AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ

Funeral : ನೀವು ಪ್ರದರ್ಶನ ಮೇಳಗಳಿಗೆ ಹೋದಾಗ ಬೆಡ್​ ಇದ್ದರೆ ಒಮ್ಮೆ ಮಲಗಿ ನೋಡುತ್ತೀರಿ, ಉಪ್ಪಿನಕಾಯಿ ಇದ್ದರೆ ನೆಕ್ಕಿ ನೋಡುತ್ತೀರಿ, ಆದರೆ ಇಲ್ಲಿ!? ಮುಂಬೈನಲ್ಲಿರುವ ಈ ಕಂಪೆನಿಯ ಸದಸ್ಯತ್ವ ಶುಲ್ಕ ರೂ. 37,500.

‘ಸುಖಾಂತ’ ಅಂತ್ಯಸಂಸ್ಕಾರಕ್ಕೊಂದು ಸ್ಟಾರ್ಟ್​ಅಪ್​; ನೆಟ್ಟಿಗರ ಮಿಶ್ರಪ್ರತಿಕ್ರಿಯೆ
Found this Stall in Indian International Trade fare
TV9 Web
| Updated By: ಶ್ರೀದೇವಿ ಕಳಸದ|

Updated on:Nov 21, 2022 | 6:24 PM

Share

Viral : ಹಣವಿದ್ದರೆ ಎಲ್ಲವೂ ಸುಸೂತ್ರ. ಇಂದು ಯಾವ ಸಮಸ್ಯೆಗೂ ಉತ್ತರ ಬಹಳ ಸುಲಭವಾಗಿ ಸಿಗುತ್ತದೆ. ಹಾಗೆ ಸಾವಿಗೆ ಸಂಬಂಧಿಸಿಯೂ. ನಾಳೆ ನಾನು ಸತ್ತುಹೋದರೆ ನನ್ನ ಅಂತ್ಯಸಂಸ್ಕಾರ ಯಾರು ಮಾಡುತ್ತಾರೆ ಎಂದು ಕೊರಗಬೇಕಿಲ್ಲ. ಹಣವಿದ್ದರೆ ಅದೂ ಕೂಡ ಸುಗಮವೇ. ಏಕೆಂದರೆ ನಾಮಕರಣ, ಹುಟ್ಟುಹಬ್ಬ, ಸೀಮಂತ, ಮದುವೆ, ವಾರ್ಷಿಕೋತ್ಸವ ಮುಂತಾದ ಸಮಾರಂಭಗಳಿಗೆ ಇವೆಂಟ್​ ಮ್ಯಾನೇಜ್​ಮೆಂಟ್​ ಕಂಪೆನಿಗಳು ಹೇಗೆ ಸಾರಥ್ಯ ವಹಿಸುತ್ತವೆಯೋ ಹಾಗೆಯೇ ಅಂತ್ಯಸಂಸ್ಕಾರಕ್ಕೂ ಸಾರಥ್ಯ ವಹಿಸುವ ಹೊಸ ಸ್ಟಾರ್ಟ್​ ಅಪ್​ ಮುಂಬೈನಲ್ಲಿ ಶುರುವಾಗಿದೆ.

ಸುಖಾಂತ ಫ್ಯುನರಲ್​​ ಕಂಪೆನಿಯ ಮಳಿಗೆಯು ದೆಹಲಿಯ ಇಂಡಿಯಾ ಇಂಟರ್​ನ್ಯಾಷನಲ್​ ಟ್ರೇಡ್​ ಫೇರ್​ನಲ್ಲಿ ಕಾಣಿಸಿಕೊಂಡಿದೆ. ಐಎಎಸ್​ ಅಧಿಕಾರಿ ಅವನೀಶ್​ ಶರಣ್​ ಇದನ್ನು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಹೌಹಾರುತ್ತಿದ್ದಾರೆ. ಏನಿದು, ನೀವು ಹೀಗೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಈ ಥರವೂ ಒಂದು ಕಂಪೆನಿ ಇರಲು ಸಾಧ್ಯವಾ ಎಂದು ಕೇಳುತ್ತಿದ್ದಾರೆ.

ಮನುಷ್ಯನ ಅಂತಿಮಯಾತ್ರೆಯು ಗೌರವದಿಂದ ಕೂಡಿರಬೇಕೆಂಬ ಉದ್ದೇಶವನ್ನು ಈ ಕಂಪೆನಿ ಹೊಂದಿದೆ. ಅಂತಿಮ ಸಂಸ್ಕಾರದ ಪೂರ್ವ ವಿಧಿವಿಧಾನ, ಅಂತ್ಯಸಂಸ್ಕಾರ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದು ಯೋಜಿಸಿ ಕೊಡುತ್ತದೆ. ಸಂಬಂಧಿಸಿದ ಪರಿಣತರು, ಅನುಭವಿಗಳನ್ನು ಈ ಕಂಪೆನಿಯು ಹೊಂದಿದೆ. ಪ್ರಸ್ತುತ ಮಳಿಗೆಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.

ಇದನ್ನೂ ಓದಿ : ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

ಇಂತಹ ಸ್ಟಾರ್ಟ್​ ಅಪ್​ ಅಗತ್ಯವಿತ್ತೇ? ಎಂದು ನೆಟ್ಟಿಗರು ಬೆಚ್ಚಿ ಬೆದರಿ ನಕ್ಕು ಕೇಳುತ್ತಿದ್ದಾರೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಸಮಾಜಮುಖಿಯಾಗಿ ತೊಡಗಿಕೊಂಡಿದ್ಧಾರೆ. ನಿಜ ಬದುಕಿನಲ್ಲಿ ವಾದ, ಜಗಳಗಳಿಂದ ಮುಕ್ತವಾಗಿ ಅಂತಿಮ ಯಾತ್ರೆಯನ್ನು ಗೌರವದಿಂದ ಪೂರೈಸಲಿ ಬಿಡಿ ಎಂದಿದ್ದಾರೆ ಒಬ್ಬರು. ಅಲ್ಲದೆ, ಈ ಪೋಸ್ಟ್​ನ ಥ್ರೆಡ್​ನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ನಿರುದ್ಯೋಗ, ಹೆಚ್ಚುತ್ತಿರುವ ಜನಸಂಖ್ಯೆ, ನೌಕರಿಗಾಗಿ ವಲಸೆ, ಮಾಹಿತಿ ತಂತ್ರಜ್ಞಾನದ ಪ್ರಭಾವ, ಪೀಳಿಗೆಗಳ ಅಂತರ ಹೀಗೆ ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಿವೆ.

ಸುಖಾಂತ ಫ್ಯೂನರಲ್ ಕಂಪೆನಿಯ ಸಂಸ್ಥಾಪಕರು ಸಂಜಯ್ ರಾಮಗುಡೆ. ಕಂಪೆನಿಯ ಸದಸ್ಯತ್ವ ಶುಲ್ಕ ರೂ. 37,500.

ಹೇಗಿದೆ ಈ ಯೋಜನೆ. ಏನಂತೀರಿ ನೀವು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:18 pm, Mon, 21 November 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ