AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ

ನನಗೆ ಕಾರು ಡ್ರೈವ್ ಮಾಡುವುದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಈ ಬಸ್​ ಓಡಿಸಲು ಮುಂದಾದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಲಕನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು ಎಂದು ಯೋಗಿತಾ ಹೇಳಿದ್ದಾರೆ.

Video: ನಿರ್ಜನ ದಾರಿ ಮಧ್ಯೆ ಪ್ರಜ್ಞೆ ತಪ್ಪಿದ ಚಾಲಕ; 10 ಕಿಮೀ ದೂರ ಬಸ್​ ಓಡಿಸಿ ಆತನ ಪ್ರಾಣ ರಕ್ಷಿಸಿ, ಪ್ರಯಾಣಿಕರನ್ನು ಕಾಪಾಡಿದ ಮಹಿಳೆ
ಬಸ್ ಓಡಿಸಿದ ಮಹಿಳೆ
TV9 Web
| Updated By: Lakshmi Hegde|

Updated on:Jan 16, 2022 | 3:07 PM

Share

ಪುಣೆಯ 42 ವರ್ಷ ಮಹಿಳೆಯೊಬ್ಬರು ತಾವು ಮಾಡಿದ ಒಂದು ಒಳ್ಳೆಯ ಕೆಲಸದಿಂದ ಭರ್ಜರಿ ಸುದ್ದಿಯಾಗುತ್ತಿದ್ದಾರೆ. ಬಸ್​​ನಲ್ಲಿ ಹೋಗುತ್ತಿದ್ದಾಗ, ಆ ಬಸ್​​ನ ಚಾಲಕ ತೀವ್ರ ಅಸ್ವಸ್ಥರಾಗುತ್ತಾರೆ.  ಆಗ ಈ ಮಹಿಳೆ ತಮ್ಮ ಸಮಯಪ್ರಜ್ಞೆಯಿಂದ ಬಸ್​ ಓಡಿಸಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅದರೊಂದಿಗೆ ಪ್ರಯಾಣಿಕರನ್ನೂ ಅಪಾಯದಿಂದ ಪಾರು ಮಾಡಿದ್ದಾರೆ.  ಮಹಾರಾಷ್ಟ್ರದ ಪುಣೆಯಲ್ಲಿ ಜನವರಿ 7ರಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

ಮಹಿಳೆಯ ಹೆಸರು ಯೋಗಿತಾ ಸಾತವ್​. ಯೋಗಿತಾ ಮತ್ತು ಇತರ ಮಹಿಳೆಯರು, ಮಕ್ಕಳೊಂದಿಗೆ ಪುಣೆಯ ಸಮೀಪ ಇರುವ ಶಿರೂರಿನ ಕೃಷಿ ಪ್ರವಾಸೋದ್ಯಮ ಕೇಂದ್ರಕ್ಕೆ ಪಿಕ್ನಿಕ್​ಗೆ ತೆರಳಿದ್ದರು. ಈ ಪಿಕ್ನಿಕ್ ಮುಗಿಸಿ ವಾಪಸ್​ ಬರುತ್ತಿದ್ದ ವೇಳೆ ಚಾಲಕ ಅಸ್ವಸ್ಥನಾಗಿದ್ದಾನೆ. ಅಷ್ಟೇ ಅಲ್ಲ, ನಿರ್ಜನ ಪ್ರದೇಶವೊಂದರಲ್ಲಿ ಮಿನಿ ಬಸ್​ ನಿಲ್ಲಿಸಿ ಪ್ರಜ್ಞೆ ತಪ್ಪಿದ್ದಾನೆ. ಹೀಗೆ, ಚಾಲಕ ಮೂರ್ಛೆ ಹೋದಕೂಡಲೇ ಮುಂದೇನು ಮಾಡಬೇಕು ಎಂದು ತಿಳಿಯದೆ ಬಸ್​​ನಲ್ಲಿದ್ದ ಮಕ್ಕಳು, ಮಹಿಳೆಯರು ಗಾಬರಿಯಾಗಿದ್ದಾರೆ. ಕೆಲವರಂತೂ ಅಳಲೂ ಶುರು ಮಾಡಿದ್ದರು. ಆದರೆ ಯೋಗಿತಾ, ಕೂಡಲೇ ತಾವೇ ಮುಂದಾಗಿ ಬಸ್​ ಓಡಿಸಿದ್ದಾರೆ. ಸುಮಾರು 10 ಕಿಮೀ ದೂರ ಬಸ್​ ಡ್ರೈವ್​ ಮಾಡಿ, ಚಾಲಕನನ್ನು ಆಸ್ಪತ್ರೆಗೆ ಸೇರಿಸಿದ ಅವರು, ಬಳಿಕ ಉಳಿದ ಪ್ರಯಾಣಿಕರನ್ನು ಅವರವರ ಮನೆಗಳಿಗೆ ಬಿಟ್ಟಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯೋಗಿತಾ, ನನಗೆ ಕಾರು ಡ್ರೈವ್ ಮಾಡುವುದು ಗೊತ್ತಿತ್ತು. ಅದೇ ಧೈರ್ಯದ ಮೇಲೆ ಈ ಬಸ್​ ಓಡಿಸಲು ಮುಂದಾದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಲಕನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕಿತ್ತು. ಹಾಗಾಗಿ ಮೊದಲು ಒಂದು ಆಸ್ಪತ್ರೆಗೆ ಹೋದೆವು ಎಂದು ಹೇಳಿದ್ದಾರೆ. ಹೀಗೆ, ಚಾಲಕನ ಜೀವ ಉಳಿಸಿ, ಉಳಿದ ಪ್ರಯಾಣಿಕರನ್ನೂ ಸುರಕ್ಷಿತ ಮಾಡಿದ ಯೋಗಿತಾರ ಬಗ್ಗೆ ನೆಟ್ಟಿಗರು ಅಪಾರ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಇದನ್ನೂ ಓದಿ: Viral Video: 63.7 ಕೆಜಿ ಜೇನುನೊಣಗಳನ್ನು ಮೈಮೇಲೆ ಬಿಟ್ಟುಕೊಂಡು ದಾಖಲೆ ನಿರ್ಮಿಸಿದ ವ್ಯಕ್ತಿ

Published On - 3:06 pm, Sun, 16 January 22

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್