Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಭಿಷೇಕ್​ ಆ್ಯಬಿ’ ಭಾರತೀಯ ಮೂಲದ ಈ ಗಾಯಕನ ಕಂಠಸಿರಿಗೆ ಮರುಳಾಗದವರಿಲ್ಲ

Abby V : ಹಿಂದಿ, ತಮಿಳು, ಮರಾಠಿ, ಕನ್ನಡ, ತೆಲುಗು, ಪಂಜಾಬಿ ಇತ್ತ ಕರ್ನಾಟಕಿ, ಹಿಂದೂಸ್ತಾನಿ, ರ್ಯಾಪ್​, ಪಾಪ್​ ಯಾವುದೂ ಸೈ. ಈ ಸಂಗೀತ ಮಾಂತ್ರಿಕನ ಮೂಲ ತಮಿಳುನಾಡು, ವಾಸ ಕೆನಡಾ. ಒಮ್ಮೆ ಹಾಡು ಕೇಳಿಬಿಟ್ಟರೆ ನಶೆ ಹಿಡಿದೇ ಸೈ.

‘ಅಭಿಷೇಕ್​ ಆ್ಯಬಿ’ ಭಾರತೀಯ ಮೂಲದ ಈ ಗಾಯಕನ ಕಂಠಸಿರಿಗೆ ಮರುಳಾಗದವರಿಲ್ಲ
Youtuber, Singer Abby V (Abhishek Venkatachalam)
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 4:54 PM

Viral Video : ಗಾಯಕ ಅಭಿಷೇಕ್ ವೆಂಕಟಾಚಲಮ್​ (Abby V) ವಾಸವಾಗಿರುವುದು ಕೆನಡಾದ ಟೊರ್ಯಾಂಟೋನಲ್ಲಿ. ಗಾಯಕ, ಸಂಗೀತ ನಿರ್ದೇಶಕ, ನಿರ್ಮಾಪಕ, ಆಡಿಯೋ ಎಂಜಿನಿಯರ್​ ಮತ್ತು ಯೂಟ್ಯೂಬರ್​. ಜಗತ್ತಿನಾದ್ಯಂತ ಹಲವಾರು ಮ್ಯೂಸಿಕ್​ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ ಅನುಭವಿ. ‘ಆಸ್ಟ್ರೋ ಇಂಟರ್​​ನ್ಯಾಷನಲ್​​ ಸೂಪರ್​ಸ್ಟಾರ್ 2015’ ವಿಜೇತ. ಸುಮಾರು 2 ವರ್ಷಗಳಿಂದಿತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಮಧುರ ಕಂಠದಿಂದ ಹವಾಮೆಹಲ್​ ಅನ್ನೇ ಸೃಷ್ಟಿಸಿದ ಈತ ವಿನೀತವಂತ. ಇನ್​ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್​ಗಳನ್ನು ಸಂಗೀತದ ಸುಖಸಾಗರದಲ್ಲಿ ರೀಲ್ಸ್ ಮೂಲಕ ತೇಲಿಸುತ್ತಿರುತ್ತಾರೆ.

ಇದನ್ನೂ ಓದಿ
Image
ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ
Image
20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್​ಗೆ ‘ಗೂಗಲ್ ಡೂಡಲ್’ ಗೌರವ
Image
ಹ್ವಾಯ್ ಇಗಣಿಯೇ, ಇಲ್ಲಿ ಕೇಣಿ ಕಾಂತಾರ ಕಂಡ್ರಿಯಾ; 2 ಮಿಲಿಯನ್ ಜನ ನೋಡಿದ ಈ ವಿಡಿಯೋ
Image
ಭಾರತೀಯ ಸೇನೆಗೆ ಲಗ್ನಪತ್ರಿಕೆ ಕಳಿಸಿದ ಕೇರಳದ ವಧುವರರು; ಸೇನೆಯಿಂದ ಶುಭಹಾರೈಕೆ
View this post on Instagram

A post shared by Abby V (@abbyvofficial)

ಅಭಿಗೆ ಅಪ್ಪನೇ ಆರಂಭಿಕ ಗುರು. ಮಗನಷ್ಟೇ ಅಪ್ಪನ ಕಂಠವೂ ಮಧುರ. ಇಬ್ಬರೂ ಸೇರಿ ಸಾಕಷ್ಟು ರೀಲ್ಸ್​ಗಳನ್ನು ಅಪ್​ಲೋಡ್ ಮಾಡಿದ್ದಾರೆ. ತಮಿಳು, ತೆಲುಗು, ಹಿಂದಿ, ಮರಾಠಿ ಚಿತ್ರಗೀತೆಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ. ಅಭಿ ಭಾರತಕ್ಕೆ ಬಂದು ಆಶಾ ಮಂಗೇಶ್ಕರ್​, ಸುರೇಶ್ ವಾಡ್ಕರ್, ಸುಧಾ ರಘುನಾಥನ್ ಮತ್ತು ಮಂಗ್ಲಿ, ಇಂದ್ರಾವತಿ, ಐಶ್ವರ್ಯ ಮಜುಂದಾರ್​ ಹೀಗೆ ಅನೇಕ ಕಲಾವಿದರೊಂದಿಗೆ ಪ್ರಾಜೆಕ್ಟ್​ನಲ್ಲಿ ಭಾಗಿಯಾಗುತ್ತಿರುತ್ತಾರೆ. ರೀಲ್ಸ್​ ಕೂಡ ಮಾಡುತ್ತಿರುತ್ತಾರೆ.

View this post on Instagram

A post shared by Abby V (@abbyvofficial)

ಆಗಾಗ ಇವರು ಪೋಲ್​ ಸೃಷ್ಟಿಸುವುದುಂಟು. ಶಾಪಿಂಗ್​ಗೆ ಬಂದಿದ್ದೇನೆ ಯಾವ ಕುರ್ತಾ ತೆಗೆದುಕೊಳ್ಳಲಿ? ಯಾವ ಹೇರ್​​ಸ್ಟೈಲ್​ ನನಗೆ ಒಪ್ಪುತ್ತದೆ? ಹೀಗೆ ಅಭಿಮಾನಿಗಳ ಸಲಹೆಯನ್ನು ಆಗಾಗ ಕೇಳುತ್ತಿರುತ್ತಾರೆ. ಒಮ್ಮೆ ಇವರ ಹಾಡು ಕೇಳಿದವರು ಮತ್ತೆ ಮತ್ತೆ ಕೇಳುವಲ್ಲಿ ಅನುಮಾನವೇ ಇಲ್ಲ. ಜೇನಿನಲ್ಲಿ ಅದ್ದಿದಂಥ ಕಂಠಮಾಧುರ್ಯ, ಗುಂಗು ಹಿಡಿಸಿಯೇ ಬಿಡುತ್ತದೆ. ಅಂತರಾ ನಂದಿ ಮತ್ತು ಅಂಕಿತಾ ನಂದಿ ಎಂಬ ಅಕ್ಕತಂಗಿಯರೊಂದಿಗೂ ಇವರು ಮಾಡಿದ ರೀಲ್ಸ್​ ಸೂಪರ್​ ಹಿಟ್​.

View this post on Instagram

A post shared by Abby V (@abbyvofficial)

ಇತ್ತ ಕರ್ನಾಟಕ, ಹಿಂದೂಸ್ತಾನಿ, ರ್ಯಾಪ್​, ಪಾಪ್ ಯಾವ ಸಂಗೀತಕ್ಕೂ ತಮ್ಮ ಕಂಠವನ್ನು ಒಗ್ಗಿಸಿಕೊಳ್ಳುವ ಕಲೆ ಅಭಿಗೆ ಕರಗತವಾಗಿದೆ. ಶ್ರದ್ದಾವಂತ ವಿದ್ಯಾರ್ಥಿಯ ಕಳೆ ಇವರ ಮೊಗದಲ್ಲಿದೆ. ಎಂಥ ಕಠಿಣವಾದ ಹಾಡನ್ನೂ ಲೀಲಾಜಾಲವಾಗಿ ಪ್ರಸ್ತುಪಡಿಸುವ ಇವರ ಶೈಲಿ ಅಮೋಘ. ಹಿಂದಿಯ ಮೆಹನತ್ ಎಂಬ ಪದಕ್ಕೆ ಅನ್ವರ್ಥನಾಮ ಅಭಿ. ಭಾರತೀಯ ಯುವಗಾಯಕಿಯರಂತೂ ತುದಿಗಾಲ ಮೇಲೆ ಅಭಿ ಜೊತೆ ರೀಲ್ಸ್ ಮಾಡಲು ಕಾಯುತ್ತಿರುತ್ತಾರೆ!

View this post on Instagram

A post shared by Abby V (@abbyvofficial)

ಗಾಯಕಿ ಸುಧಾ ರಘುನಾಥನ್ ಅವರೊಂದಿಗೆ ಸಂಗೀತದ ಮೂಲಕ ತಮಿಳಿನಲ್ಲಿ ಕಿರಾಣಿ ಸಾಮಾನು ಅಂಗಡಿಗೆ ಆರ್ಡರ್ ಮಾಡುವ ವಿಡಿಯೋ ಮಾತ್ರ ಬಹಳ ಅದ್ಭುತವಾಗಿದೆ. ಅಭಿ ಅವರ ಯಾವ ವಿಡಿಯೋ ಕೂಡ 1 ಲಕ್ಷ ಜನರನ್ನು ಸೆಳೆದೇ ಸೆಳೆಯುತ್ತದೆ. ದೂರದ ದೇಶದಲ್ಲಿ ಕುಳಿತು ಹಾಡುವ ಈ ಭಾರತೀಯ ಮೂಲದ ಕೋಗಿಲೆಯ ಹಾಡು ಕೇಳಬೇಕೆ? ಹಾಗಿದ್ದರೆ ಇವರ ಇನ್​ಸ್ಟಾಗ್ರಾಂನ ಖಾತೆಗೆ ಆಗಾಗ ಭೇಟಿ ಕೊಡಿ.

ದಿನವೂ ಸಂಗೀತದ ದಿವ್ಯೌಷಧದಿಂದ ಪಾವನರಾಗಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:41 pm, Mon, 21 November 22

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್