AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Interesting Facts: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?

ಭಾರತದಲ್ಲಿ ನೂರಾರು ಬಗೆಯ ಬಿಯರ್‌ಗಳಿದ್ದರೂ, ಅವುಗಳ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. ಇದಕ್ಕೆ ಕಾರವೇನು ಎಂದು ತಿಳಿದಿದೆಯೇ? ಈ ಕುರಿತು ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕ ಕಂಪನಿ ಯುನೈಟೆಡ್‌ ಬ್ರೂವರೀಸ್‌ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Interesting Facts: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?
Beer Bottle ColorsImage Credit source: Pinterest
ಅಕ್ಷತಾ ವರ್ಕಾಡಿ
|

Updated on: Nov 17, 2024 | 6:11 PM

Share

ಭಾರತದಲ್ಲಿ 100 ಕ್ಕೂ ಹೆಚ್ಚು ವಿಧದ ಬಿಯರ್ ಅನ್ನು ತಯಾರಿಸಲಾಗುತ್ತದೆ, ಆದರೆ ಬಿಯರ್ ಬಾಟಲಿಗಳು ವಿಭಿನ್ನ ಬಣ್ಣಗಳಲ್ಲಿ ಬರುವುದಿಲ್ಲ, ಬದಲಿಗೆ ಈ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

19 ನೇ ಶತಮಾನದಿಂದಲೂ ಇಂದಿನ ವರೆಗೆ ಬಿಯರ್ ಅನ್ನು ಗಾಜಿನಲ್ಲಿ ಬಾಟಲಿಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಏಕೆಂದರೆ ಬಿಯರ್ ತಾಜಾವಾಗಿಡಲು ಗಾಜನ್ನು ಅತ್ಯುತ್ತಮ ವಸ್ತುವೆಂದು ಪರಿಗಣಿಸಲಾಗಿದೆ. ಆದರೆ ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂಬುದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ ಸರಳ ಬಾಟಲಿಗಳಲ್ಲಿ ಸಂಗ್ರಹಿಸಿದ ಬಿಯರ್ ಬೆಳಕಿನ ಸಂಪರ್ಕಕ್ಕೆ ಬಂದಾಗ, ಅದರ ರುಚಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಅದರಿಂದಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಈ ಹಸಿರು ಅಥವಾ ಕಂದು ಬಣ್ಣಗಳು ಸಹಾಯ ಮಾಡುತ್ತವೆ. ಈ ಕಾರಣದಿಂದಾಗಿ ಬಿಯರ್‌ನ ರುಚಿ ಮತ್ತು ತಾಜಾತನವು ಹಾಗೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕ ಕಂಪನಿ ಯುನೈಟೆಡ್‌ ಬ್ರೂವರೀಸ್‌ ಈ ವಿದ್ಯಮಾನವನ್ನು ‘ಲೈಟ್‌ಸ್ಟ್ರಕ್’ ಎಂದು ಕರೆಯುತ್ತದೆ, ಯುವಿ ಬೆಳಕಿಗೆ ಬಿಯರ್‌ ಒಡ್ಡಿಕೊಂಡಾಗ ಅಹಿತಕರ ವಾಸನೆಯನ್ನು ನೀಡುತ್ತದೆ. ಹಾಗಾಗಿ ಬಿಯರ್ ಬಾಟಲಿಗಳು ಹಸಿರು ಅಥವಾ ಕಂದು ಬಣ್ಣದಲ್ಲಿ ಇರುತ್ತವೆ.

ಕಂದು ಬಣ್ಣದ ಬಾಟಲಿಗಳು ಹಾನಿಕಾರಕ ಯುವಿ ಕಿರಣಗಳನ್ನು ಬಿಯರ್‌ಗೆ ಪ್ರವೇಶಿಸದಂತೆ ತಡೆಯುತ್ತದೆ. ಹೆಚ್ಚುವರಿಯಾಗಿ, ಬಾಟಲಿಯ ಮೂಲಕ ಹಾದುಹೋಗುವ ಯಾವುದೇ ಬೆಳಕನ್ನು ತಡೆಯುವ ಮೂಲಕ, ಇದು ರಾಸಾಯನಿಕ ಕ್ರಿಯೆಗಳಿಂದ ಬಿಯರ್‌ನಲ್ಲಿರುವ ಸೂಕ್ಷ್ಮ ಸಂಯುಕ್ತಗಳನ್ನು ರಕ್ಷಿಸುತ್ತದೆ.

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ