AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ

Elon Musk : ಎಲಾನ್​, ಆ್ಯಂಟಿ ಏಜಿಂಗ್ ಫಾರ್ಮ್ಯುಲಾ ಕುರಿತು ಪ್ರಯೋಗ ಮಾಡುತ್ತಿದ್ದರೋ ಏನೋ, ಫಲಿತಾಂಶ ಮಾತ್ರ ಹೀಗಾಗಿಬಿಟ್ಟಿದೆ! ಬಂದ ಬಂದ ಬಂದ ನಮ್ಮ ಎಲಾನ್​ ಪುಟ್ಟಾ...

Viral: ನನ್ನನ್ನು ದತ್ತು ತೆಗೆದುಕೊಳ್ಳುತ್ತೀರೋ? ನಿಮ್ಮ ಕೈಲಾಡೋ ಬೊಂಬೆ ಮಸ್ಕಯ್ಯ
ಮಾಸ್ಟರ್ ಎಲಾನ್ ಮಸ್ಕ್!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 05, 2023 | 4:41 PM

Artificial Intelligence: ಎಐ ಕಲಾವಿದರಂತೂ ಇತ್ತೀಚೆಗೆ ಎಲಾನ್ ಮಸ್ಕ್​ನನ್ನು (Elon Musk) ಆವಾಹಿಸಿಕೊಂಡ ಹಾಗಿದೆ. ಮೊನ್ನೆಯಷ್ಟೇ ಉತ್ತರ ಭಾರತೀಯ ವರನಂತೆ ಎಲಾನ್​ನನ್ನು ಸೃಷ್ಟಿಸಿ ಸಿಂಗರಿಸಿ ಕುಣಿಸಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಮೆರವಣಿಗೆ ಮಾಡಿದ್ದಾಯಿತು. ಅದು ಅಷ್ಟಕ್ಕೇ ಸಂಪನ್ನಗೊಳ್ಳದೆ ಎಲಾನ್ I Love it ಎಂದದ್ದೂ ಆಯಿತು. ಮುಂದೇನು ಎಂದು ಕುತೂಹಲದಿಂದ ಕಾಯ್ದು ಕುಳಿತ ನಿಮ್ಮೆದುರಿಗೆ ಈಗ ಮಾಸ್ಟರ್​ ಎಲಾನ್​ನನ್ನು ಕೈಹಿಡಿದು ಕರೆದುಕೊಂಡು ಬಂದಿದ್ದೇವೆ.

ಎರಡೂವರೆ ಮೂರು ವರ್ಷದ ಮಗು ಎಲಾನ್​ ಡಂಗ್ರಿ ಡ್ರೆಸ್​ನಲ್ಲಿ ಕಾಣಿಸಿಕೊಂಡಿದೆ. ಲಕ್ಷಾಂತರ ಜನರು ಈ ಫೋಟೋ ನೋಡಿ ನಕ್ಕಿದ್ದಾರೆ, ಮುದ್ದಿಸಿದ್ದಾರೆ, ಕಾಲೆಳೆದಿದ್ದಾರೆ, ತೋಚಿದಂತೆ ಪ್ರತಿಕ್ರಿಯಿಸಿದ್ಧಾರೆ. ಆಹಾ ಇದು ಕ್ಯೂರಿಯಸ್​ ಕೇಸ್​ ಆಫ್​ ಬೆಂಜಮಿನ್​ ಬಟನ್​ ಚಿತ್ರದ ಹಾಗಿಲ್ಲವೆ? ಇದು ಬಹಳ ಮುದ್ದಾಗಿದೆ, ದತ್ತು ಪಡೆದುಕೊಳ್ಳಬಹುದೆ? ನಾನು ಈ ಮಗುವನ್ನು ಈಗಲೇ ಕಿಡ್ನ್ಯಾಪ್​ ಮಾಡುತ್ತೇನೆ ಅಂತೆಲ್ಲ ಪ್ರತಿಕ್ರಿಯಿಸಿದ್ಧಾರೆ ನೆಟ್ಟಿಗರು. ಮಜಾ ಎಂದರೆ, ಮಗುವಿದ್ದಾಗಿನಿಂದ ಹಿಡಿದು ಹದಿಹರೆಯದ ತನಕವೂ ವಿವಿಧ ಭಂಗಿಗಳಲ್ಲಿ ಮಸ್ಕ್​ನ ಎಐ ಚಿತ್ರಗಳನ್ನು ಈ ಕೆಳಗಿನ ಟ್ವೀಟ್​ನಲ್ಲಿ ನೋಡಬಹುದಾಗಿದೆ.

ಇನ್ನು ಎಐ ಕಲಾವಿದರ ಕೈಯಲ್ಲಾಡೋ ಬೊಂಬೆಯಂತಾಗಿರುವ ಎಲಾನ್​ ಮಸ್ಕ್​ ತನ್ನ ಈ ಅವತಾರಗಳನ್ನೆಲ್ಲ ಖುಷಿಯಿಂದ ಅನುಭವಿಸುತ್ತಿದ್ದಾನೆ, ರೀಟ್ವೀಟ್ ಕೂಡ ಮಾಡುತ್ತಿದ್ದಾನೆ. ಅಬ್ಬಾ ಬೆಳಗ್ಗೆಯಿಂದ ನಾನು ಯಾಕೋ ಸಪ್ಪಗಿದ್ದೆ. ಈಗ ನಿಜಕ್ಕೂ ಇದನ್ನು ನೋಡಿ ನಗುತ್ತಿದ್ದೇನೆ. ಮಸ್ಕ್​ ಮತ್ತು ಕಲಾವಿದರಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಅನೇಕರು ವಿವಿಧ ಸೆಲೆಬ್ರಿಟಿಗಳ ಎಐ ಕಲಾಕೃತಿಗಳನ್ನು ಈ ಥ್ರೆಡ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಎಲಾನ್​ ಮರಿಯನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್