AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!

Gorilla : ಅಣ್ಣಗೋರಿಲ್ಲಾ ಮಲಗಿರುವಾಗ ತಮ್ಮಗೋರಿಲ್ಲಾ ಅದರ ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ. ಮುಂದೆ ಏನಾಗುತ್ತದೆ ಎನ್ನುವುದನ್ನು ವೀಕ್ಷಿಸಿ.

Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
ನಂಗೂ ತಿಂಡಿ ಬೇಕು
TV9 Web
| Edited By: |

Updated on:Aug 04, 2022 | 10:26 AM

Share

Trending :  ಅಣ್ಣ ತಮ್ಮ ಅಕ್ಕ ತಂಗಿಯೊಂದಿಗೆ ಚಿಕ್ಕಂದಿನಲ್ಲಿ ತಿಂಡಿಯನ್ನು ಹಂಚಿಕೊಂಡು ತಿನ್ನುವುದಕ್ಕಿಂತ ಕಿಡಿಗೇಡಿತನದಿಂದ ಕದ್ದು ತಿನ್ನುವುದೇ ಹೆಚ್ಚು ರುಚಿ ಎನ್ನಿಸಿರುತ್ತದೆ ಅಲ್ಲವೆ? ಅದೊಂದು ಆಟ. ಸಣ್ಣಪುಟ್ಟ ಆಸೆ, ಖುಷಿ. ಆದರೆ ನಾವು ಪ್ರಾಣಿವರ್ಗದ ಮೂಲದಿಂದಲೇ ಬಂದಿರುವುದು ಎನ್ನುವುದನ್ನು ಮರೆಯಬಾರದು. ಆಟ, ತಂತ್ರ ಎನ್ನುವುದು ಮನುಷ್ಯನಿಂದಲೇ ಸೃಷ್ಟಿಯಾಗಿದ್ದಲ್ಲ. ಪ್ರಕೃತಿಯಲ್ಲಿಯೇ, ಪ್ರಾಣಿ ಮತ್ತು ಜೀವಿಗಳಲ್ಲಿ ಮೂಲದಲ್ಲಿಯೇ ಇರುವಂಥದ್ದು. ಹಾಗಾಗಿ ತಂತ್ರ ಎನ್ನುವುದು ಪ್ರತೀ ಜೀವಿಯ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಿರುವಂಥದ್ದು. ಆಯಾ ವಯಸ್ಸಿನ ನಿರೀಕ್ಷೆಗೆ ತಕ್ಕಂತೆ ಇದು ಒಳಗೊಳ್ಳುತ್ತಾ ಹೋಗುತ್ತದೆ. ಮನುಷ್ಯ ಬುದ್ಧಿಯುಳ್ಳ ಜೀವಿಯಾಗಿದ್ದರಿಂದ ಇದಕ್ಕೆ ನಾನಾ ಅರ್ಥಗಳು ಹೊಮ್ಮುತ್ತವೆ ಎನ್ನುವುದು ಬೇರೆ ಮಾತು. ಈಗ ಈ ವಿಡಿಯೋವನ್ನೇ ಗಮನಿಸಿ. ಅಣ್ಣಗೋರಿಲ್ಲಾ ತನ್ನ ಪಾಡಿಗೆ ತಾನು ಮಲಗಿದೆ. ತಮ್ಮಗೋರಿಲ್ಲಾಗೆ ಅದು ತಂದಿಟ್ಟುಕೊಂಡಿರುವ ತಿಂಡಿಯ ಮೇಲೆ ಕಣ್ಣುಬಿದ್ದಿದೆ. ಅದನ್ನು ಕೇಳಿದರೆ ಅಣ್ಣ ಕೊಡಬಹುದಾ? ಗೊತ್ತಿಲ್ಲ. ಆದರೆ ತನಗದು ಬೇಕು. ತಮ್ಮಗೋರಿಲ್ಲಾ ಈ ಸಮಯವನ್ನೇ ಸಾಧಿಸಿಕೊಂಡು ತಿಂಡಿಯನ್ನು ಕದಿಯಲು ಪ್ರಯತ್ನಿಸುತ್ತಿದೆ.

3.97 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ ಹೊಂದಿದ ಈ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೆಯಾಗಿದೆ. ಗೋರಿಲ್ಲಾಗಳು ಮತ್ತು ಮನುಷ್ಯರ ನಡೆವಳಿಕೆಗಳ ಮಧ್ಯೆ ಅಂಥಾ ವ್ಯತ್ಯಾಸವೇನಿಲ್ಲ ಎನ್ನುವುದನ್ನು ಇಲ್ಲಿ ಕಾಣಬಹುದು. 7,600 ಹೆಚ್ಚೂ ಲೈಕ್​ಗಳನ್ನು ಇದು ಪಡೆದುಕೊಂಡಿದೆ.

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ವಿಡಿಯೋದಲ್ಲಿ ಒಬ್ಬರು, ‘ಇವರು ನಮ್ಮಂತೆಯೇ ಇದ್ದಾರೆ’ ಎಂದಿದ್ಧಾರೆ.

ಪಾಪ, ಮನುಷ್ಯನ ಸ್ವಭಾವ ಎಲ್ಲವೂ ತಾನೇ ತನ್ನಿಂದಲೇ ತನಗಾಗಿಯೇ ಎಂದುಕೊಳ್ಳುವುದು!

Published On - 10:11 am, Thu, 4 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ