Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ

Sonu Venugopal : ಸೋನು ವೇಣುಗೋಪಾಲ ಓದಿದ್ದು ಎಂಜಿನಿಯರಿಂಗ್, ಕಾರ್ಪೋರೇಟ್​ ಲಾ ಮತ್ತು ಮನಃಶಾಸ್ತ್ರ ಆದರೆ ಗುರುತಿಸಿಕೊಂಡಿದ್ದು ಕಲಾವಿದರಾಗಿ. ನೆಟ್ಟಿಗರು ಇವರ ರೀಲ್ಸ್ ನೋಡಿ ಹೇಳುವುದು ಒಂದೇ ಮಾತು ‘ಬೆಂಕಿ ಬೆಂಕಿರೀ ಅಕ್ಕಾರ ನೀವ್​’

ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್​ ಡೂಡಲ್​ದಾಗೂ ಇಲ್ಲ; ಸೋನು ವೇಣುಗೋಪಾಲ
ಕಾಮಿಡಿಯನ್ ಸೋನು ವೇಣುಗೋಪಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 12:25 PM

Viral Video : ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಕಾಮಿಡಿ ಕಂಟೆಂಟ್ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗಿದೆಯಾ ಎಂದು ನೀವು ಹುಡುಕುತ್ತಿರುವಾಗ ಧುತ್ತನೇ ಎದುರಾಗುತ್ತಾರೆ ಈ ಸೋನು ವೇಣುಗೋಪಾಲ. ಬೆಳಗಾವಿ ಮೂಲದ ಇವರು ಸ್ಟ್ಯಾಂಡ್​ಅಪ್​ ಕಾಮಿಡಿಯನ್​, ಇಂಪ್ರೋ ಆರ್ಟಿಸ್ಟ್​, ಕಂಟೆಂಟ್ ಕ್ರಿಯೇಟರ್. ಇವರು ಸಾಮಾಜಿಕ ಜಾಲತಾಣದಲ್ಲಿ ಇವರು ಗಮನ ಸೆಳೆದಿದ್ದು ‘ಬಾಜೂಮನಿ ಕಾಕೂ’ ಎಂಬ ಕಾಮಿಡಿ ಕ್ಯಾರೆಕ್ಟರ್ ಮೂಲಕ. ಇವರು ಓದಿದ್ದು ಎಂಜಿನಿಯರಿಂಗ್​, ಆದರೆ ರೇಡಿಯೋ ಜಾಕಿ ಮತ್ತು ರಂಗಭೂಮಿಯ ಮೂಲಕ  ತಮ್ಮೊಳಗಿನ ಕಲಾವಿದೆಯನ್ನು ಎಲ್ಲರೆದುರು ನಿಲ್ಲಿಸಿದರು. ಈಗ ಪೂರ್ಣಪ್ರಮಾಣದಲ್ಲಿ ತಮ್ಮನ್ನು ಹಾಸ್ಯ ಕಲಾವಿದರೆಂದು ಗುರುತಿಸಿಕೊಂಡಿದ್ದಾರೆ. ಇವರ ಕಂಟೆಂಟ್​ ಇವರ ಪ್ಲಸ್​ ಪಾಯಿಂಟ್​. ಉತ್ತರ ಕರ್ನಾಟಕದ ಶೈಲಿಯಲ್ಲಿ ಇವರು ಪ್ರಸ್ತುಪಡಿಸುವ ಹಾಸ್ಯಪ್ರಸಂಗಗಳಿಗೆ ಲಕ್ಷಾಂತರ ಅಭಿಮಾನಿಗಳು ಮನಸೋತಿದ್ದಾರೆ. ಮೊನ್ನೆಯಷ್ಟೇ ವಿಶ್ವ ಪುರುಷರ ದಿನ, ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಯಿತು. ಆ ಸಂದರ್ಭದಲ್ಲಿ ಸೃಷ್ಟಿಸಿದ ಸೋನು ಅವರ ಕಂಟೆಂಟ್​ ಹೇಗಿದೆ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Sonu Venu Gopal (@sonuvenugopaal)

ಈ ವಿಡಿಯೋ ನೋಡಿದ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಫಾಲೋವರ್ಸ್​ನ್ನ ನೋಡಿ  ಆವಾಗ ಗೊತ್ತಾಗತ್ತೆ ಮೆನ್ಸ್​ ಡೇ ಬಗ್ಗೆ ಎಂದಿದ್ದಾರೆ ಒಬ್ಬರು. ಪಂಚಾಂಗದಾಗ ಇಲ್ಲ? ಗ್ರಹಣ ದಿವಸ ಕೊಟ್ಟಿರ್ತಾರ ನೋಡ್ರಿ ಮೆನ್ಸ್​ ಡೇ ಎಂದಿದ್ದಾರೆ ಇನ್ನೂ ಒಬ್ಬರು. ಆತು ಪಂಚಾಂಗ್​ದಾಗ ಸೇರಸೂಣಂತ ಹೀಗೆಂದು ಮತ್ತೊಬ್ಬರು ಹೇಳಿದ್ಧಾರೆ. ಬೆಂಕಿ ಬೆಂಕಿರೀ ನೀವ್ ಅಕ್ಕಾ, ದಿವ್ಸಾ ಮಾಡ್ತೀವಲ್ರಿ ಅದ ಮತ್ತ ಎಂದು ಅವರ ಡೈಲಾಗ್​ ಪುನರುಚ್ಚರಿಸಿ ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.

ಸಾಮಾನ್ಯರ ಮನದಾಳವನ್ನು, ಕುತೂಹಲವನ್ನು ಅದರಲ್ಲಿಯೂ ಇಡೀ ಕುಟುಂಬಕ್ಕಾಗಿ ತಮ್ಮ ಜೀವವನ್ನೇ ಸವೆಸುತ್ತಿರುವ ಹೆಣ್ಣುಮಕ್ಕಳ ಒಳಪ್ರಪಂಚವನ್ನು ಅತ್ಯಂತ ಮಾರ್ಮಿಕವಾಗಿ ಸಹಜಹಾಸ್ಯದೊಂದಿಗೆ ಇವರು ತೆರೆದಿಡುತ್ತಾರೆ. ಕೆಲದಿನಗಳ ಹಿಂದೆ ರಿಷಿ ಸುನಕ್​ ಭಾರತಕ್ಕೆ ಬಂದಾಗ ಮಾಡಿದ ರೀಲ್ಸ್ ಇಲ್ಲಿದೆ ನೋಡಿ.

ನಿತ್ಯಜೀವನದ ಆಗುಹೋಗುಗಳನ್ನೇ ಅತ್ಯಂತ ಸಹಜವಾಗಿ ಹಾಸ್ಯದ ಮೂಲಕ ಕಟ್ಟಿಕೊಡುವ ಸೋನು ಅವರ ಪ್ರತಿಭೆ ನಿಜಕ್ಕೂ ಅದ್ಭುತ. ದಿನವೂ ಅಷ್ಟೊಂದು ಕಂಟೆಂಟ್​ ಸೃಷ್ಟಿಸುವುದು ಮತ್ತು ಆ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಸವಾಲಿದೆಯಲ್ಲ ಅದು ಸಣ್ಣ ವಿಷಯವಲ್ಲ. 24 ತಾಸೂ ಬುದ್ಧಿಗೆ ಭಾವಕ್ಕೆ ಸದಾ ಕೆಲಸವನ್ನು ಕೊಡಲೇಕಾಗುತ್ತದೆ. ಈಗ ಕೆಳಗಿರುವ ಈ ವಿಡಿಯೋ ನೋಡಿ. ಕನ್ನಡದ ಪ್ರತೀ ಹೆಣ್ಣುಮಕ್ಕಳು ಮದುವೆಯ ದಿನ ಯಾವ ಮನಸ್ಥಿತಿಯಲ್ಲಿರುತ್ತಾರೆ, ಯಾವುದಕ್ಕೆ ಆದ್ಯತೆ ಕೊಡುತ್ತಿರುತ್ತಾರೆ, ಸಂಭ್ರಮ, ಕಾತರ, ತಳಮಳ, ಗೊಂದಲಗಳ ನಡುವೆ ಅವರ ನಡೆವಳಿಕೆ ಹೇಗೆ ಅರಳಿರುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ. ಈ ವಿಡಿಯೋ ನೋಡಿದ ಹೆಣ್ಣುಮಕ್ಕಳಿಗೆ ತಮ್ಮ ಮದುವೆಯ ದಿನದ ದೃಶ್ಯವು ಕಣ್ಣುಮುಂದೆ ಬಂದಿರಲು ಸಾಕು.

‘ಬಾಜೂ ಮನಿ ಕಾಕೂ’ ಪಾತ್ರ ಮಾತ್ರ ಕಳೆದ ಆರು ವರ್ಷಗಳಿಂದ ಜಗತ್ತಿನ ಕನ್ನಡಿಗರನ್ನೆಲ್ಲ ಸೆಳೆಯುತ್ತ ಬಂದಿದೆ. ನಿತ್ಯದ ಪ್ರಚಲಿತ ವಿಷಯಗಳು, ವಿದ್ಯಮಾನಗಳ ಬಗ್ಗೆ ಈ ಕಾಕೂ ಸದಾ ಕುತೂಹಲಿ, ಮಾತುಗಾರ್ತಿ, ಜೋರುಗಾರ್ತಿ, ತನ್ನ ಮುಗ್ಧತನ ಮತ್ತು ಮುದ್ದಾದ ಮೂರ್ಖತನದಿಂದಲೂ ಜನಮಾನಸವನ್ನು ಗೆದ್ದಾಕೆ. ಸಾಮಾನ್ಯ ಗೃಹಿಣಿಯ ಮನಸ್ಥಿತಿ, ತಿಳಿವಳಿಕೆ, ಚಾಲಾಕಿತನ, ಜ್ಞಾನದಾಹಿ ಮತ್ತು ತನ್ನದೇ ಆದ ಜಗತ್ತಿನಲ್ಲಿ ಸಣ್ಣಪುಟ್ಟ ಖುಷಿ, ಅಚ್ಚರಿಗಳನ್ನು ಕಾಣುವ ಲವಲವಿಕೆಯ ಈ ಪಾತ್ರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಚ್ಚಳಿಯದ ಛಾಪು ಮೂಡಿಸಿದೆ. ಕ್ಷಮಾ ಬಿಂದು ಎಂಬ ಯುವತಿ ತನ್ನನ್ನೇ ತಾನು ಮದುವೆಯಾದ ಸುದ್ದಿ ಓದಿದ್ದಿರಿ. ಆ ವಿಷಯವನ್ನು ಭಾಜೂಮನಿ ಕಾಕೂ ತನ್ನ ಗೆಳತಿಯೊಂದಿಗೆ ಚರ್ಚಿಸಿದ್ದು ಇಲ್ಲಿದೆ.

ನಿತ್ಯದ ಜಂಜಡಗಳಲ್ಲಿ ಸುಸ್ತಾಗುವ ಅನೇಕರಿಗೆ ಸೋನು ವೇಣುಗೋಪಾಲ ಅವರ ಈ ರೀಲ್ಸ್​ಗಳು ಟಾನಿಕ್​ನಂತೆ. ಲಕ್ಷಾಂತರ ಫಾಲೋವರ್​ಗಳನ್ನು ಹೊಂದಿದ ಸೋನು ಕನ್ನಡ ಮತ್ತು ಇಂಗ್ಲಿಷ್​ ಎರಡರಲ್ಲಿಯೂ ಸ್ಟ್ಯಾಂಡ್​ ಅಪ್​ ಕಾಮಿಡಿ ಪ್ರದರ್ಶನ ನೀಡುತ್ತಾರೆ. ಇಂಪ್ರೋವ್​ ಮತ್ತು ನಟನೆಯಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಸೋನು ಒಳಗೊಬ್ಬ ದಿಟ್ಟ ಹೆಣ್ಣುಮಗಳಿದ್ದಾಳೆ. ಅಷ್ಟೇ ಪ್ರೌಢ, ಛಲವಂತ ಮಹಿಳೆಯಿದ್ದಾಳೆ. ಅಂತಃಕರುಣಿಯೂ, ಸಹೃದಯಿಯೂ ಪೆದ್ದಿಯೂ ಆದ ಕಾಕೂ ಇದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ಸೋನು ಜಗತ್ತಿನ ಸಾಮಾನ್ಯರ ಮನವನ್ನು ಹೀಗೇ ತಣಿಸುತ್ತಿರಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:15 pm, Mon, 21 November 22

VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್
VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್
ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?