AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Facts: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?

ಭಾರತದಲ್ಲಿ ನೂರಾರು ಬಗೆಯ ಬಿಯರ್‌ಗಳಿದ್ದರೂ, ಅವುಗಳ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. ಇದಕ್ಕೆ ಕಾರವೇನು ಎಂದು ತಿಳಿದಿದೆಯೇ? ಈ ಕುರಿತು ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕ ಕಂಪನಿ ಯುನೈಟೆಡ್‌ ಬ್ರೂವರೀಸ್‌ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Interesting Facts: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?
Beer Bottle ColorsImage Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 17, 2024 | 6:11 PM

Share

ಭಾರತದಲ್ಲಿ 100 ಕ್ಕೂ ಹೆಚ್ಚು ವಿಧದ ಬಿಯರ್ ಅನ್ನು ತಯಾರಿಸಲಾಗುತ್ತದೆ, ಆದರೆ ಬಿಯರ್ ಬಾಟಲಿಗಳು ವಿಭಿನ್ನ ಬಣ್ಣಗಳಲ್ಲಿ ಬರುವುದಿಲ್ಲ, ಬದಲಿಗೆ ಈ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

19 ನೇ ಶತಮಾನದಿಂದಲೂ ಇಂದಿನ ವರೆಗೆ ಬಿಯರ್ ಅನ್ನು ಗಾಜಿನಲ್ಲಿ ಬಾಟಲಿಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಏಕೆಂದರೆ ಬಿಯರ್ ತಾಜಾವಾಗಿಡಲು ಗಾಜನ್ನು ಅತ್ಯುತ್ತಮ ವಸ್ತುವೆಂದು ಪರಿಗಣಿಸಲಾಗಿದೆ. ಆದರೆ ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂಬುದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ ಸರಳ ಬಾಟಲಿಗಳಲ್ಲಿ ಸಂಗ್ರಹಿಸಿದ ಬಿಯರ್ ಬೆಳಕಿನ ಸಂಪರ್ಕಕ್ಕೆ ಬಂದಾಗ, ಅದರ ರುಚಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಅದರಿಂದಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಈ ಹಸಿರು ಅಥವಾ ಕಂದು ಬಣ್ಣಗಳು ಸಹಾಯ ಮಾಡುತ್ತವೆ. ಈ ಕಾರಣದಿಂದಾಗಿ ಬಿಯರ್‌ನ ರುಚಿ ಮತ್ತು ತಾಜಾತನವು ಹಾಗೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕ ಕಂಪನಿ ಯುನೈಟೆಡ್‌ ಬ್ರೂವರೀಸ್‌ ಈ ವಿದ್ಯಮಾನವನ್ನು ‘ಲೈಟ್‌ಸ್ಟ್ರಕ್’ ಎಂದು ಕರೆಯುತ್ತದೆ, ಯುವಿ ಬೆಳಕಿಗೆ ಬಿಯರ್‌ ಒಡ್ಡಿಕೊಂಡಾಗ ಅಹಿತಕರ ವಾಸನೆಯನ್ನು ನೀಡುತ್ತದೆ. ಹಾಗಾಗಿ ಬಿಯರ್ ಬಾಟಲಿಗಳು ಹಸಿರು ಅಥವಾ ಕಂದು ಬಣ್ಣದಲ್ಲಿ ಇರುತ್ತವೆ.

ಕಂದು ಬಣ್ಣದ ಬಾಟಲಿಗಳು ಹಾನಿಕಾರಕ ಯುವಿ ಕಿರಣಗಳನ್ನು ಬಿಯರ್‌ಗೆ ಪ್ರವೇಶಿಸದಂತೆ ತಡೆಯುತ್ತದೆ. ಹೆಚ್ಚುವರಿಯಾಗಿ, ಬಾಟಲಿಯ ಮೂಲಕ ಹಾದುಹೋಗುವ ಯಾವುದೇ ಬೆಳಕನ್ನು ತಡೆಯುವ ಮೂಲಕ, ಇದು ರಾಸಾಯನಿಕ ಕ್ರಿಯೆಗಳಿಂದ ಬಿಯರ್‌ನಲ್ಲಿರುವ ಸೂಕ್ಷ್ಮ ಸಂಯುಕ್ತಗಳನ್ನು ರಕ್ಷಿಸುತ್ತದೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ