AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್

Elephant : ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು. ಇಂತಿಂಥ ಪ್ರಾಣಿಗಳೆಲ್ಲ ಇದರ ಬ್ಯಾಂಡ್ ಸೇರಬೇಕು. ಪ್ರದರ್ಶನಕ್ಕೆ ನಾನಂತೂ ಹಣ ಕೊಟ್ಟೇ ಹೋಗುತ್ತೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್
ಸೊಂಡಿಲಿನಿಂದ ಡ್ರಮ್​ ನುಡಿಸುತ್ತಿರುವ ಆನೆ
TV9 Web
| Edited By: ಶ್ರೀದೇವಿ ಕಳಸದ|

Updated on:Nov 24, 2022 | 1:27 PM

Share

Viral Video : ಆಗಾಗ ಆನೆಗಳ ವೈರಲ್ ವಿಡಿಯೋ ನೋಡುತ್ತಿರುತ್ತೀರಿ. ಅಷ್ಟೇ ಬಲಶಾಲಿ ಅಷ್ಟೇ ಚುರುಕಾಗಿರುವ ಆನೆ ಬುದ್ಧಿವಂತಿಕೆಗೂ ಹೆಸರಾದ ಪ್ರಾಣಿ. ಮನುಷ್ಯನನ್ನು ಅನುಕರಿಸುವಲ್ಲಿ ಇವುಗಳು ಎತ್ತಿದ ಕೈ. ಆನೆಗಳು ಪೇಂಟ್ ಮಾಡುವ ವಿಡಿಯೋ ನೋಡಿದ್ದೀರಿ. ಚೆಂಡಾಟವಾಡುವ ವಿಡಿಯೋ ನೋಡಿದ್ದೀರಿ, ಮೊಬೈಲ್​ನಲ್ಲಿ ಇಣುಕುವ ಆನೆಯ ವಿಡಿಯೋ ನೋಡಿದ್ದೀರಿ.  ಈಗ ವೈರಲ್ ಆದ ಈ ವಿಡಿಯೋ ನೋಡಿ, ಡ್ರಮ್ ಕಲಾವಿದರನೊಬ್ಬ ತನ್ನ ಪಾಡಿಗೆ ತಾನು ನುಡಿಸುತ್ತ ಕುಳಿತಿದ್ದಾನೆ. ಅಲ್ಲಿಗೆ ಬಂದ ಆನೆ ತಾನೂ ನುಡಿಸುವಲ್ಲಿ ಆಸಕ್ತಿ ತೋರಿ ತನ್ನ ಸೊಂಡಿಯನ್ನು ಬೇಲಿಯೊಳಗಿಂದ ಚಾಚಿದೆ.

ಎರಿಕ್ ಸ್ಕಿಫರ್ ಎಂಬುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಸೊಂಡಿಲಿನಿಂದ ನುಡಿಸಲು ಪ್ರಯತ್ನಿಸುತ್ತದೆ, ಅದೂ ಲಯಬದ್ಧವಾಗಿ. ನಂತರ ಅದಕ್ಕೆ ಸ್ಟಿಕ್ ಬೇಕೆನ್ನಿಸುತ್ತದೆ ಎನ್ನಿಸುತ್ತದೆ. ಸ್ಟಿಕ್​ಗಾಗಿ ಸೊಂಡಿಲು ಚಾಚಿದ್ದನ್ನು ಗಮನಿಸಬಹುದು. ಸುಮಾರು 50,000 ಜನರಿಂದ ಈ ವಿಡಿಯೋ ಆಕರ್ಷಿಸಲ್ಪಟ್ಟಿದೆ.

ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಇನ್ನೂ ಅನೇಕರು ಆನೆಯ ಬ್ಯಾಂಡ್​ಗೆ ಯಾವ್ಯಾವ ಪ್ರಾಣಿಗಳ ಹೆಸರನ್ನು ಸೇರಿಸಬೇಕು ಎಂದು ಪಟ್ಟಿ ಮಾಡಿದ್ದಾರೆ. ಆನೆಯ ಬ್ಯಾಂಡ್​ ಪ್ರದರ್ಶನ ನೀಡಿದರೆ ನಾನಂತೂ ಖಂಡಿತ ಹಣ ಕೊಟ್ಟು ನೋಡುತ್ತೇನೆ ಎಂದ್ದಾರೆ ಇನ್ನೂ ಒಬ್ಬರು. ನಂತರ ಯಾರಾದರೂ ಈ ಕಲಾವಿದ ಆನೆ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ನಾನು ನೆಟ್​ಫ್ಲಿಕ್ಸ್​ನಲ್ಲಿ ನೋಡಲು ಇಚ್ಛಿಸುತ್ತೇನೆ ಎಂದಿದ್ಧಾರೆ ಮಗದೊಬ್ಬರು. ಇಡೀ ಕಾಡಿನಲ್ಲಿಯೇ ಇದು ಮುದ್ದಾದ ಕೂಸು ಎಂದಿದ್ದಾರೆ ಇನ್ನೂ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Thu, 24 November 22

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’