AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು

Python : ಮನುಷ್ಯನ ಮನಸ್ಸನ್ನೇ ಅರ್ಥ ಮಾಡಿಕೊಳ್ಳಲಾಗದು ಇನ್ನು ಪ್ರಾಣಿಗಳದ್ದು... ಈ ಹೆಬ್ಬಾವಿಗೆ ಹಸಿವಾಗಿತ್ತೋ ಏನೋ ಗೊತ್ತಿಲ್ಲ. ಒಮ್ಮೆಲೆ ಆಕೆಯ ಕೈ ಕಚ್ಚಿ ಸುತ್ತಿಕೊಂಡುಬಿಡುತ್ತದೆ. ನಂತರ ಮುಂದೇನಾಗುತ್ತದೆ ವಿಡಿಯೋ ನೋಡಿ.

ಸಾಕಿದಾಕೆಯ ಕೈಯನ್ನೇ ಕಚ್ಚಿ ದಾಳಿ ಮಾಡಿದ ಹೆಬ್ಬಾವು
Python bites owner grips her hand while she takes it out of cage
Follow us
ಶ್ರೀದೇವಿ ಕಳಸದ
|

Updated on: Oct 27, 2022 | 11:22 AM

Viral Video : ವನ್ಯಜೀವಿಗಳು ಎಷ್ಟೇ ಆದರೂ ತಮ್ಮ ಗುಣಸ್ವಭಾವಗಳನ್ನು ಬಿಟ್ಟುಕೊಡವು. ನಾಡಿಗೆ ತಂದು ಪಳಗಿಸಿದರೂ ಅಪಾಯ ತಪ್ಪಿದ್ದಲ್ಲ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹೆಬ್ಬಾವು ತನ್ನ ಪೋಷಕಿಯ ಮೇಲೆ ದಾಳಿ ಮಾಡಿದೆ. Daily Loud ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 8  ಮಿಲಿಯನ್​ ಜನರು ಈ ಆಘಾತಕಾರಿ ವಿಡಿಯೋ ನೋಡಿದ್ದಾರೆ. ಪ್ರಾಣಿ ಪ್ರಿಯರಿಗೆ ಪ್ರಾಣಿಗಳೇ ಅವರ ಜಗತ್ತು. ಮಕ್ಕಳಂತೆ ಮುದ್ದುಗರೆಯುವುದೇ ಅವರ ದಿನಚರಿ. ಈಗಲೂ ಈಕೆ ತನ್ನ ಪ್ರೀತಿಯ ಹೆಬ್ಬಾವನ್ನು ಮಾತನಾಡಿಸುತ್ತ ಹೊರತೆಗೆಯಲು ನೋಡಿದ್ದಾಳೆ. ಆದರೆ ಅದು ಮಾತ್ರ…

ಈ ವಿಡಿಯೋ ಒಂದು ನಿಮಿಷದ್ದು. ಅದರ ಬಾಕ್ಸ್​ನಿಂದ ಹೊರತೆಗೆಯುವಾಗ ಹೆಬ್ಬಾವು ಅವಳ ಕೈಯನ್ನು ಕಚ್ಚಿ ಇದ್ದಕ್ಕಿದ್ದಂತೆ ಸುತ್ತಿಕೊಳ್ಳುತ್ತದೆ. ಕ್ರಮೇಣ ತೋಳಿಗೂ ಸುತ್ತಿಕೊಳ್ಳುತ್ತದೆ. ಸುತ್ತಿಕೊಂಡ ಬಿಗಿಯಿಂದ ಅದನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ವಿಡಿಯೋ ಮಾಡುತ್ತಿದ್ ವ್ಯಕ್ತಿ ಈಕೆಗೆ ಸಹಾಯ ಮಾಡಲು ಬಂದಾಗ ಕೂಡ ಅದು ಮತ್ತಷ್ಟು ಉಗ್ರವಾಗುತ್ತದೆ. ಆಕೆಯ ಕೈ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಕೊನೆಗೆ ಅವಳ ಕಾಲನ್ನೂ ಸುತ್ತಿಕೊಳ್ಳುತ್ತದೆ. ಕ್ರಮೇಣ ರಕ್ತವೂ ಚಿಮ್ಮುತ್ತದೆ.

ನೆಟ್ಟಿಗರಂತೂ ಗಾಬರಿಯಾಗಿದ್ದಾರೆ. ಅದಕ್ಕೇ ಇಂಥ ಭಯಾನಕ ಪ್ರಾಣಿಗಳನ್ನು ನಾವು ಇಷ್ಟಪಡುವುದಿಲ್ಲ ಎಂದಿದ್ದಾರೆ ಒಬ್ಬರು. ಮುಂದೆ ಏನಾಯಿತು? ಹೆಬ್ಬಾವನ್ನು ಹೇಗೆ ಬಿಡಿಸಲಾಯಿತು ಎಂದು ಮತ್ತೊಬ್ಬರು ಕೇಳಿದ್ದಾರೆ. ಹಾವಿಗೆ ಹಸಿವಾಗಿತ್ತೋ ಏನೋ ಎಂದಿದ್ದಾರೆ ಇನ್ನೊಬ್ಬರು. ಒಟ್ಟಿನಲ್ಲಿ ಸಹವಾಸ ಅಲ್ಲ ಇದು ಎಂದಿದ್ದಾರೆ ಮಗದೊಬ್ಬರು.

ಹುಷಾರು ವನ್ಯಜೀವಿಗಳೊಂದಿಗೆ ಒಡನಾಡುವಾಗ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ