Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!

Gorilla : ಅಣ್ಣಗೋರಿಲ್ಲಾ ಮಲಗಿರುವಾಗ ತಮ್ಮಗೋರಿಲ್ಲಾ ಅದರ ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದನ್ನು ವೀಕ್ಷಿಸಿ.

Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
ನಂಗೂ ತಿಂಡಿ ಬೇಕು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 04, 2022 | 10:26 AM

Trending :  ಅಣ್ಣ ತಮ್ಮ ಅಕ್ಕ ತಂಗಿಯೊಂದಿಗೆ ಚಿಕ್ಕಂದಿನಲ್ಲಿ ತಿಂಡಿಯನ್ನು ಹಂಚಿಕೊಂಡು ತಿನ್ನುವುದಕ್ಕಿಂತ ಕಿಡಿಗೇಡಿತನದಿಂದ ಕದ್ದು ತಿನ್ನುವುದೇ ಹೆಚ್ಚು ರುಚಿ ಎನ್ನಿಸಿರುತ್ತದೆ ಅಲ್ಲವೆ? ಅದೊಂದು ಆಟ. ಸಣ್ಣಪುಟ್ಟ ಆಸೆ, ಖುಷಿ. ಆದರೆ ನಾವು ಪ್ರಾಣಿವರ್ಗದ ಮೂಲದಿಂದಲೇ ಬಂದಿರುವುದು ಎನ್ನುವುದನ್ನು ಮರೆಯಬಾರದು. ಆಟ, ತಂತ್ರ ಎನ್ನುವುದು ಮನುಷ್ಯನಿಂದಲೇ ಸೃಷ್ಟಿಯಾಗಿದ್ದಲ್ಲ. ಪ್ರಕೃತಿಯಲ್ಲಿಯೇ, ಪ್ರಾಣಿ ಮತ್ತು ಜೀವಿಗಳಲ್ಲಿ ಮೂಲದಲ್ಲಿಯೇ ಇರುವಂಥದ್ದು. ಹಾಗಾಗಿ ತಂತ್ರ ಎನ್ನುವುದು ಪ್ರತೀ ಜೀವಿಯ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಿರುವಂಥದ್ದು. ಆಯಾ ವಯಸ್ಸಿನ ನಿರೀಕ್ಷೆಗೆ ತಕ್ಕಂತೆ ಇದು ಒಳಗೊಳ್ಳುತ್ತಾ ಹೋಗುತ್ತದೆ. ಮನುಷ್ಯ ಬುದ್ಧಿಯುಳ್ಳ ಜೀವಿಯಾಗಿದ್ದರಿಂದ ಇದಕ್ಕೆ ನಾನಾ ಅರ್ಥಗಳು ಹೊಮ್ಮುತ್ತವೆ ಎನ್ನುವುದು ಬೇರೆ ಮಾತು. ಈಗ ಈ ವಿಡಿಯೋವನ್ನೇ ಗಮನಿಸಿ. ಅಣ್ಣಗೋರಿಲ್ಲಾ ತನ್ನ ಪಾಡಿಗೆ ತಾನು ಮಲಗಿದೆ. ತಮ್ಮಗೋರಿಲ್ಲಾಗೆ ಅದು ತಂದಿಟ್ಟುಕೊಂಡಿರುವ ತಿಂಡಿಯ ಮೇಲೆ ಕಣ್ಣುಬಿದ್ದಿದೆ. ಅದನ್ನು ಕೇಳಿದರೆ ಅಣ್ಣ ಕೊಡಬಹುದಾ? ಗೊತ್ತಿಲ್ಲ. ಆದರೆ ತನಗದು ಬೇಕು. ತಮ್ಮಗೋರಿಲ್ಲಾ ಈ ಸಮಯವನ್ನೇ ಸಾಧಿಸಿಕೊಂಡು ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ.

3.97 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ ಈ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೆಯಾಗಿದೆ. ಗೋರಿಲ್ಲಾಗಳು ಮತ್ತು ಮನುಷ್ಯರ ನಡೆವಳಿಕೆಗಳ ಮಧ್ಯೆ ಅಂಥಾ ವ್ಯತ್ಯಾಸವೇನಿಲ್ಲ ಎನ್ನುವುದನ್ನು ಇಲ್ಲಿ ಕಾಣಬಹುದು. 7,600 ಹೆಚ್ಚೂ ಲೈಕ್​ಗಳನ್ನು ಇದು ಪಡೆದುಕೊಂಡಿದೆ.

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ವಿಡಿಯೋದಲ್ಲಿ ಒಬ್ಬರು, ‘ಇವರು ನಮ್ಮಂತೆಯೇ ಇದ್ದಾರೆ’ ಎಂದಿದ್ಧಾರೆ.

ಪಾಪ, ಮನುಷ್ಯನ ಸ್ವಭಾವ ಎಲ್ಲವೂ ತಾನೇ ತನ್ನಿಂದಲೇ ತನಗಾಗಿಯೇ ಎಂದುಕೊಳ್ಳುವುದು!

Published On - 10:11 am, Thu, 4 August 22

VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್
VIDEO: ಸಂಜೀವ್ ಗೊಯೆಂಕಾನ ಕ್ಯಾರೇ ಮಾಡದ ಕೆಎಲ್ ರಾಹುಲ್
ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ಕಿವಿಯ ಲಕ್ಷಣ ಯಾವ ರೀತಿ ಇದ್ರೆ ಅದೃಷ್ಟ ನೋಡಿ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?