ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್​ ವಿಡಿಯೋ

Love and Care : ಇದು ಕರ್ನಾಟಕದ ಯಾವುದೋ ಬಸ್​ಸ್ಟ್ಯಾಂಡಿನಲ್ಲಿ ಸೆರೆಹಿಡಿಯಲಾದ ದೃಶ್ಯ. ಅನಾರೋಗ್ಯಕ್ಕೆ ತುತ್ತಾದ ಆಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡ ಈ ವ್ಯಕ್ತಿಯ ಮುಖ ನೋಡಿದರೆ ಸಾಕು ಪ್ರೀತಿಯ ಆಳ ಅರ್ಥವಾಗುತ್ತದೆ.

ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್​ ವಿಡಿಯೋ
ಮಹಿಳೆಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ಪುರುಷ
Follow us
| Updated By: ಶ್ರೀದೇವಿ ಕಳಸದ

Updated on:Nov 24, 2022 | 3:42 PM

Viral Video : ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ತನ್ನ ತೊಡೆಯ ಮೇಲೆ ಈ ಮಹಿಳೆಯನ್ನು ಈ ವ್ಯಕ್ತಿ ಮಲಗಿಸಿಕೊಂಡಿದ್ದಾರೆ. ಬಹುಶಃ ಆರೋಗ್ಯ ಸಮಸ್ಯೆ ಇದ್ದಿರಬಹುದು, ಆಕೆಯ ತಲೆಯನ್ನು ತಟ್ಟುತ್ತಿರುವ ಈ ವ್ಯಕ್ತಿಯ ಮುಖದಲ್ಲಿ ಕಾಳಜಿ ಸ್ಫುರಿಸುತ್ತಿದೆ ಜೊತೆಗೆ ನೋವೂ ಮಡುಗಟ್ಟಿದಂತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಇದು ನಿಜವಾದ ಪ್ರೀತಿ ಎಂದು ಭಾವುಕರಾಗುತ್ತಿದ್ದಾರೆ. ಇದು ಕರ್ನಾಟಕದ ಯಾವುದೋ ಬಸ್​ಸ್ಟ್ಯಾಂಡಿನಲ್ಲಿ ಸೆರೆಹಿಡಿದ ವಿಡಿಯೋ.

ಜಿಂದಗೀ ಗುಲ್ಝಾರ್ ಹೈ ಎಂಬ ಅಕೌಂಟ್​ನಿಂದ ಈ ವಿಡಿಯೋ ಟ್ವೀಟ್ ಆಗಿದೆ. ಅತ್ಯಂತ ಪ್ರೀತಿಯಿಂದ ಈತ ಈಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದಾರೆ. ಹೊರಗಿನ ಗದ್ದಲ, ಬೆಳಕು ಆಕೆಗೆ ತೊಂದರೆ ಉಂಟುಮಾಡದಂತೆ ಆಕೆಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ಅನ್ನು 58,000ಕ್ಕಿಂತಲೂ ಹೆಚ್ಚು ಜನ ನೋಡಿದ್ಧಾರೆ. 4,700 ಜನರು ಇಷ್ಟಪಟ್ಟಿದ್ದಾರೆ. ದಾಂಪತ್ಯವೆಂದರೆ ಇದು ಎಂದು ಅನೇಕರು ಹೇಳಿದ್ದಾರೆ. ಶ್ರದ್ಧಾ ಪ್ರಕರಣದ ನಂತರ ಈ ದೃಶ್ಯ ನ್ಯೂಸ್​ ಚಾನೆಲ್​ನವರಿಗೆ ಕಾಣುತ್ತಿಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು. ಇದು ಕರ್ನಾಟಕದ ಬಸ್​ ನಿಲ್ದಾಣದಲ್ಲಿ ಸೆರೆಹಿಡಿದ ದೃಶ್ಯ ಎಂದಿದ್ದಾರೆ ಯಾರೋ ಒಬ್ಬರು. ಇದು ಶತಮಾನದ ವಿಡಿಯೋ ಎಂದಿದ್ದಾರೆ ಮಗದೊಬ್ಬರು. ಸಂಬಂಧವೆಂದರೆ ಇದೇ ಎಂದಿದ್ದಾರೆ ಮತ್ತೂ ಒಬ್ಬರು. ಪ್ರೀತಿಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದಂತೆ ಮಾಡುತ್ತಿದೆ ಈ ವಿಡಿಯೋ ಎಂದಿದ್ದಾರೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:42 pm, Thu, 24 November 22

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು