‘ವಿಕಿ’ಪೀಡಿಯಾದ ಮುದ್ದುಕುಮಾರ್ ರಮ್ಮಿ ಆಡಿ ಬೀದಿಗೆ ಬರುವ ಮೊದಲಿನ ಕಥೆ ಇದು

Kannada Reels : ‘ಮಲ್ಲೇಶ್ ಪಾಳ್ಯದ ಹುಡುಗರ ಪೀಕಲಾಟಗಳು, ಪ್ರಮೀಳಾ ಆಂಟಿಯ ಟಿಪ್ಸುಗಳು, ಸುಶೀಲಾಳ ನೋವಿನ ಸ್ವಗತಗಳು, ಮಾಲತಿಯ ಗಡಿಬಿಡಿ, ಇಂದಿನ ರಿಪೋರ್ಟರ್ಸ್​, ಕ್ರಿಪ್ಪೋಕರೆನ್ಸಿ.. ಏನುಂಟು, ಏನಿಲ್ಲ ಈ ಮುದ್ದುಕುಮಾರರ ಕಂಟೆಂಟ್​ನಲ್ಲಿ.

‘ವಿಕಿ’ಪೀಡಿಯಾದ ಮುದ್ದುಕುಮಾರ್ ರಮ್ಮಿ ಆಡಿ ಬೀದಿಗೆ ಬರುವ ಮೊದಲಿನ ಕಥೆ ಇದು
ಕಲಾವಿದರಾದ ವಿಕಾಸ್ (ಮುದ್ದುಕುಮಾರ್) ಶಯನ ಭಟ್ಟಾಚಾರ್ಯ ಮತ್ತು ಅಮಿತ್ ಚಿಟ್ಟೆ
Follow us
|

Updated on:Nov 01, 2022 | 5:55 PM

Viral Video : ಈವತ್ತು ಸಾಮಾಜಿಕ ಜಾಲತಾಣದಲ್ಲಿ ಮನೋರಂಜನೆಗೆ ಸಾಕಷ್ಟು ಸರಕಿನ ಹರಿವಿದೆ. ಹಾಗಾಗಿ ಉತ್ತಮ ಅಭಿರುಚಿಯಿಂದ ಕೂಡಿದ ಪ್ರಸ್ತುತಿಯನ್ನು ಹುಡುಕಿ ನೋಡಬೇಕಾದಂಥ ಅನಿವಾರ್ಯತೆ ಸೃಷ್ಟಿಯಾಗಿದೆ. ಹರಿವಿನಲ್ಲಿ ಹಗೂರವಾದದ್ದು ಬೇಗನೇ ತೇಲಿಬಂದುಬಿಡುತ್ತದೆ. ಆದರೆ ಗಟ್ಟಿಯಾಗಿದ್ದು ನಿಧಾನ. ಏಕೆಂದರೆ ನಿಧಾನವೇ ಅದರ ಸ್ವಭಾವ; ಅದು ತನ್ನದೇ ಆದ ಶ್ರಮ, ತ್ಯಾಗ, ಪರಿಶ್ರಮದಿಂದ ಕೂಡಿದ ಅನುಭವವನ್ನು ನೆಚ್ಚಿಕೊಂಡಿರುತ್ತದೆ ಮತ್ತು ಅಧ್ಯಯನವನ್ನೂ. ಆದರೆ ಒಮ್ಮೆ ಅದಕ್ಕೊಂದು ಸೂಕ್ತ ವೇದಿಕೆ ಸಿಕ್ಕಿತೋ ಆ ಪ್ರಯಾಣದ ಸೊಬಗೇ ಬೇರೆ. ಈಗ ಇಂಥ ಸೊಬಗಿನ ಪ್ರಯಾಣದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ ‘ವಿಕಿ’ಪೀಡಿಯಾ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ರಂಗಭೂಮಿ ಕಲಾವಿದರಾದ ವಿಕಾಸ್, ಅಮಿತ್ ಚಿಟ್ಟೆ, ಶಾಯನ್​ ಭಟ್ಟಾಚಾರ್ಯ ಈ ಮೂವರು ಸೇರಿ ರೂಪಿಸಿದ ಪುಟವಿದು. ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಈ ಮೂವರು ಕಾಮಿಡಿ ರೀಲ್ಸ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಅಲ್ಲ ನಿಜಜೀವನದಲ್ಲಿಯೂ ವಿಕಾಸ್ ಅವರನ್ನು ಜನ ಮುದ್ದುಕುಮಾರ್​ ಎಂದೇ ಗುರುತಿಸಲಾರಂಭಿಸಿದ್ದಾರೆ. ರಮ್ಮಿ ರೀಲ್ಸ್​ಗೆ ಸಂಬಂಧಿಸಿದಂತೆ ವಿಕಾಸ್​, ‘ನಿಜ ಜೀವನದಲ್ಲಿ ರಮ್ಮಿ ಆಡಿ ಆಡಿ ಸೋತು ಕಂಗಾಲಾಗಿದ್ದೇನೆ ಎಂದೇ ಜನ ಭಾವಿಸಿದ್ದಾರೆ. ಈಗಲೂ ರಸ್ತೆ ಮೇಲೆ ಹೊರಟಾಗ ಮುದ್ದುಕುಮಾರ್ ಎಂದೇ ಕರೆಯುತ್ತಾರೆ. ಪ್ರತಿಯೊಬ್ಬರಿಗೂ ಅದು ಕಾಮಿಡಿ ರೀಲ್ಸ್​ ಎಂದು ಹೇಳಿಹೇಳಿ ಸಾಕಾಗಿದೆ’ ಎನ್ನುತ್ತಾರೆ.

Vicky Pedia ಇದು ಮುದ್ದುಕುಮಾರರ ಫೇಸ್​ಬುಕ್​ ಪುಟ. ಬ್ಲ್ಯಾಕ್​ ಟೀಶರ್ಟ್​ ಮತ್ತು ಹವಾಯಿ ಚಪ್ಪಲಿ ಇದು ಅವರ ಬಯೋ. ಉಳಿದಂತೆ ಅವರ ವ್ಯಕ್ತಿತ್ವದ ಪರಿಚಯವನ್ನು ಅವರ ರೀಲ್ಸ್​ಗಳೇ ಹೇಳುತ್ತವೆ. ಈ ‘ವಿಕಿ’ಪೀಡಿಯಾದ ಮುದ್ದುಕುಮಾರರ ನಿಜವಾದ ಹೆಸರು ವಿಕಾಸ್. ಚಿತ್ರದುರ್ಗದ ಜವಾಹರ ನವೋದರ ವಿದ್ಯಾಲಯದಲ್ಲಿ ಇವರ ಶಾಲಾಭ್ಯಾಸ. ನಂತರ ಎಂಜಿನಿಯರಿಂಗ್​ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ. ದೆಹಲಿಯ ಅಶೋಕ ವಿಶ್ವವಿದ್ಯಾಲಯದಿಂದ ಲಿಬರಲ್​ ಆರ್ಟ್ಸ್​ನಲ್ಲಿ ಸ್ನಾತಕೋತ್ತರ ಪದವಿ. 2013-14ರ ತನಕ ಸಾಫ್ಟ್​ವೇರ್ ಎಂಜಿನಿಯರ್ ಉದ್ಯೋಗ. ಆದರೆ ಅವರನ್ನು ಬಹುವಾಗಿ ಸೆಳೆದಿದ್ದು ರಂಗಭೂಮಿ. 15 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರು 2010ರಿಂದಲೇ ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆರು ವರ್ಷಗಳ ಹಿಂದೆ ಅಮಿತ್ ಚಿಟ್ಟೆ ಮತ್ತು ಶಾಯನ್ ಭಟ್ಟಾಚಾರ್ಯರೊಂದಿಗೆ ‘ಇಂಪ್ರೋ​ ಟ್ರೈಬ್’​ ಎಂಬ ತಂಡವನ್ನು ಕಟ್ಟಿಕೊಂಡರು;  ಮ್ಯಾಡ್​ ಆ್ಯಡ್ಸ್​, ಸ್ಟ್ರೀಟ್ ಪ್ಲೇ, ರ್ಯಾಡಿಕಲ್​ ಮೈಮ್​, ಬೀಟ್​ಬಾಕ್ಸಿಂಗ್​, ಸ್ಟ್ಯಾಂಡ್​ಅಪ್​ ಕಾಮಿಡಿ, ಇಂಪ್ರೋ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಿದರು. 2020ರಲ್ಲಿ ದುಬೈನಲ್ಲಿ ಕೂಡ ಪ್ರದರ್ಶನ ನೀಡಿದರು.

ಉಡುಪಿಯ ವನಿತಾ ಡಿ.ಎಸ್. ಮುದ್ದುಕುಮಾರವರ ಅಭಿಮಾನಿಗಳಲ್ಲೊಬ್ಬರು. ‘ಸಾಮಾಜಿಕ ಜವಾಬ್ದಾರಿಯನ್ನು ಮರೆತು ಸೆಲೆಬ್ರಿಟಿಗಳೇ ಖುದ್ದಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ. ಆದರೆ ಮುದ್ದುಕುಮಾರ್​ ಮಾಡಿದ ರಮ್ಮಿ ಗೇಮಿನ ರೀಲ್ ಮಾತ್ರ ಅದ್ಭುತ. ಸಮಾಜದ ಅಂಕುಡೊಂಕುಗಳನ್ನು ಹಾಸ್ಯಭರಿತ ಮೊನಚು ಬರಹಗಳಿಂದ ಚುಚ್ಚುತ್ತಿದ್ದ ಕೈಲಾಸಂ, ಬೀಚಿ, ವೈಎನ್ಕೆಯವರು ಈ ಮುದ್ದುಕುಮಾರನ ಕಂಟೆಂಟುಗಳಲ್ಲಿ ನುಸುಳಿಹೋಗುತ್ತಿರುತ್ತಾರೇನೋ ಅನ್ನಿಸುವುದುಂಟು. ಅವರ ಕ್ರಿಯಾಶೀಲತೆ,  ಅಭಿನಯ ಚತುರತೆ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸೂಚ್ಯವಾಗಿ ಯುವಪೀಳಿಗೆಯನ್ನು ಎಚ್ಚರಿಸುವಲ್ಲಿ ಸಣ್ಣಗೆ ಕಿವಿಮಾತು, ವೈಚಾರಿಕ ಚಿಂತನೆಗಳು ಗಮನಾರ್ಹ. ಈಗಿನ ಟಿವಿಯ ಹಾಸ್ಯ ಕಾರ್ಯಕ್ರಮಗಳು ಜನಮಾನಸದಿಂದ ಶುದ್ಧ ಹಾಸ್ಯವನ್ನೇ ಮರೆಯಿಸುತ್ತಿವೆ. ಇಂಥ ಹೊತ್ತಿನಲ್ಲಿ ಈ ತಂಡದ ರೀಲ್​ಗಳು ನಿತ್ಯದುಗುಡವನ್ನು ಮರೆಸುತ್ತಿವೆ ಎಂದರೆ ಅತಿಶಯೋಕ್ತಿಯಾಗಲಾರದು’ ಎನ್ನುವುದು ವನಿತಾ ಅವರ ಅಭಿಪ್ರಾಯ.

ಕೊವಿಡ್​ ಅಪ್ಪಳಿಸುವತನಕ ಸಾರ್ವಜನಿಕ  ಪ್ರದರ್ಶನಗಳಲ್ಲಿ ಮುಳುಗಿದ್ದ ವಿಕಾಸ್​ ಮತ್ತು ತಂಡ ಆನಂತರ ಸಾಮಾಜಿಕ ಜಾಲತಾಣವನ್ನು ಅವಲಂಬಿಸುವುದು ಅನಿವಾರ್ಯವಾಯಿತು ಮತ್ತು ಇದು ಇನ್ನೊಂದು ರೀತಿಯ ಐಡೆಂಟಿಟಿಯನ್ನೂ ಈ ತಂಡಕ್ಕೆ ಕಟ್ಟಿಕೊಟ್ಟಿತು. ‘ಮನರಂಜನೆ’ಯನ್ನು ಉತ್ತಮ ಅಭಿರುಚಿಯೊಂದಿಗೆ ಹೇಗೆ ಕಟ್ಟಿಕೊಡಬೇಕು ಎನ್ನುವುದರತ್ತಲೇ ನಾನು ಸದಾ ಆಲೋಚಿಸುತ್ತಿರುತ್ತೇನೆ. ಆ ಪ್ರಯತ್ನದಲ್ಲಿ ಇಂಥ ರಿಲ್ಸ್​ ಮಾಡಿ ಸೋಶಿಯಲ್ ಮೀಡಿಯಾಗೆ ಅಪ್​ಲೋಡ್ ಮಾಡುತ್ತಿರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾಪ್ರಕಾರಗಳಲ್ಲಿ ತೊಡಗಿಕೊಳ್ಳುವ ಆಶಯ ಖಂಡಿತ ಇದೆ. ಆದರೆ ಅದು ಜನರಿಗೂ ಇಷ್ಟವಾಗಬೇಕು ಹಾಗೆಯೇ ನನಗೂ. ಅಂದಾಗ ಮಾತ್ರ ಆಯ್ಕೆ ಮಾಡಿಕೊಂಡ ನಿರ್ದಿಷ್ಟ ಕಲಾಪ್ರಕಾರವು ಔನತ್ಯ ಹೊಂದುತ್ತದೆ’ ಎನ್ನುತ್ತಾರೆ ವಿಕಾಸ್.

ಮುದ್ದುಕುಮಾರ್​ ಅಲ್ಲಲ್ಲ ವಿಕಾಸ್​ ಮತ್ತವರ ತಂಡ ಮಾಡುತ್ತಿರುವ ಮುಂದಿನ ರೀಲ್ಸ್​ ಯಾವ ವಿಷಯದ ಮೇಲೆ? ಈ ನಿಮ್ಮ ಕುತೂಹಲದಲ್ಲಿ ನಮ್ಮ ಕಣ್ಣುಗಳೂ ಸೇರಿವೆ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:49 pm, Tue, 1 November 22

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ