Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹ್ವಾಯ್ ಇಗಣಿಯೇ, ಇಲ್ಲಿ ಕೇಣಿ ಕಾಂತಾರ ಕಂಡ್ರಿಯಾ; 2 ಮಿಲಿಯನ್ ಜನ ನೋಡಿದ ಈ ವಿಡಿಯೋ

Kantara Movie Song : ನಾನು ಅಮ್ಮ ಇಬ್ರು ಒಂಚೂರು ಹಾಡಿದ್ವಿ ಕಾಣಿ. ಈ ವಿಡಿಯೋ ನೋಡಿ ಹೆಂಗುಂಟು ಅಂತ ಹೇಳಗು ಆಯ್ತಾ? ನೆಂಪಿರ್ಲಿ.. ಮರೆಯದೆ ಕುಂದಾಪುರ ಕನ್ನಡ ಅಷ್ಟು ಸರಿಯಾಗಿ ಗೊತ್ತಿಲ್ಲ ಆಯ್ತಾ. ಕಾಂಬ.. ಸಿಗ್ತೇ.

ಹ್ವಾಯ್ ಇಗಣಿಯೇ, ಇಲ್ಲಿ ಕೇಣಿ ಕಾಂತಾರ ಕಂಡ್ರಿಯಾ; 2 ಮಿಲಿಯನ್ ಜನ ನೋಡಿದ ಈ ವಿಡಿಯೋ
ಅಮ್ಮನೊಂದಿಗೆ ಕಾಂತಾರ ಸಿನೆಮಾದ ಸಿಂಗಾರ ಸಿರಿಯೇ ಹಾಡುತ್ತಿರುವ ಆರ್ಯಾ ಸಿಂಚನಾ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 21, 2022 | 9:52 AM

Viral Video : ಕಾಂತಾರ ಸಿನೆಮಾದ ಬಗ್ಗೆ ವಾದವಿವಾದಗಳು ಏನೇ ಇರಲಿ, ಮಕ್ಕಳಿಗಂತೂ ಈ ಸಿನೆಮಾ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಹುಚ್ಚು ಹಿಡಿಸಿದೆ. ಅಷ್ಟೇ ಅಲ್ಲ ಹಾಡುಗಳು ಗುಂಗು ಹಿಡಿಸಿವೆ. ಕೋಲವನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಬೇಕು ಎಂಬ ಇರಾದೆಯನ್ನು ಮಕ್ಕಳು ವ್ಯಕ್ತಪಡಿಸುತ್ತಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಆರ್ಯಾ ಸಿಂಚನಾ ಎಂಬ ಪುಟ್ಟಿ ಸಿಂಗಾರ ಸಿರಿಯೇ ಹಾಡನ್ನು ತನ್ನ ಅಮ್ಮನೊಂದಿಗೆ ಹಾಡಿದ್ದಾಳೆ. ಹಾಡ್ತಾ ಹಾಡ್ತಾ ಅವಳ ಹಾವಭಾವವನ್ನು ನೋಡಿ…

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Arya Sinchana (@arya.sinchana)

‘ಹ್ವಾಯ್ ಇಗಣಿಯೇ, ಇಲ್ಲಿ ಕೇಣಿ. ಎಲ್ಲಾರು ಕಾಂತರ ಸಿನಿಮಾ ಕಂಡ್ರಿಯಾ. ಸೂಪರ್ ಇತ್ತಲ್ಲಾ? ನಂಗೆ ಈ ಸಿನೆಮಾದ ಎಲ್ಲಾ ಪದ್ಯ ಭಯಂಕರ ಇಷ್ಟ. ಸಿಂಗಾರ ಸಿರಿಯೆ ಹಾಡು ಸ್ವಲ್ಪ ಕಲ್ತಿದೆ. ನಾನು ಅಮ್ಮ ಇಬ್ರು ಒಂಚೂರು ಹಾಡಿದ್ವಿ ಕಾಣಿ. ಈ ವಿಡಿಯೋ ನೋಡಿ ಹೆಂಗುಂಟು ಅಂತ ಹೇಳಗು ಆಯ್ತಾ? ನೆಂಪಿರ್ಲಿ.. ಮರೆಯದೆ ಕುಂದಾಪುರ ಕನ್ನಡ ಅಷ್ಟು ಸರಿಯಾಗಿ ಗೊತ್ತಿಲ್ಲ ಆಯ್ತಾ. ಕಾಂಬ.. ಸಿಗ್ತೇ’ ಎಂಬ ನೋಟ್​ನೊಂದಿಗೆ ಆರ್ಯಾಳ ಅಮ್ಮ ಪೋಸ್ಟ್ ಮಾಡಿದ್ದಾರೆ.

ಈ ತನಕ 2 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ಧಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಅಂದಹಾಗೆ ಕೆಲ ದಿನಗಳ ಹಿಂದೆ ಈ ಪುಟ್ಟಿ ತನ್ನ ಅಜ್ಜ ಅಜ್ಜಿಗೆ ಸಂಗೀತ ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅದನ್ನೂ ನೋಡಿ ಇಲ್ಲಿ…

ಒಟ್ಟಿನಲ್ಲಿ ಇಷ್ಟೇ. ನಾವು ಮಕ್ಕಳಿಗೆ ಎಂಥ ವಾತಾವರಣ ಕಟ್ಟಿಕೊಡುತ್ತೇವೋ ಅವುಗಳು ಅದರಲ್ಲಿಯೇ ಆಸಕ್ತಿ ಬೆಳೆಸಿಕೊಳ್ಳುತ್ತವೆ. ಒಳ್ಳೆಯ ವಾತಾವರಣ ಕಟ್ಟಿಕೊಡಬೇಕೆಂದರೆ ಪೋಷಕರು ಕೆಲ ತ್ಯಾಗಗಳನ್ನು ಮಾಡಲೇಬೇಕಾಗುತ್ತದೆ. ಕೆಲ ಆದ್ಯತೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ.

ಇನ್ನು ಪ್ರತಿಭೆ ಇದ್ದು, ಪರಿಶ್ರಮವಿರದಿದ್ದರೆ ಮಾತ್ರ ಕಲೆಯ ತೆಕ್ಕೆಗೆ ನಾವು ತೆರೆದುಕೊಳ್ಳಬಹುದು. ಇಂದು ಸಾಕಷ್ಟು ಅವಕಾಶಗಳಿವೆ ಕಲಿಕೆಗೆ. ನಿಮ್ಮ ಮನೆಯ ಮಕ್ಕಳಿಗೆ ಸ್ವಲ್ಪಾದರೂ ಸಂಗೀತದ ರುಚಿ ತೋರಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:45 am, Mon, 21 November 22

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ