AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!

McDonald's Pickle Art : ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!
ಆಸ್ಟ್ರೇಲಿಯಾದ ಆರ್ಟ್​ ಗ್ಯಾಲರಿಯಲ್ಲಿರುವ ‘ಉಪ್ಪಿನಕಾಯಿ’ ಕಲಾಕೃತಿ.
TV9 Web
| Edited By: |

Updated on:Aug 05, 2022 | 6:02 PM

Share

Trending : ಈ ಉಪ್ಪಿನಕಾಯಿ ಮೆಕ್‌ಡೊನಾಲ್ಡ್‌ನ ಚೀಸ್‌ಬರ್ಗರ್‌ನಿಂದ ಸಿಡಿದು ನ್ಯೂಜಿಲೆಂಡ್‌ನ ಆರ್ಟ್ ಗ್ಯಾಲರಿಯ ಸೀಲಿಂಗ್​ಗೆ ಅಂಟಿಕೊಂಡಿದೆ! ಹೌದು, ಈ ಉಪ್ಪಿನಕಾಯಿ ಕಲಾಕೃತಿ ಈಗ ವೈರಲ್ ಆಗಿದೆ. ‘ಉಪ್ಪಿನಕಾಯಿ’ ಎಂಬ ಶೀರ್ಷಿಕೆಯ ಈ ಕಲಾಕೃತಿಯು ಆಸ್ಟ್ರೇಲಿಯಾದ ಕಲಾವಿದ ಮ್ಯಾಥ್ಯೂ ಗ್ರಿಫಿನ್‌ ಅವರಿಂದ ರಚಿತವಾಗಿದೆ. ಈ ಕಲಾಕೃತಿಗೆ ಅವರು ರೂ. 4.93,000 ಬೆಲೆ ನಿಗದಿ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿರುವ ಈ ‘ಉಪ್ಪಿನಕಾಯಿ’ಯನ್ನು ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅಲ್ಲದೆ ಆಕ್ಲೆಂಡ್‌ನಲ್ಲಿ ಏರ್ಪಡಿಸಿದ್ದ ಕಲಾಪ್ರದರ್ಶನದಲ್ಲಿದ್ದ ನಾಲ್ಕು ಹೊಸ ಕೃತಿಗಳ ಪೈಕಿ ಇದೂ ಒಂದು. ‘ಮ್ಯಾಥ್ಯೂ ಗ್ರಿಫಿನ್ – ‘ಪಿಕಲ್’ 2022’ ಪೋಸ್ಟ್​ ಅನ್ನು ಇನ್​ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ, ಮರುಹಂಚಿಕೊಳ್ಳುತ್ತಿದ್ದಾರೆ.

ಈ ಕಲಾಕೃತಿಯನ್ನು, ಕಲಾವಿದನನ್ನು ಕೆಲವರು ‘ಅದ್ಭುತ, ಪ್ರತಿಭಾವಂತ’ ಎಂದು ಹೇಳಿದರೆ ಇನ್ನೂ ಕೆಲವರು ‘ಮೂರ್ಖತನ’ ಎಂದಿದ್ದಾರೆ. ಒಬ್ಬರು, ‘ಇದು ನಾನು ನೋಡಿದ ಅತ್ಯುತ್ತಮ ಕಲಾಕೃತಿ’ ಎಂದಿದ್ದಾರೆ. ಇನ್ನೊಬ್ಬರು, ‘ಮೂರ್ಖ ಮತ್ತು ನಿಷ್ಪ್ರಯೋಜಕ. ಕಲೆಯ ಕೊಲೆಯಾಗಿದೆ.’ ಎಂದಿದ್ದಾರೆ. ಮಗದೊಬ್ಬರು, ‘ನಾನು ಹದಿಹರೆಯದವನಾಗಿದ್ದಾಗ ಇದನ್ನು ತಯಾರಿಸಿದ್ದೆ. ಅದಕ್ಕಾಗಿ ಪೊಲೀಸರು ಮೆಕ್​ಡೊನಾಲ್ಡ್​ನಿಂದ ನನ್ನನ್ನು ಹೊರಹಾಕಿದ್ದರು. ಅದೀಗ ಇಲ್ಲಿ ಕಲಾಕೃತಿಯಾಗಿದೆ.’ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ

ಗ್ರಿಫಿನ್ ಅವರ ಈ ಕಲಾಕೃತಿಯನ್ನುದ್ದೇಶಿಸಿ ‘ದಿ ಗಾರ್ಡಿಯನ್​’ನೊಂದಿಗೆ ಮಾತನಾಡಿದ ಸಿಡ್ನಿ ಕಲಾಪ್ರದರ್ಶನದ ನಿರ್ದೇಶಕ ರಿಯಾನ್ ಮೂರ್,  ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

‘ಸಾಮಾನ್ಯವಾಗಿ ಕಲಾವಿದ ತನ್ನ ಪಾಡಿಗೆ ತಾನು ಕಲಾರಚನೆಯಲ್ಲಿ ಮುಳುಗಿರುತ್ತಾನೆ. ಇದು ಕಲೆ ಹೌದೋ ಅಲ್ಲವೋ ಎಂದೂ ಕೂಡ ಅವ ನಿರ್ಧರಿಸಲಾರ. ಒಟ್ಟಾರೆ ಒಂದು ಕಲಾಕೃತಿಯನ್ನು ನೋಡಿದಾಗ ಅದು ಹೊಮ್ಮಿರುವ ಅರ್ಥ, ಮೌಲ್ಯದ ಬಗ್ಗೆ ಮಾತನಾಡಬೇಕಿರುವುದು ಸಮಾಜ. ಅಲ್ಲದೆ, ಇದು ಮೇಲ್ಛಾವಣಿಗೆ ಅಂಟಿಸಲಾದ ಉಪ್ಪಿನಕಾಯಿಯಂತೆ ತೋರುತ್ತಿದೆ. ಅಲ್ಲಿ ಯಾವುದೇ ಕೃತಕತೆ ಇಲ್ಲ, ಅದೊಂದು ಶಿಲ್ಪದಂತೆ ಗೋಚರಿಸುತ್ತದೆ’ ಎಂದು ಮೂರ್ ಹೇಳಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On - 5:42 pm, Fri, 5 August 22

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌