AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!

McDonald's Pickle Art : ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

Trending Post : ಈ ‘ಮೆಕ್​ಡೊನಾಲ್ಡ್​ನ ‘ಉಪ್ಪಿನಕಾಯಿ‘ಗೆ ರೂ 4.9 ಲಕ್ಷ!
ಆಸ್ಟ್ರೇಲಿಯಾದ ಆರ್ಟ್​ ಗ್ಯಾಲರಿಯಲ್ಲಿರುವ ‘ಉಪ್ಪಿನಕಾಯಿ’ ಕಲಾಕೃತಿ.
TV9 Web
| Edited By: |

Updated on:Aug 05, 2022 | 6:02 PM

Share

Trending : ಈ ಉಪ್ಪಿನಕಾಯಿ ಮೆಕ್‌ಡೊನಾಲ್ಡ್‌ನ ಚೀಸ್‌ಬರ್ಗರ್‌ನಿಂದ ಸಿಡಿದು ನ್ಯೂಜಿಲೆಂಡ್‌ನ ಆರ್ಟ್ ಗ್ಯಾಲರಿಯ ಸೀಲಿಂಗ್​ಗೆ ಅಂಟಿಕೊಂಡಿದೆ! ಹೌದು, ಈ ಉಪ್ಪಿನಕಾಯಿ ಕಲಾಕೃತಿ ಈಗ ವೈರಲ್ ಆಗಿದೆ. ‘ಉಪ್ಪಿನಕಾಯಿ’ ಎಂಬ ಶೀರ್ಷಿಕೆಯ ಈ ಕಲಾಕೃತಿಯು ಆಸ್ಟ್ರೇಲಿಯಾದ ಕಲಾವಿದ ಮ್ಯಾಥ್ಯೂ ಗ್ರಿಫಿನ್‌ ಅವರಿಂದ ರಚಿತವಾಗಿದೆ. ಈ ಕಲಾಕೃತಿಗೆ ಅವರು ರೂ. 4.93,000 ಬೆಲೆ ನಿಗದಿ ಮಾಡಿದ್ದಾರೆ. ಆಸ್ಟ್ರೇಲಿಯಾದ ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿರುವ ಈ ‘ಉಪ್ಪಿನಕಾಯಿ’ಯನ್ನು ಮೈಕೆಲ್ ಲೆಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಅಲ್ಲದೆ ಆಕ್ಲೆಂಡ್‌ನಲ್ಲಿ ಏರ್ಪಡಿಸಿದ್ದ ಕಲಾಪ್ರದರ್ಶನದಲ್ಲಿದ್ದ ನಾಲ್ಕು ಹೊಸ ಕೃತಿಗಳ ಪೈಕಿ ಇದೂ ಒಂದು. ‘ಮ್ಯಾಥ್ಯೂ ಗ್ರಿಫಿನ್ – ‘ಪಿಕಲ್’ 2022’ ಪೋಸ್ಟ್​ ಅನ್ನು ಇನ್​ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಾಗಿನಿಂದ ನೆಟ್ಟಿಗರು ಬೆರಗಿನಿಂದ ನೋಡುತ್ತಿದ್ದಾರೆ, ಮರುಹಂಚಿಕೊಳ್ಳುತ್ತಿದ್ದಾರೆ.

ಈ ಕಲಾಕೃತಿಯನ್ನು, ಕಲಾವಿದನನ್ನು ಕೆಲವರು ‘ಅದ್ಭುತ, ಪ್ರತಿಭಾವಂತ’ ಎಂದು ಹೇಳಿದರೆ ಇನ್ನೂ ಕೆಲವರು ‘ಮೂರ್ಖತನ’ ಎಂದಿದ್ದಾರೆ. ಒಬ್ಬರು, ‘ಇದು ನಾನು ನೋಡಿದ ಅತ್ಯುತ್ತಮ ಕಲಾಕೃತಿ’ ಎಂದಿದ್ದಾರೆ. ಇನ್ನೊಬ್ಬರು, ‘ಮೂರ್ಖ ಮತ್ತು ನಿಷ್ಪ್ರಯೋಜಕ. ಕಲೆಯ ಕೊಲೆಯಾಗಿದೆ.’ ಎಂದಿದ್ದಾರೆ. ಮಗದೊಬ್ಬರು, ‘ನಾನು ಹದಿಹರೆಯದವನಾಗಿದ್ದಾಗ ಇದನ್ನು ತಯಾರಿಸಿದ್ದೆ. ಅದಕ್ಕಾಗಿ ಪೊಲೀಸರು ಮೆಕ್​ಡೊನಾಲ್ಡ್​ನಿಂದ ನನ್ನನ್ನು ಹೊರಹಾಕಿದ್ದರು. ಅದೀಗ ಇಲ್ಲಿ ಕಲಾಕೃತಿಯಾಗಿದೆ.’ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ

ಗ್ರಿಫಿನ್ ಅವರ ಈ ಕಲಾಕೃತಿಯನ್ನುದ್ದೇಶಿಸಿ ‘ದಿ ಗಾರ್ಡಿಯನ್​’ನೊಂದಿಗೆ ಮಾತನಾಡಿದ ಸಿಡ್ನಿ ಕಲಾಪ್ರದರ್ಶನದ ನಿರ್ದೇಶಕ ರಿಯಾನ್ ಮೂರ್,  ‘ಒಂದು ಕಲಾಕೃತಿಯ ಕುರಿತು ತಮಾಷೆ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ಅದು ಮಾನ್ಯವೇ. ಕಲಾಕೃತಿಯು ಜನರಲ್ಲಿ ಏನೆಲ್ಲ ಅರ್ಥಗಳನ್ನು ಹೊಮ್ಮಿಸುತ್ತಿದೆ ಎನ್ನುವುದಷ್ಟೇ ಕಲಾವಿದನಿಗೆ ಮುಖ್ಯ.’ ಎಂದಿದ್ದಾರೆ.

‘ಸಾಮಾನ್ಯವಾಗಿ ಕಲಾವಿದ ತನ್ನ ಪಾಡಿಗೆ ತಾನು ಕಲಾರಚನೆಯಲ್ಲಿ ಮುಳುಗಿರುತ್ತಾನೆ. ಇದು ಕಲೆ ಹೌದೋ ಅಲ್ಲವೋ ಎಂದೂ ಕೂಡ ಅವ ನಿರ್ಧರಿಸಲಾರ. ಒಟ್ಟಾರೆ ಒಂದು ಕಲಾಕೃತಿಯನ್ನು ನೋಡಿದಾಗ ಅದು ಹೊಮ್ಮಿರುವ ಅರ್ಥ, ಮೌಲ್ಯದ ಬಗ್ಗೆ ಮಾತನಾಡಬೇಕಿರುವುದು ಸಮಾಜ. ಅಲ್ಲದೆ, ಇದು ಮೇಲ್ಛಾವಣಿಗೆ ಅಂಟಿಸಲಾದ ಉಪ್ಪಿನಕಾಯಿಯಂತೆ ತೋರುತ್ತಿದೆ. ಅಲ್ಲಿ ಯಾವುದೇ ಕೃತಕತೆ ಇಲ್ಲ, ಅದೊಂದು ಶಿಲ್ಪದಂತೆ ಗೋಚರಿಸುತ್ತದೆ’ ಎಂದು ಮೂರ್ ಹೇಳಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published On - 5:42 pm, Fri, 5 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ