AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನೆಲಮಂಗಲ ರಸ್ತೆ ಅಪಘಾತಕ್ಕೂ, ನಂಬರ್‌ 6ಗೂ ಏನು ಲಿಂಕ್‌?

ಈ ಹಿಂದೊಮ್ಮೆ ನಂಬರ್‌ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗುತ್ತಿವೆ ಎಂಬ ಭಯ ನೆಲಮಂಗಲ ಜನತೆಯನ್ನು ಕಾಡಿತ್ತು. ಕಾಕತಾಳೀಯವೆಂಬಂತೆ ಆ ಸಮಯದಲ್ಲಿ ಸಂಖ್ಯೆ ಆರರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗಿದ್ದವು. ಮೊನ್ನೆಯಷ್ಟೆ ನೆಲಮಂಗಲದಲ್ಲಿ ಭೀಕರ ಅಪಘಾತವವೊಂದು ಸಂಭವಿಸಿದ್ದು, ಆ ಬಳಿಕ ಮತ್ತೊಮ್ಮೆ ನಂಬರ್‌ 6 ರ ಭೂತ ಜನರನ್ನು ಕಾಡಿದೆ. ಅಷ್ಟಕ್ಕೂ ನೆಲಮಂಗಲ ರಸ್ತೆ ಅಪಘಾತಕ್ಕೂ ನಂಬರ್‌ 6 ಗೂ ಏನು ಲಿಂಕ್‌ ಎಂಬುದನ್ನು ನೋಡೋಣ.

Viral: ನೆಲಮಂಗಲ ರಸ್ತೆ ಅಪಘಾತಕ್ಕೂ, ನಂಬರ್‌ 6ಗೂ ಏನು ಲಿಂಕ್‌?
ನೆಲಮಂಗಲ ಕಾರು ಅಪಘಾತ
ಮಾಲಾಶ್ರೀ ಅಂಚನ್​
| Edited By: |

Updated on: Dec 25, 2024 | 5:00 PM

Share

ಶನಿವಾರ ಡಿಸೆಂಬರ್‌ 21 ರಂದು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿತ್ತು. ವೋಲ್ವೋ ಕಾರಿನ ಮೇಲೆ ಭಾರಿ ಭಾರದ ಕಂಟೇನರ್‌ ಲಾರಿ ಬಿದ್ದು ಸಾಫ್ಟ್‌ವೇರ್‌ ಕಂಪೆನಿ ಮಾಲೀಕ ಚಂದ್ರಮ್‌ ಯೇಗಪ್ಪಗೋಳ ಸೇರಿದಂತೆ ಅವರ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಭೀಕರ ಅಪಘಾತದ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಅಪಘಾತದ ಬಳಿಕ ನೆಲಮಂಗಲ ಜನರಲ್ಲಿ ಮತ್ತೊಮ್ಮೆ ನಂಬರ್‌ 6 ರ ಭೂತ ಕಾಡಲಾರಂಭಿಸಿದೆ. ಅಷ್ಟಕ್ಕೂ ನೆಲಮಂಗಲ ರಸ್ತೆ ಅಪಘಾತಕ್ಕೂ ನಂಬರ್‌ 6 ಗೂ ಏನು ಲಿಂಕ್‌ ಎಂಬುದನ್ನು ನೋಡೋಣ.

ಈ ಹಿಂದೊಮ್ಮೆ ನಂಬರ್‌ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳು ಹೆಚ್ಚು ಅಪಘಾತಕ್ಕೆ ಈಡಾಗುತ್ತವೆ ಎಂಬ ಭಯ ನೆಲಮಂಗಲ ಜನತೆಯನ್ನು ಕಾಡಿತ್ತು. ಕಾಕತಾಳೀಯವೆಂಬಂತೆ ಆ ಸಮಯದಲ್ಲಿ ಆರರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳೇ ಹೆಚ್ಚು ಅಪಘಾತಕ್ಕೆ ಈಡಾಗಿದ್ದವು. ಆರು ವರ್ಷಗಳ ಹಿಂದೆ ಟಿವಿ9 ನಲ್ಲೂ ಈ ಬಗ್ಗೆ ವರದಿ ಪ್ರಸಾರವಾಗಿತ್ತು. ಮೊನ್ನೆ ನೆಲಮಂಗಲದಲ್ಲಿ ನಡೆದ ಭೀಕರ ಅಪಘಾತದ ಬಳಿಕ ಮತ್ತೊಮ್ಮೆ ಜನರಲ್ಲಿ ನಂಬರ್‌ 6 ರ ಭೂತ ಕಾಡಲಾರಂಭಿಸಿದೆ. ಹೌದು ಅಪಘಾತಕ್ಕೆ ಈಡಾದ ಚಂದ್ರಮ್‌ ಯೇಗಪ್ಪಗೋಳ ಅವರ ವೋಲ್ವೋ ಕಾರಿನ ನಂಬರ್‌ ಪ್ಲೇಟ್‌ ಸಂಖ್ಯೆ KA 01ND1536 ಆಗಿದ್ರೆ ಟ್ರಕ್‌ನ ನಂಬರ್‌ ಪ್ಲೇಟ್‌ ಸಂಖ್ಯೆ KA52B3076. ಅಪಘಾತಕ್ಕೆ ಈಡಾದ ಈ ಎರಡೂ ವಾಹನಗಳ ಕೊನೆಯ ಸಂಖ್ಯೆ ʼ6ʼ ಆಗಿದ್ದು, ಈ ಸಂಖ್ಯೆಯ ಕಾರಣದಿಂದಲೇ ಅಪಘಾತ ಸಂಭವಿಸಿರಬಹುದೇ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಕಾಕತಾಳೀಯವೆಂಬಂತೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂಬರ್‌ ಪ್ಲೇಟ್‌ ಕೊನೆಯಲ್ಲಿ ನಂಬರ್ 6 ಅನ್ನು ಹೊಂದಿರುವ ವಾಹನಗಳೇ ಹೆಚ್ಚಾಗಿ ಅಘಾತಕ್ಕೆ ಈಡಾಗಿವೆ. ಹೌದು ಈ ಹಿಂದೆ KA 51 Q 5156, KA 44 J 5086, KA 51 D 1786, KA 18 A 9426, KA 04 C 9626, KA 54 1676, KA 44 K 1706, KA 42 H 6326 ಹೀಗೆ ನಂಬರ್‌ ಆರರಲ್ಲಿ ಕೊನೆಗೊಳ್ಳುವ ವಾಹನಗಳು ಅಪಘಾತಕ್ಕೆ ತುತ್ತಾಗಿದ್ದವು. ಇದನ್ನೆಲ್ಲಾ ಕಂಡು ʼನಂಬರ್‌ 6ʼ ರ ಪರಿಣಾಮದಿಂದಲೇ ಇಷ್ಟೆಲ್ಲಾ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರಲ್ಲಿ ಭಯ ಆವರಿಸಿದೆ. ಇದಕ್ಕೆ ಪುಷ್ಟಿಕೊಡುವಂತೆ ಮೊನ್ನೆ ಅಪಘಾತಕ್ಕೆ ಈಡಾದ ವಾಹನಗಳ ಕೊನೆಯ ಸಂಖ್ಯೆಯೂ 6 ಆಗಿತ್ತು. ಇದರಿಂದ ಜನರಲ್ಲಿ ಇದೀಗ ನಂಬರ್‌ ಆರು ಮತ್ತಷ್ಟು ಭಯ ಮೂಡಿಸಿದೆ.

ಇದನ್ನೂ ಓದಿ: ಬೆಂಗಳೂರು: ಏಕಾಏಕಿ ಕಾರಿನ ಮೇಲೆ ಲಾರಿ ಪಲ್ಟಿ: 6 ಜನ ಅಪ್ಪಚ್ಚಿ!

ಇನ್ನೂ ಸಂಖ್ಯಾಶಾಸ್ತ್ರದ ಪ್ರಕಾರ ನಂಬರ್‌ 6 ಶುಕ್ರನ ಪ್ರತೀಕ. ಸಂಖ್ಯೆ 6 ಕೆಲವೊಂದಿಷ್ಟು ಸಂಖ್ಯೆಗಳ ಜೊತೆ ಸೇರಿಕೊಂಡಾಗ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತವೆ. ಇದರಿಂದಲೂ ಸಂಖ್ಯೆ 6 ರಿಂದ ಕೊನೆಗೊಳ್ಳುವ ನಂಬರ್‌ ಪ್ಲೇಟ್‌ ಹೊಂದಿರುವ ವಾಹನಗಳು ಅಪಘಾತಕ್ಕೆ ತುತ್ತಾಗಿರುವ ಸಾಧ್ಯತೆ ಇವೆ. ಆದರೆ ಇದು ಕಾಕತಾಳೀಯವೂ ಆಗಿರಬಹುದು ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಆದ್ರೆ ಜನ ಮಾತ್ರ ಇದೆಲ್ಲಾ ನಂಬರ್‌ 6 ರ ಕಾರಣದಿಂದಲೇ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ