AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ

Elon Musk : ಎಲಾನ್​, ಆ್ಯಂಟಿ ಏಜಿಂಗ್ ಫಾರ್ಮ್ಯುಲಾ ಕುರಿತು ಪ್ರಯೋಗ ಮಾಡುತ್ತಿದ್ದರೋ ಏನೋ, ಫಲಿತಾಂಶ ಮಾತ್ರ ಹೀಗಾಗಿಬಿಟ್ಟಿದೆ! ಬಂದ ಬಂದ ಬಂದ ನಮ್ಮ ಎಲಾನ್​ ಪುಟ್ಟಾ...

Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ
ಮಾಸ್ಟರ್ ಎಲಾನ್ ಮಸ್ಕ್!
TV9 Web
| Edited By: ಶ್ರೀದೇವಿ ಕಳಸದ|

Updated on: Jun 05, 2023 | 4:41 PM

Share

Artificial Intelligence: ಎಐ ಕಲಾವಿದರಂತೂ ಇತ್ತೀಚೆಗೆ ಎಲಾನ್ ಮಸ್ಕ್​ನನ್ನು (Elon Musk) ಆವಾಹಿಸಿಕೊಂಡ ಹಾಗಿದೆ. ಮೊನ್ನೆಯಷ್ಟೇ ಉತ್ತರ ಭಾರತೀಯ ವರನಂತೆ ಎಲಾನ್​ನನ್ನು ಸೃಷ್ಟಿಸಿ ಸಿಂಗರಿಸಿ ಕುಣಿಸಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಮೆರವಣಿಗೆ ಮಾಡಿದ್ದಾಯಿತು. ಅದು ಅಷ್ಟಕ್ಕೇ ಸಂಪನ್ನಗೊಳ್ಳದೆ ಎಲಾನ್ I Love it ಎಂದದ್ದೂ ಆಯಿತು. ಮುಂದೇನು ಎಂದು ಕುತೂಹಲದಿಂದ ಕಾಯ್ದು ಕುಳಿತ ನಿಮ್ಮೆದುರಿಗೆ ಈಗ ಮಾಸ್ಟರ್​ ಎಲಾನ್​ನನ್ನು ಕೈಹಿಡಿದು ಕರೆದುಕೊಂಡು ಬಂದಿದ್ದೇವೆ.

ಎರಡೂವರೆ ಮೂರು ವರ್ಷದ ಮಗು ಎಲಾನ್​ ಡಂಗ್ರಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದೆ. ಲಕ್ಷಾಂತರ ಜನರು ಈ ಫೋಟೋ ನೋಡಿ ನಕ್ಕಿದ್ದಾರೆ, ಮುದ್ದಿಸಿದ್ದಾರೆ, ಕಾಲೆಳೆದಿದ್ದಾರೆ, ತೋಚಿದಂತೆ ಪ್ರತಿಕ್ರಿಯಿಸಿದ್ಧಾರೆ. ಆಹಾ ಇದು ಕ್ಯೂರಿಯಸ್​ ಕೇಸ್​ ಆಫ್​ ಬೆಂಜಮಿನ್​ ಬಟನ್​ ಚಿತ್ರದ ಹಾಗಿಲ್ಲವೆ? ಇದು ಬಹಳ ಮುದ್ದಾಗಿದೆ, ದತ್ತು ಪಡೆದುಕೊಳ್ಳಬಹುದೆ? ನಾನು ಈ ಮಗುವನ್ನು ಈಗಲೇ ಕಿಡ್ನ್ಯಾಪ್​ ಮಾಡುತ್ತೇನೆ ಅಂತೆಲ್ಲ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು. ಮಜಾ ಎಂದರೆ, ಮಗುವಿದ್ದಾಗಿನಿಂದ ಹಿಡಿದು ಹದಿಹರೆಯದ ತನಕವೂ ವಿವಿಧ ಭಂಗಿಗಳಲ್ಲಿ ಮಸ್ಕ್​ನ ಎಐ ಚಿತ್ರಗಳನ್ನು ಈ ಕೆಳಗಿನ ಟ್ವೀಟ್​ನಲ್ಲಿ ನೋಡಬಹುದಾಗಿದೆ.

ಇನ್ನು ಎಐ ಕಲಾವಿದರ ಕೈಯಲ್ಲಾಡೋ ಬೊಂಬೆಯಂತಾಗಿರುವ ಎಲಾನ್​ ಮಸ್ಕ್​ ತನ್ನ ಈ ಅವತಾರಗಳನ್ನೆಲ್ಲ ಖುಷಿಯಿಂದ ಅನುಭವಿಸುತ್ತಿದ್ದಾನೆ, ರೀಟ್ವೀಟ್ ಕೂಡ ಮಾಡುತ್ತಿದ್ದಾನೆ. ಅಬ್ಬಾ ಬೆಳಗ್ಗೆಯಿಂದ ನಾನು ಯಾಕೋ ಸಪ್ಪಗಿದ್ದೆ. ಈಗ ನಿಜಕ್ಕೂ ಇದನ್ನು ನೋಡಿ ನಗುತ್ತಿದ್ದೇನೆ. ಮಸ್ಕ್​ ಮತ್ತು ಕಲಾವಿದರಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಅನೇಕರು ವಿವಿಧ ಸೆಲೆಬ್ರಿಟಿಗಳ ಎಐ ಕಲಾಕೃತಿಗಳನ್ನು ಈ ಥ್ರೆಡ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಎಲಾನ್​ ಮರಿಯನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?