AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ
A girl who fell in love, a lover who opened a tea stall in her name
TV9 Web
| Edited By: |

Updated on:Nov 22, 2022 | 6:04 PM

Share

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢ್‌ನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ತನ್ನ ಮಾಜಿ ಗೆಳತಿಗೆ ತಿರುಗೆಟು ನೀಡಲು ಅವಳ ಮೊದಲಕ್ಷರಗಳನ್ನು ಬಳಸಿ ಟೀ ಸ್ಟಾಲ್ ಓಪನ್ ಮಾಡಿದ್ದಾನೆ. ಇತನ ಹೆಸರು ಅಂತಾರ್ ಗುಜ್ಜರ್ ಎಂದು, ಇದೀಗ ಈ ಬಗ್ಗೆ ಎಲ್ಲರನ್ನೂ ಗಮನ ಸೆಳೆದಿದ್ದಾನೆ.

ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ. ದಂಪತಿಗಳಿಗೆ, ‘M Bewafa Chaiwala’ ನಲ್ಲಿ ಒಂದು ಕಪ್ ಚಹಾದ ಬೆಲೆ 10 ರೂ, ಆದರೆ ಅದೇ ಚಹಾಕ್ಕೆ ಪ್ರೀತಿಯಲ್ಲಿ ನೊಂದವರಿಗೆ ಅಥವಾ ಪ್ರೀತಿಯಲ್ಲಿ ದ್ರೋಹಕ್ಕೆ ಒಳಗಾದವರಿಗೆ ಕೇವಲ 5 ರೂಗಳಿಗೆ ಮಾರಾಟ ಮಾಡಲಾಗುತ್ತದೆ.

ಇದನ್ನು ಓದಿ:  ಈ ಫೋಟೋದಲ್ಲಿರುವ ಪಕ್ಷಿಯನ್ನು ಗುರುತಿಸಲಾರದೆ ಹೆಣಗಾಡಿದ ನೆಟ್ಟಿಗರು; ನೀವು ಗುರುತಿಸಬಲ್ಲಿರಾ..!

ಬಿಎ ಅಂತಿಮ ವರ್ಷದ ವಿದ್ಯಾರ್ಥಿಯೂ ಆಗಿರುವ ಅಂತಾರ್ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು, ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದಿದೆ. ಸುಮಾರು 2 ವರ್ಷಗಳ ಕಾಲ ಇಬ್ಬರು ಪ್ರೀತಿಸುತ್ತಿದ್ದರು. ನಂತರ, ಅಂತರ್ ಮದುವೆಯ ಪ್ರಸ್ತಾಪ ಮಾಡಿದ್ದಾನೆ, ಆದರೆ ಆಕೆ ಅಂತರ್​​ನ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಅಂತರ್ ನಿರುದ್ಯೋಗಿ ಮತ್ತು ತನ್ನ ನಿಶ್ಚಿತ ವರನಿಗೆ ಎಲ್ಲವೂ ಇದೆ ಎಂದು ಹುಡುಗಿ ಅಂತರ್​ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಳು.

ಪ್ರೀತಿಸಿದ ಹುಡುಗಿ ದ್ರೋಹ ಮಾಡಿದ್ದಾಳೆ ಎಂದು ಅಂತರಾರನು ಜೀವ ಕಳೆದುಕೊಳ್ಳವ ನಿರ್ಧಾರ ಕೂಡ ಮಾಡಿದ್ದ. ಆದರೆ ಅವನ ಸ್ನೇಹಿತನ ಬುದ್ಧಿ ಮಾತಿಗೆ ಬೆಲೆ ಕೊಟ್ಟು, ಎರಡು ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟಿದ್ದಾನೆ. ನಂತರ ತನ್ನ ಮಾಜಿ ಗೆಳತಿಯ ಮೊದಲಕ್ಷರಗಳನ್ನು ಬಳಸಿಕೊಂಡು ಅವಳಿಗೆ ನಾನು ಏನು? ಎಂದು ತೋರಿಸಲು ಚಹಾ ಅಂಗಡಿಯನ್ನು ತೆರೆದನು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 22 November 22

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು