AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೆಕ್ಯೂರಿಟಿ ಏನೂ ಕೇಳಲಿಲ್ಲ, ಟೋಕನ್ನೂ ತಗೊಳ್ಳಲಿಲ್ಲ’ ದೆಹಲಿ ಮೆಟ್ರೋ ಸ್ಟೇಷನ್​ಗೆ ಬಂದ ಈ ‘ಬಾಲವಂತ’

Delhi Metro Station : ‘ನೀವೆಲ್ಲ ಇಷ್ಟೊಂದು ಅಭಿವೃದ್ಧಿ ಹೊಂದಿ ಅದರ ಫಲಗಳನ್ನೆಲ್ಲ ಅನುಭವಿಸುವಾಗ ನಾವು ಇನ್ನೂ ಎಷ್ಟಂತ ಮರದಿಂದ ಮರಕ್ಕೆ ನೆಗೆದಾಡಿಕೊಂಡೇ ಇರಬೇಕು? ಸಲ್ಲದು, ಇನ್ನು ನಾವೂ ಮೆಟ್ರೋದಲ್ಲಿ ಪ್ರಯಾಣಿಸುತ್ತೇವೆ.’

‘ಸೆಕ್ಯೂರಿಟಿ ಏನೂ ಕೇಳಲಿಲ್ಲ, ಟೋಕನ್ನೂ ತಗೊಳ್ಳಲಿಲ್ಲ’ ದೆಹಲಿ ಮೆಟ್ರೋ ಸ್ಟೇಷನ್​ಗೆ ಬಂದ ಈ ‘ಬಾಲವಂತ’
Monkey roams around in Delhi Metro station
TV9 Web
| Updated By: ಶ್ರೀದೇವಿ ಕಳಸದ|

Updated on: Nov 01, 2022 | 6:10 PM

Share

Viral Video : ಮೆಟ್ರೋ ಸ್ಟೇಷನ್ ಪ್ರವೇಶಿಬೇಕೆಂದರೆ ಪ್ರತಿಯೊಬ್ಬರೂ ಪ್ರತೀ ಸಲವೂ ಎಂಥ ಕಟ್ಟುನಿಟ್ಟಾದ ಪರೀಕ್ಷೆಗೆ ಒಳಗಾಗಬೇಕು. ಭದ್ರತಾ ಸಿಬ್ಬಂದಿಯು ನಿಮ್ಮನ್ನು ಸ್ವತಃ ಪರೀಕ್ಷಿಸುತ್ತದೆ. ಜೊತೆಗೆ ನಿಮ್ಮ ಸರಕು ಸರಂಜಾಮುಗಳನ್ನು ಯಂತ್ರವೂ ಪರೀಕ್ಷಿಸುತ್ತದೆ. ಹಾಗಾಗಿ ಯಾರೊಬ್ಬರೂ ಅಲ್ಲಿ ಮನಬಂದಂತೆ ಒಳಹೋಗಲು ಸಾಧ್ಯವಿಲ್ಲ. ಆದರೆ ಬಾಲವಂತರೊಬ್ಬರಿಗೆ ಮಾತ್ರ ಇದ್ಯಾವುದಕ್ಕೂ ಒಳಪಡದೆ ಪ್ರವೇಶಿಸುವುದು ಸಾಧ್ಯವಾಗಿದೆ. ಹೇಗೆ ಅಂತೀರಾ? ವಿಡಿಯೋ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಕೋತಿಯು ಹೀಗೆ ಎಕ್ಸಿಟ್​ಗೇಟ್​ ದಾಟಿಕೊಂಡು ಹೋಗುವುದನ್ನು ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ. 22 ತಾಸುಗಳ ಹಿಂದೆ ಅಪ್​ಲೋಡ್ ಮಾಡಲಾದ ಈ ವಿಡಿಯೋ ಅನ್ನು 2 ಲಕ್ಷಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಅನೇಕರು ಈ ದೃಶ್ಯ ನೋಡಿ ತಮಾಷೆ ಮಾಡಿದ್ದಾರೆ. ಅರೆ ಟೋಕನ್​ ತಗೊಳ್ಳೋ ಮಾರಾಯಾ ಎಂದಿದ್ದಾರೆ ಒಬ್ಬರು. ಮೆಟ್ರೋ ಕಾರ್ಡ್​ ಇಲ್ಲದೆ ಸ್ಟೇಷನ್​ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ ಇನ್ನೊಬ್ಬರು. ಓಹೋ ಹೊಸ ಪ್ರಯಾಣಿಕರು! ಎಂದಿದ್ದಾರೆ ಮಗದೊಬ್ಬರು. ಇವರು ಮೆಟ್ರೋ ಪ್ರಯಾಣ  ಬಯಸಿ ಬಂದಹಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಹೀಗೆ ಒಬ್ಬರನ್ನು ಒಬ್ಬರು ನೋಡಿ ಉಳಿದ ಬಾಲವಂತರೂ ಆಗಾಗ ಹೀಗೆ ಇಲ್ಲಿಗೆ ಬಂದರೆ ಏನು ಕತೆ? ಮೆಟ್ರೋ ಸಿಬ್ಬಂದಿ ಈ ಬಗ್ಗೆ ಯೋಚಿಸಬೇಕಲ್ಲವೆ…

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ