AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್

Elephant : ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು. ಇಂತಿಂಥ ಪ್ರಾಣಿಗಳೆಲ್ಲ ಇದರ ಬ್ಯಾಂಡ್ ಸೇರಬೇಕು. ಪ್ರದರ್ಶನಕ್ಕೆ ನಾನಂತೂ ಹಣ ಕೊಟ್ಟೇ ಹೋಗುತ್ತೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್
ಸೊಂಡಿಲಿನಿಂದ ಡ್ರಮ್​ ನುಡಿಸುತ್ತಿರುವ ಆನೆ
TV9 Web
| Updated By: ಶ್ರೀದೇವಿ ಕಳಸದ|

Updated on:Nov 24, 2022 | 1:27 PM

Share

Viral Video : ಆಗಾಗ ಆನೆಗಳ ವೈರಲ್ ವಿಡಿಯೋ ನೋಡುತ್ತಿರುತ್ತೀರಿ. ಅಷ್ಟೇ ಬಲಶಾಲಿ ಅಷ್ಟೇ ಚುರುಕಾಗಿರುವ ಆನೆ ಬುದ್ಧಿವಂತಿಕೆಗೂ ಹೆಸರಾದ ಪ್ರಾಣಿ. ಮನುಷ್ಯನನ್ನು ಅನುಕರಿಸುವಲ್ಲಿ ಇವುಗಳು ಎತ್ತಿದ ಕೈ. ಆನೆಗಳು ಪೇಂಟ್ ಮಾಡುವ ವಿಡಿಯೋ ನೋಡಿದ್ದೀರಿ. ಚೆಂಡಾಟವಾಡುವ ವಿಡಿಯೋ ನೋಡಿದ್ದೀರಿ, ಮೊಬೈಲ್​ನಲ್ಲಿ ಇಣುಕುವ ಆನೆಯ ವಿಡಿಯೋ ನೋಡಿದ್ದೀರಿ.  ಈಗ ವೈರಲ್ ಆದ ಈ ವಿಡಿಯೋ ನೋಡಿ, ಡ್ರಮ್ ಕಲಾವಿದರನೊಬ್ಬ ತನ್ನ ಪಾಡಿಗೆ ತಾನು ನುಡಿಸುತ್ತ ಕುಳಿತಿದ್ದಾನೆ. ಅಲ್ಲಿಗೆ ಬಂದ ಆನೆ ತಾನೂ ನುಡಿಸುವಲ್ಲಿ ಆಸಕ್ತಿ ತೋರಿ ತನ್ನ ಸೊಂಡಿಯನ್ನು ಬೇಲಿಯೊಳಗಿಂದ ಚಾಚಿದೆ.

ಎರಿಕ್ ಸ್ಕಿಫರ್ ಎಂಬುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಸೊಂಡಿಲಿನಿಂದ ನುಡಿಸಲು ಪ್ರಯತ್ನಿಸುತ್ತದೆ, ಅದೂ ಲಯಬದ್ಧವಾಗಿ. ನಂತರ ಅದಕ್ಕೆ ಸ್ಟಿಕ್ ಬೇಕೆನ್ನಿಸುತ್ತದೆ ಎನ್ನಿಸುತ್ತದೆ. ಸ್ಟಿಕ್​ಗಾಗಿ ಸೊಂಡಿಲು ಚಾಚಿದ್ದನ್ನು ಗಮನಿಸಬಹುದು. ಸುಮಾರು 50,000 ಜನರಿಂದ ಈ ವಿಡಿಯೋ ಆಕರ್ಷಿಸಲ್ಪಟ್ಟಿದೆ.

ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಇನ್ನೂ ಅನೇಕರು ಆನೆಯ ಬ್ಯಾಂಡ್​ಗೆ ಯಾವ್ಯಾವ ಪ್ರಾಣಿಗಳ ಹೆಸರನ್ನು ಸೇರಿಸಬೇಕು ಎಂದು ಪಟ್ಟಿ ಮಾಡಿದ್ದಾರೆ. ಆನೆಯ ಬ್ಯಾಂಡ್​ ಪ್ರದರ್ಶನ ನೀಡಿದರೆ ನಾನಂತೂ ಖಂಡಿತ ಹಣ ಕೊಟ್ಟು ನೋಡುತ್ತೇನೆ ಎಂದ್ದಾರೆ ಇನ್ನೂ ಒಬ್ಬರು. ನಂತರ ಯಾರಾದರೂ ಈ ಕಲಾವಿದ ಆನೆ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ನಾನು ನೆಟ್​ಫ್ಲಿಕ್ಸ್​ನಲ್ಲಿ ನೋಡಲು ಇಚ್ಛಿಸುತ್ತೇನೆ ಎಂದಿದ್ಧಾರೆ ಮಗದೊಬ್ಬರು. ಇಡೀ ಕಾಡಿನಲ್ಲಿಯೇ ಇದು ಮುದ್ದಾದ ಕೂಸು ಎಂದಿದ್ದಾರೆ ಇನ್ನೂ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Thu, 24 November 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ