AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜರ್ಮನ್ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವ ಅಧಿಕಾರಿಗಳ ವಿಡಿಯೋ ವೈರಲ್

Cricket : ಜರ್ಮನ್​ ಅಧಿಕಾರಿಗಳು​ ಭಾರತೀಯ ಅಧಿಕಾರಿಗಳಿಂದ ಕ್ರಿಕೆಟ್ ಕಲಿಯುತ್ತಿದ್ಧಾರೆ. ನೆಟ್ಟಿಗರು, ಆಡಿ ಸರ್ ನೀವು ಬಿಡಬೇಡಿ ಎಂದು ಇವರ ಆಟದ ಬಗ್ಗೆ ವಿಮರ್ಶೆ ಮಾಡುತ್ತ ಹುರಿದುಂಬಿಸುತ್ತಿದ್ದಾರೆ.

ಜರ್ಮನ್ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಡುತ್ತಿರುವ ಅಧಿಕಾರಿಗಳ ವಿಡಿಯೋ ವೈರಲ್
ಬೆಂಗಳೂರಿನ ಜರ್ಮನ್​ ಕಾನ್ಸುಲೇಟ್​ ಕಚೇರಿಯೊಳಗೆ ಕ್ರಿಕೆಟ್ ಆಟವಾಡುತ್ತಿರುವ ಅಧಿಕಾರಿಗಳು
TV9 Web
| Edited By: ಶ್ರೀದೇವಿ ಕಳಸದ|

Updated on: Nov 24, 2022 | 11:34 AM

Share

Viral Video : ನಿಮಗಿಷ್ಟವಾದ ಆಟ ಯಾವುದು ಎಂದು ಕೇಳಿದರೆ ಬಹುತೇಕ ಭಾರತೀಯರು ಹೇಳುವುದು ಕ್ರಿಕೆಟ್​. ಎಂಥ ಸಂದರ್ಭದಲ್ಲಿಯೂ ಟೀವಿಯಲ್ಲಿ ಈ ಆಟವನ್ನು ವೀಕ್ಷಿಸದೇ ಇರರು. ಹಾಗೆಯೇ ಸಮಯ ಸಿಕ್ಕರೆ ಗಲ್ಲಿಯಲ್ಲಿ ಆಟವಾಡದೇ ಬಿಡರು. ಇದೀಗ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜರ್ಮನ್​ ಕಾನ್ಸುಲೇಟ್​ ಅಧಿಕಾರಿಯೊಬ್ಬರು;​ ‘ಊಟದ ಬಿಡುವಿನಲ್ಲಿ ನನ್ನ ಭಾರತೀಯ ಸಹೋದ್ಯೋಗಿಗಳು, ಜರ್ಮನ್​ ಸಹೋದ್ಯೋಗಿಗಳಿಗೆ ಕ್ರಿಕೆಟ್ ಆಡುವುದು ಹೇಗೆ ಎಂದು ಕಲಿಸಲು ಯತ್ನಿಸುತ್ತಿದ್ದಾರೆ. ಕಾನ್ಸುಲೇಟ್​ ಅದರ ಪಾಡಿಗೆ ಇನ್ನೂ ಇದೆ’ ಎಂದು ತಮಾಷೆಯ ವಿಡಿಯೋ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಬೆಂಗಳೂರಿನ ಕೇರಳ ಮತ್ತು ಕರ್ನಾಟಕದ ಜರ್ಮನ್​ ಕಾನ್ಸುಲೇಟ್ ಅಚಿಮ್​ ಬುರ್ಕಾರ್ಟ್ ತಮ್ಮ ಭಾರತೀಯ ಸಹೋದ್ಯೋಗಳೊಂದಿಗೆ ಕಚೇರಿಯೊಳಗೆ ಕ್ರಿಕೆಟ್​ ಆಟವಾಡಿದ್ದಾರೆ. ಅಚಿಮ್​ ಈ ಆಟವನ್ನು ಉತ್ಸಾಹ ಮತ್ತು ಆನಂದದಿಂದ ಆಡಿದ್ದನ್ನು ಗಮನಿಸಬಹುದಾಗಿದೆ. 32,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,000ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ರೀಟ್ವೀಟ್ ಮಾಡಿದ್ದಾರೆ.

ಜರ್ಮನಿಯಲ್ಲಿಯೂ ಕ್ರಿಕೆಟ್​ ಅನ್ನು ಶುರುಮಾಡುವುದು ಒಳ್ಳೆಯದು ಎನ್ನಿಸುತ್ತೆ ಎಂದಿದ್ದಾರೆ ಒಬ್ಬರು. ನೋಡಲು ಇದು ಬಹಳ ಅದ್ಭುತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಹೌದು ಇದು ಅದ್ಭುತವಾಗಿದೆ ಇಂಥ ಅಭ್ಯಾಸಗಳು ಇರಲಿ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸಿತು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?