AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಚಿತ್ರ ನೋಡಿ ಗೆಸ್​ ಮಾಡಿ! ಇದು ನಿಜವಾದ ಚಿಟ್ಟೆ ಹೌದೋ ಅಲ್ಲವೋ?

ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು ಊಹಿಸಲೂ ಸಾಧ್ಯವಿಲ್ಲ. ಅಷ್ಟು ಸ್ಪಷ್ಟವಾಗಿದೆ ಎಂದು ಎಂದು ಶ್ಲಾಘಿಸಿದ್ದಾರೆ.

Viral Photo: ಚಿತ್ರ ನೋಡಿ ಗೆಸ್​ ಮಾಡಿ! ಇದು ನಿಜವಾದ ಚಿಟ್ಟೆ ಹೌದೋ ಅಲ್ಲವೋ?
ಇದು ನಿಜವಾದ ಚಿಟ್ಟೆ ಹೌದೋ ಅಲ್ಲವೋ?
TV9 Web
| Edited By: |

Updated on: Jun 03, 2021 | 5:10 PM

Share

ಮೇಜಿನ ಮೇಲೆ ಕುಳಿತ ಚಿಟ್ಟೆ ನೀರು ಕುಡಿಯುತ್ತಿರುವುದನ್ನು ನೀವು ನೋಡಬಹುದು. ನಿಜವಾದ ಚಿಟ್ಟೆಯೇ ನೀರು ಕುಡಿಯುತ್ತಿದೆ ಎಂದೂ ಭಾವಿಸಿರಬಹುದು. ಆದರೆ ಚಿಟ್ಟೆ ನಿಜವೋ ಅಲ್ಲವೋ ಎಂಬುದು ಕೆಲವು ಜನರಿಗೆಗೆ ಊಹಿಸಲೂ ಸಾಧ್ಯವಾಗಿಲ್ಲ. ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಆಶ್ಚರ್ಯ ಚಕಿತರಾಗಿದ್ದಾರೆ. ಹಾಗಾದರೆ ಈ ಚಿತ್ರದಲ್ಲಿರುವುದು ನಿಜವಾಗಿಯೂ ಜೀವಂತ ಚಿಟ್ಟೆಯೇ? ಮತ್ತೊಮ್ಮೆ ಚಿತ್ರ ನೋಡಿ ಕಂಡು ಹಿಡಿಯಿರಿ. 

ಸ್ಮಾರ್ಟ್​ ಫೋನ್​ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಅದೆಷ್ಟೋ ಅಡಗಿರುವ ಕಲಾವಿದರ ಪ್ರತಿಭೆಗಳು ಹೊರಬರುತ್ತಿದೆ. ದೇಶದ ಯಾವುದೋ ಮೂಲೆಯಲ್ಲಿದ್ದ ಪ್ರತಿಭೆ ಹೆಸರು ಪಡೆಯಲು ಕೇವಲ ಸೆಕೆಂಡುಗಳು ಮಾತ್ರ ಸಾಕು. ತಮಾಷೆ ವಿಷಗಳಿಂದ ಜನರನ್ನು ಮನರಂಜಿಸುವ ಕೆಲವು ವಿಷಯಗಳ ಜತೆ ಜನರಿಗೆ ಸ್ಪೂರ್ತಿ ತುಂಬುವ ಅದೆಷ್ಟೋ ಸಂಗತಿಗಳು ಕ್ಷಣ ಮಾತ್ರದಲ್ಲಿ ವೈರಲ್​ ಆಗುತ್ತವೆ. ಇನ್ನು ಕೆಲವು ದೃಶ್ಯಗಳು ಜನರನ್ನು ಆಶ್ಚರ್ಯ ಚಕಿತರನ್ನಾಗಿಯೂ ಮಾಡುತ್ತವೆ.

ಕೆತ್ತಿದ ಶಿಲೆಗಳು ಜೀವಂತದ್ದೇ ಅನ್ನುವಷ್ಟರ ಮಟ್ಟಿಗೆ ಅನಿಸುವಷ್ಟು ಸುಂದರವಾಗಿರುತ್ತವೆ. ಕಲೆಗಾರರ ಕೈಚಳಕವೇ ಅಂಥದ್ದು. ಇಲ್ಲೋರ್ವ ಕಲೆಗಾರರು ಕೆತ್ತಿದ ಈ ಚಿತ್ರದಲ್ಲಿ ಮೇಜಿನ ಮೇಲೆ ಚಿಟ್ಟೆ ನೀರು ಕುಡಿಯುತ್ತಿದೆ. ಒಮ್ಮೆಲೆ ನೋಡಿದಾಕ್ಷಣ ನಿಜವಾದ ಚಿಟ್ಟೆಯೇ ಬಂದು ಕುಳಿತಿರುವಂತೆ ಭಾಸವಾಗುತ್ತದೆ.

ಚಿತ್ರ ನೋಡುತ್ತಿದ್ದಂತೆಯೇ ಅನಿಸಬಹುದು. ಮೇಜಿನ ಮೇಲೆ ನೀರಿನ ಹನಿಗಳು ಚೆಲ್ಲಿವೆ. ಸುಂದರ ಚಿಟ್ಟೆಯೊಂದು ಮೇಜಿನ ಮೇಲೆ ಕುಳಿತು ನೀರು ಕುಡಿಯುತ್ತಿದೆ. ಆದರೆ ಈ ಚಿಟ್ಟೆ ಜೀವಂತದ್ದಲ್ಲ. ಇದನ್ನು ಮರದಿಂದ ಕೆತ್ತಲಾಗಿದೆ. ಕೇವಲ ಚಿಟ್ಟೆಯೊಂದೇ ಅಲ್ಲ ಮೇಜಿನ ಮೇಲಿನ ನೀರಿನ ಹನಿಗಳೂ ಕೂಡಾ ಕಲೆಗಾರನ ಕೈಚಳಕದಿಂದ ಸಿದ್ಧವಾದಂಥದ್ದು.

ಅಬ್ಬಾ.. ಅದ್ಭುತ ಚಿತ್ರ.. ಜೀವಂತ ಚಿಟ್ಟೆಯೇ ಇದೆ ಎಂಬಷ್ಟು ಸ್ಪಷ್ಟವಾಗಿದೆ ಈ ಕಲಾಕೃತಿ. ಒಂದೇ ಬಾರಿ ಚಿತ್ರ ನೋಡಿದ ತಕ್ಷಣ ನಿಜವಲ್ಲ ಎಂದು ಕಂಡು ಹಿಡಿಯಲೇ ಸಾಧ್ಯವಿಲ್ಲ. ಚಿತ್ರ ನೋಡಿದ ನೆಟ್ಟಿಗರು ಅರೆ! ಹೌದಲ್ಲಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು ಊಹಿಸಲೂ ಸಾಧ್ಯವಿಲ್ಲ. ಅಷ್ಟು ಸ್ಪಷ್ಟವಾಗಿದೆ ಎಂದು ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Photo: ಈ ಫೋಟೋದಲ್ಲಿ ಹಾವನ್ನು ಹುಡುಕಿ! ಕಾಣಿಸುತ್ತಿಲ್ಲವೆಂದಾದರೆ ಈ ಅಚ್ಚರಿಯ ಸ್ಟೋರಿ ಓದಿ

Follow Us
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ