ಆಮ್​ರಸ್​ ಚೀಝ್​ ದೋಸೆ; ಕೊಲ್ಲಬೇಡಿರೋ ದೋಸೆಯನ್ನು ಎನ್ನುತ್ತಿರುವ ನೆಟ್ಟಿಗರು

Mango : ಅಹಮದಾಬಾದ್ ಮೂಲದ ಬ್ಲಾಗರ್ ಹಂಚಿಕೊಂಡ ಈ ವಿಡಿಯೋ ಈತನಕ 3ಮಿಲಿಯನ್​ ಜನರ ಕಣ್ಣಿಗೆ ಬಿದ್ದಿದೆ. ಅಲ್ಲಿಯ ಬೀದಿಬದಿ ತಯಾರಾದ ಈ ದೋಸೆಯನ್ನು ನೋಡಿ ಸಾವಿರಾರು ಜನರು 'ಡಿಸ್ಲೈಕ್'ಗಾಗಿ ಮೊರೆ ಇಟ್ಟಿದ್ದಾರೆ.

ಆಮ್​ರಸ್​ ಚೀಝ್​ ದೋಸೆ; ಕೊಲ್ಲಬೇಡಿರೋ ದೋಸೆಯನ್ನು ಎನ್ನುತ್ತಿರುವ ನೆಟ್ಟಿಗರು
ಆಮ್ರಸ್​ ಚೀಝ್​ ದೋಸೆ
Follow us
|

Updated on:May 13, 2023 | 1:48 PM

Viral : ಚಾಕೋಲೇಟ್​ ಪಾನಿಪುರಿ, ಹಣ್ಣುಗಳ ಚಹಾ ಹೀಗೆ ಇನ್ನೂ ಏನೇನೋ ವಿಚಿತ್ರ ಪಾಕಪ್ರಯೋಗಗಳನ್ನು ಮಾಡಿದಾಗೆಲ್ಲ ನೆಟ್ಟಮಂದಿ ಸರಿಯಾಗಿ ಝಾಡಿಸಿದ್ದಾರೆ! ಆದರೀಗ ಮತ್ತದೇ ಝಾಡಿಸುವಿಕೆಗೆ ಅವರಿಗೆ ಅವಕಾಶ ಒದಗಿದೆ. ಈಗ ಯಾರು ಏನು ಎಲ್ಲಿ ಮತ್ತೆಂಥಾ ಪಾಕಪ್ರಾವೀಣ್ಯ ಮೆರೆದಿದ್ದಾರೆ ಎಂಬ ಕುತೂಹಲ ನಿಮಗೀಗಾಗಲೇ ಹುಟ್ಟಿತೇ? ಈಗಂತೂ ಮಾವೋತ್ಸವ! ಮಾವಿನಹಣ್ಣಿನ ಶೀಕರಣಿ ಅಥವಾ ರಸಾಯನದ ಸ್ವಾದಲ್ಲಿ ದಿನವೂ ಮುಳುಗಿ ಏಳುತ್ತಿದ್ದೀರಿ;  ಪೂರಿಯೊಂದಿಗೆ, ಚಪಾತಿಯೊಂದಿಗೆ, ಹೋಳಿಗೆಯೊಂದಿಗೂ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by foodie_eraa | Ahmedabad Food blogger (@foodie_eraa)

ಈ ವಿಡಿಯೋದಲ್ಲಿ ದೋಸೆ ಹಿಟ್ಟಿನ ಮೇಲೆ ಶೀಕರಣಿ ಹರಡಿ, ಚೀಝ್​, ಬಾದಾಮಿ, ಗೋಡಂಬಿ, ದ್ರಾಕ್ಷಿ, ಕೊತ್ತಂಬರಿ ಸೊಪ್ಪು ಹಾಕಲಾಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ, ಇಂಥ ದೋಸೆಯನ್ನು ಬ್ಯಾನ್​ ಮಾಡಿ ಎಂದು ಸಮರ ಸಾರುತ್ತಿದ್ದಾರೆ. ಅಹಮದಾಬಾದ್​ನ ರಸ್ತೆಬದಿ ಅಂಗಡಿಯಲ್ಲಿ ತಯಾರಿಸುವಾಗ ಈ ವಿಡಿಯೋ ಚಿತ್ರೀಕರಿಸಲಾಗಿದೆ. ದಕ್ಷಿಣ ಭಾರತೀಯರ ಪರಮಖಾದ್ಯ ದೋಸೆಯನ್ನು ಈ ಉತ್ತರದವರು ಯಾಕೆ ಹೀಗೆಲ್ಲ ಹತ್ಯೆಗೈಯ್ಯುತ್ತಾರೆ ಎಂದು ಸಾಕಷ್ಟು ಜನ ಕುಪಿತರಾಗಿದ್ದಾರೆ.

ಇದನ್ನೂ ಓದಿ : ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ​ ಡೋನಟ್​ ಪಡೆದ ರ್‍ಯಾಕೂನ್

ಅಹಮದಾಬಾದ್ ಮೂಲದ ಬ್ಲಾಗರ್ ಹಂಚಿಕೊಂಡ ಈ ವಿಡಿಯೋ ಈತನಕ 3ಮಿಲಿಯನ್​ ಜನರ ಕಣ್ಣಿಗೆ ಬಿದ್ದಿದೆ. ಸಾವಿರಾರು ಜನರು ‘ಡಿಸ್ಲೈಕ್’ಗಾಗಿ ಮೊರೆ ಇಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಕಲ್ಲಂಗಡಿ ಹಣ್ಣು ಮತ್ತು ಅದರ ಬೀಜದ ದೋಸೆ ತಯಾರಾಗುತ್ತದೆ ಕಾಯುತ್ತಿರಿ ಎಂದು ವ್ಯಂಗ್ಯವಾಡಿದ್ದಾರೆ ಒಬ್ಬರು.

ಈಗೇನು ನೀವೂ ಈ ಆಮ್ರಸ್​ ಚೀಸ್​ ದೋಸೆ ಮಾಡೋದಕ್ಕೆ ಪ್ರಯತ್ನಿಸ್ತೀರಾ ಹೇಗೆ?!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:47 pm, Sat, 13 May 23

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ