AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending Post : ‘ಎ ಪ್ಯಾರ್ ಮೊಹಬ್ಬತ್ ಕೀ ಬಾತ್‘ ಅದಕ್ಕೆ ತುರ್ತು ರಜೆ ಬೇಕೆಂದ ಕ್ಲರ್ಕ್

Leave Letter : ಇಲ್ಲಿ ಎರಡು ರಜಾ ವಿನಂತಿ ಪತ್ರಗಳಿಗೆ. ಎರಡೂ ಪ್ರಾಮಾಣಿಕವೇ. ಆದರೆ ನೀವು ಹೇಗೆ ಇವುಗಳನ್ನು ಗ್ರಹಿಸುತ್ತೀರಿ? ಓದಿ ನೋಡಿ.

Trending Post : ‘ಎ ಪ್ಯಾರ್ ಮೊಹಬ್ಬತ್ ಕೀ ಬಾತ್‘ ಅದಕ್ಕೆ ತುರ್ತು ರಜೆ ಬೇಕೆಂದ ಕ್ಲರ್ಕ್
ಶಂಸಾದ್ ಬರೆದ ರಜಾಪತ್ರ
TV9 Web
| Edited By: |

Updated on: Aug 05, 2022 | 4:38 PM

Share

Trending : ಕಾನ್ಪುರದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್​ ತನ್ನ ಮೇಲಧಿಕಾರಿಗೆ ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲರ್ಕ್​ನ ಪ್ರಾಮಾಣಿಕತನಕ್ಕೆ ಅಧಿಕಾರಿಯು ಮನಸೋತು ರಜೆ ನೀಡಿದ್ದನ್ನು ಇಂಡಿಯಾ ಟುಡೇ ವರದಿ ಮಾಡಿದೆ.  ಪ್ರಾಮಾಣಿಕತೆ ಇದ್ದಲ್ಲಿ ದಿಟ್ಟತೆ ಇರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಲರ್ಕ್ ಶಂಸಾದ್ ಅಹಮ್ಮದ್ ಪ್ರೇಮ್​ ನಗರ ಬ್ಲಾಕ್​ ಡೆವಲಪ್​ಮೆಂಟ್​ ಆಫೀಸರ್​ ಅವರಿಗೆ ತನಗೆ ತುರ್ತಾಗಿ ಎರಡು ದಿನಗಳ ರಜೆ ಬೇಕೆಂದು ಪತ್ರ ಬರೆದಿದ್ದಾರೆ. ಅವರು ರಜೆಯ ಕಾರಣವನ್ನು ವಿವರಿಸಿದ ರೀತಿಯೇ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಅಧಿಕಾರಿ ರಜೆ ಕೊಡದೇ ಬೇರೆ ದಾರಿಯೇ ಇರಲಿಲ್ಲ. ಏನಿತ್ತು ಅಂಥ ಕಾರಣ ಅದರಲ್ಲಿ?

‘ತನ್ನ ಪತ್ನಿ ಜಗಳವಾಡಿಕೊಂಡು ಮಕ್ಕಳೊಂದಿಗೆ ತವರಿಗೆ ತೆರಳಿದ್ದಾಳೆ. ಇದು ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ವಿಷಯ. ನನಗೆ ಬಹಳ ನೋವಾಗಿದೆ. ಪರಸ್ಪರ ಮಾತನಾಡಿಕೊಂಡು ಅವಳನ್ನು ಮನವೊಲಿಸಿ ವಾಪಾಸು ಕರೆತರಬೇಕಿದೆ. ಹಾಗಾಗಿ ನನಗೆ ಎರಡು ದಿನಗಳ ರಜೆಯನ್ನು ಮಂಜೂರು ಮಾಡಿ’ ಎಂದು ರಜಾಪತ್ರದಲ್ಲಿ ಶಂಸಾದ್ ತಮ್ಮ ಮೇಲಧಿಕಾರಿಯನ್ನು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ

ಶಂಸಾದರ ಮನವಿ ಸೂಕ್ಷ್ಮತೆಯುಳ್ಳ ಅಧಿಕಾರಿಗೆ ತಲುಪಿದ್ದು ಅದೃಷ್ಟವೆಂದೇ ಹೇಳಬೇಕು. ಅವರು ತಕ್ಷಣವೇ ರಜೆ ನೀಡಿದ್ದಾರೆ. ಇನ್ನು ಶಂಸಾದ ಪ್ಯಾರ್ ಮೊಹಬ್ಬತ್​ ಕೀ ಬಾತ್​ ಅನ್ನು ಸಮಾಧಾನದಿಂದ ಪರಿಹರಿಸಿಕೊಳ್ಳಲು ಹೆಂಡತಿಯ ತವರಿಗೆ ತೆರಳಬಹುದೇನೋ.

ಈ ಪತ್ರ ವೈರಲ್ ಆಗುತ್ತಿದ್ದಂತೆ ರಜೆಯ ಅರ್ಜಿ ಕುರಿತು ಅನೇಕರು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಾಹಿಲ್ ಎಂಬುವವರು, ‘ನನ್ನ ಜ್ಯೂನಿಯರ್ಸ್​ ಬಹಳ ಸ್ವೀಟ್. ಸಂದರ್ಶನಕ್ಕೆ ಹಾಜರಾಗಬೇಕೆಂದು ರಜೆ ಕೇಳುತ್ತಿದ್ದಾರೆ’ ಎಂದು ಕ್ಯಾಪ್ಷನ್​ ಹಾಕಿ ಟ್ವಿಟರ್ ಪೋಸ್ಟ್ ಮಾಡಿದ್ದಾರೆ. ಅರ್ಜಿ ಹೀಗಿದೆ, ‘ಆತ್ಮೀಯ ಸರ್, ಶುಭೋದಯ. ಇನ್ನೊಂದು ಕಂಪನಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ನನಗೆ ಇಂದು ರಜೆಯ ಅಗತ್ಯವಿದೆ. ಇ-ಮೇಲ್ ಮೂಲಕ ನಿಮಗೆ ಪತ್ರ ಕಳಿಸುತ್ತಿದ್ದೇನೆ. ದಯವಿಟ್ಟು ರಜೆಯನ್ನು ಮಂಜೂರು ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ.’

ಇನ್ನಷ್ಟು ಇಂಥ ಟ್ರೆಂಡಿಂಗ್​ ನ್ಯೂಸ್​ ಓದು ಇಲ್ಲಿ ಕ್ಲಿಕ್ ಮಾಡಿ 

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ