AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್

Elephant : ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು. ಇಂತಿಂಥ ಪ್ರಾಣಿಗಳೆಲ್ಲ ಇದರ ಬ್ಯಾಂಡ್ ಸೇರಬೇಕು. ಪ್ರದರ್ಶನಕ್ಕೆ ನಾನಂತೂ ಹಣ ಕೊಟ್ಟೇ ಹೋಗುತ್ತೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್
ಸೊಂಡಿಲಿನಿಂದ ಡ್ರಮ್​ ನುಡಿಸುತ್ತಿರುವ ಆನೆ
TV9 Web
| Edited By: ಶ್ರೀದೇವಿ ಕಳಸದ|

Updated on:Nov 24, 2022 | 1:27 PM

Share

Viral Video : ಆಗಾಗ ಆನೆಗಳ ವೈರಲ್ ವಿಡಿಯೋ ನೋಡುತ್ತಿರುತ್ತೀರಿ. ಅಷ್ಟೇ ಬಲಶಾಲಿ ಅಷ್ಟೇ ಚುರುಕಾಗಿರುವ ಆನೆ ಬುದ್ಧಿವಂತಿಕೆಗೂ ಹೆಸರಾದ ಪ್ರಾಣಿ. ಮನುಷ್ಯನನ್ನು ಅನುಕರಿಸುವಲ್ಲಿ ಇವುಗಳು ಎತ್ತಿದ ಕೈ. ಆನೆಗಳು ಪೇಂಟ್ ಮಾಡುವ ವಿಡಿಯೋ ನೋಡಿದ್ದೀರಿ. ಚೆಂಡಾಟವಾಡುವ ವಿಡಿಯೋ ನೋಡಿದ್ದೀರಿ, ಮೊಬೈಲ್​ನಲ್ಲಿ ಇಣುಕುವ ಆನೆಯ ವಿಡಿಯೋ ನೋಡಿದ್ದೀರಿ.  ಈಗ ವೈರಲ್ ಆದ ಈ ವಿಡಿಯೋ ನೋಡಿ, ಡ್ರಮ್ ಕಲಾವಿದರನೊಬ್ಬ ತನ್ನ ಪಾಡಿಗೆ ತಾನು ನುಡಿಸುತ್ತ ಕುಳಿತಿದ್ದಾನೆ. ಅಲ್ಲಿಗೆ ಬಂದ ಆನೆ ತಾನೂ ನುಡಿಸುವಲ್ಲಿ ಆಸಕ್ತಿ ತೋರಿ ತನ್ನ ಸೊಂಡಿಯನ್ನು ಬೇಲಿಯೊಳಗಿಂದ ಚಾಚಿದೆ.

ಎರಿಕ್ ಸ್ಕಿಫರ್ ಎಂಬುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಸೊಂಡಿಲಿನಿಂದ ನುಡಿಸಲು ಪ್ರಯತ್ನಿಸುತ್ತದೆ, ಅದೂ ಲಯಬದ್ಧವಾಗಿ. ನಂತರ ಅದಕ್ಕೆ ಸ್ಟಿಕ್ ಬೇಕೆನ್ನಿಸುತ್ತದೆ ಎನ್ನಿಸುತ್ತದೆ. ಸ್ಟಿಕ್​ಗಾಗಿ ಸೊಂಡಿಲು ಚಾಚಿದ್ದನ್ನು ಗಮನಿಸಬಹುದು. ಸುಮಾರು 50,000 ಜನರಿಂದ ಈ ವಿಡಿಯೋ ಆಕರ್ಷಿಸಲ್ಪಟ್ಟಿದೆ.

ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಇನ್ನೂ ಅನೇಕರು ಆನೆಯ ಬ್ಯಾಂಡ್​ಗೆ ಯಾವ್ಯಾವ ಪ್ರಾಣಿಗಳ ಹೆಸರನ್ನು ಸೇರಿಸಬೇಕು ಎಂದು ಪಟ್ಟಿ ಮಾಡಿದ್ದಾರೆ. ಆನೆಯ ಬ್ಯಾಂಡ್​ ಪ್ರದರ್ಶನ ನೀಡಿದರೆ ನಾನಂತೂ ಖಂಡಿತ ಹಣ ಕೊಟ್ಟು ನೋಡುತ್ತೇನೆ ಎಂದ್ದಾರೆ ಇನ್ನೂ ಒಬ್ಬರು. ನಂತರ ಯಾರಾದರೂ ಈ ಕಲಾವಿದ ಆನೆ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ನಾನು ನೆಟ್​ಫ್ಲಿಕ್ಸ್​ನಲ್ಲಿ ನೋಡಲು ಇಚ್ಛಿಸುತ್ತೇನೆ ಎಂದಿದ್ಧಾರೆ ಮಗದೊಬ್ಬರು. ಇಡೀ ಕಾಡಿನಲ್ಲಿಯೇ ಇದು ಮುದ್ದಾದ ಕೂಸು ಎಂದಿದ್ದಾರೆ ಇನ್ನೂ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Thu, 24 November 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು