AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ.

Viral Story: ಪ್ರೀತಿಸಿ ಕೈಕೊಟ್ಟ ಹುಡುಗಿಯ ಹೆಸರಲ್ಲೇ ಟೀ ಸ್ಟಾಲ್ ತೆರೆದ ಪ್ರೇಮಿ
A girl who fell in love, a lover who opened a tea stall in her name
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 22, 2022 | 6:04 PM

ಯುವಕನೊಬ್ಬ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ತನಗೆ ದ್ರೋಹ ಬಗೆದ ಮಾಜಿ ಗೆಳತಿಯ ಹೆಸರನ್ನೇ ಟೀ ಅಂಗಡಿಗೆ ‘ಎಂ ಬೇವಾಫಾ ಚಾಯ್‌ವಾಲಾ’ ಎಂದು ಹೆಸರಿಟ್ಟಿದ್ದಾನೆ. ಈ ಘಟನೆ ಮಧ್ಯಪ್ರದೇಶದ ರಾಜ್‌ಗಢ್‌ನಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ತನ್ನ ಮಾಜಿ ಗೆಳತಿಗೆ ತಿರುಗೆಟು ನೀಡಲು ಅವಳ ಮೊದಲಕ್ಷರಗಳನ್ನು ಬಳಸಿ ಟೀ ಸ್ಟಾಲ್ ಓಪನ್ ಮಾಡಿದ್ದಾನೆ. ಇತನ ಹೆಸರು ಅಂತಾರ್ ಗುಜ್ಜರ್ ಎಂದು, ಇದೀಗ ಈ ಬಗ್ಗೆ ಎಲ್ಲರನ್ನೂ ಗಮನ ಸೆಳೆದಿದ್ದಾನೆ.

ಇದರಲ್ಲೂ ಒಂದು ಆಸಕ್ತಿದಾಯಕ ಸಂಗತಿಯೆಂದರೆ, ಈ ಯುವಕ ಜನರಿಗೆ ವಿವಿಧ ದರಗಳಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದಾನೆ. ದಂಪತಿಗಳಿಗೆ, ‘M Bewafa Chaiwala’ ನಲ್ಲಿ ಒಂದು ಕಪ್ ಚಹಾದ ಬೆಲೆ 10 ರೂ, ಆದರೆ ಅದೇ ಚಹಾಕ್ಕೆ ಪ್ರೀತಿಯಲ್ಲಿ ನೊಂದವರಿಗೆ ಅಥವಾ ಪ್ರೀತಿಯಲ್ಲಿ ದ್ರೋಹಕ್ಕೆ ಒಳಗಾದವರಿಗೆ ಕೇವಲ 5 ರೂಗಳಿಗೆ ಮಾರಾಟ ಮಾಡಲಾಗುತ್ತದೆ.

ಇದನ್ನು ಓದಿ:  ಈ ಫೋಟೋದಲ್ಲಿರುವ ಪಕ್ಷಿಯನ್ನು ಗುರುತಿಸಲಾರದೆ ಹೆಣಗಾಡಿದ ನೆಟ್ಟಿಗರು; ನೀವು ಗುರುತಿಸಬಲ್ಲಿರಾ..!

ಬಿಎ ಅಂತಿಮ ವರ್ಷದ ವಿದ್ಯಾರ್ಥಿಯೂ ಆಗಿರುವ ಅಂತಾರ್ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು, ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದಿದೆ. ಸುಮಾರು 2 ವರ್ಷಗಳ ಕಾಲ ಇಬ್ಬರು ಪ್ರೀತಿಸುತ್ತಿದ್ದರು. ನಂತರ, ಅಂತರ್ ಮದುವೆಯ ಪ್ರಸ್ತಾಪ ಮಾಡಿದ್ದಾನೆ, ಆದರೆ ಆಕೆ ಅಂತರ್​​ನ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಳು. ಅಂತರ್ ನಿರುದ್ಯೋಗಿ ಮತ್ತು ತನ್ನ ನಿಶ್ಚಿತ ವರನಿಗೆ ಎಲ್ಲವೂ ಇದೆ ಎಂದು ಹುಡುಗಿ ಅಂತರ್​ನಲ್ಲಿ ಮಾತನಾಡುವುದನ್ನು ನಿಲ್ಲಿಸಿದಳು.

ಪ್ರೀತಿಸಿದ ಹುಡುಗಿ ದ್ರೋಹ ಮಾಡಿದ್ದಾಳೆ ಎಂದು ಅಂತರಾರನು ಜೀವ ಕಳೆದುಕೊಳ್ಳವ ನಿರ್ಧಾರ ಕೂಡ ಮಾಡಿದ್ದ. ಆದರೆ ಅವನ ಸ್ನೇಹಿತನ ಬುದ್ಧಿ ಮಾತಿಗೆ ಬೆಲೆ ಕೊಟ್ಟು, ಎರಡು ವರ್ಷದ ಪ್ರೀತಿಗೆ ಎಳ್ಳುನೀರು ಬಿಟ್ಟಿದ್ದಾನೆ. ನಂತರ ತನ್ನ ಮಾಜಿ ಗೆಳತಿಯ ಮೊದಲಕ್ಷರಗಳನ್ನು ಬಳಸಿಕೊಂಡು ಅವಳಿಗೆ ನಾನು ಏನು? ಎಂದು ತೋರಿಸಲು ಚಹಾ ಅಂಗಡಿಯನ್ನು ತೆರೆದನು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 22 November 22

ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್