ನು ಹುಡುಕುತ್ತೇನೆ, ಮತ್ತು ನಾನು ನಿಜವಾಗಿಯೂ ಕಷ್ಟದಲ್ಲಿ ಉಸಿರಾಡುತ್ತಿರುವಾಗ ಒಳಗೆ ಬಾವಲಿಗಳು ಕಾಣಿಸುತ್ತದೆ, ಜೊತೆಗೆ ಅಲ್ಲಿನ ವಾಸನೆಯು ತುಂಬಾ ಭೀಕರವಾಗಿತ್ತು, ತಕ್ಷಣ ನಂಗೇನೋ ಸರಿ ಇಲ್ಲ ಎಂದು ಅನಿಸಿ ಸಮಾಧಿಯಿಂದ ನಾನು ಹೊರಗೆ ಬರುತ್ತೇನೆ” ಎಂದು ತಮ್ಮ ಅನುಭವವನ್ನು ಹೇಳಿಕೊಂಡರು.

ನಂತರ ಒಳಗೆ ಪ್ರವೇಶಿಸಿದ ಜನರು ಜ್ವರದಿಂದ ಬಳಲುತ್ತಿದ್ದರು ಮತ್ತು ಅವರು ‘ಸಾಯಲಿದ್ದಾರೆ’ ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿತ್ತು. ಇದು ಪ್ರಾಯಶಃ ಮಮ್ಮಿಯ ಶಾಪವಾಗಿರಬಹುದು ಎಂದು ರೋಮನಿ ಹೇಳಿದರು. ಮರುದಿನ ಬೆಳಿಗ್ಗೆ ಅವರು ಹಾಸಿಗೆಯಲ್ಲಿ ಭಯಾನಕ ಸ್ಥಿತಿಯಲ್ಲಿದ್ದರು. “ನನಗೆ ಜ್ವರ 107 ಕ್ಕೆ ಏರಿತ್ತು” ಎಂದು ಅವರು ಹೇಳಿದರು.

ರೊಮಾನಿ ಹೇಳಿಕೆ ಪ್ರಕಾರ, “ನನ್ನನ್ನು ಪರೀಕ್ಷಿಸಲು ವೈದ್ಯರು ಬಂದಾಗ ನಾನು ರಕ್ತದ ಜೊತೆ ಕೆಮ್ಮುತ್ತಿದ್ದೆ, ಅಲ್ಲದೆ ನಾನು ಸಾಥಿ ಹೋಗುತ್ತೇನೆ ಎಂಬ ಭ್ರಮೆಯಲ್ಲಿದ್ದೆ. ನನ್ನನ್ನು ನೋಡಿ ನನ್ನ ಹೆಂಡತಿ ತುಂಬಾ ಹೆದರುತ್ತಿದ್ದರು. ನಾನು ಹೇಗೆ ಬದುಕಿದೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಡಾಲಿ ಜೈನ್, ಸೀರೆ ಉಡಿಸಲು 2 ಲಕ್ಷ ರೂಪಾಯಿ ಚಾರ್ಜ್ ಮಾಡುವ ಸ್ಟೈಲಿಸ್ಟ್!

“ನನಗೆ ಏನಾಗಿದೆ ಎಂದು ಯಾವುದೇ ವೈದ್ಯರಿಗೆ ತಿಳಿದಿರಲಿಲ್ಲ, ಅವರು ನನಗೆ ಆಂಟಿಬಯಾಟಿಕ್ ಹಾಕಿದರು, ನಂತರ ನಾನು ಎಲ್ಲಿಗೆಲ್ಲ ಹೋಗಿದ್ದೆ ಎಂದು ವೈದ್ಯರಿಗೆ ವಿವರಿಸಿದೆ. ಆಗ ವೈದ್ಯರು ‘ಬಾವಲಿಗಳು, ಹಾವುಗಳು, ಧೂಳು ಯಾವತ್ತೂ ಉತ್ತಮ ಸಂಯೋಜನೆಯಲ್ಲ , ನಾವು ನೋಡದ ಯಾವುದಾದರೂ ರೋಗಲಕ್ಷಣಗಳ ಸಂಯೋಜನೆ ಇದು ಆಗಿರಬಹುದು ಆದರೆ ಈ ಪ್ರತಿಜೀವಕಗಳು ಕೆಲಸ ಮಾಡುತ್ತವೆ ಎಂದು ನಾವು ಭಾವಿಸೋಣ, ಎಂದು ಹೇಳಿದರು. ಅದೃಷ್ಟವಶಾತ್ ಅವು ಕೆಲಸ ಮಾಡಿದವು.” ಎಂದು ತಮಗಾದ ಭಯಾನಕ ಅನುಭವವನ್ನು ಶೋನಲ್ಲಿ ಹಂಚಿಕೊಂಡರು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ