Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನಂದ್ ಮಹಿಂದ್ರಾರಿಂದ ಮತ್ತೊಂದು ಪ್ರೇರಣಾದಾಯಕ ವಿಡಿಯೋ, ಏಕಾಗ್ರತೆ ಕಳೆದುಕೊಳ್ಳಬೇಡಿ ಎಂಬ ಸಂದೇಶ!

ಮಹಿಂದ್ರಾ ಅವರು ಸದರಿ ವಿಡಿಯೊವನ್ನು ಇಂದು ಬೆಳಗ್ಗೆಯಷ್ಟೇ ಪೋಸ್ಟ್ ಮಾಡಿದ್ದರೂ ಈಗಾಗಲೇ ಸುಮಾರು ಅರ್ಧಕೋಟಿಯಷ್ಟು ಜನ ಅದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಪೋಸ್ಟ್ ಅನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಇದು ದಿಟ್ಟತನ ಮತ್ತು ಸಂಕಲ್ಪಕ್ಕೆ ಅತ್ಯುತ್ತಮ ಉದಾಹರಣೆ ಅಂತ ಹೇಳುತ್ತಿದ್ದಾರೆ.

ಆನಂದ್ ಮಹಿಂದ್ರಾರಿಂದ ಮತ್ತೊಂದು ಪ್ರೇರಣಾದಾಯಕ ವಿಡಿಯೋ, ಏಕಾಗ್ರತೆ ಕಳೆದುಕೊಳ್ಳಬೇಡಿ ಎಂಬ ಸಂದೇಶ!
ಆನಂದ್ ಮಹಿಂದ್ರಾ ಮತ್ತವರ ಹೊಸ ಟ್ವೀಟ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2022 | 4:11 PM

ಉದ್ಯಮಿ ಅನಂದ್ ಮಹಿಂದ್ರಾ (Anand Mahindra) ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸಕ್ರಿಯರಾಗಿರುತ್ತಾ ಒಮ್ಮೆ ವಿನೋದಮಯ ಮತ್ತೊಮ್ಮೆ ಪ್ರೇರಣಾದಾಯಕ (motivational) ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಟ್ವಿಟ್ಟರ್ ನಲ್ಲಿ ಸುಮಾರು ಒಂದು ಕೋಟಿಯಷ್ಟು ಫಾಲೋಯರ್ಸ್ (followers) ಹೊಂದಿರುವ ಅವರು ಇತ್ತೀಚಿಗೆ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿ ಅದರ ಮೂಲಕ ಸಂಕಷ್ಟದ ಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬ ಸಂದೇಶವನ್ನು ನೀಡುತ್ತಾರೆ.

ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಚಿಕ್ಕಗಾತ್ರದ ಗಿಡುಗವೊಂದು ಬೇಟೆಯನ್ನು ಅರಸುತ್ತಾ ಆಕಾಶದಲ್ಲಿ ಹಾರುತ್ತಿರುವುದನ್ನು ನೋಡಬಹುದು. ತನಗೆ ಎದುರಾಗಿ ಬೀಸುತ್ತಿರುವ ಗಾಳಿಯಲ್ಲಿ ಅದು ತನ್ನ ಕುತ್ತಿಗೆ ಮತ್ತು ಬಾಲವನ್ನು ನೇರವಾಗಿಟ್ಟು ರೆಕ್ಕೆಗಳನ್ನು ಬಡಿಯುತ್ತಾ ಹಾರುತ್ತಿದೆ. ಅದರ ಹಾರಾಟಕ್ಕೆ ಪ್ರತಿಕೂಲವಾದ ವಾತಾವರಣವಿದ್ದರೂ ಬೇಟೆಯನ್ನು ಅರಸುವ ಅದರ ಏಕಾಗ್ರಚಿತ್ತಕ್ಕೆ ಕಿಂಚಿತ್ತೂ ಭಂಗವುಂಟಾಗುವುದಿಲ್ಲ. ಡಿಸ್ಕವರ್ ವೈಲ್ಡ್ ಲೈಫ್ ಪ್ರಕಾರ ಗಿಡುಗವು ತನಗೆ ವಿರುದ್ಧವಾಗಿ ಬೀಸುತ್ತಿರುವ ಗಾಳಿಯಲ್ಲೂ ತನ್ನ ಹಾರಾಟಕ್ಕೆ ನೆರವಾಗುವ ಗಾಳಿಯಲ್ಲಿ ಹಾರುವಷ್ಟೇ ವೇಗದಲ್ಲಿ ಹಾರುತ್ತದಂತೆ. ಮಹಿಂದ್ರಾ ಅವರು ಪಕ್ಷಿಯ ವಿಚಲಿತಗೊಳ್ಳದ ಫೋಕಸನ್ನು ಪ್ರಶಂಸಿದ್ದಾರೆ.

ಮಹಿಂದ್ರ ಅವರು 31-ಸೆಕೆಂಡುಗಳ ವಿಡಿಯೋ ಜೊತೆಗೆ ಈ ಸಂದೇಶವನ್ನು ಬರೆದಿದ್ದಾರೆ: ನಿಸರ್ಗ ನಮಗೆ ಬದುಕಿನ ಪಾಠಗಳನ್ನು ನೀಡುತ್ತಲೇ ಇರುತ್ತದೆ. ಸಂಕಷ್ಟದ ಸಮಯವನ್ನು ನೀವು ಹೇಗೆ ಎದುರಿಸುತ್ತೀರಿ? ನೀವು ಯಾವುದೇ ವೃತ್ತಿ ಮಾಡಿಕೊಂಡಿರಿ, ಸಂದರ್ಭ ನಿಮ್ಮ ಅನುಕೂಲಕ್ಕೆ ಅನುಗುಣವಾಗಿರದಿದ್ದರೂ ರೆಕ್ಕೆಗಳನ್ನು ಬಡಿಯುತ್ತಿದ್ದರೆ ಮುಂದಕ್ಕೆ ಸಾಗುವಿರಿ. ಆದರೆ ನಿಮ್ಮ ತಲೆ ಸ್ಥಿರವಾಗಿರಲಿ, ಮನಸ್ಸಿನಲ್ಲಿ ಗೊಂದಲ ಬೇಡ ಮತ್ತು ನಿಮ್ಮ ದೃಷ್ಟಿ ಜಾಗರೂಕವಾಗಿರಬೇಕು.’

ಮಹಿಂದ್ರಾ ಅವರು ಸದರಿ ವಿಡಿಯೊವನ್ನು ಇಂದು ಬೆಳಗ್ಗೆಯಷ್ಟೇ ಪೋಸ್ಟ್ ಮಾಡಿದ್ದರೂ ಈಗಾಗಲೇ ಸುಮಾರು ಅರ್ಧಕೋಟಿಯಷ್ಟು ಜನ ಅದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಪೋಸ್ಟ್ ಅನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಇದು ದಿಟ್ಟತನ ಮತ್ತು ಸಂಕಲ್ಪಕ್ಕೆ ಅತ್ಯುತ್ತಮ ಉದಾಹರಣೆ ಅಂತ ಹೇಳುತ್ತಿದ್ದಾರೆ.

ಒಬ್ಬ ಯೂಸರ್, ‘ನಿಸರ್ಗ ನಿಜಕ್ಕೂ ಅಸಲಿ ಶಿಕ್ಷಕ, ಅದರ ಬಗ್ಗೆ ಹೆಚ್ಚು ಅರ್ಥಮಾಡಿಕೊಂಡಂತೆಲ್ಲ ವಿಜ್ಞಾನವನ್ನು ಹೆಚ್ಚೆಚ್ಚು ಗ್ರಹಿಸುತ್ತೇವೆ,’ ಅಂತ ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಯೂಸರ್, ‘ ನೀವು ಹೇಳಿದ್ದು ಅಕ್ಷರಶಃ ಸತ್ಯ ಸರ್. ಪ್ರತಿಯೊಬ್ಬ ವ್ಯಕ್ತಿ ಬದುಕಿನ ವಿವಿಧ ಹಂತಗಳಲ್ಲಿ ಕಷ್ಟಕರ ಸಮಯವನ್ನು ಎದುರಿಸುತ್ತಾನೆ. ಅವುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ನಿಮ್ಮ ಬೆಲ್ಟ್ಗಳನ್ನು ಬಿಗಿಗೊಳಿಸಿಕೊಂಡು ವಿಶಾಲಾವಾದ ಮನಸನ್ನು ಹೊಂದಿರಿ, ಇದೊಂದು ತಾತ್ಕಾಲಿಕ ಹಂತ ಅಷ್ಟೇ. ಕೃಷಿ ಉದ್ಯಮದಲ್ಲಿ ಕಳೆದ 34-ವರ್ಷಗಳಿಂದ ತೊಡಗಿರುವ ನಾನು, ಬದುಕಿನ ಎಲ್ಲಾ ಆಯಾಮಗಳನ್ನು ಅರ್ಥಮಾಡಿಕೊಂಡಿದ್ದೇನೆ. ದೇವರು ನಿಮ್ಮನ್ನು ಆಶೀರ್ವದಿಸಲಿ,’ ಅಂತ ಬರೆದಿದ್ದಾರೆ.

ಮೂರನೇವರು, ‘ ನಿಮ್ಮ ಟ್ವೀಟ್ ಗಳನ್ನೇ ಓದುವುದೇ ಒಂದು ಮಹದಾನಂದ. ನಿಮ್ಮ ಪ್ರೇರಣಾದಾಯ ಸಂದೇಶಗಳನ್ನು ಎದುರು ನೋಡುತ್ತಿರುವೆ. ಥ್ಯಾಂಕ್ಯೂ ಸರ್,’ ಅಂತ ಬರೆದಿದ್ದಾರೆ.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!